AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಸ್ತ್ರಾಸ್ತ್ರ ತಯಾರಿಕೆಗೆ ಭಾರತವನ್ನು ಪಾರ್ಟ್ನರ್ ಮಾಡಿಕೊಳ್ಳಲು ಯೂರೋಪ್, ಇಸ್ರೇಲ್ ಆಸಕ್ತಿ?

Europe, Israel interested in making India as their defence partner: ಯುದ್ಧಕಾಲದಲ್ಲಿ ಕ್ಷಿಪ್ರವಾಗಿ ಮತ್ತು ಅಧಿಕ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳ ಪೂರೈಕೆ ಬೇಕು. ಯೂರೋಪ್ ಮತ್ತು ಇಸ್ರೇಲ್ ದೇಶಗಳು ಭಾರತವನ್ನು ಡಿಫೆನ್ಸ್ ಪಾರ್ಟ್ನರ್ ಆಗಿ ಮಾಡಿಕೊಳ್ಳಲು ಆಸಕ್ತಿ ತೋರುತ್ತಿವೆ. ಭಾರತದಲ್ಲಿ ಕೈಗಾರಿಕೋದ್ಯಮ ಪ್ರಬಲವಾಗಿರುವುದು, ಕೌಶಲ್ಯವಂತ ಕಾರ್ಮಿಕರು ಲಭ್ಯ ಇರುವುದು, ಖಾಸಗಿ ಕಂಪನಿಗಳೂ ಪ್ರೊಡಕ್ಷನ್​ನಲ್ಲಿ ಇರುವುದು ಎಲ್ಲರ ಚಿತ್ತ ಹರಿಯಲು ಕಾರಣ.

ಶಸ್ತ್ರಾಸ್ತ್ರ ತಯಾರಿಕೆಗೆ ಭಾರತವನ್ನು ಪಾರ್ಟ್ನರ್ ಮಾಡಿಕೊಳ್ಳಲು ಯೂರೋಪ್, ಇಸ್ರೇಲ್ ಆಸಕ್ತಿ?
Lca Tejas 1
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 29, 2025 | 3:43 PM

Share

ನವದೆಹಲಿ, ಡಿಸೆಂಬರ್ 29: ಜಾಗತಿಕವಾಗಿ ಸಂಘರ್ಷಗಳು ಹೆಚ್ಚುತ್ತಿದ್ದು, ಮಿಲಿಟರಿ ತಂತ್ರ ಮತ್ತು ಹೂರಣಗಳ ಸ್ವರೂಪವೇ ಬದಲಾಗುತ್ತಿದೆ. ದೀರ್ಘಾವಧಿ ಯುದ್ಧದಲ್ಲಿ ಉಳಿಯಬೇಕಾದರೆ ಶಸ್ತ್ರಾಸ್ತ್ರಗಳು ಪ್ರಮಾಣ ಬಹಳಷ್ಟು ಬೇಕು. ಹೆಚ್ಚಿನ ದೇಶಗಳಲ್ಲಿರುವ ಶಸ್ತ್ರಾಸ್ತ್ರಗಳು ಕೆಲವೇ ದಿನಗಳ ಯುದ್ಧಕ್ಕೆ ಖಾಲಿಯಾಗುತ್ತವೆ. ಯುದ್ಧ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳ ಸರಬರಾಜು ಬಹಳ ಅಗತ್ಯವಾಗಿರುತ್ತದೆ. ಇದು ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ಜಗತ್ತು ಕಲಿತಿರುವ ಪಾಠ. ಅಂತೆಯೇ, ಯೂರೋಪ್ ಮತ್ತು ಇಸ್ರೇಲ್ ದೇಶಗಳು ತಮ್ಮ ಶಸ್ತ್ರಾಸ್ತ್ರ ಅಗತ್ಯಗಳಿಗೆ ಭಾರತದತ್ತ ಮುಖ ಮಾಡಹೊರಟಿವೆ.

ಯೂರೋಪ್ ಮತ್ತು ಇಸ್ರೇಲ್ ದೇಶಗಳು ಭಾರತವನ್ನು ತಮ್ಮ ಡಿಫೆನ್ಸ್ ಪಾರ್ಟ್ನರ್ ಆಗಿ ಮಾಡಿಕೊಳ್ಳಲು ಆಸಕ್ತಿ ತೋರುತ್ತಿವೆ. ಭಾರತವು ಡಿಫೆನ್ಸ್ ಪಾರ್ಟ್ನರ್ ಆಗಲು ಸೂಕ್ತವಾದ ಮತ್ತು ವಿಶ್ವಾಸಾರ್ಹವಾದ ದೇಶವಾಗಿ ಯೂರೋಪ್ ಮತ್ತು ಇಸ್ರೇಲ್ ಕಣ್ಣಿಗೆ ಕಾಣುತ್ತಿದೆ. ಇದರಲ್ಲಿ ಅಚ್ಚರಿಯ ಅಂಶವೇನೂ ಇಲ್ಲ.

ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್; ಅಂತಿಮ ಪ್ರಸ್ತಾಪ ಸಲ್ಲಿಸಿದ ಭಾರತ; ಕೃಷಿ ತಂಟೆ ಬೇಡ, ಟ್ಯಾರಿಫ್ ನಿಲ್ಲಿಸಿ ಎಂಬುದು ಭಾರತದ ಬೇಡಿಕೆ

ಯುದ್ಧದ ವೇಳೆ ಮದ್ದುಗುಂಡುಗಳು, ಕ್ಷಿಪಣಿಗಳು, ಡ್ರೋನ್, ಏರ್ ಡಿಫೆನ್ಸ್ ಇಂಟರ್ಸೆಪ್ಟರ್ ಇತ್ಯಾದಿಗಳು ಎಷ್ಟು ಬಂದರೂ ಸಾಲದು. ಯೂರೋಪ್ ಮತ್ತು ಇಸ್ರೇಲ್​ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರ ತಯಾರಿಕೆ ವ್ಯವಸ್ಥೆ ಇದೆ. ಆದರೂ ಕೂಡ ಭಾರತವನ್ನು ಡಿಫೆನ್ಸ್ ಪಾರ್ಟ್ನರ್ ಆಗಿ ಮಾಡಿಕೊಳ್ಳಲು, ಮತ್ತು ಭಾರತದಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲು ಇವು ಆಸಕ್ತಿ ತೋರುತ್ತಿರುವುದಕ್ಕೆ ಸಕಾರಣಗಳಿವೆ.

ಮೊದಲಿಗೆ, ಯೂರೋಪ್​ನಲ್ಲಿ ಡಿಫೆನ್ಸ್ ಇಂಡಸ್ಟ್ರಿಗಳು ಇವೆ. ಆದರೆ, ದೀರ್ಘಕಾಲದ ಯುದ್ಧವನ್ನು ನಿರ್ವಹಿಸಲು ಬೇಕಾದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು, ಮದ್ದುಗುಂಡುಗಳನ್ನು ಕ್ಷಿಪ್ರವಾಗಿ ತಯಾರಿಸಲು ಆಗುವುದಿಲ್ಲ. ಇಸ್ರೇಲ್​ಗೆ ಇದಕ್ಕಿಂತ ದೊಡ್ಡ ಸಮಸ್ಯೆ ಇದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ತಯಾರಿಸುವ ವ್ಯವಸ್ಥೆ ಇಲ್ಲ. ಅದರ ಜೊತೆಗೆ, ಸುತ್ತಮುತ್ತ ವೈರಿ ದೇಶಗಳೇ ಇರುವುದರಿಂದ ಮತ್ತು ಇಸ್ರೇಲ್ ಪುಟ್ಟ ಪ್ರದೇಶವಾಗಿರುವುದರಿಂದ ಶಸ್ತ್ರಾಸ್ತ್ರ ತಯಾರಿಕೆ ಘಟಕಗಳನ್ನು ವೈರಿಗಳು ಸುಲಭವಾಗಿ ಗುರಿಯಾಗಿಸಿ ನಾಶ ಮಾಡಬಹುದು. ಹೀಗಾಗಿ, ಬೇರೆ ಕಡೆ ಶಸ್ತ್ರಾಸ್ತ್ರಗಳ ತಯಾರಿಕೆಯ ವ್ಯವಸ್ಥೆ ಮಾಡುವುದು ಅನಿವಾರ್ಯ.

ಇದನ್ನೂ ಓದಿ: ಈ ವರ್ಷ 1 ಟ್ರಿಲಿಯನ್ ಡಾಲರ್ ರಫ್ತು ಗುರಿ ಅಸಾಧ್ಯ; ಭಾರತಕ್ಕಿರುವ ಪ್ರಮುಖ ತೊಡಕುಗಳಿವು…

ಭಾರತವನ್ನು ಯಾಕೆ ನಂಬುತ್ತವೆ ಈ ದೇಶಗಳು…?

ಭಾರತದಲ್ಲಿ ಬಹಳ ವ್ಯಾಪಕವಾಗಿರುವ ಉದ್ಯಮಗಳಿವೆ. ಕಾರ್ಮಿಕ ಸಮೂಹ ದೊಡ್ಡದಿದೆ. ಕೌಶಲ್ಯವಂತ ಕಾರ್ಮಿಕರು, ಅರೆಕೌಶಲದ ಕಾರ್ಮಿಕರು ಹೇರಳ ಸಂಖ್ಯೆಯಲ್ಲಿ ಸಿಗುತ್ತಾರೆ. ಇಲ್ಲಿಯ ಡಿಫೆನ್ಸ್ ಸೆಕ್ಟರ್ ಖಾಸಗಿಯವರಿಗೂ ತೆರೆದಿದೆ. ಕ್ಷಿಪಣಿ, ರಾಡಾರ್, ಯುಎವಿ, ಮದ್ದುಗುಂಡು ಇತ್ಯಾದಿಗಳನ್ನು ತಯಾರಿಸಬಲ್ಲ ಕಂಪನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಬಹಳ ಕಡಿಮೆ ಸಮಯದಲ್ಲಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ತಯಾರಿಸಬಲ್ಲ ಸಾಮರ್ಥ್ಯ ಭಾರತಕ್ಕೆ ಇದೆ ಎನ್ನುವುದು ಯೂರೋಪ್ ಮತ್ತು ಇಸ್ರೇಲ್ ದೇಶಗಳಿಗೆ ತಿಳಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!