AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pakistan: ಆಮದು, ಬಂದರು, ಅಂಚೆ ನಿರ್ಬಂಧ… ಪಾಕಿಸ್ತಾನ ವಿರುದ್ಧ ಒಂದೇ ದಿನ ಭಾರತದಿಂದ 3 ಕ್ರಮ

India's triple action against Pakistan: ಕಳೆದ ತಿಂಗಳು ಕಾಶ್ಮೀರದ ಪಹಲ್ಗಾಮ್​​ನಲ್ಲಿ ಪಾಕ್ ಬೆಂಬಲಿತವೆನ್ನಲಾದ ಉಗ್ರರು ದಾಳಿ ನಡೆಸಿದ ಘಟನೆಗೆ ಭಾರತ ಪ್ರತೀಕಾರ ಕ್ರಮ ಮುಂದುವರಿಸಿದೆ. ಸಿಂಧೂ ನದಿನೀರು ಒಪ್ಪಂದ ಹಿಂಪಡೆದಿದ್ದ ಭಾರತ ಈ ಒಂದೇ ದಿನ ಮೂರು ಕ್ರಮಗಳನ್ನು ತೆಗೆದುಕೊಂಡಿದೆ. ಪಾಕಿಸ್ತಾನದಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಆಮದನ್ನು ಪೂರ್ಣವಾಗಿ ನಿರ್ಬಂಧಿಸಿದೆ. ಬಂದರುಗಳನ್ನು ಬಳಸದಂತೆ ನಿಷೇಧಿಸಿದೆ.

Pakistan: ಆಮದು, ಬಂದರು, ಅಂಚೆ ನಿರ್ಬಂಧ... ಪಾಕಿಸ್ತಾನ ವಿರುದ್ಧ ಒಂದೇ ದಿನ ಭಾರತದಿಂದ 3 ಕ್ರಮ
ಪಾಕಿಸ್ತಾನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 04, 2025 | 11:38 AM

Share

ನವದೆಹಲಿ, ಮೇ 4: ಪಹಲ್ಗಾಂ ಉಗ್ರ ದಾಳಿ ಬಳಿಕ ಪಾಕಿಸ್ತಾನ (Pakistan) ವಿರುದ್ಧ ಭಾರತದ ಕಠಿಣ ನಿಲುವು ಮುಂದುವರಿದಿದೆ. ಸಿಂಧೂ ನದಿನೀರು ಒಪ್ಪಂದ ರದ್ದು ಮಾಡಿದ್ದು, ರಾಜತಾಂತ್ರಿಕ ಸಂಬಂಧ ಕಡಿದಿದ್ದು, ಅಟ್ಟಾರಿ ಗಡಿ ಬಂದ್ ಮಾಡಿದ್ದು, ವಾಯು ಪ್ರದೇಶವನ್ನು ನಿರ್ಬಂಧಿಸಿದ್ದು ಹೀಗೆ ಸಾಲ ಸಾಲು ಕ್ರಮಗಳನ್ನು ಭಾರತ ತೆಗೆದುಕೊಂಡಿದೆ. ಇಷ್ಟಕ್ಕೆ ಸುಮ್ಮನಾಗದ ಭಾರತ ಇನ್ನೂ ಮುಂದುವರಿದು ನಿನ್ನೆ ಒಂದೇ ದಿನ ಮೂರು ಕ್ರಮಗಳನ್ನು ಪಾಕಿಸ್ತಾನದ ವಿರುದ್ಧ ಕೈಗೊಂಡಿದೆ.

ಪಾಕಿಸ್ತಾನದಿಂದ ಆಮದು ನಿಷೇಧಿಸಿದ ಭಾರತ

ಪಾಕಿಸ್ತಾನ ಮೂಲಕ ಯಾವುದೇ ಸರಕುಗಳನ್ನು ನೇರವಾಗಿಯಾಗಲೀ ಪರೋಕ್ಷವಾಗಿಯಾಗಲೀ ಆಮದು ಮಾಡಿಕೊಳ್ಳದಂತೆ ಭಾರತವು ನಿಷೇಧ ಹೇರಿದೆ. ಈ ಕ್ರಮ ಕೂಡಲೇ ಜಾರಿಯಾಗಲಿದೆ. ಅಂತಾರಾಷ್ಟ್ರೀಯ ವ್ಯಾಪಾರದ ವೇಳೆ ನಿಷೇಧಗಳಿಂದ ತಪ್ಪಿಸಿಕೊಳ್ಳಲು ಒಂದು ದೇಶದ ಮಾಲನ್ನು ಬೇರೆ ದೇಶಕ್ಕೆ ಸಾಗಿಸಿ, ಆ ಮೂಲಕ ರಫ್ತು ಮಾಡುವ ಒಂದು ಕಳ್ಳತಂತ್ರ ಇದೆ. ಭಾರತ ಇಂಥದ್ದಕ್ಕೂ ಕಡಿವಾಣ ಹಾಕಿ ಪಾಕಿಸ್ತಾನದಿಂದ ಪರೋಕ್ಷ ವ್ಯಾಪಾರವನ್ನೂ ನಿಲ್ಲಿಸಿದೆ.

ಇದನ್ನೂ ಓದಿ: ಅವಧಿಗೂ ಮುನ್ನವೇ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ಐಎಂಎಫ್ ಮಂಡಳಿ ಅವಧಿ ಮೊಟಕುಗೊಳಿಸಿದ ಭಾರತ

ಭಾರತದ ಬಂದರುಗಳನ್ನು ಪಾಕಿಸ್ತಾನದ ಹಡಗುಗಳು ಬಳಸುವಂತಿಲ್ಲ

ಪಾಕಿಸ್ತಾನದ ಯಾವ ಹಡಗುಗಳು ಭಾರತದ ಯಾವುದೇ ಬಂದುಗಳನ್ನು ಪ್ರವೇಶಿಸದಂತೆ ನಿಷೇಧಿಸಲಾಗಿದೆ. ಹಾಗೆಯೇ, ಭಾರತದ ಯಾವ ಹಡಗು ಕೂಡ ಪಾಕಿಸ್ತಾನದ ಬಂದರುಗಳನ್ನು ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ.

ಭಾರತದ ಆಸ್ತಿಗಳು ಮತ್ತು ಸೌಕರ್ಯಗಳ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಪಾಕಿಸ್ತಾನದಿಂದ ಎಲ್ಲಾ ಅಂಚೆ ಸೇವೆ ನಿಲ್ಲಿಸಿದ ಭಾರತ

ಪಾಕಿಸ್ತಾನದಿಂದ ಭಾರತಕ್ಕೆ ಯಾವುದೇ ಪೋಸ್ಟ್ ಬರದಂತೆ ನಿರ್ಬಂಧಿಸಲಾಗಿದೆ. ಪಾಕಿಸ್ತಾನದೊಂದಿಗೆ ಭಾರತ ಪೂರ್ಣವಾಗಿ ಪೋಸ್ಟಲ್ ಸರ್ವಿಸ್ ಲಿಂಕ್ ಅನ್ನು ಕಡಿದುಕೊಂಡಿದೆ. ನೆಲದ ಮೂಲಕವಾಗಲಿ, ಆಕಾಶದಿಂದಲಾಗಲೀ ಪಾಕಿಸ್ತಾನದಿಂದ ಭಾರತಕ್ಕೆ ಯಾವುದೇ ಪತ್ರ ಇತ್ಯಾದಿ ಪಾರ್ಸಲ್ ಬರದಂತೆ, ಅಥವಾ ಇಲ್ಲಿಂದ ಪಾಕಿಸ್ತಾನಕ್ಕೆ ಅವು ಹೋಗದಂತೆ ಭಾರತ ನಿಷೇಧಿಸಿದೆ.

ಇದನ್ನೂ ಓದಿ:

ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್​ರರು ದಾಳಿ ನಡೆಸಿ 28 ಪ್ರವಾಸಿಗರನ್ನು ಬಲಿಪಡೆದ ಘಟನೆ ಬಳಿಕ ಭಾರತ ಕೈಗೊಳ್ಳುತ್ತಿರುವ ವಿವಿಧ ಕ್ರಮಗಳ ಮುಂದುವರಿದ ಭಾಗ ಇದು. ಪುಲ್ವಾಮ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನದ ಬಾಲಾಕೋಟ್​ನಲ್ಲಿ ಏರ್​​ಸ್ಟ್ರೈಕ್ ನಡೆಸಿತ್ತು. ಈ ಬಾರಿ ಇನ್ನೂ ದೊಡ್ಡ ಮಟ್ಟದಲ್ಲಿ ಪ್ರತೀಕಾರ ಕ್ರಮ ತೆಗೆದುಕೊಳ್ಳುವುದಾಗಿ ಭಾರತ ಹೇಳಿದೆ. ಆದರೆ, ಯಾವಾಗ ಮತ್ತು ಯಾವ ಕ್ರಮ ಎಂಬುದನ್ನು ಸೇನೆಯೇ ನಿರ್ಧರಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ