AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚನ್ನಪಟ್ಟಣದ ಬೊಂಬೆಗಳಂತೆ ವಿಶೇಷ ಈ ಏಟಿಕೊಪ್ಪಕ ಆಟಿಕೆ; ಪ್ರಧಾನಿ ಪ್ರಶಂಸೆ ಬಳಿಕ ಮರುಜೀವ ಪಡೆದ ಈ ಬೊಂಬೆ ಕಲೆ

Etikoppaka toys of Andhra: 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರದ ವಿಶೇಷ ಏಟಿಕೊಪ್ಪಕ ಆಟಿಕೆ ಕಲೆ ಬಗ್ಗೆ ಮಾತನಾಡಿದ್ದರು. ಈ ಕಲೆಯನ್ನು ಉಳಿಸಲು ಸಿವಿ ರಾಜು ಎಂಬುವವರು ನಡೆಸುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ಇದರ ಬೆನ್ನಲ್ಲೇ ಏಟಿಕೊಪ್ಪಕ ಆಟಿಕೆ ಕಲೆ ಪುನರುಜ್ಜೀವನ ಪಡೆದಿದೆ. ಸಾಕಷ್ಟು ಕಡೆ ಇದಕ್ಕೆ ಬೇಡಿಕೆ ಸೃಷ್ಟಿಯಾಗಿದೆ. ಐದಾರು ಶತಮಾನಗಳ ಇತಿಹಾಸ ಇರುವ ಈ ಕಲೆಯು ಆಂಧ್ರದ ಆನಕಪಲ್ಲಿ ಜಿಲ್ಲೆಯ ಏಟಿಕೊಪ್ಪ ಗ್ರಾಮಕ್ಕೆ ವಿಶೇಷವಾಗಿದೆ.

ಚನ್ನಪಟ್ಟಣದ ಬೊಂಬೆಗಳಂತೆ ವಿಶೇಷ ಈ ಏಟಿಕೊಪ್ಪಕ ಆಟಿಕೆ; ಪ್ರಧಾನಿ ಪ್ರಶಂಸೆ ಬಳಿಕ ಮರುಜೀವ ಪಡೆದ ಈ ಬೊಂಬೆ ಕಲೆ
ಏಟಿಕೊಪ್ಪಕ ಆಟಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 21, 2025 | 2:39 PM

Share

ನವದೆಹಲಿ, ಜನವರಿ 21: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶದ ಯಾವುದೋ ಮೂಲೆಯಲ್ಲಿ ಎಲೆಮರೆಕಾಯಿಯಂತೆ ಇರುವ ವಿಶೇಷ ಪ್ರತಿಭೆ, ಕಲೆ, ಸಂಪ್ರದಾಯ, ಆಚರಣೆಗಳನ್ನು ಪ್ರಸ್ತಾಪಿಸಿ ಅವುಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಪ್ರಧಾನಿಗಳೇ ಮಾತನಾಡಿದ್ದಾರೆಂದು ಸಾಕಷ್ಟು ಕುತೂಹಲದ ಕಣ್ಣುಗಳು ಅತ್ತ ತಿರುಗುತ್ತವೆ. 2023ರ ವರ್ಷದಲ್ಲೂ ಮನ್ ಕೀ ಬಾತ್ ಕಾರ್ಯಕ್ರಮವೊಂದರಲ್ಲಿ ಏಟಿಕೊಪ್ಪಕ ಆಟಿಕೆ ಬಗ್ಗೆ ಪ್ರಧಾನಿಗಳು ಮಾತನಾಡಿದ್ದರು. ಸಿ.ವಿ. ರಾಜು ಎಂಬುವವರು ಈ ಕಲೆಯನ್ನು ಉಳಿಸಲು ಮಾಡಿದ ಶ್ರಮವನ್ನು ಪ್ರಶಂಸಿಸಿದ್ದರು. ಅಳಿವಿನಂಚಿನಲ್ಲಿದ್ದು, ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದ ಈ ಆಟಿಕೆ ಪರಂಪರೆಯು ಕಳೆದ ಕೆಲ ತಿಂಗಳಿಂದ ಹೊಸ ಕಳೆ ಪಡೆದುಕೊಂಡಿದೆ.

ಏನಿದು ಏಟಿಕೊಪ್ಪಕ ಆಟಿಕೆ?

ಏಟಿಕೊಪ್ಪಕ ಆಟಿಕೆಗಳನ್ನು ಚನ್ನಪಟ್ಟಣದ ಬೊಂಬೆ ಕಲೆಗೆ ಹೋಲಿಸಬಹುದು. ಏಟಿಕೊಪ್ಪಕ ಎಂಬುದು ಆಂಧ್ರಪ್ರದೇಶದಲ್ಲಿ ಕಾಕಿನಾಡ ಮತ್ತು ವಿಶಾಖಪಟ್ಟಣ ಮಧ್ಯದಲ್ಲಿ ಇರುವ ಆನಕಪಲ್ಲಿ ಎನ್ನುವ ಜಿಲ್ಲೆಯಲ್ಲಿರುವ ಒಂದು ಗ್ರಾಮ. ಈ ಗ್ರಾಮ ಹಾಗು ಸುತ್ತಲಿನ ಕೆಲ ಗ್ರಾಮಗಳ ಜನರು ವಿಶೇಷ ಆಟಿಕೆಗಳನ್ನು ಮಾಡುತ್ತಾರೆ. ಸ್ಥಳೀಯವಾಗಿ ಸಿಗುವ ಮತ್ತು ಬಹಳ ಮೃದುವಾಗಿರುವ ಅಂಕುಡು ಎನ್ನುವ ಮರದಿಂದ ಈ ಆಟಿಕೆಗಳನ್ನು ಮಾಡಲಾಗುತ್ತದೆ. ಆಟಿಕೆಗೆ ಬಳಸುವ ಎಲ್ಲಾ ವಸ್ತುಗಳೂ ಕೂಡ ನೈಸರ್ಗಿಕವಾಗಿವೆ. ಅಡಕೆ ಚೊಗರಿನ ಸಹಾಯದಿಂದ ಮಾಡಲಾದ ಬಣ್ಣವನ್ನು ಈ ಆಟಿಕೆಗಳಿಗೆ ಬಳಸಲಾಗುತ್ತದೆ. ಹಾಗಾಗಿ, ಇದು ಪರಿಶುದ್ಧ ನೈಸರ್ಗಿಕ ವಸ್ತುಗಳಿಂದ ಮಾಡಲಾಗುವ ಆಟಿಕೆ. ಮತ್ತೊಂದು ವಿಶೇಷ ಎಂದರೆ, ಈ ಆಟಿಕೆಯಲ್ಲಿ ಎಲ್ಲೂ ಕೂಡ ಚೂಪು ಭಾಗ ಇಲ್ಲ. ಮಕ್ಕಳಿಗೆ ಅಪಾಯ ತರುವುದಿಲ್ಲ. ಈ ಆಟಿಕೆಗೆ ಜಿಐ ಟ್ಯಾಗ್ ಇದೆ.

ಇದನ್ನೂ ಓದಿ: ಸಂಚಲನ ಸೃಷ್ಟಿಸಿದ ಹೊಸ ಟ್ರಂಪ್ ಮೀಮ್ ಕಾಯಿನ್, ಪತ್ನಿಯ ಹೊಸ ಕ್ರಿಪ್ಟೋಕಾಯಿನ್; ಏನಿದು ಮೀಮ್ ಕಾಯಿನ್?

ಮಾಹಿತಿ ಪ್ರಕಾರ, ಏಟಿಕೊಪ್ಪಕ ಆಟಿಕೆಗೆ ಐದಾರು ಶತಮಾನಗಳಷ್ಟು ಇತಿಹಾಸ ಇದೆ. ಆದರೆ, ಇಪ್ಪತ್ತನೇ ಶತಮಾನದ ಹೊತ್ತಿಗೆ ಈ ಬೊಂಬೆ ಪರಂಪರೆ ನಶಿಸುವ ಅಂಚಿಗೆ ಹೋಗಿತ್ತು. ಸಿ.ವಿ. ರಾಜು ಎಂಬುವವರು 1988ರಲ್ಲಿ ಏಟಿಕೊಪ್ಪಕ ಆಟಿಕೆ ಕಲೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ಆರಂಭಿಸಿದರು. ಸ್ಥಳೀಯ ಕಲಾವಿದರೊಂದಿಗೆ ಸೇರಿ ಈ ಆಟಿಕೆಗಳು ದೇಶದ ಮೂಲೆ ಮೂಲೆ ತಲುಪಲು ಶ್ರಮಿಸಿದ್ದಾರೆ. 2023ರಲ್ಲಿ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಆಟಿಕೆ ಪರಂಪರೆ ಹಾಗೂ ಅದನ್ನು ಉಳಿಸಲು ಪ್ರಯತ್ನಿಸುತ್ತಿರುವ ಸಿ.ವಿ. ರಾಜು ಅವರನ್ನು ಪ್ರಶಂಸಿಸಿದ್ದಾರೆ.

ಮನ್ ಕೀ ಬಾತ್​ನಲ್ಲಿ ಪ್ರಸ್ತಾಪವಾದ ಬಳಿಕ ಸಾಕಷ್ಟು ಕುತೂಹಲದ ಕಣ್ಣುಗಳು ಏಟಿಕೊಪ್ಪಕ ಕಲೆಯತ್ತ ನೆಟ್ಟವು. ಆರು ತಿಂಗಳಲ್ಲಿ ಆ ಆಟಿಕೆಗಳ ಬಿಸಿನೆಸ್ ಬಹಳ ಚೆನ್ನಾಗಿ ಬೆಳೆದಿದೆ. ಹೆಚ್ಚು ಜನಪ್ರಿಯತೆ ಪಡೆದಿವೆ.

ಇದನ್ನೂ ಓದಿ: ಡೊನಾಲ್ಡ್​ ಟ್ರಂಪ್ ಪ್ರಮಾಣವಚನ ಸಮಾರಂಭ, ಮೊದಲ ಸಾಲಿನಲ್ಲೇ ಕಾಣಿಸಿಕೊಂಡ ಸಚಿವ ಜೈಶಂಕರ್

‘ಈ ಕಲೆ ದೀರ್ಘ ಕಾಲ ಉಳಿಯುವಂತೆ ಏನಾದರೂ ಮಾಡು ಎಂದು ನನ್ನ ಹಿರಿಯರು ಹೇಳಿದರು. ಈ ಕಲೆ ನಶಿಸಿದರೆ ಅದರ ಜೊತೆಗೆ ಒಂದು ಸಂಪ್ರದಾಯವೂ ನಶಿಸಿ ಹೋಗುತ್ತದೆ. ಈ ಕಲೆ ನಂಬಿ ಬದುಕುತ್ತಿರುವ 160 ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ ಎಂದನಿಸಿತು’ ಎಂದುಕೊಂಡು ಸಿ.ವಿ. ರಾಜು ಅವರು ಏಟಿಕೊಪ್ಪಕ ಆಟಿಕೆ ಕಲೆ ಉಳಿಸುವ ಸಂಕಲ್ಪ ತೊಟ್ಟರು. ದೇಶದ ಪ್ರಧಾನಿಗಳು ಆಡಿದ ಮಾತುಗಳೂ ಕೂಡ ಈ ಕಲೆ ಬೆಳಗಲು ಸಹಾಯವಾಯಿತು ಎಂದು ಹೇಳುತ್ತಾರೆ ಅವರು.

ಸಿ.ವಿ. ರಾಜು ಅವರಿಗೆ 2023ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡ ಸಿಕ್ಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ