AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈವ್ ವೆದರ್​ನಿಂದ ಹಿಡಿದು ವಿವಿಧ ಅಲರ್ಟ್​ಗಳವರೆಗೆ ಹಲವು ಫೀಚರ್​ಗಳನ್ನು ಹೊಂದಿರುವ ಮೌಸಮ್ ಆ್ಯಪ್

IMD Mausam App: ಕೇಂದ್ರ ಹವಾಮಾನ ಇಲಾಖೆಯ (IMD) 'ಮೌಸಮ್' ಆ್ಯಪ್ ರೈತರು ಮತ್ತು ಸಾರ್ವಜನಿಕರಿಗೆ ನಿಖರ ಹವಾಮಾನ ಮುನ್ಸೂಚನೆ ನೀಡುತ್ತದೆ. ಮಳೆ, ಗಾಳಿ, ಸಿಡಿಲು-ಮಿಂಚು ಕುರಿತು ನೈಜ-ಸಮಯದ ಎಚ್ಚರಿಕೆಗಳನ್ನು ಒದಗಿಸುತ್ತದೆ. ನೌಕಾಸ್ಟ್, ನಗರ ಮುನ್ಸೂಚನೆ, ಬಣ್ಣದ ಕೋಡ್ ಎಚ್ಚರಿಕೆಗಳಂತಹ ವೈಶಿಷ್ಟ್ಯಗಳ ಮೂಲಕ ಜೀವ ಮತ್ತು ಆಸ್ತಿ ನಷ್ಟ ತಡೆಯಲು ಸಹಕಾರಿಯಾಗಿದೆ. ಇದು ಕೃಷಿಕರಿಗೆ ಮತ್ತು ಸಾಮಾನ್ಯ ಜನರಿಗೆ ಪ್ರಮುಖ ಮಾಹಿತಿಯನ್ನು ಒದಗಿಸುವ ಸಮಗ್ರ ಸಾಧನ.

ಲೈವ್ ವೆದರ್​ನಿಂದ ಹಿಡಿದು ವಿವಿಧ ಅಲರ್ಟ್​ಗಳವರೆಗೆ ಹಲವು ಫೀಚರ್​ಗಳನ್ನು ಹೊಂದಿರುವ ಮೌಸಮ್ ಆ್ಯಪ್
ಮೌಸಮ್ ಆ್ಯಪ್Image Credit source: AI/Mediaforge/TV9
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 05, 2026 | 12:57 PM

Share

ನವದೆಹಲಿ, ಮೇ 5: ಜನಸಾಮಾನ್ಯರಿಗೆ, ಅದರಲ್ಲೂ ರೈತರಿಗೆ ಹವಾಮಾನದ ಸಮಸ್ಯೆ ಬಹಳ ಕಾಡುತ್ತದೆ. ಯಾವಾಗ ಮಳೆ ಬರುತ್ತೆ, ಯಾವಾಗ ಮಳೆ ನಿಲ್ಲುತ್ತೆ ಇತ್ಯಾದಿ ಸಂಗತಿಗಳು ಗೊತ್ತಾಗುವುದಿಲ್ಲ. ಹವಾಮಾನ ಮುನ್ಸೂಚನೆಗಳು ನಿಖರವಾಗಿರುವುದಿಲ್ಲ. ಕೇಂದ್ರದ ಹವಾಮಾನ ಇಲಾಖೆ (ಐಎಂಡಿ) ಅಭಿವೃದ್ಧಿಪಡಿಸಿದ ಮೌಸಮ್ ಎನ್ನುವ ಆ್ಯಪ್ (Mausam App) ಜನಪ್ರಿಯವಾಗುತ್ತಿದೆ. ಇದರಲ್ಲಿ ಮಳೆ, ಗಾಳಿ ಇತ್ಯಾದಿ ಹವಾಮಾನ ಮುನ್ಸೂಚನೆಗಳನ್ನು ಹೆಚ್ಚು ನಿಖರವಾಗಿ ನೀಡಬಲ್ಲುದು. ಇದೀಗ ಮೌಸಮ್ ಆ್ಯಪ್ ಇತರ ಆ್ಯಪ್​ಗಳಾದ ಮೇಘದೂತ್, ದಾಮಿನಿಯೊಂದಿಗೆ ಮಿಳಿತವಾಗಿ ಹೆಚ್ಚಿನ ಸೇವೆಗಳನ್ನು ನೀಡಬಲ್ಲುದು.

ಮೌಸಮ್ ಆ್ಯಪ್​ನಲ್ಲಿ ಹವಾಮಾನ ಮುನ್ಸೂಚನೆ ಮಾತ್ರವಲ್ಲ, ಗುಡುಗು, ಮಿಂಚು, ಸಿಡಿಲು ಇತ್ಯಾದಿ ಮಳೆ ಸಂಬಂಧಿ ಹವಾಮಾನ ವೈಪರೀತ್ಯಗಳ ಮುನ್ಸೂಚನೆ ನೀಡಬಲ್ಲುದು. ಹಾಗೆಯೇ ಕೃಷಿ ಮಾರ್ಗದರ್ಶಕನಾಗಿಯೂ ನೆರವಾಗಬಲ್ಲುದು.

ಐಎಂಡಿ ಟ್ವೀಟ್

2020ರ ಜುಲೈ 27ರಂದು ಭೂ ವಿಜ್ಞಾನ ಸಚಿವಾಲಯ (Ministry of Earth Sciences) ಮತ್ತು ಭಾರತೀಯ ಹವಾಮಾನ ಇಲಾಖೆ (IMD) ಸೇರಿ, ‘ಮೌಸಮ್’ (Mausam) ಆ್ಯಪ್ ಅನ್ನು ಲೋಕಾರ್ಪಣೆ ಮಾಡಿದವು. ಅದರಲ್ಲಿ ಹಲವು ಫೀಚರ್​ಗಳಿವೆ. ‘ನೌಕಾಸ್ಟ್’ (Nowcast) ಎಂಬ ವೈಶಿಷ್ಟ್ಯವು ಮುಂದಿನ 3 ಗಂಟೆಗಳಲ್ಲಿ ಒಂದು ಪ್ರದೇಶದ ಸುತ್ತಮುತ್ತ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡುತ್ತದೆ. ಅಷ್ಟೇ ಅಲ್ಲದೆ, ಆ್ಯಪ್‌ನಲ್ಲಿ ಮಳೆ ಸಾಧ್ಯತೆ ಆಧರಿಸಿ ವಿವಿಧ ಬಣ್ಣದ ಅಲರ್ಟ್​ಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಎಐ ಹೆಸರಲ್ಲಿ ಲೇ ಆಫ್; ಉದ್ಯೋಗಿಗಳಿಗೆ ಆಶಾಕಿರಣವಾದ ಚೀನೀ ಕೋರ್ಟ್ ತೀರ್ಪು

‘ಮೌಸಮ್’ ಆ್ಯಪ್‌ನ ಸಂಪೂರ್ಣ ವಿವರಗಳು ಮತ್ತು ವೈಶಿಷ್ಟ್ಯಗಳು

ಈ ಆ್ಯಪ್ ಅನ್ನು IMD (ಭಾರತೀಯ ಹವಾಮಾನ ಇಲಾಖೆ), ಪುಣೆಯ IITM ಮತ್ತು ICRISAT ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ತಾಂತ್ರಿಕ ಭಾಷೆ ತಿಳಿಯದ ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಆ್ಯಪ್​ನ ಕೆಲ ಪ್ರಮುಖ ಫೀಚರ್​ಗಳು ಮತ್ತು ಯುಟಿಲಿಟಿಗಳ ಮಾಹಿತಿ ಇಲ್ಲಿದೆ:

  1. ಪ್ರಸ್ತುತ ಹವಾಮಾನ (Current Weather): ಭಾರತದ ಸುಮಾರು 200 ನಗರಗಳ ಪ್ರಸ್ತುತ ತಾಪಮಾನ, ಗಾಳಿಯ ವೇಗ, ದಿಕ್ಕು ಮತ್ತು ತೇವಾಂಶದ (Humidity) ಮಾಹಿತಿಯನ್ನು ದಿನಕ್ಕೆ 8 ಬಾರಿ ಅಪ್‌ಡೇಟ್ ಮಾಡಲಾಗುತ್ತದೆ. ಇದರೊಂದಿಗೆ ಸೂರ್ಯೋದಯ/ಸೂರ್ಯಾಸ್ತ ಮತ್ತು ಚಂದ್ರೋದಯ/ಚಂದ್ರಾಸ್ತದ ಸಮಯವನ್ನೂ ತಿಳಿಯಬಹುದು.
  2. ನೌಕಾಸ್ಟ್ (Nowcast): ಇದು ಅತ್ಯಂತ ಉಪಯುಕ್ತ ಫೀಚರ್. ಭಾರತದಾದ್ಯಂತ ಇರುವ ಸುಮಾರು 800 ಕೇಂದ್ರಗಳಿಂದ ಸ್ಥಳೀಯ ಹವಾಮಾನದ ತೀವ್ರತೆ ಮತ್ತು ಮುನ್ಸೂಚನೆಯನ್ನು ಪ್ರತಿ 3 ಗಂಟೆಗೊಮ್ಮೆ ಇಲ್ಲಿ ನೀಡಲಾಗುತ್ತದೆ. ಹಠಾತ್ ಮಳೆ ಅಥವಾ ಚಂಡಮಾರುತದ ಮುನ್ಸೂಚನೆ ಪಡೆಯಲು ಇದು ಸಹಕಾರಿ.
  3. ನಗರದ ಮುನ್ಸೂಚನೆ (City Forecast): ದೇಶದ ಸುಮಾರು 450 ನಗರಗಳ ಕಳೆದ 24 ಗಂಟೆಗಳ ಹವಾಮಾನ ವರದಿ ಮತ್ತು ಮುಂದಿನ 7 ದಿನಗಳ ಸುದೀರ್ಘ ಮುನ್ಸೂಚನೆಯನ್ನು ಇದು ಒದಗಿಸುತ್ತದೆ.
  4. ಎಚ್ಚರಿಕೆಗಳು (Alerts): ಅಪಾಯಕಾರಿ ಹವಾಮಾನದ ಬಗ್ಗೆ ಜನರನ್ನು ಮುನ್ನೆಚ್ಚರಿಸಲು ದಿನಕ್ಕೆ ಎರಡು ಬಾರಿ, ಮುಂದಿನ 5 ದಿನಗಳವರೆಗೆ ಬಣ್ಣದ ಕೋಡ್ (Colour Code) ಆಧಾರಿತ ಎಚ್ಚರಿಕೆಗಳನ್ನು ನೀಡಲಾಗುತ್ತದೆ:
  • ಹಳದಿ (Yellow): ಹವಾಮಾನದ ಅಪ್‌ಡೇಟ್ ಗಮನಿಸುತ್ತಿರಿ.
  • ಕಿತ್ತಳೆ (Orange): ಜಾಗರೂಕರಾಗಿರಿ ಮತ್ತು ಸಿದ್ಧರಾಗಿರಿ.
  • ಕೆಂಪು (Red): ಅತ್ಯಂತ ಅಪಾಯಕಾರಿ ಹವಾಮಾನ, ತಕ್ಷಣ ಕ್ರಮ ಕೈಗೊಳ್ಳಿ.

ಇದನ್ನೂ ಓದಿ: ದೆಹಲಿಯಲ್ಲಿ 9 ಮಂದಿ ಬಲಿತೆಗೆದ ಎಸಿ ಸ್ಫೋಟ; ಏರ್ ಕಂಡೀಷನರ್ ಸ್ಫೋಟಕ್ಕೆ ಕಾರಣವೇನು, ನಿಯಂತ್ರಣ ಹೇಗೆ?

ರಾಡಾರ್ ಚಿತ್ರಗಳು (Radar Products): ಹವಾಮಾನ ಇಲಾಖೆಯ ಅತ್ಯಾಧುನಿಕ ರಾಡಾರ್‌ಗಳು ಸೆರೆಹಿಡಿಯುವ ಚಿತ್ರಗಳನ್ನು ಪ್ರತಿ 10 ನಿಮಿಷಕ್ಕೊಮ್ಮೆ ಇಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ. ಇದರಿಂದ ಮೋಡಗಳ ಚಲನೆಯನ್ನು ನಾವೇ ನೇರವಾಗಿ ನಕ್ಷೆಯಲ್ಲಿ ನೋಡಬಹುದು.

ಮೌಸಮ್ ಆ್ಯಪ್ ಆಂಡ್ರಾಯ್ಡ್ (Google Play Store) ಮತ್ತು ಐಫೋನ್ (Apple App Store) ಎರಡರಲ್ಲೂ ಉಚಿತವಾಗಿ ಲಭ್ಯವಿದೆ. ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ಜೀವ ಮತ್ತು ಆಸ್ತಿ ಪಾಸ್ತಿ ನಷ್ಟವನ್ನು ತಡೆಯುವುದು ಮತ್ತು ರೈತರು, ಮೀನುಗಾರರು ಹಾಗೂ ಸಾರ್ವಜನಿಕರಿಗೆ ನಿಖರ ಮಾಹಿತಿ ನೀಡುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ
ಕಲಬುರಗಿ: ಕಾಣೆಯಾಗಿದ್ದ 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ!
ಕಲಬುರಗಿ: ಕಾಣೆಯಾಗಿದ್ದ 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ!
ಮೈಲಾರಿ ಹೋಟೆಲ್‌ನಲ್ಲಿ ರಾಜಣ್ಣ ಜತೆ ಕುಳಿತು ದೋಸೆ ಸವಿದ ಸಿಎಂ ಸಿದ್ದರಾಮಯ್ಯ
ಮೈಲಾರಿ ಹೋಟೆಲ್‌ನಲ್ಲಿ ರಾಜಣ್ಣ ಜತೆ ಕುಳಿತು ದೋಸೆ ಸವಿದ ಸಿಎಂ ಸಿದ್ದರಾಮಯ್ಯ