AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Credit Card Closure: ಮನವಿ ನಂತರವೂ ಕ್ರೆಡಿಟ್​ ಕಾರ್ಡ್ ಖಾತೆ ಕ್ಲೋಸ್ ಮಾಡದಿದ್ದಲ್ಲಿ ಕಾರ್ಡ್​ದಾರರಿಗೆ ದಿನಕ್ಕೆ ರೂ. 500ರಂತೆ ದಂಡ ಪಾವತಿ

ಕಾರ್ಡ್​ದಾರರು ಮನವಿ ಸಲ್ಲಿಸಿದ ನಿರ್ದಿಷ್ಟ ಅವಧಿಯೊಳಗೆ ಕ್ರೆಡಿಟ್ ಕಾರ್ಡ್ ಖಾತೆ ಕ್ಲೋಸ್ ಮಾಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಕಾರ್ಡ್​ದಾರರಿಗೆ ದಿನಕ್ಕೆ 500 ರೂ.ನಂತೆ ದಂಡ ಪಾವತಿಸಬೇಕಾಗುತ್ತದೆ ಎಂದು ಆರ್​ಬಿಐ ಹೊಸ ನಿಯಮ ಹೇಳುತ್ತಿದೆ.

Credit Card Closure: ಮನವಿ ನಂತರವೂ ಕ್ರೆಡಿಟ್​ ಕಾರ್ಡ್ ಖಾತೆ ಕ್ಲೋಸ್ ಮಾಡದಿದ್ದಲ್ಲಿ ಕಾರ್ಡ್​ದಾರರಿಗೆ ದಿನಕ್ಕೆ ರೂ. 500ರಂತೆ ದಂಡ ಪಾವತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 22, 2022 | 11:37 AM

ಡೆಬಿಟ್​ ಕಾರ್ಡ್ ಮತ್ತು ಕ್ರೆಡಿಟ್​ ಕಾರ್ಡ್ ವಿತರಣೆ​ ಹಾಗೂ ಕಾರ್ಯ ಚಟುವಟಿಕೆಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (Reserve Bank Of India) ಗುರುವಾರ ಮಹತ್ತರವಾದ ನಿರ್ದೇಶನವನ್ನು ನೀಡಲಾಗಿದೆ. ಈ ನಿರ್ದೇಶನವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್- ವಿತರಣೆ ಹಾಗೂ ಆಯೋಜನೆ) ನಿರ್ದೇಶನಗಳು, 2022 ಎಂದು ಕರೆಯಲಾಗಿದೆ. ಇದು 2022ರ ಜುಲೈ 1ನೇ ತಾರೀಕಿನಿಂದ ಲಾಗೂ ಆಗುತ್ತದೆ. ಕ್ರೆಡಿಟ್​ ಕಾರ್ಡ್​ಗಳಿಗೆ ಸಂಬಂಧಿಸಿದಂತೆ ಈ ನಿರ್ದೇಶನದಲ್ಲಿ ಇರುವ ನಿಯಮಾವಳಿಗಳು ಭಾರತದ ಎಲ್ಲ ಶೆಡ್ಯೂಲ್ಡ್ ಬ್ಯಾಂಕ್ (ಪೇಮೆಂಟ್ಸ್ ಬ್ಯಾಂಕ್ಸ್, ರಾಜ್ಯ ಕೋ-ಆಪರೇಟಿವ್ ಬ್ಯಾಂಕ್ಸ್ ಮತ್ತು ಜಿಲ್ಲಾ ಕೇಂದ್ರ ಕೋ ಆಪರೇಟಿವ್ ಬ್ಯಾಂಕ್​ಗಳನ್ನು ಹೊರತುಪಡಿಸಿ) ಮತ್ತು ಬ್ಯಾಂಕಿಂಗೇತರ ಫೈನಾನ್ಷಿಯಲ್ ಕಂಪೆನಿಗಳಿಗೆ ಅನ್ವಯ ಆಗುತ್ತದೆ. ಒಂದು ವೇಳೆ ಕ್ರೆಡಿಟ್ ಕಾರ್ಡ್ ಖಾತೆಯನ್ನು ಕ್ಲೋಸ್ ಮಾಡುವುದು ತಡ ಮಾಡಿದಲ್ಲಿ ಕಾರ್ಡ್ ವಿತರಿಸಿದ್ದ ಕಂಪೆನಿಯೇ ಕಾರ್ಡ್​ದಾರರಿಗೆ ದಂಡ ಕಟ್ಟಿಕೊಡುತ್ತದೆ.

ಕ್ರೆಡಿಟ್ ಕಾರ್ಡ್ ಕ್ಲೋಷರ್​ಗೆ ಸಂಬಂಧಿಸಿದಂತೆ ಆರ್​ಬಿಐ ನಿಯಮಾವಳಿಗಳು ಹೀಗಿವೆ:

  1. ಕ್ರೆಡಿಟ್ ಕಾರ್ಡ್​ದಾರರು ಕ್ಲೋಷರ್​​ಗೆ ಮನವಿ ಮಾಡಿದ ಏಳು ದಿನದೊಳಗಾಗಿ (ವರ್ಕಿಂಗ್ ಡೇಸ್) ಕ್ರೆಡಿಟ್ ಕಾರ್ಡ್ ವಿತರಕರು ಅದನ್ನು ಮಾನ್ಯ ಮಾಡಬೇಕು. ಆದರೆ ಅದಕ್ಕೆ ಮುನ್ನ ಕಾರ್ಡ್​ಗೆ ಸಂಬಂಧಿಸಿದ ಎಲ್ಲ ಬಾಕಿ ಚುಕ್ತಾ ಆಗಿರಬೇಕು ಎಂದು ಆರ್​ಬಿಐ ನಿರ್ದೇಶನದಲ್ಲಿ ತಿಳಿಸಲಾಗಿದೆ.
  2. ಕ್ರೆಡಿಟ್ ಕಾರ್ಡ್ ಕ್ಲೋಷರ್ ಬಗ್ಗೆ ಕಾರ್ಡ್​ದಾರರಿಗೆ ತಕ್ಷಣವೇ ಇಮೇಲ್, ಎಸ್ಸೆಮ್ಮೆಸ್ ಮುಂತಾದವುಗಳ ಮೂಲಕ ಮಾಹಿತಿ ನೀಡಬೇಕು.
  3. ಕ್ರೆಡಿಟ್​ ಕಾರ್ಡ್ ಖಾತೆ ಕ್ಲೋಷರ್​ಗಾಗಿ ಮನವಿ ಸಲ್ಲಿಸುವುದಕ್ಕೆ ಕಾರ್ಡ್​ದಾರರಿಗೆ ಹಲವು ಮಾರ್ಗಗಳನ್ನು ಒದಗಿಸಬೇಕು.
  4. ಹೆಲ್ಪ್​ಲೈನ್, ಡೆಡಿಕೇಟೆಡ್ ಇ-ಮೇಲ್​ ಐಡಿ, ಇಂಟರ್​​ಆಕ್ಟಿವ್ ವಾಯ್ಸ್ ರೆಸ್ಪಾನ್ಸ್ (ಐವಿಆರ್), ವೆಬ್​ಸೈಟ್​ನಲ್ಲಿ ಸ್ಪಷ್ಟವಾಗಿ ಕಾಣುವಂಥ ಲಿಂಕ್, ಇಂಟರ್​ನೆಟ್ ಬ್ಯಾಂಕಿಂಗ್, ಮೊಬೈಲ್ ಆ್ಯಪ್ ಅಥವಾ ಯಾವುದೇ ಬಗೆಯಲ್ಲಿ ಮನವಿ ಸಲ್ಲಿಸುವ ಅವಕಾಶ ಇರಬೇಕು.
  5. ಕಾರ್ಡ್ ವಿತರಕರು ಪೋಸ್ಟ್ ಅಥವಾ ಇತರ ಯಾವುದೇ ವಿಧಾನಗಳ ಮೂಲಕ ಕ್ಲೋಷರ್ ವಿನಂತಿಯನ್ನು ಕಳುಹಿಸಲು ಒತ್ತಾಯಿಸಬಾರದು. ಏಕೆಂದರೆ ಅದು ವಿನಂತಿಯ ಸ್ವೀಕೃತಿ ವಿಳಂಬಕ್ಕೆ ಕಾರಣವಾಗಬಹುದು.
  6. ಒಂದು ವೇಳೆ ಮನವಿಯನ್ನು ಏಳು ವರ್ಕಿಂಗ್ ಡೇಸ್​ನೊಳಗಾಗಿ ಪ್ರೊಸೆಸ್ ಮಾಡಲು ಕಾರ್ಡ್ ವಿತರಕರು ವಿಫಲರಾದಲ್ಲಿ ದಿನಕ್ಕೆ 500 ರೂಪಾಯಿಯಂತೆ ವಿಳಂಬ ಆದ ಅವಧಿಗೆ ಖಾತೆ ಕ್ಲೋಷರ್ ಆಗುವ ತನಕ ಕಾರ್ಡ್​ದಾರರಿಗೆ ಪಾವತಿ ಮಾಡಬೇಕು.
  7. ಒಂದು ವೇಳೆ ಕ್ರೆಡಿಟ್ ಕಾರ್ಡ್ ಅನ್ನು ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಬಳಕೆ ಮಾಡದಿದ್ದಲ್ಲಿ ಕಾರ್ಡ್ ವಿತರಕರು ತಾವಾಗಿಯೇ ಕ್ರೆಡಿಟ್ ಕಾರ್ಡ್ ಖಾತೆ ಕ್ಲೋಷರ್​ ಪ್ರಕ್ರಿಯೆ ಆರಂಭಿಸಬಹುದು. ಆದರೆ ಅದಕ್ಕೂ ಮುಂಚೆ ಕಾರ್ಡ್​ದಾರರಿಗೆ ಮಾಹಿತಿ ನೀಡಬೇಕು.
  8. ಕಾರ್ಡ್​ದಾರರಿಂದ 30 ದಿನದೊಳಗಾಗಿ ಪ್ರತಿಕ್ರಿಯೆ ಬಾರದಿದ್ದಲ್ಲಿ ಕಾರ್ಡ್​ ವಿತರಕರು ಕ್ರೆಡಿಟ್ ಕಾರ್ಡ್​ ಖಾತೆಯನ್ನು ಕ್ಲೋಸ್ ಮಾಡಬಹುದು. ಅದಕ್ಕೂ ಮುನ್ನ ಎಲ್ಲ ಬಾಕಿಯನ್ನು ಪಾವತಿಯಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.
  9. ಕ್ರೆಡಿಟ್ ಕಾರ್ಡ್ ವಿತರಕರು ಕಾರ್ಡ್ ಕ್ಲೋಷರ್ ಬಗ್ಗೆ ಕ್ರೆಡಿಟ್ ಇನ್​ಫರ್ಮೇಷನ್ ಕಂಪೆನಿಯ ಬಳಿ 30 ದಿನದೊಳಗಾಗಿ ಮಾಹಿತಿ ನೀಡಬೇಕಾಗುತ್ತದೆ.
  10. ಕ್ರೆಡಿಟ್ ಕಾರ್ಡ್ ಖಾತೆ ಕ್ಲೋಸ್ ಆದ ನಂತರದಲ್ಲಿ ಕಾರ್ಡ್​ದಾರರಿಗೆ ಹಿಂತಿರುಗಿಸಬೇಕಾದ ಬಾಕಿ ಏನಾದರೂ ಉಳಿದುಕೊಂಡಿದ್ದಲ್ಲಿ ಕಾರ್ಡ್​ದಾರರ ಬ್ಯಾಂಕ್​ ಖಾತೆಗೆ ವರ್ಗಾವಣೆ ಮಾಡಬೇಕು.

ಇದನ್ನೂ ಓದಿ: Retail Direct Guild: ಆರ್​ಬಿಐನಲ್ಲಿ ನಾವು ಕೂಡ ಖಾತೆ ತೆರೆಯಬಹುದು ಗೊತ್ತಾ..! ಇಲ್ಲಿದೆ ಮಾಹಿತಿ

RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ