AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳ PPF ಹಣ ಹಿಂಪಡೆದ ತಂದೆ: ಬಡ್ಡಿ ಸಮೇತ ಮರಳಿಸಲು ಕೋರ್ಟ್ ಆದೇಶ; ಏನಿವೆ ಪಿಪಿಎಫ್ ನಿಯಮಗಳು?

Can a guardian withdraws PPF account of minor?: ಮಗಳ ಹೆಸರಲ್ಲಿ ಪಿಪಿಎಫ್​ನಲ್ಲಿ ಮಾಡಿದ್ದ ಹೂಡಿಕೆಯನ್ನು ಆಕೆಗೆ ತಿಳಿಸದೇ ವಿತ್​ಡ್ರಾ ಮಾಡಿದ ತಂದೆ ಈಗ ಅಷ್ಟೂ ಹಣವನ್ನು ಮರಳಿಸಬೇಕಿದೆ. ತಂದೆಯ ವಿರುದ್ಧ ಮಗಳು ಕೋರ್ಟ್​ನಲ್ಲಿ ಕೇಸ್ ಹಾಕಿದ್ದು, ಆಕೆಯ ಪರವಾಗಿ ಜಿಲ್ಲಾ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ತೀರ್ಪು ನೀಡಿವೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನ ನಿಯಮಗಳು ಏನಿವೆ?

ಮಗಳ PPF ಹಣ ಹಿಂಪಡೆದ ತಂದೆ: ಬಡ್ಡಿ ಸಮೇತ ಮರಳಿಸಲು ಕೋರ್ಟ್ ಆದೇಶ; ಏನಿವೆ ಪಿಪಿಎಫ್ ನಿಯಮಗಳು?
ಹಣImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 10, 2026 | 4:18 PM

Share

ನವದೆಹಲಿ, ಆಗಸ್ಟ್ 10: ತಮ್ಮ ಮಗಳ ಹೆಸರಲ್ಲಿದ್ದ ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆಯಿಂದ ಹಣ ಹಿಂಪಡೆದು ಖಾತೆ ಮುಚ್ಚಿದ್ದ ತಂದೆಗೆ ದೆಹಲಿ ಹೈಕೋರ್ಟ್ ಆಘಾತ ನೀಡಿದೆ. ಹಿಂಪಡೆದ ಸಂಪೂರ್ಣ ಮೊತ್ತವನ್ನು ಮಗಳಿಗೆ ವಾಪಸ್ ನೀಡುವಂತೆ ಕೋರ್ಟ್ ಆದೇಶಿಸಿದೆ. ಈ ಮೊದಲು ಜಿಲ್ಲಾ ನ್ಯಾಯಾಲಯ ನೀಡಿದ ಆದೇಶವನ್ನು ದೆಹಲಿ ಉಚ್ಚನ್ಯಾಯಾಲಯ ಎತ್ತಿಹಿಡಿದಿದೆ. ಮಗಳಿಗಾಗಿ ಮಾಡಿದ ಹೂಡಿಕೆಯನ್ನು ಅಪ್ಪನಾದನವನು ತಾನು ವಿತ್​ಡ್ರಾ ಮಾಡಿ ತನಗಾಗಿ ಬಳಕೆ ಮಾಡುವಂತಿಲ್ಲ ಎಂಬುವಂತಹ ತೀರ್ಪನ್ನು ಕೋರ್ಟ್ ನೀಡಿದೆ.

ಏನಿದು ಪ್ರಕರಣ?

1999 ರಲ್ಲಿ ಸುಧೀರ್ ಕವಾತ್ರ ಎಂಬುವವರು ತಮ್ಮ ಅಪ್ರಾಪ್ತ ಮಗಳು ಶ್ಯಾಮ್ಲಿ ಕವಾತ್ರ ಹೆಸರಿನಲ್ಲಿ PPF ಖಾತೆಯನ್ನು ತೆರೆದಿದ್ದರು. ಅದಾದ ಬಳಿಕ ಗಂಡ ಮತ್ತು ಹೆಂಡತಿ ಬೇರೆಯಾಗಿದ್ದಾರೆ. ಶ್ಯಾಮ್ಲಿ ಅವರು ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ಸುಧೀರ್ ಅವರು ಪತ್ನಿ ಮತ್ತು ಮಗಳಿಗೆ ನಿಯಮಿತವಾಗಿ ಜೀವನಾಂಶ ನೀಡುತ್ತಿದ್ದಾರೆ.

ಇದೇ ವೇಳೆ, 2016 ರಲ್ಲಿ, ಮಗಳ ಶಿಕ್ಷಣ ಮತ್ತು ಯೋಗಕ್ಷೇಮಕ್ಕಾಗಿ ಹಣ ಬಳಸುವುದಾಗಿ ಬ್ಯಾಂಕ್‌ಗೆ ಬರೆದುಕೊಟ್ಟು, ಖಾತೆಯಲ್ಲಿದ್ದ ₹8 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ತಂದೆ ಹಿಂಪಡೆದು ಖಾತೆಯನ್ನು ಕ್ಲೋಸ್ ಮಾಡಿದ್ದರು. 2017ರಲ್ಲಿ ಖಾತೆ ಮೆಚ್ಯೂರ್ ಆಗುವುದಕ್ಕೆ ಮುನ್ನವೇ ಮುಚ್ಚಲಾಗಿತ್ತು.

ಸತ್ಯಾಂಶ ಗೊತ್ತಾಗಿ ಕೋರ್ಟ್ ಮೆಟ್ಟಿಲೇರಿದ ಶ್ಯಾಮ್ಲಿ

2017 ರಲ್ಲಿ PPF ಮೆಚ್ಯೂರಿಟಿ ಅವಧಿ ಮುಗಿದಾಗ ಶ್ಯಾಮ್ಲಿ ಬ್ಯಾಂಕ್‌ಗೆ ತೆರಳಿದಾಗ, ಖಾತೆಯಲ್ಲಿದ್ದ ಹಣವನ್ನು ತಂದೆ ಮುಂಚಿತವಾಗಿಯೇ ಹಿಂಪಡೆದಿರುವುದು ಬೆಳಕಿಗೆ ಬಂದಿದೆ. ಪೋಷಕರ ನಡುವಿನ ಕೌಟುಂಬಿಕ ಕಲಹದಿಂದಾಗಿ ತಾಯಿಯೊಂದಿಗೆ ವಾಸಿಸುತ್ತಿದ್ದ ಶ್ಯಾಮ್ಲಿ, ಉನ್ನತ ಶಿಕ್ಷಣದ ವೆಚ್ಚಕ್ಕಾಗಿ ಹಣವಿಲ್ಲದೆ ತೊಂದರೆಗೊಳಗಾಗಿ ತಂದೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದರು.

ಇದನ್ನೂ ಓದಿ: UPI ಮೇಲಿನ MDR; ಶೇಕಡಾವಾರು ಆಧಾರಿತವಾಗಿ ಶುಲ್ಕ ಬೇಡ, ಗರಿಷ್ಠ ಮಿತಿ ಇರಲಿ: ದೀಪಕ್ ಶೆಣೈ

ಶ್ಯಾಮ್ಲಿ ಪರವಾಗಿ ಜಿಲ್ಲಾ ಕೋರ್ಟ್ ತೀರ್ಪು

ಶ್ಯಾಮ್ಲಿ ಅವರು ಮೊದಲು ಹೋಗಿದ್ದ ಜಿಲ್ಲಾ ನ್ಯಾಯಾಲಯದ ಬಳಿ. ಅಲ್ಲಿ ಆಕೆಯ ಪರವಾಗಿ ತೀರ್ಪು ಬಂದಿತು. ವಿತ್​ಡ್ರಾ ಮಾಡಲಾದ ಪಿಪಿಎಫ್ ಹಣವೆಲ್ಲವನ್ನೂ ಬಡ್ಡಿಸಮೇತವಾಗಿ (ಶೇ. 8ರ ದರ) ನೀಡುವಂತೆ ಆದೇಶಿಸಿತು. ಇದನ್ನು ಪ್ರಶ್ನಿಸಿ ಸುಧೀರ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದರು. ಆದರೆ, ಉಚ್ಚ ನ್ಯಾಯಾಲಯ ಕೂಡ ಜಿಲ್ಲಾ ಕೋರ್ಟ್ ಆದೇಶವನ್ನೇ ಎತ್ತಿ ಹಿಡಿದು ತೀರ್ಪು ಕೊಟ್ಟಿತು.

ದೆಹಲಿ ಹೈಕೋರ್ಟ್ ತೀರ್ಪು

ತಂದೆ ಸುಧೀರ್ ಕವಾತ್ರ ಅವರು, “ನಾನು ಮಗಳು ಮತ್ತು ಆಕೆಯ ತಾಯಿಗೆ ಜೀವನಾಂಶವಾಗಿ (Maintenance) ನೀಡಿದ ಹಣದಲ್ಲಿ ಇದನ್ನು ಸರಿದೂಗಿಸಲಾಗಿದೆ” ಎಂದು ವಾದಿಸಿದ್ದರು. ಆದರೆ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ಪೀಠವು ಈ ವಾದವನ್ನು ವಜಾಗೊಳಿಸಿ ಕೆಳಗಿನ ಮುಖ್ಯ ಅಂಶಗಳನ್ನು ಉಲ್ಲೇಖಿಸಿದೆ:

ರಕ್ಷಕನಾಗಿ ಮಾತ್ರ: ಮಗಳ ಹೆಸರಿನಲ್ಲಿ ಹೂಡಿಕೆ ಮಾಡಿದ ಹಣವು ಆಕೆಗೆ ಮಾತ್ರ ಸೇರಿದ್ದು. ತಂದೆ ಕೇವಲ ಒಬ್ಬ ರಕ್ಷಕನಾಗಿ (Guardian) ಖಾತೆಯನ್ನು ನಿರ್ವಹಿಸಬಹುದೇ ಹೊರತು ಆ ಹಣದ ಮೇಲೆ ಸ್ವಂತ ಹಕ್ಕು ಹೊಂದಲು ಸಾಧ್ಯವಿಲ್ಲ.

ಜೀವನಾಂಶ ಬೇರೆ, ಹೂಡಿಕೆ ಬೇರೆ: ಮಗಳು ಮತ್ತು ಬೇರ್ಪಟ್ಟ ಹೆಂಡತಿಗೆ ಜೀವನಾಂಶ ನೀಡುವುದು ತಂದೆಯ ಪ್ರತ್ಯೇಕ ಕಾನೂನುಬದ್ಧ ಜವಾಬ್ದಾರಿಯಾಗಿದೆ. ಆ ಜವಾಬ್ದಾರಿಯನ್ನು ಮಗಳ ಹೆಸರಿನಲ್ಲಿರುವ ಹೂಡಿಕೆಯ ಹಣದೊಂದಿಗೆ ಸರಿದೂಗಿಸಲು (Offset) ಸಾಧ್ಯವಿಲ್ಲ.

ಇದನ್ನೂ ಓದಿ: ಭಾರತದಲ್ಲಿ ಏಜ್ ವೆರಿಫಿಕೇಶನ್ ಫೀಚರ್ ಪರೀಕ್ಷಿಸುತ್ತಿರುವ ವಾಟ್ಸಾಪ್; ವಯಸ್ಸು ತಿಳಿಸಲು ಸಿದ್ದರಾಗಿ

PPF ನಲ್ಲಿ ಏನಿವೆ ನಿಯಮಗಳು?

ಸಾರ್ವಜನಿಕ ಭವಿಷ್ಯ ನಿಧಿ (Public Provident Fund – PPF) ನಿಯಮಾವಳಿಗಳ ಪ್ರಕಾರ:

  • ಅಪ್ರಾಪ್ತ ವಯಸ್ಕರ ಖಾತೆ: ತಂದೆ ಅಥವಾ ತಾಯಿ ಒಬ್ಬ ಅಪ್ರಾಪ್ತನ/ಅಪ್ರಾಪ್ತೆಯ ಹೆಸರಿನಲ್ಲಿ PPF ಖಾತೆ (Minor Account) ತೆರೆಯಬಹುದು. ಆದರೆ ಪೋಷಕರು ಕೇವಲ ‘ಪಾಲಕ’ (Guardian) ಆಗಿ ಕಾರ್ಯನಿರ್ವಹಿಸುತ್ತಾರೆ.
  • ಹಣ ಹಿಂಪಡೆಯುವ ನಿಯಮ: ಅಪ್ರಾಪ್ತ ವಯಸ್ಕರ PPF ಖಾತೆಯಿಂದ ಭಾಗಶಃ ಅಥವಾ ಪೂರ್ಣ ಹಣ ಹಿಂಪಡೆಯಬೇಕಾದರೆ (Withdrawal Rules), “ಈ ಹಣವನ್ನು ಕೇವಲ ಅಪ್ರಾಪ್ತ ಮಗ/ಮಗಳ ಯೋಗಕ್ಷೇಮ ಮತ್ತು ಅವರ ಪ್ರಯೋಜನಕ್ಕಾಗಿ ಮಾತ್ರ ಬಳಸಲಾಗುವುದು” ಎಂದು ಪೋಷಕರು ಖಾತೆ ಇರುವ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಮುಚ್ಚಳಿಕೆ ಪತ್ರ (Declaration) ನೀಡಬೇಕಾಗುತ್ತದೆ.
  • ಮಾಲೀಕತ್ವದ ಹಕ್ಕು: PPF ಖಾತೆಯಲ್ಲಿದ್ದ ಹಣದ ನಿಜವಾದ ಮಾಲೀಕರು ಆ ಮಗು ಮಾತ್ರ. ಮಗು 18 ವರ್ಷ ತುಂಬಿ (Major) ವಯಸ್ಕರಾದ ತಕ್ಷಣ, ಖಾತೆಯ ಸಂಪೂರ್ಣ ನಿರ್ವಹಣೆ ಮತ್ತು ಹಣ ಹಿಂಪಡೆಯುವ ಹಕ್ಕು ಆ ಮಗುವಿಗೆ ವರ್ಗಾವಣೆಯಾಗುತ್ತದೆ. ಪೋಷಕರು ಆ ಹಣವನ್ನು ತಮ್ಮ ಸ್ವಂತ ಬಳಕೆಗೆ ಅಥವಾ ಇತರ ಸಾಲ/ಜೀವನಾಂಶ ಪಾವತಿಗೆ ಬಳಸಿಕೊಳ್ಳುವುದು ಕಾನೂನುಬಾಹಿರ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ
ಬೆಂಗಳೂರಲ್ಲಿ 105 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಪತ್ತೆ
ಬೆಂಗಳೂರಲ್ಲಿ 105 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಪತ್ತೆ
ಪ್ರಾಯಶ್ಚಿತ್ತ ಯಾತ್ರೆ ಅನ್ನೋರಿಗೆ ದೇವೇಗೌಡರಿಂದ ತಿರುಗೇಟು!
ಪ್ರಾಯಶ್ಚಿತ್ತ ಯಾತ್ರೆ ಅನ್ನೋರಿಗೆ ದೇವೇಗೌಡರಿಂದ ತಿರುಗೇಟು!
ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್ ಸೇರಿ 6 ಆರೋಪಿಗಳು ವಿಚಾರಣೆಗೆ ಹಾಜರು
ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್ ಸೇರಿ 6 ಆರೋಪಿಗಳು ವಿಚಾರಣೆಗೆ ಹಾಜರು
ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್!
ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್!
ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಯಾತ್ರೆ
ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಯಾತ್ರೆ
ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿ ಭೂಕುಸಿತ
ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿ ಭೂಕುಸಿತ
ಬೆಂಗಳೂರಿಗರೇ ಎಚ್ಚರ: ಮನೆಗೆ ಕನ್ನ ಹಾಕಲು ಎಂಟ್ರಿ ಕೊಟ್ಟಿದೆ ಚಡ್ಡಿ ಗ್ಯಾಂಗ್
ಬೆಂಗಳೂರಿಗರೇ ಎಚ್ಚರ: ಮನೆಗೆ ಕನ್ನ ಹಾಕಲು ಎಂಟ್ರಿ ಕೊಟ್ಟಿದೆ ಚಡ್ಡಿ ಗ್ಯಾಂಗ್
ರಾಧಿಕಾ ಪಂಡಿತ್ ಯಶ್ ಅವರ ಅತಿ ದೊಡ್ಡ ಶಕ್ತಿ; ನಯನತಾರಾ ಭಾವುಕ ಮಾತು
ರಾಧಿಕಾ ಪಂಡಿತ್ ಯಶ್ ಅವರ ಅತಿ ದೊಡ್ಡ ಶಕ್ತಿ; ನಯನತಾರಾ ಭಾವುಕ ಮಾತು
ಅಧಿವೇಶನಕ್ಕೂ ಮುನ್ನ ಖಾತೆ ಹಂಚಿಕೆಯಾಗದಿದ್ರೆ ಏನ್ಮಾಡ್ತಾರಂತೆ ಡಿಕೆಶಿ!
ಅಧಿವೇಶನಕ್ಕೂ ಮುನ್ನ ಖಾತೆ ಹಂಚಿಕೆಯಾಗದಿದ್ರೆ ಏನ್ಮಾಡ್ತಾರಂತೆ ಡಿಕೆಶಿ!