AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Passport: ಭಾರತದ ಪಾಸ್​ಪೋರ್ಟ್​ಗೆ ಇನ್ನಷ್ಟು ಬಲ; ವೀಸಾ ಇಲ್ಲದೇ 57 ದೇಶಗಳಿಗೆ ಹೋಗಲು ಅವಕಾಶ; ಇಲ್ಲಿದೆ ಪಟ್ಟಿ

Henley Passport Index 2023: ಹೆನ್ಲೀ ಪಾಸ್​ಪೋರ್ಟ್ ಇಂಡೆಕ್ಸ್​ನಲ್ಲಿ ಭಾರತ 85ರಿಂದ 80ನೇ ಸ್ಥಾನಕ್ಕೇರಿದೆ. ಭಾರತದ ಪಾಸ್​ಪೋರ್ಟ್ ಹೊಂದಿರುವವರು 57 ದೇಶಗಳಿಗೆ ವೀಸಾರಹಿತವಾಗಿ ಹೋಗಬಹುದು.

Indian Passport: ಭಾರತದ ಪಾಸ್​ಪೋರ್ಟ್​ಗೆ ಇನ್ನಷ್ಟು ಬಲ; ವೀಸಾ ಇಲ್ಲದೇ 57 ದೇಶಗಳಿಗೆ ಹೋಗಲು ಅವಕಾಶ; ಇಲ್ಲಿದೆ ಪಟ್ಟಿ
ಭಾರತದ ಪಾಸ್​ಪೋರ್ಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 19, 2023 | 4:47 PM

Share

ನವದೆಹಲಿ, ಜುಲೈ 19: ಒಂದು ದೇಶದ ನಾಗರಿಕರು ಎಷ್ಟು ಮುಕ್ತವಾಗಿ ಬೇರೆ ಬೇರೆ ದೇಶಗಳಿಗೆ ಪ್ರಯಾಣಿಸಬಹುದು ಎಂಬುದಕ್ಕೆ ದ್ಯೋತಕವಾಗಿ ಅದರ ಪಾಸ್​ಪೋರ್ಟ್ ಶ್ರೇಯಾಂಕ (Passport Ranking) ಇರುತ್ತದೆ. ಈಗ ಭಾರತೀಯರು ಮುಂಚಿತವಾಗಿ ವೀಸಾ ಪಡೆಯುವ ಅಗತ್ಯ ಇಲ್ಲದೇ 57 ದೇಶಗಳಿಗೆ ಪ್ರಯಾಣಿಸುವ ಅವಕಾಶ ಇದೆ. ಇದರೊಂದಿಗೆ ವಿಶ್ವದ ಪ್ರಮುಖ ಪಾಸ್​ಪೋರ್ಟ್​ಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಮೇಲೆರಿದೆ. ಹೆನ್ಲೀ ಪಾಸ್​ಪೋರ್ಟ್ ಇಂಡೆಕ್ಸ್ 2023 (Henley Passport Index 2023) ಪಟ್ಟಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ ಪಾಸ್​ಪೋರ್ಟ್ ಶ್ರೇಯಾಂಕ 5 ಸ್ಥಾನ ಮೇಲೇರಿ 80ಕ್ಕೆ ಬಂದಿದೆ.

ಪಾಸ್​ಪೋರ್ಟ್ ರ್ಯಾಂಕಿಂಗ್ ವಿಚಾರದಲ್ಲಿ ವಿಶ್ವದಲ್ಲಿ ಮೊದಲ ಸ್ಥಾನ ಇರುವುದು ಸಿಂಗಾಪುರದ್ದು. ಈ ದೇಶದ ಪಾಸ್​ಪೋರ್ಟ್ ಹೊಂದಿರುವ ನಾಗರಿಕರಿಗೆ 192 ದೇಶಗಳು ಅನಿರ್ಬಂಧಿತವಾಗಿ ಸ್ವಾಗತಿಸುತ್ತವೆ.

ಅಫ್ಘಾನಿಸ್ತಾನದ ಪಾಸ್​ಪೋರ್ಟ್ ಸದ್ಯ ಅತ್ಯಂತ ದುರ್ಬಲ ಎನಿಸಿದ್ದು, ಇಲ್ಲಿನವರಿಗೆ ಮುಕ್ತ ಸ್ವಾಗತ ಕೊಡುವ ದೇಶಗಳ ಸಂಖ್ಯೆ 27 ಮಾತ್ರ.

ಇದನ್ನೂ ಓದಿChina: ಚೀನಾದ ಒಂದು ಕಾನೂನಿಂದ ರಿಯಲ್ ಎಸ್ಟೇಟ್ ಅಲ್ಲೋಲಕಲ್ಲೋಲ; ಎವರ್​ಗ್ರ್ಯಾಂಡ್​ಗೆ 81 ಬಿಲಿಯನ್ ಡಾಲರ್ ನಷ್ಟ

ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಎ) ಪ್ರಕಟಿಸುವ ದತ್ತಾಂಶದ ನೆರವಿನಿಂದ ಹೆನ್ಲೀ ಪಾಸ್​ಪೋರ್ಟ್ ಇಂಡೆಕ್ಸ್ ಪಟ್ಟಿ ಪ್ರಕಟವಾಗುತ್ತದೆ. ಭಾರತದ ಪಾಸ್​ಪೋರ್ಟ್ ಹೊಂದಿರುವವರು 57 ದೇಶಗಳಿಗೆ ವೀಸಾ ಇಲ್ಲದೇ ಅಥವಾ ಮುಂಚಿತವಾಗಿ ವೀಸಾ ಮಾಡುವ ಅವಶ್ಯಕತೆ ಇಲ್ಲದೇ ಪ್ರಯಾಣಿಸಬಹುದು. ಈ ದೇಶಗಳ ಪಟ್ಟಿ ಇಲ್ಲಿದೆ

  1. ಕುಕ್ ಐಲೆಂಡ್ಸ್
  2. ಫಿಜಿ
  3. ಮಾರ್ಷಲ್ ಐಲೆಂಡ್ಸ್
  4. ಮೈಕ್ರೋನೇಷ್ಯಾ
  5. ನಿಯೂ
  6. ಪಲೋ ಐಲೆಂಡ್ಸ್
  7. ಸಮೋವ
  8. ತುವಾಲು
  9. ವನಾಟು
  10. ಇರಾನ್
  11. ಜೋರ್ಡಾನ್
  12. ಓಮನ್
  13. ಕತಾರ್
  14. ಬರ್ಬಡಾಸ್
  15. ಬ್ರಿಟಿಷ್ ವರ್ಜಿನ್ ಐಲೆಂಡ್ಸ್
  16. ಡಾಮಿನಿಕಾ
  17. ಗ್ರೆನಡಾ
  18. ಹೈಟಿ
  19. ಜಮೈಕಾ
  20. ಮಾನ್ಸ್​ಟೆರಾಟ್
  21. ಸೇಂಟ್ ಕಿಟ್ಸ್ ಅಂಡ್ ನೆವಿಸ್
  22. ಸೇಂಟ್ ಲೂಷಿಯಾ
  23. ಸೇಂಟ್ ವಿನ್ಸೆಂಟ್ ಅಂಡ್ ಗ್ರಿನಾಡೈನ್ಸ್
  24. ಟ್ರಿನಿಡಾಡ್ ಅಂಡ್ ಟೊಬಾಗೋ
  25. ಭೂತಾನ್
  26. ಕಾಂಬೋಡಿಯಾ
  27. ಇಂಡೋನೇಷ್ಯಾ
  28. ಕಜಕಸ್ತಾನ
  29. ಲಾವೋಸ್
  30. ಮಕಾವ್
  31. ಮಾಲ್ಡೀವ್ಸ್
  32. ಮಯನ್ಮಾರ್
  33. ನೇಪಾಳ
  34. ಶ್ರೀಲಂಕಾ
  35. ಥಾಯ್ಲೆಂಡ್
  36. ತೈಮರ್ ಲೆಸ್ಟೆ
  37. ಬೊಲಿವಿಯಾ
  38. ಎಲ್ ಸಾಲ್ವಡಾರ್
  39. ಬುರುಂಡಿ
  40. ಕೇಪ್ ವೆರ್ಡೆ ಐಲೆಂಡ್ಸ್
  41. ಕೊಮೊರೋ ಐಲೆಂಡ್ಸ್
  42. ಡಿಜೆಬೋಟಿ
  43. ಗ್ಯಾಬೋನ್
  44. ಗಿನಿಯಾ ಬಿಸಾವು
  45. ಮಡಗಾಸ್ಕರ್
  46. ಮಾರಿಷಾನಿಯಾ
  47. ಮಾರಿಷಸ್
  48. ಮೊಜಾಂಬಿಕ್
  49. ರುವಾಂಡ
  50. ಸೆನೆಗಲ್
  51. ಸೆಯ್​ಷೆಲೆಸ್
  52. ಸಿಯೆರಾ ಲಿಯೊನೆ
  53. ಸೊಮಾಲಿಯಾ
  54. ತಾಂಜಾನಿಯಾ
  55. ಟೋಗೋ
  56. ಟುನಿಶಿಯಾ
  57. ಜಿಂಬಾಬ್ವೆ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ