Sign In

By signing in or creating an account, you agree with Associated Broadcasting Company's Terms & Conditions and Privacy Policy.

ED Arrest: ಅಕ್ರಮ ಹಣ ವರ್ಗಾವಣೆ ಆರೋಪ: ಎಂ3ಎಂ ಸಂಸ್ಥೆಯ ಮತ್ತಿಬ್ಬರು ನಿರ್ದೇಶಕರ ಬಂಧನ

2 Directors of M3M Group Arrested: ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣವೊಂದರಲ್ಲಿ ಎಂ3ಎಂ ಸಂಸ್ಥೆಯ ಇಬ್ಬರು ನಿರ್ದೇಶಕರನ್ನು ಇಡಿ ಅಧಿಕಾರಿಗಳು ಜೂನ್ 14ರಂದು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಅಮಾನತುಗೊಂಡಿರುವ ವಿಶೇಷ ನ್ಯಾಯಾಧೀಶರೊಬ್ಬರ ಹೆಸರು ಜೋಡಿತವಾಗಿದೆ.

ED Arrest: ಅಕ್ರಮ ಹಣ ವರ್ಗಾವಣೆ ಆರೋಪ: ಎಂ3ಎಂ ಸಂಸ್ಥೆಯ ಮತ್ತಿಬ್ಬರು ನಿರ್ದೇಶಕರ ಬಂಧನ
ಅಕ್ರಮ ಹಣ ವರ್ಗಾವಣೆ ಕಾಯ್ದೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 15, 2023 | 11:42 AM

ನವದೆಹಲಿ: ಮಾಜಿ ನ್ಯಾಯಾಧೀಶರೊಬ್ಬರ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಜೋಡಿತವಾಗಿರುವ ಅಕ್ರಮ ಹಣ ವರ್ಗಾವಣೆ (Money Laundering) ಆರೋಪ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂ3ಎಂ (M3M Group) ಸಂಸ್ಥೆಯ ಇಬ್ಬರು ನಿರ್ದೇಶಕರನ್ನು ಬಂಧಿಸಿದ್ದಾರೆ. ಬಸಂತ್ ಬನ್ಸಾಲ್ ಮತ್ತು ಪಂಕಜ್ ಬನ್ಸಾಲ್ ಬಂಧಿತರಾಗಿರುವ ಇಬ್ಬರು ವ್ಯಕ್ತಿಗಳು. ಇದೇ ಎಂ3ಎಂ ಸಂಸ್ಥೆಯ ಮತ್ತೊಬ್ಬ ಡೈರೆಕ್ಟರ್ ಆಗಿರುವ ರೂಪ್ ಕುಮಾರ್ ಬನ್ಸಾಲ್ ಅವರನ್ನು ಮತ್ತೊಂದು ಪ್ರಕರಣದಲ್ಲಿ ಜೂನ್ 1ರಂದು ಬಂಧಿಸಲಾಗಿತ್ತು. ಜೂನ್ 14ರಂದು ಅಕ್ರಮ ಹಣ ವರ್ಗಾವಣೆ ಕಾಯ್ದೆ (PMLA) ಅಡಿಯಲ್ಲಿ ಇಡಿ ಅಧಿಕಾರಿಗಳು ಪಂಕಜ್ ಬನ್ಸಾಲ್ ಮತ್ತು ಬಸಂತ್ ಬನ್ಸಾಲ್ ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಎಂ3ಎಂ ನಿರ್ದೇಶಕರನ್ನು ಬಂಧಿಸಲಾಗಿರುವ ಈ ಪ್ರಕರಣ ಏನಿದು?

ಹರ್ಯಾಣ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಏಪ್ರಿಲ್​ನಲ್ಲಿ ವಿಶೇಷ ಕೋರ್ಟ್ ನ್ಯಾಯಾಧೀಶರು ಹಾಗೂ ಎಂ3ಎಂ ಸಂಸ್ಥೆಯ ಪ್ರೊಮೋಟರ್​ಗಳ ವಿರುದ್ಧ ಎಫ್​ಐಆರ್ ದಾಖಲಿಸಿತ್ತು. ಎಂ3ಎಂ ಗ್ರೂಪ್​ನ ನಿರ್ದೇಶಕರುಗಳು ಹಾಗೂ ಐರಿಯೋ (IREO) ಎಂಬ ರಿಯಲ್ ಎಸ್ಟೇಟ್ ಗ್ರೂಪ್ ಸಂಸ್ಥೆ ವಿರುದ್ಧ ಇಡಿ ಮತ್ತು ಸಿಬಿಐ ಪ್ರಕರಣಗಳಲ್ಲಿ ಈ ನ್ಯಾಯಾಧೀಶರು ಅಪ್ರಾಮಾಣಿಕತೆ ತೋರುತ್ತಿರುವ ಆರೋಪ ಇದೆ. ಈ ನ್ಯಾಯಾಧೀಶರು ಮತ್ತು ಎಂ3ಎಂ ಗ್ರೂಪ್​ನ ನಿರ್ದೇಶಕರುಗಳು ಸಂಬಂಧಿಗಳೇ ಆಗಿರುವುದರಿಂದ ಜಡ್ಜ್ ತಮ್ಮ ತೀರ್ಪಿನಲ್ಲಿ ತಾರತಮ್ಯತೆ ತೋರುತ್ತಿದ್ದಾರೆ ಎಂದು ಹರ್ಯಾಣದ ಎಸಿಬಿ ತಾನು ದಾಖಲಿಸಿದ ಎಫ್​ಐಆರ್​ನಲ್ಲಿ ಆರೋಪಿಸಿದೆ.

ಇದನ್ನೂ ಓದಿIndian Riches: ಈ ವರ್ಷ ಭಾರತದಿಂದ ಹೊರಬೀಳುತ್ತಿದ್ದಾರೆ 6,500 ಕೋಟ್ಯಾಧಿಪತಿಗಳು; ಇವರು ಹೋಗುತ್ತಿರುವುದಾದರೂ ಯಾವ ದೇಶಗಳತ್ತ?

ಇದಾದ ಬೆನ್ನಲ್ಲೇ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಆ ವಿಶೇಷ ಜಡ್ಜ್ ಅನ್ನು ಅಮಾನತುಗೊಳಿಸಿದೆ. ಜೂನ್ 1ರಂದು ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ3ಎಂನ ಪ್ರೊಮೋಟರ್​ಗಳ ಹಾಗು ಇತರರ ಮೇಲೆ ಇಡಿ ರೇಡ್ ಮಾಡಿತ್ತು. ಇದು ಐರಿಯೋ ಗ್ರೂಪ್ ಮತ್ತು ಅದರ ಪ್ರೊಮೋಟರ್ ಲಲಿತ್ ಗೋಯಲ್ ಅವರಿಗೆ ಜೋಡಿತವಾಗಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿತ್ತು. ಜೂನ್ 1ರಂದು ಇಡಿ ನಡೆಸಿದ ರೇಡ್​ನಲ್ಲಿ ಎಂ3ಎಂನ ಪ್ರೊಮೋಟರ್ ಮತ್ತು ಡೈರೆಕ್ಟರ್ ಆದ ರೂಪ್ ಕುಮಾರ್ ಬನ್ಸಾಲ್ ಅವರನ್ನು ಬಂಧಿಸಿತ್ತು. ಆದರೆ, ಇತರ ಇಬ್ಬರು ನಿರ್ದೇಶಕರಾದ ಬಸಂತ್ ಮತ್ತು ಪಂಜಕ್ ಬನ್ಸಾಲ್ ಅವರು ಈ ಪ್ರಕರಣದಲ್ಲಿ ಜುಲೈ 5ರವರೆಗೆ ಬಂಧನದಿಂದ ತಾತ್ಕಾಲಿಕ ರಕ್ಷಣೆ ಪಡೆದಿದ್ದರಿಂದ ಅವರನ್ನು ಕಸ್ಟಡಿಗೆ ತೆಗೆದುಕೊಂಡಿರಲಿಲ್ಲ.

ಈಗ ಎಸಿಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸಂತ್ ಬನ್ಸಾಲ್ ಮತ್ತು ಪಂಜಕ್ ಬನ್ಸಾಲ್ ಅವರನ್ನೂ ಇಡಿ ಅಧಿಕಾರಿಗಳು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿMir Osman: ಮೀರ್ ಉಸ್ಮಾನ್ ಅಲಿ ಖಾನ್, ಭಾರತದ ಮೊದಲ ಬಿಲಿಯನೇರ್; ಅವರಿಗಿದ್ದ ಆಸ್ತಿ ಮೌಲ್ಯಕ್ಕೆ ಇವತ್ತು ಅವರೇ ವಿಶ್ವದ ನಂ. 1 ಶ್ರೀಮಂತ

ಎಂ3ಎಂ ಪ್ರೊಮೋಟರ್​ಗಳಿಂದ ಏನು ಅಕ್ರಮ ಹಣ ವರ್ಗಾವಣೆ ಆಗಿದೆ?

ಜೂನ್ 1ರಂದು ಎಂ3ಎಂ ಪ್ರೊಮೋಟರ್​ಗಳ ಮೇಲೆ ನಡೆದ ಇಡಿ ದಾಳಿಯಲ್ಲಿ ಹಲವು ಮಹತ್ವದ ದಾಖಲೆಗಳು ಸಿಕ್ಕಿದ್ದು ವರದಿಯಾಗಿದೆ. ಐರಿಯೋ ಗ್ರೂಪ್​ನ ವಿರುದ್ಧದ ಪ್ರಕರಣದಲ್ಲಿ ಎಂ3ಎಂ ಗ್ರೂಪ್ ಮೂಲಕ ನೂರಾರು ಕೋಟಿ ರೂ ಮೊತ್ತದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದು ಕಂಡು ಬಂದಿದೆ. ಹಲವು ವಹಿವಾಟುಗಳ ಪೈಕಿ ಒಂದರಲ್ಲಿ ಐರಿಯೋ ಗ್ರೂಪ್​ನಿಂದ ವಿವಿಧ ಸ್ತರಗಳಲ್ಲಿ ಹಲವು ಶೆಲ್ ಕಂಪನಿಗಳ ಮೂಲಕ ಎಂ3ಎಂ 400 ಕೋಟಿ ರೂ ಪಡೆದಿತ್ತು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ಆದರೆ, ಅಮಾನತುಗೊಂಡಿರುವ ಮಾಜಿ ನ್ಯಾಯಾಧೀಶರಾಗಲೀ, ಎಂ3ಎಂ ಪ್ರೊಮೋಟರ್​ಗಳಾಗಲೀ ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:35 am, Thu, 15 June 23

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ