AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ತು ವರ್ಷದಲ್ಲಿ 5 ಕೋಟಿ ರೂ ಗುರಿ ಮುಟ್ಟಲು ತಿಂಗಳಿಗೆ ಎಷ್ಟು ಹೂಡಿಕೆ ಬೇಕು? ಇಲ್ಲಿದೆ ಲೆಕ್ಕಾಚಾರ

ಹಣ ಗಳಿಸುವುದು, ಹಣ ಉಳಿಸುವುದು ಎಷ್ಟು ಮುಖ್ಯವೋ, ಉಳಿಸಿದ ಹಣವನ್ನು ಹೂಡಿಕೆ ಮಾಡುವುದೂ ಬಹಳ ಮುಖ್ಯ. ಇಲ್ಲದಿದ್ದರೆ, ಉಳಿಸಿದ ಹಣವು ಹಣದುಬ್ಬರದಲ್ಲಿ ನಿಂತ ನೀರಾಗಿ ಮೌಲ್ಯ ನಶಿಸುತ್ತಾ ಹೋಗುತ್ತದೆ. ಹತ್ತು ವರ್ಷದಲ್ಲಿ 5 ಕೋಟಿ ರೂ ಹೊಂದುವ ಇಚ್ಛೆ ಇದ್ದಲ್ಲಿ, ಅದಕ್ಕೆ ತಿಂಗಳಿಗೆ ಎಷ್ಟು ಹಣವನ್ನು ಹೂಡಿಕೆಗೆ ಮೀಸಲಿಡಬೇಕಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯಬಹುದು.

ಹತ್ತು ವರ್ಷದಲ್ಲಿ 5 ಕೋಟಿ ರೂ ಗುರಿ ಮುಟ್ಟಲು ತಿಂಗಳಿಗೆ ಎಷ್ಟು ಹೂಡಿಕೆ ಬೇಕು? ಇಲ್ಲಿದೆ ಲೆಕ್ಕಾಚಾರ
ಹಣImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 02, 2026 | 9:29 PM

Share

ಸ್ವಂತ ಮನೆ, ಮಕ್ಕಳ ಉನ್ನತ ಶಿಕ್ಷಣ ಅಥವಾ ಬೇಗನೇ ನಿವೃತ್ತಿ ಹೊಂದಲು ದೊಡ್ಡ ಮಟ್ಟದ ಹಣದ ನಿಧಿ ನಿರ್ಮಿಸಿಕೊಳ್ಳುವುದು ಪ್ರತಿಯೊಬ್ಬರ ಕನಸು. ನೀವು ಮುಂದಿನ 10 ವರ್ಷಗಳಲ್ಲಿ ಬರೋಬ್ಬರಿ ₹5 ಕೋಟಿ ರೂಪಾಯಿಗಳ ಬೃಹತ್ ನಿಧಿಯನ್ನು ಹೊಂದಲು ಬಯಸಿದ್ದೀರಾ? ಹಾಗಿದ್ದರೆ ತಿಂಗಳಿಗೆ ಎಷ್ಟು ಹಣ ಹೂಡಿಕೆ ಮಾಡಬೇಕು ಹಾಗೂ ಸೂಕ್ತ ಮಾರ್ಗಗಳು ಯಾವುವು ಎನ್ನುವುದರ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ.

ಮಾಸಿಕ ಎಸ್‌ಐಪಿ ಎಷ್ಟು ಬೇಕು?

ಮ್ಯೂಚುವಲ್ ಫಂಡ್‌ಗಳಲ್ಲಿನ ಮಾಸಿಕ ಎಸ್​ಐಪಿ (SIP – Systematic Investment Plan) ಯೋಜನೆಗಳು ಹಣವನ್ನು ಶಿಸ್ತುಬದ್ಧವಾಗಿ ಬೆಳೆಸಲು ಅತ್ಯುತ್ತಮ ಮಾರ್ಗವಾಗಿವೆ. 10 ವರ್ಷಗಳ ಅವಧಿಯಲ್ಲಿ ₹5 ಕೋಟಿ ತಲುಪಲು ನಿಮ್ಮ ಹೂಡಿಕೆಯ ರಿಟರ್ನ್ಸ್ ಆಧಾರದ ಮೇಲೆ ಕೆಳಗಿನಂತೆ ಹೂಡಿಕೆ ಮಾಡಬೇಕಾಗುತ್ತದೆ:

  • ಶೇ. 12 ರಷ್ಟು ಸರಾಸರಿ ರಿಟರ್ನ್ ದೊರೆತರೆ: ನೀವು ಪ್ರತಿ ತಿಂಗಳು ₹2.15 ಲಕ್ಷ ಹೂಡಿಕೆ ಮಾಡಬೇಕು.
  • ಶೇ. 14 ರಷ್ಟು ಬೆಳೆವಣಿಗೆ ಕಂಡರೆ: ಮಾಸಿಕ ₹1.94 ಲಕ್ಷ ಹೂಡಿಕೆ ಸಾಕು.
  • ಶೇ. 16 ರಷ್ಟು ಉತ್ತಮ ರಿಟರ್ನ್ ಸಿಕ್ಕಿದರೆ: ಪ್ರತಿ ತಿಂಗಳು ₹1.74 ಲಕ್ಷ ಎಸ್‌ಐಪಿ ಮಾಡಬೇಕಾಗುತ್ತದೆ.

ಇದನ್ನೂ ಓದಿ: ಸ್ಥಿರ ಠೇವಣಿ ಮೇಲೆ ಪಡೆಯುವ ಸಾಲ ಹೆಚ್ಚು ಸುರಕ್ಷಿತ, ಕಾರಣ ಇದೇ ನೋಡಿ

ಸ್ಟೆಪ್-ಅಪ್ (Step-up) ಎಸ್‌ಐಪಿ ಉಪಾಯ

ಆರಂಭದಲ್ಲೇ ತಿಂಗಳಿಗೆ ಸುಮಾರು ₹2 ಲಕ್ಷ ಹೂಡಿಕೆ ಮಾಡುವುದು ಕಷ್ಟವೆನಿಸಿದರೆ, ‘ಸ್ಟೆಪ್-ಅಪ್ ಎಸ್‌ಐಪಿ’ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ನಿಮ್ಮ ವಾರ್ಷಿಕ ಆದಾಯ ಹೆಚ್ಚಾದಂತೆ, ಪ್ರತಿ ವರ್ಷ ಹೂಡಿಕೆಯ ಮೊತ್ತವನ್ನು ಶೇ. 10 ರಷ್ಟು ಹೆಚ್ಚಿಸುತ್ತಾ ಸಾಗಬಹುದು. ಈ ವಿಧಾನದಲ್ಲಿ ಮೊದಲ ವರ್ಷ ತಿಂಗಳಿಗೆ ಸುಮಾರು ₹1.35 ಲಕ್ಷದಿಂದ ₹1.45 ಲಕ್ಷ ಹೂಡಿಕೆಯೊಂದಿಗೆ ಪ್ರಾರಂಭಿಸಿ 10 ವರ್ಷಗಳಲ್ಲಿ ₹5 ಕೋಟಿ ಗುರಿ ತಲುಪಲು ಸಾಧ್ಯವಿದೆ.

ತಿಂಗಳಿಗೆ ₹50,000 ಹೂಡಿಕೆಯಿಂದ 5 ಕೋಟಿಗೆ ಎಷ್ಟು ವರ್ಷ ಬೇಕು?

ನಿಮಗೆ ತಿಂಗಳಿಗೆ ₹50,000 ಮಾತ್ರವೇ ಹೂಡಿಕೆ ಮಾಡುತ್ತೀರೆಂದರೆ, ₹5 ಕೋಟಿ ಕಾರ್ಪಸ್ ಹೊಂದಲು 21 ವರ್ಷ ಬೇಕು. ಅಂದರೆ, 21 ವರ್ಷ ಕಾಲ ಪ್ರತೀ ತಿಂಗಳು ₹50,000 ಹೂಡಿಕೆ ಮಾಡುತ್ತಾ ಹೋಗಬೇಕು. ಅಷ್ಟು ವರ್ಷದಲ್ಲಿ ನಿಮ್ಮ ಫಂಡ್ ಸರಾಸರಿಯಾಗಿ ಶೇ. 12 ರಿಟರ್ನ್ ಕೊಡಬೇಕು. ಇಲ್ಲಿಂದ ನೀವು ಹೂಡಿಕೆ ಮುಂದುವರಿದಷ್ಟೂ ನಿಧಿ ವೇಗವಾಗಿ ಹೆಚ್ಚುತ್ತಾ ಹೋಗುತ್ತದೆ. 25 ವರ್ಷ ಹೂಡಿಕೆ ಇದ್ದರೆ ₹8.5 ಕೋಟಿ ಕಾರ್ಪಸ್ ನಿಮ್ಮದಾಗುತ್ತದೆ.

ಇದನ್ನೂ ಓದಿ: ಭಾರತದ ಕ್ರೆಡಿಟ್ ರೇಟಿಂಗ್ ಹೆಚ್ಚಿಸಿದ ಜಪಾನೀ ಏಜೆನ್ಸಿ; ಬಿಬಿಬಿ+ ನಿಂದ ಎ- ಗೆ ಏರಿಕೆ; ದೇಶಕ್ಕೆ ಏನು ಲಾಭ?

ಎಲ್ಲಿ ಹೂಡಿಕೆ ಮಾಡುವುದು ಸೂಕ್ತ?

10 ವರ್ಷಗಳ ದೀರ್ಘಾವಧಿಗೆ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು (Large Cap, Flexi Cap, ಮತ್ತು Multicap Funds) ಅತ್ಯಂತ ಸೂಕ್ತ. ಇವು ಹಣದುಬ್ಬರವನ್ನು ಮೀರಿ ಉತ್ತಮ ರಿಟರ್ನ್ಸ್ ನೀಡುವ ಸಾಮರ್ಥ್ಯ ಹೊಂದಿವೆ. ಇದರೊಂದಿಗೆ ನಿಮ್ಮ ಪೋರ್ಟ್‌ಫೋಲಿಯೋವನ್ನು ಕಾಲಕಾಲಕ್ಕೆ ಪರಿಶೀಲಿಸುವುದು (Portfolio Review) ಅಗತ್ಯ.

(ಗಮನಿಸಿ: ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಪ್ರಮಾಣೀಕೃತ ಹಣಕಾಸು ಸಲಹೆಗಾರರ ಅಭಿಪ್ರಾಯ ಪಡೆಯುವುದು ಸೂಕ್ತ.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!