AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid-19 Insurance: ಏಪ್ರಿಲ್ 1ರಿಂದ ಮೇ 14ರ ಮಧ್ಯೆ 44 ದಿನದಲ್ಲಿ 8,385 ಕೋಟಿ ರೂ. ಕೋವಿಡ್- 19 ಇನ್ಷೂರೆನ್ಸ್ ಕ್ಲೇಮ್

ಕೊರೊನಾ ಎರಡನೇ ಅಲೆಯ ಭೀಕರತೆಯನ್ನು ತೆರೆದಿಡುವ ಅಂಕಿ- ಅಂಶ ಇಲ್ಲಿದೆ. ಏಪ್ರಿಲ್ 1, 2021ರಿಂದ ಮೇ 14ನೇ ತಾರೀಕಿನ ಮಧ್ಯೆ 44 ದಿನದಲ್ಲಿ 8,385 ಕೋಟಿ ರೂಪಾಯಿ ಕೋವಿಡ್​ಗೆ ಸಂಬಂಧಿಸಿದ ಕ್ಲೇಮ್​ಗಳಾಗಿವೆ.

Covid-19 Insurance: ಏಪ್ರಿಲ್ 1ರಿಂದ ಮೇ 14ರ ಮಧ್ಯೆ 44 ದಿನದಲ್ಲಿ 8,385 ಕೋಟಿ ರೂ. ಕೋವಿಡ್- 19 ಇನ್ಷೂರೆನ್ಸ್ ಕ್ಲೇಮ್
ಪ್ರಾತಿನಿಧಿಕ ಚಿತ್ರ
Srinivas Mata
|

Updated on:May 17, 2021 | 10:09 PM

Share

ಮುಂಬೈ: ಏಪ್ರಿಲ್ 1, 2021ರಿಂದ ಈಚೆಗೆ ಕೋವಿಡ್ ಕಾರಣಕ್ಕೆ ಆಗಿರುವ ಆರೋಗ್ಯ ವಿಮೆ ಕ್ಲೇಮ್​ಗಳನ್ನು ಕಳೆದ ಒಂದು ವರ್ಷಕ್ಕೆ, ಅಂದರೆ ಏಪ್ರಿಲ್ 1, 2020ರಿಂದ ಮಾರ್ಚ್ 31, 2021ಕ್ಕೆ ಹೋಲಿಸಲಾಗಿದೆ. ಈ ಒಂದೂವರೆ ತಿಂಗಳಲ್ಲಿ ಇಡೀ ಒಂದು ವರ್ಷದ ಒಟ್ಟು ಮೊತ್ತದ ಶೇ 57ರಷ್ಟು ಕ್ಲೇಮ್​ಗಳು ಬಂದಿದೆ. ನಾನ್​ ಲೈಫ್ ಇನ್ಷೂರೆನ್ಸ್​ ಕಂಪೆನಿಗಳ ಕ್ಲೇಮ್​ಗಳಲ್ಲಿ ಭಾರೀ ಏರಿಕೆ ಆಗಿದೆ. ಒಂದು ವೇಳೆ ಇದೇ ಟ್ರೆಂಡ್ ಮುಂದುವರಿದಲ್ಲಿ ಬ್ಯಾಲೆನ್ಸ್​ಶೀಟ್​ ಮೇಲೆ ಪರಿಣಾಮ ಆಗುತ್ತದೆ. ಮಾರ್ಚ್ 31ಕ್ಕೆ ಆರೋಗ್ಯ ವಿಮೆ ಕಂಪೆನಿಗಳೂ ಸೇರಿದಂತೆ ನಾನ್ ಲೈಫ್ ಇನ್ಷೂರೆನ್ಸ್ ಕಂಪೆನಿಗಳಿಗೆ 9.8 ಲಕ್ಷ ಕ್ಲೇಮ್​ಗಳು 14,560 ಕೋಟಿ ರೂಪಾಯಿಗೆ ಬಂದಿದೆ. ಇದು ಕೋವಿಡ್- 19 ಚಿಕಿತ್ಸೆಗಾಗಿ ಬಂದಿರುವ ಕ್ಲೇಮ್. ಇದೀಗ ಮೇ 14, 2021ರ ಹೊತ್ತಿಗೆ 14.8 ಲಕ್ಷ ಕ್ಲೇಮ್​ಗಳಿಗೆ ಏರಿಕೆ ಆಗಿದ್ದು, ಒಟ್ಟು ಮೌಲ್ಯ 22,955 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ.

ಇದರ ಲೆಕ್ಕಾಚಾರ ಏನೆಂದರೆ 2021- 22ರ ಹಣಕಾಸು ವರ್ಷದ ಮೊದಲ 44 ದಿನದಲ್ಲಿ 8,385 ಕೋಟಿ ರೂಪಾಯಿ ಕೋವಿಡ್​ಗೆ ಸಂಬಂಧಿಸಿದ ಕ್ಲೇಮ್​ಗಳಾಗಿವೆ. ಅಲ್ಲಿಗೆ 2020-21ರ ಹಣಕಾಸು ವರ್ಷದಲ್ಲಿ ಬಂದ ಒಟ್ಟಾರೆ ಕ್ಲೇಮ್​ನ ಶೇ 57ರಷ್ಟು ಮೊತ್ತ ಕೇವಲ 44 ದಿನದಲ್ಲೇ ಬಂದಿದೆ. ಈ ಬಗ್ಗೆ ಟೈಮ್ಸ್​ ಆಫ್​ ಇಂಡಿಯಾ ಅಂಕಿ-ಅಂಶಗಳ ಸಮೇತ ವರದಿ ಮುಂದಿಟ್ಟಿದೆ. ನ್ಯೂ ಇಂಡಿಯಾ ಅಶ್ಯೂರೆನ್ಸ್​ನ ಅಧ್ಯಕ್ಷರಾದ ಅತುಲ್ ಸಹೈ ಮಾತನಾಡಿ, ನಮ್ಮ ಕಂಪೆನಿಯಿಂದ 2,200 ಕೋಟಿ ರೂಪಾಯಿ ತನಕ ಕ್ಲೇಮ್ ಪಾವತಿಸಿದ್ದೇವೆ ಎಂದಿದ್ದಾರೆ. ಕಳೆದ ವರ್ಷ ಕೂಡ ಕ್ಲೇಮ್​ಗಳು ಇದ್ದವು. ಆದರೆ ನಾವು ಬ್ಯಾಲೆನ್ಸ್​ ಶೀಟ್ ಬಗ್ಗೆ ಯೋಚಿಸಿರಲಿಲ್ಲ. ಆದರೆ ಈ ವರ್ಷ ಆ ಹಂತವನ್ನು ತಲುಪಿದೆ ಎಂದಿದ್ದಾರೆ.

ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಕೊರೊನಾ ಕವಚ್ ಪಾಲಿಸಿಗಳಿಂದ ನಷ್ಟವಾಗಲಿದೆ. ಸಾರ್ವಜನಿಕ ವಲಯದ ಇನ್ಷೂರೆನ್ಸ್ ಕಂಪೆನಿಗಳು ದರ ಪರಿಷ್ಕರಣೆ ಕಡೆ ನೋಡುತ್ತಿಲ್ಲ ಎಂದು ಹೇಳಿದ್ದಾರೆ. ಹೋದ ವರ್ಷ ಇನ್ಷೂರೆನ್ಸ್ ಕಂಪೆನಿಗಳಿಗೆ ಪ್ರೀಮಿಯಂ ದರ ಪರಿಷ್ಕರಣೆ ಮಾಡುವ ಅನುಕೂಲ ಇತ್ತು. ಇನ್ನು ಲಾಕ್​ಡೌನ್​ ಇದ್ದುದರಿಂದ ಮೊದಲರ್ಧದಲ್ಲಿ ಹೆಲ್ತ್​ ಕ್ಲೇಮ್​ಗಳು ಕೂಡ ಕಡಿಮೆ ಇದ್ದವು ಮತ್ತು ಬಹುತೇಕ ಚಿಕಿತ್ಸೆ ಸರ್ಕಾರಿ ವ್ಯವಸ್ಥೆಯಲ್ಲಿ ನಡೆಯುತ್ತಿತ್ತು ಎಂದಿದ್ದರು.

ಆದರೆ, ಈ ಸಲ ಹಲವು ರೀತಿಯಲ್ಲಿ ವೆಚ್ಚ ಕಡಿಮೆ ಆಗಿದೆ. ಆದರೂ ಕ್ಲೇಮ್​ಗಳು ಹೆಚ್ಚಾಗಿದೆ. ಕಳೆದ ವರ್ಷ 9 ದಿನ ಆಸ್ಪತ್ರೆಯಲ್ಲಿ ಇರುತ್ತಿದ್ದರೆ, ಈ ಸಲ ಅದು ಆರು ದಿನಕ್ಕೆ ಇಳಿದಿದೆ. ಏಕೆಂದರೆ, ಅದಕ್ಕಾಗಿ ಪ್ರೋಟೋಕಾಲ್ ತರಲಾಗಿದೆ. ಬೆಡ್​ಗಳು ಕಡಿಮೆ ಇರುವುದರಿಂದ ಮನೆಯಲ್ಲಿ ಐಸೋಲೇಷನ್​ಗೆ ಸಲಹೆ ಮಾಡುತ್ತಿದ್ದಾರೆ. ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಜಾಜ್ ಹೆಲ್ತ್​ ಇನ್ಷೂರೆನ್ಸ್ ಹೆಲ್ತ್​ ಕ್ಲೇಮ್ಸ್​ನ ಮುಖ್ಯಸ್ಥ ಭಾಸ್ಕರ್ ನೆರುಕರ್ ಹೇಳಿದ್ದಾರೆ. ಹೆಚ್ಚಿನ ಕ್ಲೇಮ್​ಗಳು ಟಯರ್ 2 ಹಾಗೂ 3 ನಗರಗಳಿಂದ ಬರುತ್ತಿವೆ. ಸೆಪ್ಟೆಂಬರ್ ತನಕ ಕೊರೊನಾ ಕವಚ್ ಪಾಲಿಸಿ ನೀಡುವಂತೆ ಐಆರ್​ಡಿಎಐ ಸೂಚಿಸಿದೆ. ಆದರೆ ಕಂಪೆನಿ ವೆಬ್​ಸೈಟ್​ಗಳಲ್ಲಿ ಖರೀದಿಸಲು ಆಗುತ್ತಿಲ್ಲ ಎಂದು ಖರೀದಿಸಲು ಬಯಸುವವರು ದೂರುತ್ತಾರೆ.

ಇನ್ಷೂರೆನ್ಸ್ ಪಾಲಿಸಿ ಇದೆ ಎಂದಾಕ್ಷಣ ಎಲ್ಲ ಕವರ್​ ಆಗಿಬಿಡುತ್ತದೆ ಎಂದೇನಲ್ಲ. ಇನ್ಷೂರೆನ್ಸ್ ಮಾಡಿಸಿದವರು ಮೊದಲಿಗೆ ಖರ್ಚನ್ನು ಭರಿಸಿ, ಆ ನಂತರ ರೀಎಂಬರ್ಸ್​ಮೆಂಟ್​ಗೆ ಹಾಕಿಕೊಳ್ಳಬೇಕು. ಜಿಐ ಕೌನ್ಸಿಲ್ ದತ್ತಾಂಶದ ಪ್ರಕಾರ, 9.8 ಲಕ್ಷ ಕ್ಲೇಮ್​ಗಳು ಬಂದಿವೆ. ಅದರಲ್ಲಿ ಶೇ 86ರಷ್ಟು, ಅಂದರೆ 8.5 ಲಕ್ಷ ಪ್ರಕರಣಗಳು ವಿಲೇವಾರಿ ಆಗಿವೆ. ಬಾಕಿ 1.37 ಲಕ್ಷ ಪ್ರಕರಣಗಳು ಹಾಗೇ ಉಳಿದುಕೊಂಡಿವೆ.

ಇದನ್ನೂ ಓದಿ: ಕೊರೊನಾ ವಿರುದ್ಧ ಹೊಸ ಅಸ್ತ್ರ: ಡಿಆರ್​ಡಿಓ ಅಭಿವೃದ್ಧಿಪಡಿಸಿದ 2ಡಿಜಿ ಔಷಧ ಬಿಡುಗಡೆ

(Covid 19 insurance claims between April 1 to May 14, 2021 amounted to Rs 8385 crore. Last year that is from April 1, 2020 to March 31, 2021 for 12 months amounted to Rs 14,560 crores)

Published On - 10:07 pm, Mon, 17 May 21

Follow Us
Srinivas Mata
Srinivas Mata
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ