AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Small Business Ideas: ಹತ್ತು ಸಾವಿರ ರೂ ಮಾತ್ರವಾ ಇರುವುದು? ಈ ಬಿಸಿನೆಸ್​ಗಳನ್ನು ಪ್ರಯತ್ನಿಸಿ

ಕೆಲಸಕ್ಕೆ ಹೋಗಿ ಅವರಿವರ ಬಳಿ ದುಡಿಯುವುದಕ್ಕಿಂತ ಸ್ವಂತವಾಗಿ ಏನಾದರೂ ಮಾಡಬೇಕು ಎಂಬ ಹಂಬಲ ಪ್ರತಿಯೊಬ್ಬರಿಗೂ ಇರಬಹುದು. ಆದರೆ, ಏನು ಮಾಡಬೇಕು ಎಂದು ತೋಚದೇ ಸುಮ್ಮನಾಗುವವರೇ ಅಧಿಕ. ಕೇವಲ 10,000 ರೂ ಬಂಡವಾಳ ಇದ್ದರೂ ನಮ್ಮದೇ ಆದಾಯ ಮೂಲ ಸೃಷ್ಟಿಸಿಕೊಳ್ಳಬಹುದು. ಮೊದಲಿಗೆ ನಿಮ್ಮ ಆಸಕ್ತಿ, ಪ್ರತಿಭೆಯನ್ನು ನೀವೇ ಗುರುತಿಸಿದರೆ ಆಗ ಸ್ವಂತ ಬಿಸಿನೆಸ್ ಮಾರ್ಗ ಹುಡುಕುವುದು ಸುಲಭವಾಗುತ್ತದೆ.

Small Business Ideas: ಹತ್ತು ಸಾವಿರ ರೂ ಮಾತ್ರವಾ ಇರುವುದು? ಈ ಬಿಸಿನೆಸ್​ಗಳನ್ನು ಪ್ರಯತ್ನಿಸಿ
ಸ್ವಂತ ಬಿಸಿನೆಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 08, 2023 | 11:34 AM

Share

ಕೆಲಸಕ್ಕೆ ಹೋಗಿ ಅವರಿವರ ಬಳಿ ದುಡಿಯುವುದಕ್ಕಿಂತ ಸ್ವಂತವಾಗಿ ಏನಾದರೂ ಮಾಡಬೇಕು ಎಂಬ ಹಂಬಲ ಪ್ರತಿಯೊಬ್ಬರಿಗೂ ಇರಬಹುದು. ಆದರೆ, ಏನು ಮಾಡಬೇಕು ಎಂದು ತೋಚದೇ ಸುಮ್ಮನಾಗುವವರೇ ಅಧಿಕ. ಕೈಯಲ್ಲಿ ಹೆಚ್ಚು ಬಂಡವಾಳ (low investment) ಇಲ್ಲವಲ್ಲ ಎಂದು ಸಮಾಧಾನ ಮಾಡಿಕೊಂಡು ಸುಮ್ಮನಾಗುವವರೂ ಉಂಟು. ಕೋಟ್ಯಂತರ ರೂ ಬಂಡವಾಳ ಇದ್ದರೆ ಭರ್ಜರಿ ಬಿಸಿನೆಸ್ ಮಾಡಬಹುದು. ಕೈಯಲ್ಲಿ ಹಣ ಇಲ್ಲದೇ ಶುರು ಮಾಡಬಹುದಾದ ಸ್ವಂತ ಬಿಸಿನೆಸ್​ಗಳೂ ಹಲವುಂಟು.

ಕೇವಲ 10,000 ರೂ ಬಂಡವಾಳ ಇದ್ದರೂ ನಮ್ಮದೇ ಆದಾಯ ಮೂಲ ಸೃಷ್ಟಿಸಿಕೊಳ್ಳಬಹುದು. ಮೊದಲಿಗೆ ನಿಮ್ಮ ಆಸಕ್ತಿ, ಪ್ರತಿಭೆಯನ್ನು ನೀವೇ ಗುರುತಿಸಿದರೆ ಆಗ ಸ್ವಂತ ಬಿಸಿನೆಸ್ ಮಾರ್ಗ ಹುಡುಕುವುದು ಸುಲಭವಾಗುತ್ತದೆ. ಹತ್ತು ಸಾವಿರ ರೂ ಹಣದಲ್ಲಿ ಮಾಡಬಹುದಾದ ಹಲವು ಬಿಸೆನೆಸ್​ಗಳಲ್ಲಿ ಕೆಲ ಐಡಿಯಾ ಇಲ್ಲಿವೆ…

ಟಿಫನ್ ಸರ್ವಿಸ್

ನಿಮಗೆ ಅಡುಗೆ ಕಲೆ ಸಿದ್ಧಿಸಿದ್ದರೆ ಟಿಫನ್ ಸರ್ವಿಸ್ ಆರಂಭಿಸಬಹುದು. ಸಾಕಷ್ಟು ಜನರಿಗೆ ಬೆಳಗ್ಗೆ ಕಚೇರಿಗೆ ಹೋಗುವ ಧಾವಂತದಲ್ಲಿ ಸರಿಯಾಗಿ ಆರೋಗ್ಯಯುತ ರುಚಿಕರ ತಿಂಡಿ ಸಿಗುವುದಿಲ್ಲ. ನೀವದನ್ನು ಒದಗಿಸುವುದಾದರೆ ಒಳ್ಳೆಯ ಬಿಸಿನೆಸ್ ಆಗುತ್ತದೆ. ನಿಮ್ಮ ಪ್ರದೇಶದ ಸುತ್ತಮುತ್ತ ಒಂದಷ್ಟು ಪ್ರಚಾರ ಮಾಡಿಕೊಂಡರೆ ಗ್ರಾಹಕರು ಸುಲಭವಾಗಿ ಸಿಗುತ್ತಾರೆ.

ಇದನ್ನೂ ಓದಿ: ಗ್ರಾಮೀಣ ಮಹಿಳಾ ಸಂಘಗಳ ಉತ್ಪನ್ನಗಳಿಗೆ ಆನ್‌ಲೈನ್ ಮಾರ್ಕೆಟ್ : ಸಂಜೀವಿನಿ ಪೋರ್ಟಲ್ ಮೂಲಕ ಉತ್ಪನ್ನಗಳ ಮಾರಾಟ

ಉಪ್ಪಿನಕಾಯಿ, ಚಟ್ನಿಪುಡಿ, ಕುರುಕಲು ತಿಂಡಿಗಳ ಬಿಸಿನೆಸ್

ಮನೆಯಲ್ಲೇ ಮಾಡಿದ ಕುರುಕಲು ತಿಂಡಿಗಳು, ಉಪ್ಪಿನಕಾಯಿ, ಚಟ್ನಿಪುಡಿ, ಚಕ್ಕುಳಿ, ಪುಳಿಯೋಗರೆ ಗೊಜ್ಜು ಇತ್ಯಾದಿಗಳಿಗೆ ಬಹಳ ಬೇಡಿಕೆಗಳುಂಟು. ಆರಂಭದಲ್ಲಿ ನಿಮ್ಮ ಪ್ರದೇಶದ ಸುತ್ತ ಪ್ರಚಾರ ಮಾಡಬೇಕಾಗಬಹುದು. ನಿಮ್ಮ ತಿಂಡಿ ರುಚಿ ಚೆನ್ನಾಗಿದ್ದರೆ ಗ್ರಾಹಕರ ಸಂಖ್ಯೆ ಬೆಳೆಯುತ್ತದೆ.

ಸೋಷಿಯಲ್ ಮೀಡಿಯಾ

ಇವತ್ತು ಫೇಸ್ಬುಕ್, ಯೂಟ್ಯೂಬ್, ಇನ್ಸ್​ಟಾಗ್ರಾಮ್​ಗಳಿಂದ ಹೇರಳ ಹಣ ಸಂಪಾದಿಸುವವರಿದ್ದಾರೆ. ಅಡುಗೆಯೋ, ಹಾಸ್ಯವೋ, ಚಾರಣವೋ, ನೀತಿ ಬೋಧನೆಯೋ ಏನಾದರೂ ಸರಿ ನಿಮಗೆ ವಿಶೇಷ ಪರಿಣಿತಿ ಅಥವಾ ಆಸಕ್ತಿ ಇದ್ದರೆ ಅದರ ವಿಡಿಯೋಗಳನ್ನು ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದರೆ ಅದರಿಂದ ಆದಾಯ ಮಾಡಬಹುದು.

ಇದನ್ನೂ ಓದಿ: ಸ್ವಿಗ್ಗಿ ಸಾಲದ ನೆರವು; 8,000 ಹೋಟೆಲ್​ಗಳಿಗೆ 450 ಕೋಟಿ ರೂ ಸಾಲ ವಿತರಣೆ

ಯೋಗ ತರಗತಿ

ಮನಸು ಮತ್ತು ದೇಹದ ಆರೋಗ್ಯಕ್ಕೆ ಅವಶ್ಯವಾಗಿರುವ ಯೋಗಾಸನ ನಿಮಗೆ ಗೊತ್ತಿದ್ದರೆ ಸಂಪಾದನೆಗೆ ಬಳಸಬಹುದು. ನಿಮ್ಮದೇ ಯೋಗ ಶಾಲೆ ಅಥವಾ ಯೋಗ ಫಿಟ್ನೆಸ್ ಸೆಂಟರ್ ತೆರೆಯಬಹುದು. ಅಥವಾ ಬೇರೆಡೆ ಯೋಗ ಇನ್ಸ್​ಟ್ರಕ್ಟರ್ ಆಗಿ ಕೆಲಸ ಮಾಡಬಹುದ. ಶಾಲೆಗಳಲ್ಲೂ ಯೋಗ ಟೀಚರ್ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ