Complaints About Insurance: ಇನ್ಷೂರೆನ್ಸ್​ ಬಗೆಗಿನ ಯಾವುದೇ ದೂರುಗಳಿದ್ದಲ್ಲಿ ಸಲ್ಲಿಸುವುದಕ್ಕೆ ಇಲ್ಲಿದೆ ವಿವಿಧ ವಿಧಾನ

ವಿಮೆ ವ್ಯಾಜ್ಯಗಳಿದ್ದಲ್ಲಿ ಗ್ರಾಹಕರು ಅದನ್ನು ಪರಿಹರಿಸಿಕೊಳ್ಳುವ ಬಗೆ ಮತ್ತು ವಿಧಾನ ಹೇಗೆ ಎಂಬುದರ ವಿವರ ಈ ಲೇಖನದಲ್ಲಿ ಹಂತಹಂತವಾಗಿ ಇದೆ.

Complaints About Insurance: ಇನ್ಷೂರೆನ್ಸ್​ ಬಗೆಗಿನ ಯಾವುದೇ ದೂರುಗಳಿದ್ದಲ್ಲಿ ಸಲ್ಲಿಸುವುದಕ್ಕೆ ಇಲ್ಲಿದೆ ವಿವಿಧ ವಿಧಾನ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on: Nov 10, 2021 | 4:37 PM

ಕ್ಲೇಮ್‌ಗಳ ಇತ್ಯರ್ಥದಲ್ಲಿನ ವಿಳಂಬಕ್ಕೆ ಸಂಬಂಧಿಸಿದಂತೆ ವಿಮಾ ಕಂಪೆನಿಯೊಂದಿಗಿನ ಸಮಸ್ಯೆಗಳು, ಪ್ರೀಮಿಯಂ ಮೇಲಿನ ವ್ಯಾಜ್ಯಗಳು, ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳನ್ನು ತಪ್ಪಾಗಿ ನಿರೂಪಿಸುವುದು ತುಂಬ ಸಾಮಾನ್ಯ ಎಂಬಂತೆ ಆಗಿದೆ. ಶಾಖೆಯ ಕುಂದುಕೊರತೆ ನಿವಾರಣೆ ಅಧಿಕಾರಿಗೆ ದೂರು ಸಲ್ಲಿಸುವ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಬಹುದು. ದೂರನ್ನು ಸ್ವೀಕರಿಸಿದ 15 ದಿನಗಳಲ್ಲಿ ಅದಕ್ಕೆ ಪ್ರತಿಕ್ರಿಯಿಸುವುದು ವಿಮಾ ಕಂಪೆನಿಯ ಜವಾಬ್ದಾರಿ ಆಗಿದೆ. ನಿಗದಿತ ಅವಧಿಯೊಳಗೆ ವಿಮಾ ಕಂಪೆನಿಯು ಅದನ್ನು ನಿಭಾಯಿಸಲು ವಿಫಲವಾದಲ್ಲಿ ಅಥವಾ ತೃಪ್ತಿದಾಯಕ ಪರಿಹಾರವನ್ನು ನೀಡಲು ವಿಫಲವಾದರೆ ಆ ನಂತರ ದೂರುದಾರರು ತಮ್ಮ ದೂರನ್ನು IRDAನ ಗ್ರಾಹಕ ವ್ಯವಹಾರಗಳ ಇಲಾಖೆಯ ಕುಂದುಕೊರತೆ ನಿವಾರಣೆ ಘಟಕದಲ್ಲಿ ನೋಂದಾಯಿಸಿಕೊಳ್ಳಬಹುದು. ವಿಮಾ ಕಂಪೆನಿಯ ವಿರುದ್ಧ ದೂರನ್ನು ಹೊಂದಿದ್ದರೆ, ಅವುಗಳನ್ನು ನೋಂದಾಯಿಸಿಕೊಳ್ಳಬಹುದಾದ ಕೆಲವು ವಿಧಾನಗಳು ಇಲ್ಲಿವೆ.

ಕಂಪೆನಿಯೊಂದಿಗೆ ದೂರು: ವಿಮಾ ಪಾಲಿಸಿಯಲ್ಲಿ ಯಾವುದೇ ಸಮಸ್ಯೆಯ ಸಂದರ್ಭದಲ್ಲಿ ಪಾಲಿಸಿದಾರರು ತಮ್ಮ ಕುಂದುಕೊರತೆಗಳನ್ನು ಪರಿಹರಿಸಲು ಮೊದಲು ವಿಮಾ ಕಂಪೆನಿಯನ್ನು ಸಂಪರ್ಕಿಸಬೇಕು. ಮೊದಲಿಗೆ ವಿಮಾ ಕಂಪೆನಿಯ ಕುಂದುಕೊರತೆ ನಿವಾರಣೆ ಅಧಿಕಾರಿಯನ್ನು (GRO) ಸಂಪರ್ಕಿಸಬೇಕು. ಇದನ್ನು ಮಾಡಲು ಹತ್ತಿರದ ಶಾಖೆಗೆ ಭೇಟಿ ನೀಡಬಹುದು ಅಥವಾ GROಗೆ ಇಮೇಲ್ ಕಳುಹಿಸಬಹುದು. ಎಲ್ಲ ವಿಮಾ ಕಂಪೆನಿಗಳ GROಗಳ ಇಮೇಲ್ ಐಡಿಗಳನ್ನು ಸುಲಭವಾಗಿ ಹುಡುಕಬಹುದು. GRO ಅನ್ನು ಸಂಪರ್ಕಿಸುವಾಗ ಅಗತ್ಯ ದಾಖಲೆಗಳೊಂದಿಗೆ ಲಿಖಿತವಾಗಿ ದೂರನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂಬುದನ್ನು ಗಮನಿಸಬೇಕು. ದಿನಾಂಕದೊಂದಿಗೆ ದೂರಿನ ಲಿಖಿತ ಸ್ವೀಕೃತಿಯನ್ನು ತೆಗೆದುಕೊಳ್ಳಲು ಮರೆಯಬಾರದು. ಗ್ರಾಹಕರ ದೂರುಗಳನ್ನು ನಿರ್ವಹಿಸಲು ಯಾರನ್ನು ಸಂಪರ್ಕಿಸಬೇಕು ಮತ್ತು ಸಮಸ್ಯೆಯನ್ನು ಹೇಗೆ ಹೆಚ್ಚಿಸಬೇಕು ಎಂಬಂತಹ ಎಲ್ಲ ಸಂಬಂಧಿತ ವಿವರಗಳೊಂದಿಗೆ ತಮ್ಮದೇ ಆದ ನಿಯಮಗಳನ್ನು ಎಲ್ಲ ವಿಮಾ ಕಂಪೆನಿಗಳು ಹೊಂದಿವೆ.

ಪರಿಹಾರಕ್ಕಾಗಿ ನಿರೀಕ್ಷಿಸಿ: IRDAI ಮಾರ್ಗಸೂಚಿಗಳ ಪ್ರಕಾರ, ವಿಮಾ ಕಂಪೆನಿಯು ದೂರುಗಳನ್ನು 15 ದಿನಗಳೊಳಗಾಗಿ ಪರಿಹರಿಸಬೇಕು. ಆದರೆ ಕುಂದುಕೊರತೆಗಳನ್ನು 15 ದಿನಗಳಲ್ಲಿ ಪರಿಹರಿಸದಿದ್ದರೆ ಅಥವಾ ವಿಮಾ ಕಂಪೆನಿಯು ಒದಗಿಸಿದ ಪರಿಹಾರದಿಂದ ಗ್ರಾಹಕರು ತೃಪ್ತರಾಗದಿದ್ದರೆ ಸಮಸ್ಯೆಯನ್ನು ಮುಂದಿನ ಹಂತಕ್ಕೆ ಒಯ್ಯಬಹುದು. ದೂರನ್ನು ವಿಮಾ ನಿಯಂತ್ರಕ IRDAIನಲ್ಲಿ ನೋಂದಾಯಿಸಬಹುದು.

IRDAIಗೆ ದೂರು ತಲುಪಿಸುವುದು: ಇತ್ತೀಚಿನ ದಿನಗಳಲ್ಲಿ ಟೋಲ್ ಫ್ರೀ ಸಂಖ್ಯೆ 155255 (ಅಥವಾ) 1800 4254 732ಗೆ ಕರೆ ಮಾಡುವ ಮೂಲಕ ಅಥವಾ complaints@irdai.gov.inಗೆ ಇ-ಮೇಲ್ ಕಳುಹಿಸುವ ಮೂಲಕ IRDAIನ ಗ್ರಾಹಕ ವ್ಯವಹಾರಗಳ ಇಲಾಖೆಯ ಕುಂದುಕೊರತೆ ಪರಿಹಾರ ಘಟಕವನ್ನು ಸುಲಭವಾಗಿ ಸಂಪರ್ಕಿಸಬಹುದು. ಇಂಟಿಗ್ರೇಟೆಡ್ ಗ್ರೀವಿಯೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಜಿಎಂಎಸ್) ಎಂಬ ಐಆರ್‌ಡಿಎ ನಿರ್ವಹಿಸುವ ಆನ್‌ಲೈನ್ ಪೋರ್ಟಲ್ ಅನ್ನು ಬಳಸುವ ಆಯ್ಕೆಯೂ ಇದೆ.

ಸಂಬಂಧಪಟ್ಟ ವಿಮಾ ಕಂಪೆನಿಯ ಕುಂದುಕೊರತೆ ಪರಿಹಾರ ಮಾರ್ಗಗಳನ್ನು ಪ್ರಯತ್ನಿಸಿದ ನಂತರ ಮಾತ್ರ ಈ ಮಾರ್ಗವನ್ನು ಬಳಸಬೇಕು. ಯಾವುದೇ ಕಾರಣಕ್ಕೂ ನೇರವಾಗಿ ವಿಮಾ ಕಂಪೆನಿಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದರೆ ವಿಮಾ ಕಂಪೆನಿಗಳೊಂದಿಗೆ ದೂರುಗಳನ್ನು ನೋಂದಾಯಿಸಲು IGMS ಗೇಟ್‌ವೇ ಒದಗಿಸುತ್ತದೆ.

IRDAI ಪೋರ್ಟಲ್ ಮೂಲಕ ದೂರು ಸಲ್ಲಿಸುವುದು ಹೇಗೆ?: ದೂರುದಾರರು IRDA ಆನ್‌ಲೈನ್ ದೂರು ಪರಿಹಾರ ಪೋರ್ಟಲ್ ಅನ್ನು ಬಳಸಿಕೊಂಡು ವೆಬ್‌ಸೈಟ್- igms.irda.gov.inಗೆ ಭೇಟಿ ನೀಡುವ ಮೂಲಕ ಹೊಸ ದೂರನ್ನು ಮಾಡಬಹುದು ಅಥವಾ ಇಂಟಿಗ್ರೇಟೆಡ್ ಗ್ರೀವೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (IGMS)ಗೆ ಅದನ್ನು ಒಯ್ಯಬಹುದು. ದೂರುದಾರರಿಗೆ ತನ್ನ ದೂರನ್ನು ಮಧ್ಯದಲ್ಲಿ ತಿದ್ದುಪಡಿ ಮಾಡಲು IGMS ಅನುಮತಿಸುತ್ತದೆ. IRDA ಅನ್ನು ಸಂಪರ್ಕಿಸುವ ಮೊದಲು, ಸಂಬಂಧಿತ ವಿಮಾ ಕಂಪೆನಿಯೊಂದಿಗೆ ದೂರನ್ನು ನೋಂದಾಯಿಸಿಕೊಳ್ಳಬೇಕು. ಟೋಲ್-ಫ್ರೀ ಸಂಖ್ಯೆ 155255 (ಅಥವಾ) 1800-4254-732ಗೆ ಕರೆ ಮಾಡುವ ಮೂಲಕ ಅಥವಾ complaints@irda.gov.inಗೆ ಇಮೇಲ್ ಕಳುಹಿಸುವ ಮೂಲಕವೂ ಇದನ್ನು ಮಾಡಬಹುದು.

ದೂರು ಸ್ವೀಕರಿಸಿದ ನಂತರ, ಟೋಕನ್ ಸಂಖ್ಯೆಯನ್ನು ಜನರೇಟ್ ಮಾಡಲಾಗುತ್ತದೆ ಮತ್ತು ದೂರುದಾರರಿಗೆ ಅದನ್ನು ನೀಡಲಾಗುತ್ತದೆ. ಅದನ್ನು ಮರು ಪರೀಕ್ಷೆಗಾಗಿ ವಿಮಾ ಕಂಪೆನಿಗೆ ರವಾನಿಸಲಾಗುತ್ತದೆ. ಮತ್ತು ಎರಡು ವಾರಗಳಲ್ಲಿ ಪ್ರತಿಕ್ರಿಯಿಸಲಾಗುತ್ತದೆ. ಸ್ವೀಕರಿಸಿದ ಉತ್ತರವು ತೃಪ್ತಿಕರವಾಗಿ ಇರದಿದ್ದರೆ ದೂರಿನ ಸ್ವರೂಪದ ಆಧಾರದ ಮೇಲೆ ವಿಮಾ ಓಂಬುಡ್ಸ್‌ಮನ್ ಅಥವಾ ಗ್ರಾಹಕರ ವೇದಿಕೆ ಅಥವಾ ಸಿವಿಲ್ ನ್ಯಾಯಾಲಯಕ್ಕೆ ಒಯ್ಯಲಾಗುತ್ತದೆ. ಒಂದು ವೇಳೆ ದೂರನ್ನು ಸಲ್ಲಿಸಿದ 15 ದಿನಗಳಲ್ಲಿ ವಿಮಾದಾರರು ಸಂಪೂರ್ಣವಾಗಿ ಪರಿಹರಿಸದಿದ್ದರೆ, IRDAIಗೆ ದೂರನ್ನು ಒಯ್ಯಲು IGMS ಅನ್ನು ಬಳಸಬಹುದು.

IRDAIಗೆ ಪತ್ರವನ್ನು ಕಳುಹಿಸಬಹುದು: ಆನ್‌ಲೈನ್ ವಿಧಾನಗಳನ್ನು ಬಳಸಲು ಸಾಧ್ಯವಾಗದಿದ್ದರೆ ಆಫ್‌ಲೈನ್ ಮಾರ್ಗವನ್ನು ಬಳಸಲು ಹೋಗಬಹುದು. ಪಾಲಿಸಿದಾರರು IRDA ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದೂರು ನೋಂದಣಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಬೇಕು. ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಂಬಂಧಿತ ದಾಖಲೆಗಳೊಂದಿಗೆ ಜನರಲ್ ಮ್ಯಾನೇಜರ್, ಗ್ರಾಹಕ ವ್ಯವಹಾರಗಳ ಇಲಾಖೆ, ಕುಂದುಕೊರತೆ ನಿವಾರಣಾ ಘಟಕ, IRDA- ಇಲ್ಲಿಗೆ ಕಳುಹಿಸಬೇಕು.

ದೂರುದಾರರ ಹೆಸರು ಮತ್ತು ವಿಳಾಸ, ದೂರನ್ನು ನೋಂದಾಯಿಸಬೇಕಾದ ವಿಮಾದಾರರ ಶಾಖೆ ಅಥವಾ ಕಚೇರಿಯ ಹೆಸರು ಮತ್ತು ದೂರಿನ ಕಾರಣವನ್ನು ಸ್ಪಷ್ಟವಾಗಿ ನಮೂದಿಸುವ ದೂರುದಾರರು ಸರಿಯಾಗಿ ಸಹಿ ಮಾಡಿದ ಕಾಗದದ ಮೇಲೆ ದೂರು ಸಲ್ಲಿಸಬಹುದು. ಪೂರಕ ದಾಖಲೆಗಳ ಜೊತೆಗೆ ದೂರುದಾರರಿಗೆ ಉಂಟಾದ ನಷ್ಟದ ಸ್ವರೂಪ ಮತ್ತು ಪ್ರಮಾಣ ಹಾಗೂ ವಿಮಾ ಒಂಬುಡ್ಸ್‌ಮನ್‌ನಿಂದ (ದೂರುಗಳನ್ನು ವ್ಯವಹರಿಸುವ ಸಂಸ್ಥೆ) ಕೋರಿದ ಪರಿಹಾರವನ್ನು ಸಲ್ಲಿಸಬೇಕು.

ದೂರನ್ನು ಕೊರಿಯರ್ ಅಥವಾ ಪೋಸ್ಟ್ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು: General Manager Consumer Affairs Department- Grievance Redressal Cell, Insurance Regulatory and Development Authority of India(IRDAI), Sy.No.115/1,Financial District, Nanakramguda, Gachibowli, Hyderabad-500032

ವಿಮಾ ಓಂಬುಡ್ಸ್‌ಮನ್: ತೃಪ್ತಿ ಆಗುವಂತೆ ದೂರನ್ನು ಪರಿಹರಿಸದಿದ್ದಲ್ಲಿ ಮೇಲ್ಮನವಿ ಪ್ರಾಧಿಕಾರ ಅಥವಾ ವಿಮಾ ಓಂಬುಡ್ಸ್‌ಮನ್ ಅನ್ನು ಸಂಪರ್ಕಿಸಬಹುದು. ವಿಮಾ ಒಂಬುಡ್ಸ್‌ಮನ್ ಯೋಜನೆಯನ್ನು ಸರ್ಕಾರವು ವ್ಯಕ್ತಿಗತ ಪಾಲಿಸಿದಾರರಿಗಾಗಿಯೇ ರೂಪಿಸಿದೆ. ಕಡಿಮೆ ಖರ್ಚಿನಲ್ಲಿ ಮತ್ತು ಯಾವುದೇ ಭೇದ ಮಾಡದಂಥ ಬಗೆಯಲ್ಲಿ ನ್ಯಾಯಾಲಯ ವ್ಯವಸ್ಥೆಯ ಹೊರಗೆ ಬಗೆಹರಿಸಲಾಗುತ್ತದೆ. ಸದ್ಯಕ್ಕೆ ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ 17 ವಿಮಾ ಒಂಬುಡ್ಸ್‌ಮನ್‌ಗಳಿದ್ದಾರೆ. ವಿಮಾ ಕಂಪೆನಿಗಳ ವಿರುದ್ಧ ಯಾವುದೇ ವ್ಯಕ್ತಿ ಕುಂದುಕೊರತೆ ಹೊಂದಿದ್ದರೆ, ಸ್ವತಃ ಅಥವಾ ಅವರ ಕಾನೂನು ಉತ್ತರಾಧಿಕಾರಿಗಳು, ನಾಮಿನಿ ಅಥವಾ ನಿಯೋಜಿತರ ಮೂಲಕ, ಅವರ ಪ್ರಾದೇಶಿಕ ಅಧಿಕಾರ ವ್ಯಾಪ್ತಿಯೊಳಗೆ ವಿಮಾ ಓಂಬುಡ್ಸ್‌ಮನ್‌ಗೆ ಲಿಖಿತವಾಗಿ ದೂರು ಸಲ್ಲಿಸಬಹುದು.

ವಿಮಾ ಓಂಬುಡ್ಸ್‌ಮನ್ ಅನ್ನು ಸಂಪರ್ಕಿಸುವ ಮೊದಲು ಅನುಸರಿಸಬೇಕಾದ ಕೆಲವು ಷರತ್ತುಗಳಿವೆ. IRDA ಗ್ರಾಹಕ ಶಿಕ್ಷಣ ವೆಬ್‌ಸೈಟ್ https://www.policyholder.gov.in/ಗೆ ಮೊದಲು ವಿಮಾ ಕಂಪೆನಿಯನ್ನು ದೂರಿನೊಂದಿಗೆ ಸಂಪರ್ಕಿಸಬೇಕು ಎಂದು ಹೇಳಿದೆ. ಆದರೂ ಅವರು ಅದನ್ನು ತಿರಸ್ಕರಿಸಿದ್ದರೆ ಅಥವಾ ಪಾಲಿಸಿದಾರರಿಗೆ ತೃಪ್ತಿ ಆಗುವಂತೆ ಅದನ್ನು ಪರಿಹರಿಸದಿದ್ದರೆ ಅಥವಾ 30 ದಿನಗಳವರೆಗೆ ಅದಕ್ಕೆ ಪ್ರತಿಕ್ರಿಯಿಸದಿದ್ದರೆ ವಿಮಾ ಓಂಬುಡ್ಸ್‌ಮನ್‌ಗಳನ್ನು ಸಂಪರ್ಕಿಸಬಹುದು. ಅಂದ ಹಾಗೆ ದೂರು ವೈಯಕ್ತಿಕ ಸಾಮರ್ಥ್ಯದಲ್ಲಿ ತೆಗೆದುಕೊಂಡ ಪಾಲಿಸಿಗೆ ಸಂಬಂಧಿಸಿರಬೇಕು ಮತ್ತು ಕ್ಲೇಮ್ ಮಾಡಿದ ವೆಚ್ಚಗಳು ಸೇರಿದಂತೆ ಕ್ಲೇಮ್‌ನ ಮೌಲ್ಯವು ರೂ. 30 ಲಕ್ಷಕ್ಕಿಂತ ಹೆಚ್ಚಿರಬಾರದು.

ಒಂಬುಡ್ಸ್‌ಮನ್ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲಿದ್ದು, ವ್ಯಾಜ್ಯದಲ್ಲಿನ ನಿಜಾಂಶದ ಆಧಾರದ ಮೇಲೆ ನ್ಯಾಯಯುತ ಶಿಫಾರಸು ನೀಡಲಾಗುತ್ತದೆ. ಇದನ್ನು ಪೂರ್ಣ ಮತ್ತು ಅಂತಿಮ ಪರಿಹಾರವಾಗಿ ಸ್ವೀಕರಿಸಿದರೆ ಓಂಬುಡ್ಸ್‌ಮನ್​ನಿಂದ ಕಂಪೆನಿಗೆ 15 ದಿನಗಳಲ್ಲಿ ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿಸಲಾಗುತ್ತದೆ. ಆದರೆ ಶಿಫಾರಸಿನ ಮೂಲಕ ನೀಡಿದ ಪರಿಹಾರವು ಕೆಲಸಕ್ಕೆ ಬಾರದಿದ್ದಲ್ಲಿ ಓಂಬುಡ್ಸ್‌ಮನ್ ದೂರುದಾರರಿಂದ ಎಲ್ಲ ಅಗತ್ಯಗಳನ್ನು ಸ್ವೀಕರಿಸಿದ 3 ತಿಂಗಳೊಳಗೆ ಪ್ರತಿಫಲವನ್ನು ರವಾನಿಸುತ್ತಾರೆ ಮತ್ತು ಅದು ವಿಮಾ ಕಂಪೆನಿಗೆ ಬದ್ಧವಾಗಿರುತ್ತದೆ. ಒಮ್ಮೆ ಅದನ್ನು ಅಂಗೀಕರಿಸಿದ ನಂತರ ವಿಮಾದಾರರು 30 ದಿನಗಳಲ್ಲಿ ಅನುಸರಿಸಬೇಕು ಮತ್ತು ಒಂಬುಡ್ಸ್‌ಮನ್‌ಗೆ ತಿಳಿಸಬೇಕು.

ಗ್ರಾಹಕರ ವೇದಿಕೆ ಅಥವಾ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲು: ಮೇಲಿನ ಎಲ್ಲ ಮಾರ್ಗಗಳನ್ನು ಅನುಸರಿಸಿದ ನಂತರವೂ ಕುಂದುಕೊರತೆ ಬಗೆಹರಿಯದೆ ಉಳಿದಿದ್ದರೆ ಮತ್ತು ಕೊರತೆ ಪರಿಹಾರವಾಗದೆ ಹಾಗೇ ಉಳಿದಿದೆ ಎಂದು ಭಾವಿಸಿದರೆ, ಗ್ರಾಹಕರ ವೇದಿಕೆ ಅಥವಾ ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸುವ ಆಯ್ಕೆ ಇರುತ್ತದೆ. ಉದಾಹರಣೆಗೆ, ಗ್ರಾಹಕ ವ್ಯವಹಾರಗಳ ಇಲಾಖೆಗೆ ದೂರು ಸಲ್ಲಿಸಬಹುದು.

ಇದನ್ನೂ ಓದಿ: Insurance On Deposits: ಬ್ಯಾಂಕ್​ಗಳ ಹಣಕಾಸು ನಿರ್ಬಂಧ, ವಂಚನೆಯಾದಲ್ಲಿ 90 ದಿನದೊಳಗೆ 5 ಲಕ್ಷ ರೂ. ಇನ್ಷೂರೆನ್ಸ್

ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘