Direct Tax Collection: ಜಿಎಸ್​ಟಿ ಮಾತ್ರವಲ್ಲ, ಈ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹದಲ್ಲೂ ಗಮನಾರ್ಹ ಹೆಚ್ಚಳ; ಇಲ್ಲಿದೆ ಡೀಟೇಲ್ಸ್

Rise In Tax Collection This Year: ಈ ಹಣಕಾಸು ವರ್ಷದಲ್ಲಿ ಈವರೆಗೆ ಸಂಗ್ರಹವಾಗಿರುವ ಡೈರೆಕ್ಟ್ ಟ್ಯಾಕ್ಸ್ ಹಿಂದಿನ ವರ್ಷದಕ್ಕೆ ಹೋಲಿಸಿದರೆ ಶೇ. 12ಕ್ಕಿಂತಲೂ ಹೆಚ್ಚಿದೆ. ರೀಫಂಡ್ ಇತ್ಯಾದಿ ಕಳೆದು ಉಳಿಯುವ ನಿವ್ವಳ ತೆರಿಗೆಯಲ್ಲೂ ಶೇ. 11.18ರಷ್ಟು ಹೆಚ್ಚು ಸಂಗ್ರಹ ಇದೆ.

Direct Tax Collection: ಜಿಎಸ್​ಟಿ ಮಾತ್ರವಲ್ಲ, ಈ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹದಲ್ಲೂ ಗಮನಾರ್ಹ ಹೆಚ್ಚಳ; ಇಲ್ಲಿದೆ ಡೀಟೇಲ್ಸ್
ತೆರಿಗೆ ಸಂಗ್ರಹ
Follow us
|

Updated on: Jun 19, 2023 | 11:26 AM

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ (2023-24) ನೇರ ತೆರಿಗೆ ಸಂಗ್ರಹ ಗಮನಾರ್ಹವಾಗಿ ಏರುತ್ತಿರುವುದು ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ತಿಳಿದುಬರುತ್ತದೆ. 2023 ಏಪ್ರಿಲ್ 1ರಿಂದ ಜೂನ್ 17ರವರೆಗೆ ಸಂಗ್ರಹವಾದ ಒಟ್ಟು ನೇರ ತೆರಿಗೆಯಲ್ಲಿ (Gross Direct Taxes) ಹಿಂದಿನ ವರ್ಷದ ಇದೇ ಅವಧಿಗಿಂತ ಶೇ. 12.73ರಷ್ಟು ಹೆಚ್ಚಾಗಿದೆ. ಇನ್ನು, ನಿವ್ವಳ ನೇರ ತೆರಿಗೆಯು (Net Direct Taxes) ಈ ಅವಧಿಯಲ್ಲಿ ಶೇ. 11.18ರಷ್ಟು ಹೆಚ್ಚಾಗಿದೆ.

ಹಣಕಾಸು ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, 2023ರ ಏಪ್ರಿಲ್ 1ರಿಂದ ಜೂನ್ 17ರವರೆಗೆ ಸಂಗ್ರಹವಾದ ಒಟ್ಟು ಡೈರೆಕ್ಟ್ ಡ್ಯಾಕ್ಸ್ ಮೊತ್ತ 4,19,338 ಕೋಟಿ ರೂ ಇದೆ. ಹಿಂದಿನ ವರ್ಷದಲ್ಲಿ ಇದು 3,71,982 ಕೋಟಿ ರೂ ಇತ್ತು. ಇನ್ನು, ನಿವ್ವಳ ತೆರಿಗೆ ಮೊತ್ತ ಈ ವರ್ಷ 3,79,760 ಕೋಟಿ ರೂ ಇದೆ. ಇಲ್ಲಿ ರೀಫಂಡ್ ಮಾಡಿದ ಹಣ ಕಳೆದು ಉಳಿದ ಮೊತ್ತವು ನಿವ್ವಳ ತೆರಿಗೆ ಸಂಗ್ರಹವಾಗುತ್ತದೆ.

ಇದನ್ನೂ ಓದಿDirect Tax: 2022-23 ರಲ್ಲಿ ನೇರ ತೆರಿಗೆ ಸಂಗ್ರಹ 19.68 ಲಕ್ಷ ಕೋಟಿ ರೂ; ಹೊಸ ದಾಖಲೆ

ಒಟ್ಟು ನೇರ ತೆರಿಗೆ ಸಂಗ್ರಹ ವಿವರ

  • ಕಾರ್ಪೊರೇಶನ್ ಟ್ಯಾಕ್ಸ್: 1,87,311 ಕೋಟಿ ರೂ
  • ಪರ್ಸನಲ್ ಇನ್ಕಮ್ ಟ್ಯಾಕ್ಸ್ (ಪಿಐಟಿ): 2,31,391 ಕೋಟಿ ರೂ.

ತೆರಿಗೆ ಸಂಗ್ರಹದ ಇನ್ನಷ್ಟು ವಿವರ

  • ಅಡ್ವಾನ್ಸ್ ಟ್ಯಾಕ್ಸ್: 1,16,776 ಕೋಟಿ ರೂ
  • ಟಿಡಿಎಸ್: 2,71,849 ಕೋಟಿ ರೂ
  • ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್: 18,128 ಕೋಟಿ ರೂ
  • ರೆಗ್ಯುಲರ್ ಅಸೆಸ್ಮೆಂಟ್ ಟ್ಯಾಕ್ಸ್: 9,977 ಕೋಟಿ ರೂ
  • ಇತರೆ ತೆರಿಗೆ: 2,607 ಕೋಟಿ ರೂ

ಇದನ್ನೂ ಓದಿGST Share: ಕೇಂದ್ರದಿಂದ ರಾಜ್ಯಗಳಿಗೆ 1.18 ಲಕ್ಷ ಕೋಟಿ ಜಿಎಸ್​ಟಿ ಹಂಚಿಕೆ; ಕರ್ನಾಟಕಕ್ಕೆ 4,314 ಕೋಟಿ ರೂ; ಬೇರೆ ರಾಜ್ಯಗಳಿಗೆ ಸಿಕ್ಕಿದ್ದು ಎಷ್ಟು?

ಭಾರತದಲ್ಲಿ ಎಲ್ಲಾ ರೀತಿಯ ತೆರಿಗೆ ಸಂಗ್ರಹ ಹೆಚ್ಚಾಗುತ್ತಿದೆ. ಜಿಎಸ್​ಟಿ ತೆರಿಗೆ ಕೂಡ ಒಳ್ಳೆಯ ಮೊತ್ತದಷ್ಟು ಸಂಗ್ರಹವಾಗುತ್ತಿದೆ. ತೆರಿಗೆಯಲ್ಲಿ ಪರೋಕ್ಷ ತೆರಿಗೆ ಮತ್ತು ನೇರ ತೆರಿಗೆ ಸೇರಿರುತ್ತದೆ. ನೇರ ತೆರಿಗೆಯು ವಹಿವಾಟಿನ ವೇಳೆಯೇ ಕಡಿತಗೊಳ್ಳುತ್ತದೆ. ಟಿಡಿಎಸ್ ಇತ್ಯಾದಿಯು ಇದಕ್ಕೆ ಉದಾಹರಣೆ. ಜಿಎಸ್​ಟಿ ಪರೋಕ್ಷ ತೆರಿಗೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು