AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ಭಾರತ-ಓಮನ್ ವ್ಯಾಪಾರ ಒಪ್ಪಂದ ಜಾರಿಯಲ್ಲಿ; ಭಾರತಕ್ಕೇನು ಲಾಭ, ಒಪ್ಪಂದ ಮುಖ್ಯಾಂಶಗಳೇನು? ಇಲ್ಲಿದೆ ಮಾಹಿತಿ

India-Oman CEPA: ಭಾರತ ಮತ್ತು ಓಮನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) ಜೂನ್ 1, 2026 ರಿಂದ ಜಾರಿಯಾಗಿದೆ. ಇದು ಭಾರತದಿಂದ ಓಮನ್‌ಗೆ ರಫ್ತಾಗುವ ಶೇ 80ಕ್ಕೂ ಹೆಚ್ಚು ಸರಕುಗಳ ಮೇಲಿನ ಆಮದು ಸುಂಕವನ್ನು ರದ್ದುಗೊಳಿಸುತ್ತದೆ. ಪೆಟ್ರೋಲಿಯಂ, ಚಿನ್ನ, ಫಾರ್ಮಾಸ್ಯುಟಿಕಲ್ಸ್ ಮತ್ತು ಕೃಷಿ ಸೇರಿದಂತೆ ಹಲವು ವಲಯಗಳಿಗೆ ಲಾಭ. ಇದು ದ್ವಿಪಕ್ಷೀಯ ವ್ಯಾಪಾರವನ್ನು $20 ಬಿಲಿಯನ್‌ಗೆ ಹೆಚ್ಚಿಸಿ, ಸೇವಾ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

ಇಂದಿನಿಂದ ಭಾರತ-ಓಮನ್ ವ್ಯಾಪಾರ ಒಪ್ಪಂದ ಜಾರಿಯಲ್ಲಿ; ಭಾರತಕ್ಕೇನು ಲಾಭ, ಒಪ್ಪಂದ ಮುಖ್ಯಾಂಶಗಳೇನು? ಇಲ್ಲಿದೆ ಮಾಹಿತಿ
ವ್ಯಾಪಾರImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 01, 2026 | 5:55 PM

Share

ನವದೆಹಲಿ, ಜೂನ್ 1: ಭಾರತ ಮತ್ತು ಓಮನ್ (Oman) ದೇಶಗಳ ನಡುವಿನ ಆರ್ಥಿಕ ಬಾಂಧವ್ಯದಲ್ಲಿ ಇಂದು (ಜೂನ್ 1, 2026) ಹೊಸ ಇತಿಹಾಸ ಸೃಷ್ಟಿಯಾಗಿದೆ. ಎರಡೂ ದೇಶಗಳ ನಡುವಿನ ಬಹುನಿರೀಕ್ಷಿತ ‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ’ (CEPA – Comprehensive Economic Partnership Agreement) ಅಥವಾ ಮುಕ್ತ ವ್ಯಾಪಾರ ಒಪ್ಪಂದವು ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದೆ.

ಈ ಒಪ್ಪಂದದ ಅಡಿಯಲ್ಲಿ, ಭಾರತದಿಂದ ಓಮನ್‌ ದೇಶಕ್ಕೆ ರಫ್ತಾಗುವ ಶೇಕಡಾ 80 ಕ್ಕೂ ಹೆಚ್ಚು ಸರಕುಗಳ ಮೇಲಿನ ಆಮದು ಸುಂಕವನ್ನು (Import Duty) ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಅಥವಾ ಗಣನೀಯವಾಗಿ ಕಡಿತಗೊಳಿಸಲಾಗಿದೆ. ಇದರಿಂದಾಗಿ ಓಮನ್ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳು ಅತ್ಯಂತ ಕಡಿಮೆ ಬೆಲೆಗೆ ಸಿಗಲಿದ್ದು, ರಫ್ತು ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ.

ಭಾರತದ ಯಾವೆಲ್ಲಾ ವಲಯಗಳಿಗೆ ಲಾಭ?

ಓಮನ್ ದೇಶವು ಪ್ರಸ್ತುತ ಭಾರತೀಯ ಉತ್ಪನ್ನಗಳ ಮೇಲೆ 5% ರಷ್ಟು ಆಮದು ಸುಂಕವನ್ನು ವಿಧಿಸುತ್ತಿತ್ತು. ಇಂದಿನಿಂದ ಸುಂಕ ಮುಕ್ತವಾಗಿರುವುದರಿಂದ ಭಾರತದ ಈ ಕೆಳಗಿನ ಪ್ರಮುಖ ವಲಯಗಳಿಗೆ ಭಾರಿ ಅನುಕೂಲವಾಗಲಿದೆ:

  • ಪೆಟ್ರೋಲಿಯಂ ಉತ್ಪನ್ನಗಳು ಮತ್ತು ತೈಲ
  • ಚಿನ್ನ ಮತ್ತು ಆಭರಣಗಳು (Jewellery)
  • ಎಂಜಿನಿಯರಿಂಗ್ ಸರಕುಗಳು ಹಾಗೂ ಯಂತ್ರೋಪಕರಣಗಳು
  • ಫಾರ್ಮಾಸ್ಯುಟಿಕಲ್ಸ್ (ಔಷಧ ವಲಯ)
  • ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್ ಬಿಡಿಭಾಗಗಳು
  • ಕೃಷಿ ಉತ್ಪನ್ನಗಳು (ಅಕ್ಕಿ, ಚಹಾ, ಕಾಫಿ, ಮಸಾಲೆ ಪದಾರ್ಥಗಳು)

ಇದನ್ನೂ ಓದಿ: ಮೇ ತಿಂಗಳಲ್ಲಿ ಭರ್ಜರಿ ಜಿಎಸ್​ಟಿ ಸಂಗ್ರಹ; 1.94 ಲಕ್ಷ ಕೋಟಿ ರೂಗೆ ಏರಿದ ತೆರಿಗೆ ಆದಾಯ

ಭಾರತಕ್ಕೆ ಓಮನ್ ಏಕೆ ಮಹತ್ವದ್ದೆನಿಸಿದೆ?

ಗಲ್ಫ್ ಸಹಕಾರ ಮಂಡಳಿ (GCC) ಒಕ್ಕೂಟದಲ್ಲಿ ಓಮನ್ ಭಾರತದ ಅತ್ಯಂತ ಹಳೆಯ ಮತ್ತು ನಂಬಿಕಸ್ಥ ಸ್ಟ್ರಾಟಿಜಿಕ್ ಪಾರ್ಟ್ನರ್ ದೇಶವಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು ಸುಮಾರು $12.5 ಬಿಲಿಯನ್ (ಅಂದಾಜು ₹1 ಲಕ್ಷ ಕೋಟಿಗೂ ಅಧಿಕ) ತಲುಪಿತ್ತು. ಈ ಒಪ್ಪಂದದಿಂದಾಗಿ ಮುಂಬರುವ ಮುಂದಿನ ಕೆಲವು ವರ್ಷಗಳಲ್ಲಿ ಇದು $20 ಬಿಲಿಯನ್ ದಾಟುವ ಅಂದಾಜಿದೆ.

ಸೇವಾ ವಲಯ ಹಾಗೂ ಉದ್ಯೋಗಾವಕಾಶಗಳ ವೃದ್ಧಿ

ಕೇವಲ ವಸ್ತುಗಳ ವ್ಯಾಪಾರ ಅಷ್ಟೇ ಅಲ್ಲದೆ, ಸೇವಾ ವಲಯದಲ್ಲೂ (Services) ಈ ಒಪ್ಪಂದ ದೊಡ್ಡ ಬದಲಾವಣೆ ತರಲಿದೆ. ಭಾರತದ ಐಟಿ (IT) ವೃತ್ತಿಪರರು, ಚಾರ್ಟರ್ಡ್ ಅಕೌಂಟೆಂಟ್‌ಗಳು, ಇಂಜಿನಿಯರ್‌ಗಳು, ವೈದ್ಯರು ಮತ್ತು ನರ್ಸ್‌ಗಳಿಗೆ ಓಮನ್‌ನಲ್ಲಿ ಸುಲಭವಾಗಿ ಕೆಲಸದ ವೀಸಾ ಮತ್ತು ಉದ್ಯೋಗಾವಕಾಶಗಳು ಸಿಗಲಿವೆ. ಇದು ಓಮನ್‌ನಲ್ಲಿರುವ ಲಕ್ಷಾಂತರ ಅನಿವಾಸಿ ಭಾರತೀಯರಿಗೂ (NRIs) ನೆರವಾಗಲಿದೆ.

ಇದನ್ನೂ ಓದಿ: ನೀವು ಮಗನಾದರೂ ಸರಿ, ಹೆಂಡತಿಯಾದರೂ ಸರಿ, ಮೃತ ವ್ಯಕ್ತಿಯ ಎಟಿಎಂನಿಂದ ಹಣ ಡ್ರಾ ಮಾಡುವುದು ತಪ್ಪಾ?

ಇನ್ನು, ಓಮನ್‌ನಿಂದ ಭಾರತಕ್ಕೆ ಆಮದಾಗುವ ರಸಗೊಬ್ಬರ (Fertilizers), ಪೆಟ್ರೋಕೆಮಿಕಲ್ಸ್ ಮತ್ತು ಅಲ್ಯೂಮಿನಿಯಂ ಮುಂತಾದ ಕಚ್ಚಾ ವಸ್ತುಗಳು ಕಡಿಮೆ ದರದಲ್ಲಿ ಭಾರತಕ್ಕೆ ಸಿಗಲಿವೆ. ಇದು ಭಾರತೀಯ ಕೃಷಿ ಮತ್ತು ಉತ್ಪಾದನಾ ವಲಯಕ್ಕೆ ಆರ್ಥಿಕವಾಗಿ ಬಲ ತುಂಬಲಿದೆ.

ಒಟ್ಟಾರೆಯಾಗಿ, ಯುಎಇ (UAE) ಮತ್ತು ಆಸ್ಟ್ರೇಲಿಯಾದ ನಂತರ ಭಾರತವು ಮಾಡಿಕೊಂಡಿರುವ ಮತ್ತೊಂದು ಪ್ರಮುಖ ಮುಕ್ತ ವ್ಯಾಪಾರ ಒಪ್ಪಂದ ಇದಾಗಿದ್ದು, ಪಶ್ಚಿಮ ಏಷ್ಯಾ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಭಾರತದ ಆರ್ಥಿಕ ಹಿಡಿತವನ್ನು ಇದು ಮತ್ತಷ್ಟು ಗಟ್ಟಿಗೊಳಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!