AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fiscal Deficit: ಏಪ್ರಿಲ್​ನಿಂದ ಜುಲೈ ಮಧ್ಯೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 3.2 ಲಕ್ಷ ಕೋಟಿ ರೂಪಾಯಿ

2021-22 ಆರ್ಥಿಕ ವರ್ಷದ ಏಪ್ರಿಲ್​ನಿಂದ ಜುಲೈ ಮಧ್ಯೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಮೊತ್ತವು 3.2 ಲಕ್ಷ ಕೋಟಿ ರೂಪಾಯಿ ಆಗಿದೆ.

Fiscal Deficit: ಏಪ್ರಿಲ್​ನಿಂದ ಜುಲೈ ಮಧ್ಯೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 3.2 ಲಕ್ಷ ಕೋಟಿ ರೂಪಾಯಿ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Aug 31, 2021 | 8:02 PM

Share

ನವದೆಹಲಿ: 2021-22ರ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಾದ ಏಪ್ರಿಲ್​ನಿಂದ ಜುಲೈನಲ್ಲಿ ಆದಾಯ ಏರಿಕೆಯ ಹೊರತಾಗಿಯೂ ಭಾರತದ ವಿತ್ತೀಯ ಕೊರತೆಯು (ಆದಾಯ ಮತ್ತು ಖರ್ಚಿನ ಮಧ್ಯದ ವ್ಯತ್ಯಾಸ) ರೂ. 3.21 ಲಕ್ಷ ಕೋಟಿಗಳಷ್ಟಿತ್ತು ($ 43.98 ಶತಕೋಟಿ) ಅಥವಾ ಇಡೀ ವರ್ಷದ ಬಜೆಟ್ ಗುರಿಯ ಶೇ 21.3ರಷ್ಟಿತ್ತು ಎಂದು ಸರ್ಕಾರಿ ಅಂಕಿ- ಅಂಶಗಳಿಂದ ಮಂಗಳವಾರ ತಿಳಿದುಬಂದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 8.2 ಲಕ್ಷ ಕೋಟಿ ರೂಪಾಯಿ ಆಗಿದ್ದು, ಪೂರ್ತಿ ವರ್ಷದ ಗುರಿಯನ್ನೂ ದಾಟಿತ್ತು. ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ಮಂಗಳವಾರ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದ ಪ್ರಕಾರ, ಏಪ್ರಿಲ್​ನಿಂದ ಜುಲೈ ಅವಧಿಗೆ 2 ಲಕ್ಷ ಕೋಟಿ ರೂಪಾಯಿ ಅಥವಾ ಬಜೆಟ್ ಅಂದಾಜಿನ ಶೇ 18ರಷ್ಟಿತ್ತು. ಕಳೆದ ವರ್ಷದ ಇದೇ ಅವಧಿಗೆ 7.1 ಲಕ್ಷ ಕೋಟಿ ಅಥವಾ ಬಜೆಟ್ ಅಂದಾಜಿನ ಶೇ 117ರಷ್ಟಿತ್ತು.

ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಕೇಂದ್ರದ ಸಗಟು ತೆರಿಗೆ ಆದಾಯವು 6.9 ಲಕ್ಷ ಕೋಟಿ ರೂಪಾಯಿ (ನಿವ್ವಳ 5.29 ಲಕ್ಷ ಕೋಟಿ ರೂ.) ಉತ್ತಮ ಆದಾಯ ತೆರಿಗೆ ಹಾಗೂ ಜಿಎಸ್​ಟಿ ಸಂಗ್ರಹದಿಂದ ಬಂದಿದೆ. ಉದ್ಯಮಗಳು ತಮ್ಮ ಮೊದಲು ಮುಂಗಡ ತೆರಿಗೆ ಕಂತನ್ನು ಜೂನ್​ನಲ್ಲಿ ಸಂದಾಯ ಮಾಡುತ್ತವೆ. ಇಡೀ ವರ್ಷದಲ್ಲಿ ಎಷ್ಟು ತೆರಿಗೆ ಬರಬಹುದು ಎಂಬುದರ ಅಂದಾಜು ಮಾಡಿದ ನಂತರವೇ ಹೀಗೆ ಕಟ್ಟಲಾಗುತ್ತದೆ. ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಡೇಟಾ ಪ್ರಕಾರವಾಗಿ, ಈ ಹಣಕಾಸು ವರ್ಷದಲ್ಲಿ ಮೊದಲ ನಾಲ್ಕು ತಿಂಗಳಲ್ಲಿ ಆಗಿರುವ ಬಂಡವಾಳ ವೆಚ್ಚ 1.28 ಲಕ್ಷ ಕೋಟಿ ರೂಪಾಯಿ. 1 ವರ್ಷದ ಹಿಂದೆ ಇದೇ ಅವಧಿಯಲ್ಲಿ 1.11 ಲಕ್ಷ ಕೋಟಿ ರೂಪಾಯಿ ಆಗಿತ್ತು. ತಜ್ಞರು ಹೇಳುವಂತೆ, ಕೇಂದ್ರ ಸರ್ಕಾರದಿಂದ ಪೂರ್ತಿ ವರ್ಷದ ತೆರಿಗೆ ಸಂಗ್ರಹ ಗುರಿಯನ್ನು ಮುಟ್ಟಬಹುದು. ಆದರೆ ಬಂಡವಾಳ ಹಿಂತೆಗೆತ ಗುರಿಯನ್ನು ತಲುಪುವುದು ಸವಾಲು.

ಈ ವರೆಗೆ 8371 ಕೋಟಿ ರೂಪಾಯಿ ಸ್ವೀಕೃತಿ ಆಗಿದೆ. ಆದರೆ ಬಂಡವಾಳ ಹಿಂತೆಗೆತದ ಗುರಿ ಇರುವುದು 1.75 ಲಕ್ಷ ಕೋಟಿ ರೂಪಾಯಿ. ಬಹಳ ದೊಡ್ಡ ಮಾರ್ಜಿನ್​ನಲ್ಲಿ ನಮ್ಮ ಗುರಿ ತಪ್ಪಬಹುದು. ಇದರಿಂದ ಭಾರತ ಸರ್ಕಾರದ ವಿತ್ತೀಯ ಕೊರತೆಯು FY22rರ ಬಜೆಟ್​ ಅಂದಾಜಿಗಿಂತ ಹೆಚ್ಚಾಗಲಿದೆ. ಇದಕ್ಕಿಂತ ಹೆಚ್ಚಾಗಿ, ಇತರ ಮುಖ್ಯ ಹಣಕಾಸು ಉತ್ತೇಜನಾ ಕ್ರಮಗಳನ್ನು ಏನಾದರೂ ಘೋಷಣೆ ಮಾಡಿದಲ್ಲಿ ಅಥವಾ ಈಗ ಕೊರೊನಾ ಲಸಿಕೆಗಾಗಿ ಮೀಸಲಿಟ್ಟ ಬಜೆಟ್ 350 ಬಿಲಿಯನ್ ರೂಪಾಯಿ ದಾಟಿದಲ್ಲಿ ವಿತ್ತೀಯ ಕೊರತೆ ಮತ್ತೂ ಹೆಚ್ಚಾಗುತ್ತದೆ ಎಂದು ರೇಟಿಂಗ್ ಏಜೆನ್ಸಿ ICRA ಲಿಮಿಟೆಡ್​ನ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಯ್ಯರ್ ಅಭಿಪ್ರಾಯ ಪಟ್ಟಿದ್ದಾರೆ.​

ಇದನ್ನೂ ಓದಿ: 6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ನಿರ್ಧಾರ; ವಿತ್ತೀಯ ಕೊರತೆ ನೀಗಿಸಲು ಕೇಂದ್ರ ಚಿಂತನೆ

(Central Government Fiscal Deficit For FY22 Between April To July Amounted To Rs 3.2 Trillion)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ