AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಮಂತರ ಸಂಪತ್ತು ಮುಚ್ಚಿಟ್ಟಿದ್ದೇ ಹೆಚ್ಚು; ಬೆಚ್ಚಿಬೀಳಿಸುತ್ತದೆ ಆರ್​​ಬಿಐ ಎಂಪಿಸಿ ಸದಸ್ಯರ ವರದಿ

Richer the people get, lesser their reported income: ನೂರು ಜನರಲ್ಲಿ ಅತೀ ಶ್ರೀಮಂತ ಐವರು ಮಂದಿ ತಮ್ಮ ಶೇ. 96ರಷ್ಟು ಸಂಪತ್ತನ್ನು ಮರೆ ಮಾಚುತ್ತಾರಂತೆ. ಅತಿ ಕಡಿಮೆ ಆದಾಯ ಇರುವ ಕೆಳಗಿನ 10 ಜನರು ಹೆಚ್ಚೂಕಡಿಮೆ ಎರಡು ಪಟ್ಟು ಹೆಚ್ಚು ಸಂಪತ್ತನ್ನು ತೋರ್ಪಡಿಸುತ್ತಾರಂತೆ. ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್​​ನ ನಿರ್ದೇಶಕರಾದ ರಾಮ್ ಸಿಂಗ್ ಪ್ರಕಟಿಸಿದ ವರದಿಯೊಂದರಲ್ಲಿ ಈ ಕೆಲ ಅಚ್ಚರಿ ಸಂಗತಿಗಳಿವೆ.

ಶ್ರೀಮಂತರ ಸಂಪತ್ತು ಮುಚ್ಚಿಟ್ಟಿದ್ದೇ ಹೆಚ್ಚು; ಬೆಚ್ಚಿಬೀಳಿಸುತ್ತದೆ ಆರ್​​ಬಿಐ ಎಂಪಿಸಿ ಸದಸ್ಯರ ವರದಿ
ಶ್ರೀಮಂತರು ಮತ್ತು ಬಡವರು....
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 15, 2025 | 12:17 PM

Share

ನವದೆಹಲಿ, ಏಪ್ರಿಲ್ 15: ಶ್ರೀಮಂತರ ಶ್ರೀಮಂತಿಕೆ ಹೆಚ್ಚಿದಷ್ಟೂ, ಅವರು ತಮ್ಮ ಸಂಪತ್ತನ್ನು ಮುಚ್ಚಿಡುವ (Reported income) ಪ್ರವೃತ್ತಿಯೂ ಹೆಚ್ಚುತ್ತದೆ. ತೆರಿಗೆ ಬಾಧ್ಯತೆ ಕಡಿಮೆ ಮಾಡಲು ಶ್ರೀಮಂತರು ಈ ತಂತ್ರ ಅನುಸರಿಸುತ್ತಾರೆ. ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿಯ ಆರು ಸದಸ್ಯರಲ್ಲಿ ಒಬ್ಬರಾದ ರಾಮ್ ಸಿಂಗ್ (Ram Singh) ಅವರು ಸಂಶೋಧನಾ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದ ಶೇ. 5 ಅತಿ ಶ್ರೀಮಂತರು ತಮ್ಮ ಆದಾಯದಲ್ಲಿ ಶೇ. 4ರಷ್ಟನ್ನು ಮಾತ್ರವೇ ಬಹಿರಂಗಪಡಿಸುತ್ತಾರೆ ಎನ್ನುವ ಸಂಗತಿಯನ್ನು ತಿಳಿಸಿದ್ದಾರೆ. ಶ್ರೀಮಂತಿಕೆ ಹೆಚ್ಚಾದಂತೆ, ಸಂಪತ್ತು ಮರೆಮಾಚುವುದೂ ಹೆಚ್ಚುತ್ತದೆ.

ಶೇ. 0.1ರಷ್ಟು ಅತಿಶ್ರೀಮಂತರು ಬಹಿರಂಗಪಡಿಸುವ ಆದಾಯ ಶೇ. 2 ಮಾತ್ರವೇ. ಇನ್ನೂ ಹೆಚ್ಚಿನ ಶ್ರೀಮಂತರು ಶೇ. 0.5ರಷ್ಟು ಆಸ್ತಿಯನ್ನು ತೋರ್ಪಡಿಸುತ್ತಾರೆ. ಅಂದರೆ ಅವರ ಶೇ. 99.5ರಷ್ಟು ಸಂಪತ್ತು ಬೆಳಕಿಗೆ ಬರುವುದೇ ಇಲ್ಲ. ಅವರ ನೂರು ರುಪಾಯಿಯಲ್ಲಿ 50 ಪೈಸೆ ಮಾತ್ರವೇ ತೆರಿಗೆ ಲೆಕ್ಕಕ್ಕೆ ಹೋಗುತ್ತದೆ. ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿರುವ ಅಗ್ರ 10 ಭಾರತೀಯ ಕುಟುಂಬಗಳು 0.6 ಪ್ರತಿಶತದಷ್ಟು ಸಂಪತ್ತನ್ನು ಮಾತ್ರವೇ ತೋರಿಸಿದ್ದಾರೆ.

ಇದನ್ನೂ ಓದಿ: ಒಮ್ಮೆಯೂ ಸಾಲ ಮಾಡದವನಿಗೆ ಸಿಗಲ್ವಾ ಸಾಲ? ಇರಲ್ವಾ ಕ್ರೆಡಿಟ್ ಸ್ಕೋರ್? ಇಲ್ಲಿದೆ ಉತ್ತರ

ಇದನ್ನೂ ಓದಿ
Image
ಷೇರುಪೇಟೆಯ ಇವತ್ತಿನ ಉತ್ಸಾಹಕ್ಕೆ ಏನು ಕಾರಣ?
Image
ಆಯುಷ್ಮಾನ್ ಭಾರತ್ ಸ್ಕೀಮ್: ಈ ಚಿಕಿತ್ಸೆಗಳಿಗೆ ಸಿಗಲ್ಲ ವಿಮೆ
Image
ಕ್ರೆಡಿಟ್ ಸ್ಕೋರ್ ಇಲ್ಲದವರಿಗೆ ಸಿಗಲ್ವಾ ಸಾಲ?
Image
ಪಿಎನ್​​ಬಿಗೆ ಚೋಕ್ಸಿ ಟೊಪ್ಪಿ ಹಾಕಿದ ಕಥೆ

ಇದಕ್ಕೆ ತದ್ವಿರುದ್ಧದ ವರ್ತನೆ ಕೆಳಗಿನ ಸ್ತರದ ಜನರದ್ದು. ಅತ್ಯಂತ ಕಡಿಮೆ ಆದಾಯ ಹೊಂದಿರುವ ಶೇ. 10ರಷ್ಟು ಕುಟುಂಬಗಳು ತಮ್ಮ ಆದಾಯಕ್ಕಿಂತ ಶೇ. 188ರಷ್ಟು ಹೆಚ್ಚಿನ ಸಂಪತ್ತನ್ನು ತೋರಿಸುತ್ತವೆ.

ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್​ನ ನಿರ್ದೇಶಕರಾಗಿರುವ ರಾಮ್ ಸಿಂಗ್ ಅವರು ಬರೆದಿರುವ ‘ಶ್ರೀಮಂತರು ತಮ್ಮ ಆದಾಯ ಮರೆಮಾಚುತ್ತಾರಾ?’ ಎನ್ನುವ ಈ ಪೇಪರ್​​​ನಲ್ಲಿ ಇನ್ನೂ ಕೆಲ ಅಚ್ಚರಿ ಮತ್ತು ಆಘಾತಕಾರಿ ಸಂಗತಿಗಳಿವೆ. ಚುನಾವಣೆ ಸ್ಪರ್ಧೆಗೆ ನಾಮಪತ್ರದ ಜೊತೆ ಸಲ್ಲಿಸುವ ಅಫಿಡವಿಟ್​ಗಳು, ಆದಾಯ ತೆರಿಗೆ ಇಲಾಖೆ ಪ್ರಕಟಿಸಿದ ಅಂಕಿ ಅಂಶಗಳು, ಫೋರ್ಬ್ಸ್ ಶ್ರೀಮಂತರ ಪಟ್ಟಿ, ಇವುಗಳ ಆಧಾರದ ಮೇಲೆ ರಾಮ್ ಸಿಂಗ್ ಅವರು ಈ ವರದಿಯನ್ನು ಬರೆದಿದ್ದಾರೆ.

ಆರ್ಥಿಕ ಅಸಮಾನತೆ ಇನ್ನೂ ಹೆಚ್ಚಿದೆಯಾ?

ಶ್ರೀಮಂತರು ತೆರಿಗೆಯಿಂದ ತಪ್ಪಿಸಿಕೊಳ್ಳಲು ಆಸ್ತಿಪಾಸ್ತಿ ವಿವರನ್ನು ಸಹಜವಾಗಿಯೇ ಮುಚ್ಚಿಡಲು ಯತ್ನಿಸುತ್ತಾರೆ. ಹೀಗೆ ಮುಚ್ಚಿಟ್ಟರೂ ಭಾರತದಲ್ಲಿ ಆರ್ಥಿಕ ಅಸಮಾನತೆ ದಟ್ಟವಾಗಿ ಕಾಣುತ್ತದೆ. ದೇಶದ ಶೇ. 60ರಷ್ಟು ಸಂಪತ್ತು ಐದು ಪ್ರತಿಶತ ಜನರ ಕೈಯಲ್ಲಿದೆ. ಕೆಳಗಿನ ಶೇ. 50ರಷ್ಟು ಜನರ ಬಳಿ ಇರುವ ಆಸ್ತಿ ಶೇ. 3 ಮಾತ್ರವೇ ಎಂದು ಆಕ್ಸ್​​ಫ್ಯಾಮ್ ವರದಿ ಇತ್ತೀಚೆಗೆ ತಿಳಿಸಿತ್ತು.

ಇದನ್ನೂ ಓದಿ: ಮೆಹುಲ್ ಚೋಕ್ಸಿ, ನೀರವ್ ಮೋದಿ 13,000 ಕೋಟಿ ರೂ ಪಂಗನಾಮ ಹಾಕಿ ದೇಶ ಬಿಟ್ಟುಹೋದ ಕಥೆ

ಆದರೆ, ಶ್ರೀಮಂತರು ಮುಚ್ಚಿಟ್ಟ ಆಸ್ತಿಯನ್ನು ಪರಿಗಣಿಸಿದರೆ ಈ ಅಸಮಾನತೆಯ ಅಂತರ ಇನ್ನೂ ಹೆಚ್ಚಾಗಬಹುದು. ದೇಶದ ಶೇ. 80ಕ್ಕಿಂತಲೂ ಹೆಚ್ಚು ಆಸ್ತಿ ಕೇವಲ ಐದು ಪ್ರತಿಶತ ಜನರ ಬಳಿ ನೆಲಸಿದ್ದರೂ ಇರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:10 pm, Tue, 15 April 25

Follow Us
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ