AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಸರ್ವಂ ಎಐ ಈಗ ಯುನಿಕಾರ್ನ್ ಕಂಪನಿಗಳ ಸಾಲಿನಲ್ಲಿ; ಹೂಡಿಕೆ ಮಾಡಿದ ಎಚ್​ಸಿಎಲ್​ಗೂ ಷೇರುಪೇಟೆಯಲ್ಲಿ ಸುಗ್ಗಿ

Sarvam AI of Bangalore becomes unicorn company: ಭಾರತದ ಪ್ರಮುಖ ಎಐ ಕಂಪನಿಗಳಲ್ಲಿ ಒಂದಾಗಿರುವ ಸರ್ವಂ ಇದೀಗ ಹೆಚ್​ಸಿಎಲ್ ಟೆಕ್ ಇತ್ಯಾದಿ ಕಂಪನಿಗಳಿಂದ ಭರ್ಜರಿ ಬಂಡವಾಳ ಪಡೆದಿದೆ. ಈ ಮೂಲಕ ಸರ್ವಂ ಎಐ ಮಾರುಕಟ್ಟೆ ಮೌಲ್ಯ ಒಂದೂವರೆ ಬಿಲಿಯನ್ ಡಾಲರ್ ದಾಟಿದೆ. ಎಚ್​ಸಿಎಲ್​ಟೆಕ್ ಕಂಪನಿಯೊಂದೇ 150 ಮಿಲಿಯನ್ ಡಾಲರ್ ಬಂಡವಾಳ ನೀಡಿದೆ.

ಬೆಂಗಳೂರಿನ ಸರ್ವಂ ಎಐ ಈಗ ಯುನಿಕಾರ್ನ್ ಕಂಪನಿಗಳ ಸಾಲಿನಲ್ಲಿ; ಹೂಡಿಕೆ ಮಾಡಿದ ಎಚ್​ಸಿಎಲ್​ಗೂ ಷೇರುಪೇಟೆಯಲ್ಲಿ ಸುಗ್ಗಿ
ಸರ್ವಮ್ ಎಐImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 16, 2026 | 3:14 PM

Share

ಬೆಂಗಳೂರು, ಜೂನ್ 16: ಸಿಲಿಕಾನ್ ಸಿಟಿ ಮೂಲದ ಕೃತಕ ಬುದ್ಧಿಮತ್ತೆ (AI) ಸ್ಟಾರ್ಟ್‌ಅಪ್ ಕಂಪನಿಯಾದ ‘ಸರ್ವಮ್ ಐಐ’ (Sarvam AI) ಈಗ ಯೂನಿಕಾರ್ನ್ ಕಂಪನಿಗಳ ಸಾಲಿಗೆ ಸೇರ್ಪಡೆಯಾಗಿದೆ. ಐಟಿ ಕ್ಷೇತ್ರದ ಹೆಚ್‌ಸಿಎಲ್‌ಟೆಕ್ (HCLTech) ನೇತೃತ್ವದ ಸೀರೀಸ್-ಬಿ (Series B) ಫಂಡಿಂಗ್ ರೌಂಡ್‌ನಲ್ಲಿ ಬರೋಬ್ಬರಿ 234 ಮಿಲಿಯನ್ ಡಾಲರ್ (ಸುಮಾರು ₹1,950 ಕೋಟಿ) ಹೂಡಿಕೆಯನ್ನು ಗಳಿಸಿದೆ. ಈ ಭರ್ಜರಿ ಹೂಡಿಕೆಯೊಂದಿಗೆ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯವು 1.5 ಬಿಲಿಯನ್ ಡಾಲರ್ (ಸುಮಾರು ₹12,500 ಕೋಟಿ) ದಾಟಿದ್ದು, ಭಾರತದ ಹೊಚ್ಚಹೊಸ ‘ಯೂನಿಕಾರ್ನ್’ (Unicorn) ಸ್ಟಾರ್ಟ್‌ಅಪ್ ಆಗಿ ಹೊರಹೊಮ್ಮಿದೆ.

ಈ ಹೂಡಿಕೆ ಸುತ್ತಿನಲ್ಲಿ ಜಾಗತಿಕ ಐಟಿ ದೈತ್ಯ ಕಂಪನಿಯಾದ ಹೆಚ್‌ಸಿಎಲ್‌ಟೆಕ್​ನೊಂದೇ (HCLTech) 150 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಈ ಮೂಲಕ ಸರ್ವಮ್ AI ಕಂಪನಿಯಲ್ಲಿ ಶೇ. 10.46 ರಷ್ಟು ಪಾಲನ್ನು (Stake) ಪಡೆದುಕೊಂಡಿದೆ. ಈ ಸುತ್ತಿನಲ್ಲಿ ಬೆಸ್ಸೆಮರ್ ವೆಂಚರ್ ಪಾರ್ಟ್‌ನರ್ಸ್, ಖೋಸ್ಲಾ ವೆಂಚರ್ಸ್ ಮತ್ತು ಪೀಕ್ ಎಕ್ಸ್‌ವಿ ಪಾರ್ಟ್‌ನರ್ಸ್ (ಹಳೆಯ ಸಿಕ್ವೊಯಾ ಕ್ಯಾಪಿಟಲ್) ಕಂಪನಿಗಳು ಸಹ ಭಾಗವಹಿಸಿವೆ. ಸರ್ವಂ ಎಐ ಮೇಲೆ ಹೂಡಿಕೆ ಮಾಡಿದ ಬೆನ್ನಲ್ಲೇ ಎಚ್​ಸಿಎಲ್ ಟೆಕ್ ಕಂಪನಿ ಮಂಗಳವಾರದ ಷೇರು ಟ್ರೇಡಿಂಗ್​ನಲ್ಲಿ ಬೇಡಿಕೆ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದೆ. ಅದರ ಷೇರುಬೆಲೆ ಶೇ. 3ರಷ್ಟು ಹೆಚ್ಚಿದೆ.

ಸರ್ವಂ ಕಂಪನಿಯ ಆದಾಯವು 2024-25ರ ಹಣಕಾಸು ವರ್ಷದಲ್ಲಿ ₹1.5 ಕೋಟಿಯಷ್ಟಿತ್ತು. ಒಂದು ವರ್ಷದಲ್ಲಿ (2025-26) ಭಾರಿ ಜಿಗಿತ ಕಂಡು ₹45.1 ಕೋಟಿಗೆ ತಲುಪಿದೆ. ಹೀಗಾಗಿ, ಈ ಕಂಪನಿ ಸುಸ್ಥಿರ ಬೆಳವಣಿಗೆ ಸಾಧಿಸುವ ವಿಶ್ವಾಸವು ಹೂಡಿಕೆದಾರರಲ್ಲಿ ಮೂಡಿಸಿದಂತಿದೆ. ಪರಿಣಾಮವಾಗಿ, ಬಹಳ ಕ್ಷಿಪ್ರ ವೇಗದಲ್ಲಿ ಸರ್ವಂ ಎಐ ಯೂನಿಕಾರ್ನ್ ಕಂಪನಿ ಮಟ್ಟಕ್ಕೆ ಬೆಳೆದಿದೆ.

ಇದನ್ನೂ ಓದಿ: ಎನ್​ಆರ್​ಐಗಳ ಡೆಪಾಸಿಟ್​ಗಳನ್ನು ಕೈಬೀಸಿ ಕರೆಯುತ್ತಿವೆ ಭಾರತದ ಹೊಸ FCNR(B) ದರಗಳು; ಅನಿವಾಸಿ ಭಾರತೀಯರಿಗೆ ಹೇಗೆ ಲಾಭ?

ಯೂನಿಕಾರ್ನ್ ಕಂಪನಿ ಎಂದರೆ ಏನು?

ಷೇರು ಮಾರುಕಟ್ಟೆಯಲ್ಲಿ ಇನ್ನೂ ಲಿಸ್ಟ್ ಆಗದ ಸ್ಟಾರ್ಟಪ್​ವೊಂದು ಮೌಲ್ಯದಲ್ಲಿ ಒಂದು ಬಿಲಿಯನ್ ಡಾಲರ್ ಮಟ್ಟ ದಾಟಿದಾಗ ಅದು ಯೂನಿಕಾರ್ನ್ ಎನಿಸುತ್ತದೆ. ಭಾರತದಲ್ಲಿ 130ಕ್ಕೂ ಹೆಚ್ಚು ಯೂನಿಕಾರ್ನ್ ಕಂಪನಿಗಳಿವೆ. ಅಮೆರಿಕ, ಚೀನಾ ಬಿಟ್ಟರೆ ಭಾರತವೇ ಅತಿಹೆಚ್ಚು ಯೂನಿಕಾರ್ನ್ ಕಂಪನಿಗಳನ್ನು ಹೊಂದಿರುವುದು.

‘ಸರ್ವಮ್ ಐಐ’ ವಿಶೇಷತೆ ಮತ್ತು ಸಾಧನೆ ಏನು?

ವಿವೇಕ್ ರಾಘವನ್ ಮತ್ತು ಪ್ರತ್ಯುಷ್ ಕುಮಾರ್ ಜಂಟಿಯಾಗಿ ಸ್ಥಾಪಿಸಿದ ಈ ಬೆಂಗಳೂರು ಮೂಲದ ಕಂಪನಿಯು ಕೇವಲ ಆ್ಯಪ್‌ಗಳನ್ನು ತಯಾರಿಸುವುದಿಲ್ಲ. ಬದಲಿಗೆ, ಭಾರತೀಯ ಭಾಷೆಗಳು ಮತ್ತು ಸ್ಥಳೀಯ ಸಂಸ್ಕೃತಿಗೆ ಹೊಂದಿಕೆಯಾಗುವಂತೆ ಮೊದಲಿನಿಂದಲೇ (From Scratch) AI ಮಾದರಿಗಳನ್ನು (Foundational Models) ಅಭಿವೃದ್ಧಿಪಡಿಸುತ್ತಿದೆ.

ಸದ್ಯ ಈ ಕಂಪನಿಯ AI ಪ್ಲಾಟ್‌ಫಾರ್ಮ್ ಪ್ರತಿದಿನ 20 ಲಕ್ಷಕ್ಕೂ ಹೆಚ್ಚು ಸಂಭಾಷಣೆಗಳನ್ನು (Interactions) ನಿಭಾಯಿಸುತ್ತಿದೆ ಮತ್ತು ದಿನಕ್ಕೆ 1 ಕೋಟಿಗೂ ಹೆಚ್ಚು ಎಪಿಐ (API) ಕರೆಗಳನ್ನು ಪ್ರೊಸೆಸ್ ಮಾಡುತ್ತಿದೆ.

ಕೇಂದ್ರ ಕೃಷಿ ಸಚಿವಾಲಯದ ಸಹಯೋಗದೊಂದಿಗೆ, ಈ ಕಂಪನಿಯ ಬಹುಭಾಷಾ ಧ್ವನಿ ತಂತ್ರಜ್ಞಾನವು (Multilingual Voice Agents) ದೇಶದ 1.7 ಕೋಟಿ ರೈತರಿಂದ ಯಶಸ್ವಿಯಾಗಿ ಮಾಹಿತಿ ಸಂಗ್ರಹಿಸಿದೆ.

ದೇಶದ ಪ್ರಮುಖ ವಿಮಾ ಕಂಪನಿಯೊಂದರ ಪಾಲಿಸಿ ನವೀಕರಣಕ್ಕಾಗಿ (Policy Renewal) ಈ AI ತಂತ್ರಜ್ಞಾನವು ದೇಶಾದ್ಯಂತ 4.5 ಕೋಟಿ ಗ್ರಾಹಕರನ್ನು ತಲುಪಿದೆ.

ಇದನ್ನೂ ಓದಿ: ಷೇರುಪೇಟೆಯಲ್ಲಿ ಧೂಳೆಬ್ಬಿಸುತ್ತಿರುವ ಸ್ಪೇಸ್​ಎಕ್ಸ್; ಇಲಾನ್ ಮಸ್ಕ್ ಒಂದು ದಿನದಲ್ಲಿ ಗಳಿಸಿದ ಸಂಪತ್ತು ವಾರನ್ ಬಫೆಟ್​ನ ಒಟ್ಟೂ ಸಂಪತ್ತಿಗೆ ಸಮ

ಈ ಹೊಸ ಹಣವನ್ನು ಕಂಪನಿ ಎಲ್ಲಿ ಬಳಸಲಿದೆ?

ಕಂಪನಿಯ ಸಹ-ಸ್ಥಾಪಕ ಪ್ರತ್ಯುಷ್ ಕುಮಾರ್ ಅವರ ಪ್ರಕಾರ, ಸೀರೀಸ್-ಬಿ ರೌಂಡ್​ನಲ್ಲಿ ಬಂದ ಈ ಹೊಸ ಬಂಡವಾಳವನ್ನು ಭಾರತಕ್ಕೆಂದೇ ಪ್ರತ್ಯೇಕವಾದ ಸಾರ್ವಭೌಮ AI (Sovereign AI) ವ್ಯವಸ್ಥೆಯನ್ನು ಬಲಪಡಿಸಲು ಬಳಸಲಾಗುತ್ತದೆ.

  • ಮುಂದಿನ ಪೀಳಿಗೆಯ AI ಮಾದರಿಗಳು: ಕೋಡಿಂಗ್ (AI-assisted coding), ಸೈಬರ್ ಸೆಕ್ಯೂರಿಟಿ (Cybersecurity) ಮತ್ತು ಏಜೆಂಟಿಕ್ ಐಐ (Agentic AI – ಸ್ವತಂತ್ರವಾಗಿ ಕೆಲಸ ನಿರ್ವಹಿಸುವ ಎಐ) ಕ್ಷೇತ್ರಗಳಲ್ಲಿ ಹೊಸ ಸಂಶೋಧನೆ ನಡೆಸುವುದು.
  • ಜಾಗತಿಕ ತಂತ್ರಜ್ಞಾನಗಳಿಗೆ ಪೈಪೋಟಿ: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಕ್ಲೋಡ್ (Claude) ಮತ್ತು ಕೋಡೆಕ್ಸ್ (Codex) ನಂತಹ ಸಾಫ್ಟ್‌ವೇರ್ ಇಂಜಿನಿಯರಿಂಗ್ ಸಹಾಯಕ ತಂತ್ರಜ್ಞಾನಗಳಿಗೆ ಭಾರತದಲ್ಲೇ ಪರ್ಯಾಯವನ್ನು ಸೃಷ್ಟಿಸುವುದು.
  • ಕಂಪ್ಯೂಟಿಂಗ್ ಮೂಲಸೌಕರ್ಯ: ಭಾರತದ ಒಳಗಡೆಯೇ ಸೂಪರ್ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ವಿಸ್ತರಿಸಲು ಎನ್‌ವಿಡಿಯಾದ ಅತ್ಯಾಧುನಿಕ ‘ಬ್ಲ್ಯಾಕ್‌ವೆಲ್’ (Blackwell-based AI compute clusters) ತಂತ್ರಜ್ಞಾನದ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ.

“ನಮ್ಮ ಧ್ವನಿಯನ್ನು ಅರ್ಥಮಾಡಿಕೊಳ್ಳುವ, ನಮ್ಮ ದಾಖಲೆಗಳನ್ನು ಓದುವ ಮತ್ತು ಪ್ರತಿಯೊಂದು ಉದ್ಯಮ ಹಾಗೂ ಸರ್ಕಾರಕ್ಕೂ ಕೈಗೆಟುಕುವ ವೆಚ್ಚದಲ್ಲಿ ಬುದ್ಧಿವಂತಿಕೆ ಸೇವೆಯನ್ನು ನೀಡುವ AI ಮಾದರಿಗಳನ್ನು ಭಾರತೀಯ ಮಟ್ಟದಲ್ಲಿ ರೂಪಿಸುವುದೇ ನಮ್ಮ ಗುರಿ” ಎಂದು ಸರ್ವಂ ಎಐ ಕಂಪನಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Tue, 16 June 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಆರ್‌ಎಸ್‌ಎಸ್​ನವರು ಹಿಂದುಗಳಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ
ಆರ್‌ಎಸ್‌ಎಸ್​ನವರು ಹಿಂದುಗಳಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ
66 ರೌಡಿಶೀಟರ್​ಗಳಿಗೆ ಮುಕ್ತಿ ಸದ್ಯಕ್ಕಿಲ್ಲ: ಕ್ರಮ ತಡೆಹಿಡಿದ ಸಚಿವ ಖರ್ಗೆ
66 ರೌಡಿಶೀಟರ್​ಗಳಿಗೆ ಮುಕ್ತಿ ಸದ್ಯಕ್ಕಿಲ್ಲ: ಕ್ರಮ ತಡೆಹಿಡಿದ ಸಚಿವ ಖರ್ಗೆ
ತಾಯಿ ಪಾರ್ಥೀವ ಶರೀರದ ಎದುರು ಕಣ್ಣೀರು ಹಾಕಿದ ಶ್ರೀಮುರಳಿ
ತಾಯಿ ಪಾರ್ಥೀವ ಶರೀರದ ಎದುರು ಕಣ್ಣೀರು ಹಾಕಿದ ಶ್ರೀಮುರಳಿ
ಸಿಎಂ ಡಿಕೆಶಿಗೆ ಮೋಹನ್ ದಾಸ್ ಪೈ ಸಲಹೆ: ಉದ್ಯಮಿ ಹೇಳಿದ್ದೇನು?
ಸಿಎಂ ಡಿಕೆಶಿಗೆ ಮೋಹನ್ ದಾಸ್ ಪೈ ಸಲಹೆ: ಉದ್ಯಮಿ ಹೇಳಿದ್ದೇನು?
ಕೊನೆಗೂ ಖಾತೆ ವಹಿಸಿಕೊಂಡ ಸಚಿವ ಕೃಷ್ಣ ಭೈರೇಗೌಡ: ಜಿಬಿಎ ಕಚೇರಿಯಲ್ಲಿ ಸಭೆ
ಕೊನೆಗೂ ಖಾತೆ ವಹಿಸಿಕೊಂಡ ಸಚಿವ ಕೃಷ್ಣ ಭೈರೇಗೌಡ: ಜಿಬಿಎ ಕಚೇರಿಯಲ್ಲಿ ಸಭೆ
ಹುಬ್ಬಳ್ಳಿ ಭಂಡಿವಾಡದಲ್ಲಿ ಹತ್ತೇ ನಿಮಿಷದಲ್ಲಿ ಉಳೀತು ಇನ್ನೂರು ಮಕ್ಕಳ ಜೀವ
ಹುಬ್ಬಳ್ಳಿ ಭಂಡಿವಾಡದಲ್ಲಿ ಹತ್ತೇ ನಿಮಿಷದಲ್ಲಿ ಉಳೀತು ಇನ್ನೂರು ಮಕ್ಕಳ ಜೀವ
ಒಬ್ಬೊಬ್ರಿಗೆ ಕೊಡ್ತೀನಿ ನೋಡಿ; ಸಮಂತಾ ಎಚ್ಚರಿಕೆ ನೀಡಿದ್ದು ಯಾರಿಗೆ?
ಒಬ್ಬೊಬ್ರಿಗೆ ಕೊಡ್ತೀನಿ ನೋಡಿ; ಸಮಂತಾ ಎಚ್ಚರಿಕೆ ನೀಡಿದ್ದು ಯಾರಿಗೆ?
ಎಸಿಎಫ್​​ ಮನೆಯಲ್ಲಿ ಖಜಾನೆ ಕಂಡು ಲೋಕಾಯಕ್ತ ಅಧಿಕಾರಿಗಳೇ ಶಾಕ್​​
ಎಸಿಎಫ್​​ ಮನೆಯಲ್ಲಿ ಖಜಾನೆ ಕಂಡು ಲೋಕಾಯಕ್ತ ಅಧಿಕಾರಿಗಳೇ ಶಾಕ್​​
ಮೈಸೂರು ಪಬ್​​ ದುರಂತ ಕೇಸ್​​ಗೆ ಟ್ವಿಸ್ಟ್​​: ಕೇಳಿಬಂತು ಸ್ಫೋಟಕ ಆರೋಪ
ಮೈಸೂರು ಪಬ್​​ ದುರಂತ ಕೇಸ್​​ಗೆ ಟ್ವಿಸ್ಟ್​​: ಕೇಳಿಬಂತು ಸ್ಫೋಟಕ ಆರೋಪ
ಮೇಲ್ಛಾವಣಿ ಕುಸಿತದಿಂದ ಜೀವ ಭಯದಲ್ಲೇ ಸರ್ಕಾರಿ ಶಾಲೆಗೆ ಬರುತ್ತಿರುವ ಮಕ್ಕಳು
ಮೇಲ್ಛಾವಣಿ ಕುಸಿತದಿಂದ ಜೀವ ಭಯದಲ್ಲೇ ಸರ್ಕಾರಿ ಶಾಲೆಗೆ ಬರುತ್ತಿರುವ ಮಕ್ಕಳು