AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಫೋನ್​ನಿಂದ ಮತ್ತೊಂದು ಫೋನ್​ಗೆ ಚಾರ್ಜ್ ಮಾಡುವುದು ಹೇಗೆ? ಇಲ್ಲಿದೆ ಕೆಲ ವಿಧಾನಗಳು

How to charge phone from another another one, All you need to know: ಮೊಬೈಲ್ ಫೋನ್ ಚಾರ್ಜ್ ಖಾಲಿಯಾದಾಗ ಬೇರೊಂದು ಫೋನ್​ನ ಬ್ಯಾಟರಿ ಬಳಸಿ ಚಾರ್ಜಿಂಗ್ ಮಾಡಲು ಅವಕಾಶ ಇರುತ್ತದೆ. ಆದರೆ, ಫೋನ್ ಚಾರ್ಜ್ ನೀಡುವ ಫೋನ್, ಅದಕ್ಕೆ ಸಪೋರ್ಟ್ ಮಾಡುವಂತಿರಬೇಕು. ಯುಎಸ್​ಬಿ ಕೇಬಲ್ ಮೂಲಕ ಚಾರ್ಜಿಂಗ್, ವೈರ್ಲೆಸ್ ಚಾರ್ಜಿಂಗ್ ಬಳಸಬಹುದು.

ಒಂದು ಫೋನ್​ನಿಂದ ಮತ್ತೊಂದು ಫೋನ್​ಗೆ ಚಾರ್ಜ್ ಮಾಡುವುದು ಹೇಗೆ? ಇಲ್ಲಿದೆ ಕೆಲ ವಿಧಾನಗಳು
ಚಾರ್ಜಿಂಗ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 06, 2026 | 2:59 PM

Share

ಮುಖ್ಯಾಂಶಗಳು

  • ಫೋನ್ ಚಾರ್ಜ್ ಖಾಲಿಯಾದಾಗ ಬೇರೊಂದು ಫೋನ್ ಬಳಸಿ ಚಾರ್ಜಿಂಗ್ ಮಾಡಬಹುದು.
  • ಆದರೆ, ಫೋನ್ ಚಾರ್ಜ್ ನೀಡುವ ಫೋನ್, ಅದಕ್ಕೆ ಸಪೋರ್ಟ್ ಮಾಡುವಂತಿರಬೇಕು.
  • ಯುಎಸ್​ಬಿ ಕೇಬಲ್ ಮೂಲಕ ಚಾರ್ಜಿಂಗ್, ವೈರ್ಲೆಸ್ ಚಾರ್ಜಿಂಗ್ ಬಳಸಬಹುದು.

ತುರ್ತು ಸಂದರ್ಭಗಳಲ್ಲಿ ಮೊಬೈಲ್ ಬ್ಯಾಟರಿ ಖಾಲಿಯಾದಾಗ ಪವರ್ ಬ್ಯಾಂಕ್ ಅಥವಾ ಚಾರ್ಜರ್ ಇಲ್ಲದಿದ್ದರೆ ಗಾಬರಿಯಾಗುವುದು ಸಹಜ. ಆದರೆ, ನಿಮ್ಮ ಬಳಿ ಮತ್ತೊಂದು ಸ್ಮಾರ್ಟ್‌ಫೋನ್ ಇದ್ದರೆ, ಅದರ ಬ್ಯಾಟರಿಯಿಂದಲೇ ನಿಮ್ಮ ಫೋನ್ ಅನ್ನು ಸುಲಭವಾಗಿ ಚಾರ್ಜ್ ಮಾಡಬಹುದು. ಇದನ್ನು ಮಾಡಲು ಕೆಲ ಸುಲಭ ವಿಧಾನಗಳಿವೆ. ಆದರೆ, ಚಾರ್ಜಿಂಗ್ ದಾನ ಮಾಡುವ ಫೋನ್, ಅದಕ್ಕೆ ಸಪೋರ್ಟ್ ಮಾಡಬೇಕು. ಒಂದು ಫೋನ್​ನಿಂದ ಮತ್ತೊಂದು ಫೋನ್​ಗೆ ಚಾರ್ಜಿಂಗ್ ಮಾಡುವ ಮೂರು ವಿಧಾನಗಳ ಪರಿಚಯ ಇಲ್ಲಿದೆ, ಗಮನಿಸಿ.

1. ವೈರ್‌ಲೆಸ್ ಪವರ್ ಶೇರಿಂಗ್

ಇತ್ತೀಚಿನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ (ಉದಾಹರಣೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ ಸರಣಿ, ಗೂಗಲ್ ಪಿಕ್ಸೆಲ್ ಅಥವಾ ಐಫೋನ್) ವೈರ್​ಲೆಸ್ ಪವರ್ ಶೇರಿಂಗ್ (Wireless Power Sharing) ತಂತ್ರಜ್ಞಾನ ಲಭ್ಯವಿದೆ. ಇದಕ್ಕೆ ಯಾವುದೇ ಕೇಬಲ್ ಅಗತ್ಯವಿರುವುದಿಲ್ಲ.

  • ಮೊದಲು ಚಾರ್ಜ್ ನೀಡುವ ಫೋನ್‌ನ ‘Settings’ ಆಪ್‌ಗೆ ಹೋಗಿ.
  • ಅಲ್ಲಿ ‘Battery’ ಅಥವಾ ‘Battery and Device Care’ ಆಯ್ಕೆಯನ್ನು ಕ್ಲಿಕ್ ಮಾಡಿ.
  • ‘Wireless Power Sharing’ ಅಥವಾ ‘Battery Share’ ಆಯ್ಕೆಯನ್ನು ಆನ್ ಮಾಡಿ. (ಇದನ್ನು ಕ್ವಿಕ್ ಸೆಟ್ಟಿಂಗ್ಸ್ ಟಾಗಲ್ ಮೂಲಕವೂ ಆನ್ ಮಾಡಬಹುದು).
  • ಈಗ ಚಾರ್ಜ್ ಮಾಡಬೇಕಾದ ಫೋನ್ ಅನ್ನು, ಚಾರ್ಜ್ ನೀಡುವ ಫೋನ್‌ನ ಹಿಂಭಾಗದ ಮಧ್ಯಭಾಗದಲ್ಲಿ (Back-to-Back) ಇರಿಸಿ. ತಕ್ಷಣವೇ ಚಾರ್ಜಿಂಗ್ ಆರಂಭವಾಗುತ್ತದೆ.

ಈ ರೀತಿ ವೈರ್ಲೆಸ್ ಚಾರ್ಜಿಂಗ್ ಸೌಲಭ್ಯ ಸಾಮಾನ್ಯವಾಗಿ ಬಜೆಟ್ ಫೋನ್​ಗಳಲ್ಲಿ ಲಭ್ಯ ಇರುವುದಿಲ್ಲ. ಹೈ ಎಂಡ್ ಸ್ಮಾರ್ಟ್​ಫೋನ್​ಗಳಲ್ಲಿ ಕಾಣಬಹುದು.

ಇದನ್ನೂ ಓದಿ: ಇಪಿಎಫ್ ಪೋರ್ಟಲ್​ನಲ್ಲಿ ಆಗಲ್ಲ ಯುಎಎನ್ ಆಕ್ಟಿವೇಶನ್; UMANG ಆಪ್​ನಲ್ಲಿ ಮಾತ್ರ ಸಾಧ್ಯ; ಇಲ್ಲಿವೆ ಮಹತ್ವದ ಅಪ್​ಡೇಟ್ಸ್

2. ರಿವರ್ಸ್ ವೈರ್ಡ್ ಚಾರ್ಜಿಂಗ್

ನಿಮ್ಮ ಫೋನ್‌ಗಳಲ್ಲಿ ವೈರ್‌ಲೆಸ್ ಸೌಲಭ್ಯವಿಲ್ಲದಿದ್ದರೆ, ಯುಎಸ್‌ಬಿ ಕೇಬಲ್ ಬಳಸಿ ಚಾರ್ಜ್ ಮಾಡಬಹುದು. ಇದಕ್ಕೆ ಎರಡು ಫೋನ್‌ಗಳೂ Type-C ಪೋರ್ಟ್ ಹೊಂದಿರಬೇಕು ಮತ್ತು ಚಾರ್ಜ್ ನೀಡುವ ಫೋನ್ ‘Reverse Charging’ ಫೀಚರ್ ಅನ್ನು ಬೆಂಬಲಿಸಬೇಕು.

ಒಂದು ಉತ್ತಮ ಗುಣಮಟ್ಟದ Type-C to Type-C ಕೇಬಲ್ ತೆಗೆದುಕೊಳ್ಳಿ. ಕೇಬಲ್‌ನ ಒಂದು ತುದಿಯನ್ನು ಚಾರ್ಜ್ ನೀಡುವ ಫೋನ್‌ಗೆ ಮತ್ತು ಮತ್ತೊಂದು ತುದಿಯನ್ನು ಚಾರ್ಜ್ ಆಗಬೇಕಾದ ಫೋನ್‌ಗೆ ಜೋಡಿಸಿ.

ಸಂಪರ್ಕಿಸಿದ ತಕ್ಷಣ ಚಾರ್ಜ್ ವರ್ಗಾವಣೆ ಆರಂಭವಾಗುತ್ತದೆ. ಒಂದು ವೇಳೆ ಚಾರ್ಜಿಂಗ್ ದಿಕ್ಕು ಉಲ್ಟಾವಾದರೆ, ಫೋನ್‌ನ ನೋಟಿಫಿಕೇಶನ್ ಬಾರ್‌ನಲ್ಲಿ ‘USB Settings’ಗೆ ಹೋಗಿ ‘Charge connected device’ ಆಯ್ಕೆಯನ್ನು ಆರಿಸಿಕೊಳ್ಳಿ.

ಈ ಪ್ರಕ್ರಿಯೆಯಲ್ಲಿ ಚಾರ್ಜ್ ನೀಡುವ ಫೋನ್‌ನ ಬ್ಯಾಟರಿ ವೇಗವಾಗಿ ಖಾಲಿಯಾಗುತ್ತದೆ. ಆದ್ದರಿಂದ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಈ ವಿಧಾನವನ್ನು ಬಳಸುವುದು ಸೂಕ್ತ. ಹಾಗೆಯೇ, ಈ ಸೌಲಭ್ಯ ಎಲ್ಲಾ ಫೋನ್​ಗಳಲ್ಲೂ ಇರುವುದಿಲ್ಲ. ಪವರ್ ಟ್ರಾನ್ಸ್​ಫರ್​ಗೆ ಇಂಡಕ್ಷನ್ ಕಾಯಿಲ್​ಗಳನ್ನು ಹಾಕಬೇಕಾಗುತ್ತದೆ. ಇದಕ್ಕೆ ವೆಚ್ಚವಾಗುವುದರಿಂದ ಬಜೆಟ್ ಫೋನ್​ಗಳಿಗೆ ಈ ಸೌಲಭ್ಯ ಇರುವುದಿಲ್ಲ. ಹೀಗಾಗಿ, ರಿವರ್ಸ್ ಚಾರ್ಜಿಂಗ್ ಮಾಡುವ ಮುನ್ನ ನಿಮ್ಮ ಫೋನ್ ಇದಕ್ಕೆ ಸಪೋರ್ಟ್ ಮಾಡುತ್ತಾ ಎಂದು ಪರಿಶೀಲಿಸಿ.

ಇದನ್ನೂ ಓದಿ: ರಾಷ್ಟ್ರೀಯ ಗೋಕುಲ್ ಮಿಷನ್; ಸರ್ಕಾರದ ಸಬ್ಸಿಡಿ, ಸಹಾಯಧನಗಳನ್ನು ಬಳಸಿ ಹೈನುಗಾರಿಕೆಯಿಂದ ಆದಾಯ ಗಳಿಸಿ

3. ಯುಎಸ್​ಬಿ ಮತ್ತು ಒಟಿಜಿ ಕೇಬಲ್ ಬಳಸಿ ಚಾರ್ಜಿಂಗ್

ನಿಮ್ಮದು ಹಳೆಯ ಫೋನ್ ಆಗಿದ್ದು ಅದರಲ್ಲಿ ಮೈಕ್ರೋ ಯುಎಸ್​ಬಿ ಇದ್ದರೆ ಆಗ ಯುಎಸ್​ಬಿ ಸಿ ಕೇಬಲ್ ಮತ್ತು ಒಟಿಜಿ ಕೇಬಲ್ ಬಳಸಿ ರಿವರ್ಸ್ ಚಾರ್ಜಿಂಗ್ ಮಾಡಬಹುದು. ಚಾರ್ಜಿಂಗ್ ನೀಡುವ ಫೋನ್​ಗೆ ಒಟಿಜಿ ಕೇಬಲ್ ಅಳವಡಿಸಬೇಕು. ನಂತರ ಯುಎಸ್​ಬಿ ಸಿ ಕೇಬಲ್ ಅನ್ನು ಮತ್ತೊಂದು ಫೋನ್​ಗೂ ಮತ್ತು ಒಟಿಜಿ ಪೋರ್ಟ್​ಗೂ ಕನೆಕ್ಟ್ ಮಾಡಬೇಕು. ಆಗ ಚಾರ್ಜಿಂಗ್ ಆಗುತ್ತದೆ. ಇದನ್ನು ಮಾಡಲೂ ಕೂಡ ನಿಮ್ಮ ಫೋನ್ ರಿವರ್ಸ್ ಚಾರ್ಜಿಂಗ್ ಸೌಲಭ್ಯವನ್ನು ಸಪೋರ್ಟ್ ಮಾಡಬೇಕು.

ಗಮನಿಸಬೇಕಾದ ಸಂಗತಿ ಎಂದರೆ, ರಿವರ್ಸ್ ಚಾರ್ಜಿಂಗ್ ಸೌಲಭ್ಯವನ್ನು ಸಪೋರ್ಟ್ ಮಾಡಬೇಕಿರುವುದು ದಾನಿ ಫೋನ್ ಮಾತ್ರ. ಅಂದರೆ, ಚಾರ್ಜಿಂಗ್ ನೀಡುವ ಫೋನ್ ಸಪೋರ್ಟ್ ಮಾಡಿದರೆ ಸಾಕು. ಚಾರ್ಜಿಂಗ್ ಪಡೆಯುವ ಫೋನ್ ಯಾವುದಿದ್ದರೂ ಪರವಾಗಿಲ್ಲ. ಯುಎಸ್​ಬಿ ಸಿ ಕೇಬಲ್ ಕನೆಕ್ಟ್ ಮಾಡುವಂತಿರಬೇಕು ಅಷ್ಟೇ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Mon, 6 July 26

Follow Us
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
'ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ'
'ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ'
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!
SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು
SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು
ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ
ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ
ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು
ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್
ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್