2047ಕ್ಕೆ ಅಭಿವೃದ್ಧಿ ಹೊಂದಿದ ದೇಶವಾಗಿ ಭಾರತವನ್ನು ಕಾಣುವುದೇ ಚಿಂತನ್ ರಿಸರ್ಚ್ ಫೌಂಡೇಶನ್‌ ಗುರಿ: ಪ್ರಣವ್ ಅದಾನಿ

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಕಾಣುವುದು, ಹವಾಮಾನ ಬದಲಾವಣೆ, ಇಂಧನ ಪರಿವರ್ತನೆ, ಪ್ರಾದೇಶಿಕ ರಾಜಕೀಯ ಮುಂತಾದ ವಿಷಯಗಳ ಮೇಲೆ ಚಿಂತನ್ ರಿಸರ್ಚ್ ಫೌಂಡೇಶನ್ ಗಮಹರಿಸಲಿದೆ ಎಂದು ಅದಾನಿ ಎಂಟರ್‌ಪ್ರೈಸಸ್‌ನ ನಿರ್ದೇಶಕ ಪ್ರಣವ್ ಅದಾನಿ ಹೇಳಿದ್ದಾರೆ. ಚಿಂತನ್ ರಿಸರ್ಚ್ ಫೌಂಡೇಶನ್‌ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಆರ್ಥಿಕತೆ ಮತ್ತು ವ್ಯಾಪಾರದ ಬೆಳವಣಿಗೆ ಬಗ್ಗೆ ಮಾತನಾಡಿದರು.

2047ಕ್ಕೆ ಅಭಿವೃದ್ಧಿ ಹೊಂದಿದ ದೇಶವಾಗಿ ಭಾರತವನ್ನು ಕಾಣುವುದೇ ಚಿಂತನ್ ರಿಸರ್ಚ್ ಫೌಂಡೇಶನ್‌ ಗುರಿ: ಪ್ರಣವ್ ಅದಾನಿ
ಚಿಂತನ್ ರಿಸರ್ಚ್ ಫೌಂಡೇಶನ್‌ ಸಂಸ್ಥಾಪನಾ ದಿನ ಕಾರ್ಯಕ್ರಮ

Updated on: Jun 21, 2025 | 11:19 AM

ನವದೆಹಲಿ, ಜೂನ್ 21: ಹವಾಮಾನ ಬದಲಾವಣೆ, ಇಂಧನ ಪರಿವರ್ತನೆ, ವಿಕಸನಗೊಳ್ಳುತ್ತಿರುವ ಜಾಗತಿಕ ಆರ್ಥಿಕತೆ, ನಿರ್ಣಾಯಕ ಪೂರೈಕೆ ಸರಪಳಿಗಳು, ಕ್ರಿಯಾತ್ಮಕ ವ್ಯಾಪಾರ ಸಂಬಂಧಗಳು ಮತ್ತು ಪ್ರಪಂಚದ ಭವಿಷ್ಯವನ್ನು ರೂಪಿಸುವ ಭೌಗೋಳಿಕ ರಾಜಕೀಯದಂತಹ ನಿರ್ಣಾಯಕ ವಿಷಯಗಳ ಮೇಲೆ ಚಿಂತನ್ ರಿಸರ್ಚ್ ಫೌಂಡೇಶನ್‌ (Chintan Research Foundation) ಗಮನಹರಿಸಲಿದೆ ಎಂದು ಅದಾನಿ ಎಂಟರ್‌ಪ್ರೈಸಸ್ ನಿರ್ದೇಶಕ ಪ್ರಣವ್ ಅದಾನಿ (Pranav Adani) ಹೇಳಿದರು. ಫೌಂಡೇಶನ್​​ನ ಸಂಸ್ಥಾಪನಾ ದಿನದಂದು ಶುಕ್ರವಾರ ಮಾತನಾಡಿದ ಅವರು, 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಹಾಯ ಮಾಡುವ ರೀತಿಯಲ್ಲಿ ಚಿಂತನ್ ರಿಸರ್ಚ್ ಫೌಂಡೇಶನ್‌ ಕೆಲಸ ಮಾಡಬೇಕು ಎಂದು ಹೇಳಿದರು.

ಚಿಂತನ್ ರಿಸರ್ಚ್ ಫೌಂಡೇಶನ್‌ ಕಾರ್ಯ ಶೈಲಿಯ ಬಗ್ಗೆ ವಿವರಗಳನ್ನು ನೀಡಿದ ಪ್ರಣವ್ ಅದಾನಿ, ಇದು ಆರ್ಥಿಕತೆ ಮತ್ತು ವ್ಯಾಪಾರ, ಭಾರತದಲ್ಲಿನ ಭೌಗೋಳಿಕ ರಾಜಕೀಯ ಸಮಸ್ಯೆಗಳು ಮತ್ತು ಇಂಧನ ವಹಿವಾಟು ಎಂಬ ಮೂರು ನಿರ್ದಿಷ್ಟ ವಲಯಗಳ ಮೇಲೆ ಕೇಂದ್ರೀಕರಿಸಲು ರಚಿಸಲಾದ ಚಿಂತಕರ ಚಾವಡಿಯಾಗಿದೆ ಎಂದರು.

ಇದನ್ನೂ ಓದಿ
ಎಸ್​​ಎಸ್​​ಎಲ್​​ವಿ ರಾಕೆಟ್ ಗುತ್ತಿಗೆ ಗೆದ್ದ ಎಚ್​ಎಎಲ್
ವಿಮಾದಾರ, ನಾಮಿನಿ ಇಬ್ಬರೂ ಮೃತಪಟ್ಟಾಗ ಏನಾಗುತ್ತೆ ವಿಮಾ ಹಣ?
ವಿದ್ಯುತ್ ಉತ್ಪಾದನೆ ಹೆಚ್ಚಳದಲ್ಲಿ ಭಾರತದ ವೇಗದ ಬೆಳವಣಿಗೆ
ಐಐಟಿ ಡೆಲ್ಲಿ ಭಾರತದ ನಂ. 1; ಎಂಐಟಿ ವಿಶ್ವದಲ್ಲೇ ಬೆಸ್ಟ್

ಚಿಂತನ್ ರಿಸರ್ಚ್ ಫೌಂಡೇಶನ್‌ ಬಹಳಷ್ಟು ಜವಾಬ್ದಾರಿಗಳನ್ನು ಹೊಂದಿದೆ ಮತ್ತು ಹವಾಮಾನ ಬದಲಾವಣೆ, ವ್ಯಾಪಾರ ಮತ್ತು ಭೌಗೋಳಿಕ ರಾಜಕೀಯ ಎಂಬ ಮೂರು ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂದು ಪ್ರಣವ್ ಹೇಳಿದರು.

ಬದಲಾಗುತ್ತಿರುವ ವಿಶ್ವ ಕ್ರಮಾಂಕದಲ್ಲಿ ಭಾರತದ ಪಾತ್ರ

ಭಾರತವು ಭವಿಷ್ಯವನ್ನು, ವಿಶೇಷವಾಗಿ ಜಾಗತಿಕ ದಕ್ಷಿಣದ ಭವಿಷ್ಯವನ್ನು ರೂಪಿಸುವಲ್ಲಿ ವಹಿಸಬಹುದಾದ ಪಾತ್ರವನ್ನು ಚಿಂತನ್ ರಿಸರ್ಚ್ ಫೌಂಡೇಶನ್‌ ಪುನರ್ ಕಲ್ಪಿಸಿಕೊಳ್ಳಬೇಕು. ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳು ಕಲ್ಪಿಸಿಕೊಂಡಂತೆ, 2047 ರ ವೇಳೆಗೆ ಭಾರತವು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ವಿಕಸಿತ ಭಾರತ ಆಗಲು ಈ ಪ್ರಮಾಣದ ಪರಿವರ್ತನೆಯ ಅಗತ್ಯವಿದೆ ಎಂದು ಅವರು ಹೇಳಿದರು.

ಪ್ರಣವ್ ಅದಾನಿ ಮಾತಿನ ವಿಡಿಯೋ


ಅದಾನಿ ಗ್ರೂಪ್ ಮೂರು ದಶಕಗಳಿಂದ ನಮ್ಮ ದೇಶದ ಅತ್ಯಂತ ಕಠಿಣ ಮತ್ತು ನಿರ್ಣಾಯಕ ಮೂಲಸೌಕರ್ಯ ವಲಯಗಳಲ್ಲಿ ಕಾರ್ಯನರ್ವಹಿಸುವ ಮೂಲಕ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ ಹಾಗೂ ಮುನ್ನಡೆಸುತ್ತಿದೆ. ಚಿಂತನ್ ರಿಸರ್ಚ್ ಫೌಂಡೇಶನ್‌ ಕೂಡ ಅದೇ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ ಎಂದು ಅವರು ಹೇಳಿದರು.

ಪ್ರಣವ್ ಅದಾನಿ

ಭಾರತ ಎಂದರೆ ಕೇವಲ ದೆಹಲಿ ಅಥವಾ ಮೆಟ್ರೋ ನಗರಗಳಲ್ಲ. ಬದಲಾಗಿ ಅದರ ಹೃದಯಭಾಗದಲ್ಲಿ ವಾಸಿಸುತ್ತದೆ ಎಂದು ಅವರು ಪ್ರತಿಪಾದಿಸಿದರು. ಫೌಂಡೇಶನ್ ಗಮನವು ದೆಹಲಿ ಮತ್ತು ಇತರ ಮಹಾನಗರಗಳಿಗೆ, ರಾಂಚಿ, ರಾಯ್‌ಪುರ, ಭುವನೇಶ್ವರ ಅಥವಾ ಈಶಾನ್ಯದಂತಹ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ವಿದ್ಯುತ್ ಉತ್ಪಾದನೆ ಹೆಚ್ಚಳ: ಚೀನಾ, ಅಮೆರಿಕ ನಂತರ ಭಾರತವೇ ಮುಂದು

ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಹೀಗಾಗಿ, ಅದಾನಿ ಗುಂಪಿನ ಯೋಜನೆಗಳ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಕಂಪನಿಯು ಕಾಳಜಿ ವಹಿಸುತ್ತದೆ ಎಂದು ಪ್ರಣವ್ ಅದಾನಿ ಭರವಸೆ ನೀಡಿದ್ದಾರೆ. ಆದಾಗ್ಯೂ, ಪ್ರಸ್ತುತ ವಿದೇಶದಲ್ಲಿರುವ ನಮ್ಮ ಎಲ್ಲಾ ಆಸ್ತಿಗಳು ಸುರಕ್ಷಿತವಾಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚಿಂತನ್ ರಿಸರ್ಚ್ ಫೌಂಡೇಶನ್ ಮತ್ತು ಭಾರತದ ಬೆಳವಣಿಗೆ ಕುರಿತು ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಮಾತನಾಡಿ, ಫೌಂಡೇಶನ್‌ನ ಮೊದಲ ಸಂಸ್ಥಾಪನಾ ದಿನದ ಭಾಷಣ ಮಾಡಲು ಸಂತೋಷಪಡುತ್ತೇನೆ ಎಂದರು. ಅವರು, ಭಾರತದ ಚಿಂತಕರ ಚಾವಡಿಗಳು ಚಿಂತನೆಯಲ್ಲಿ ನಿರ್ಭೀತರಾಗಿ ಮತ್ತು ಕಠಿಣವಾಗಿರಬೇಕು ಎಂದು ಕರೆ ನೀಡಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ