Sign In

By signing in or creating an account, you agree with Associated Broadcasting Company's Terms & Conditions and Privacy Policy.

Digital Payments: ಡಿಜಿಟಲ್ ಪಾವತಿ ಜನಪ್ರಿಯತೆಗೆ ಆಸಕ್ತಿಕರವಾದ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಭಾರತದಲ್ಲಿ ಡಿಜಿಟಲ್ ಪಾವತಿಯ ಜನಪ್ರಿಯತೆಯ ಬಗ್ಗೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ವಿಡಿಯೋವೊಂದನ್ನು ಟ್ವಿಟರ್ ಮೂಲಕ ಹಚ್ಚಿಕೊಂಡಿದ್ದಾರೆ.

Digital Payments: ಡಿಜಿಟಲ್ ಪಾವತಿ ಜನಪ್ರಿಯತೆಗೆ ಆಸಕ್ತಿಕರವಾದ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ
ಆನಂದ್ ಮಹೀಂದ್ರಾ (ಸಂಗ್ರಹ ಚಿತ್ರ)
Follow us
Srinivas Mata
|

Updated on:Nov 06, 2021 | 2:49 PM

ನವೆಂಬರ್ 8, 2021ಕ್ಕೆ ನೋಟು ನಿಷೇಧಕ್ಕೆ 5 ವರ್ಷ ಪೂರ್ತಿ ಆಗುತ್ತದೆ. ಜನರು ಡಿಜಿಟೈಸೇಷನ್ ಕಡೆಗೆ ಸಾಗಬೇಕು ಎಂಬ ಕಾರಣಕ್ಕೂ ಈ ನಿರ್ಧಾರ ಮಾಡಲಾಗಿತ್ತು. ಭಾರತದಲ್ಲಿ ಡಿಜಿಟೈಸೇಷನ್ ಸ್ಥಿತಿ ಹೇಗಿದೆ. ಅದರ ಬಳಕೆಯನ್ನು ಜನರು ಹೇಗೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನವೆಂಬರ್​ 6ನೇ ತಾರೀಕಿನಂದು ಈ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ವ್ಯಕ್ತಿಯೊಬ್ಬರು ಯುಪಿಐ ಬಳಸಿ “ಕೋಲೆ ಬಸವ”ದೊಂದಿಗೆ ಬರುವ ವ್ಯಕ್ತಿಗೆ ಹಣ ನೀಡಿದ್ದಾರೆ. “ದೊಡ್ಡ ಮಟ್ಟದಲ್ಲಿ ಡಿಜಿಟಲ್ ಪಾವತಿಗೆ ಭಾರತದಲ್ಲಿ ಬದಲಾವಣೆ ಆಗಿದ್ದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷ್ಯ ಬೇಕೆ” ಎಂದು ಮಹೀಂದ್ರಾ ಸಮೂಹದ ಅಧ್ಯಕ್ಷ ಟ್ವೀಟ್ ಮಾಡಿದ್ದಾರೆ. ಕೋಲೆ ಬಸವದ ಹಣೆ ಮೇಲೆ ನೇತು ಹಾಕಿರುವ ಯುಪಿಐ ಕೋಡ್​ ಮೇಲೆ ವ್ಯಕ್ತಿಯೊಬ್ಬರು ಸ್ಕ್ಯಾನ್​ ಮಾಡಿ, ಹಣ ಪಾವತಿಸುತ್ತಿದ್ದಾರೆ. ರಾಸುವಿನ ಜತೆಗಿರುವ ವ್ಯಕ್ತಿ ನಾದಸ್ವರವನ್ನು ನುಡಿಸುತ್ತಿದ್ದಾರೆ ಎಂಬುದು ವಿಡಿಯೋದಲ್ಲಿ ಕಂಡುಬರುತ್ತದೆ.

ಇಂಟರ್​ನೆಟ್ ಮತ್ತು ಸ್ಮಾರ್ಟ್​ಫೋನ್ ಬಳಕೆ ಹೆಚ್ಚಾಗುತ್ತಿದ್ದಂತೆ ದೇಶದಾದ್ಯಂತ ಡಿಜಿಟಲ್ ಪಾವತಿ ಜಾಸ್ತಿ ಆಗುತ್ತಿದೆ. ಹಬ್ಬದ ಋತುವಿನ ಪ್ರಯುಕ್ತ ಖರೀದಿ ಪ್ರಮಾಣವು ಜಾಸ್ತಿ ಆಗುವುದರೊಂದಿಗೆ 2021ರ ಅಕ್ಟೋಬರ್​ನಲ್ಲಿ ಡಿಜಿಟಲ್ ಪಾವತಿಯು ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ಮುಟ್ಟಿದೆ. ಅಂದ ಹಾಗೆ ಈ ಹಬ್ಬದ ಋತುವಿನಲ್ಲಿ ಇ-ಕಾಮರ್ಸ್ ದೈತ್ಯ ಕಂಪೆನಿಗಳು ವಾರ್ಷಿಕ ಮಾರಾಟವನ್ನು ಆಯೋಜಿಸಿದವು. ಅಕ್ಟೋಬರ್​ಗೆ ಯುಪಿಐ ವಹಿವಾಟುಗಳು ಮೊತ್ತವು 10,000 ಕೋಟಿ ಅಮೆರಿಕನ್ ಡಾಲರ್ ದಾಟಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ 7.71 ಲಕ್ಷ ಕೋಟಿ ಆಗಿದೆ. ಮತ್ತು ಒಟ್ಟು 421 ಕೋಟಿ ವಹಿವಾಟುಗಳು ಅಕ್ಟೋಬರ್​ನಲ್ಲಿ ಅನುಷ್ಠಾನ ಆಗಿವೆ. ಈ ಎಲ್ಲವೂ ಸಾರ್ವಕಾಲಿಕ ದಾಖಲೆ ಆಗಿದೆ.

2016ರಲ್ಲಿ ಯುಪಿಐ ಆರಂಭಿಸಿದ ಮೇಲೆ ತಿಂಗಳ ವಹಿವಾಟು 3.86 ಲಕ್ಷ ಕೋಟಿ ದಾಟಲು ನಾಲ್ಕು ವರ್ಷ, 2020ರ ಅಕ್ಟೋಬರ್ ಆಗಬೇಕಾಯಿತು. ಆ ಮೊತ್ತವು ಒಂದು ವರ್ಷದಲ್ಲಿ, ಅಂದರೆ ಈ ವರ್ಷದ ಅಕ್ಟೋಬರ್​ನಲ್ಲಿ ಹತ್ತಿರ ಹತ್ತಿರ ದುಪ್ಪಟ್ಟು ಆಗಿ 7 ಲಕ್ಷ ಕೋಟಿ ರೂಪಾಯಿಯನ್ನು ದಾಟಿದೆ.

ಇದನ್ನೂ ಓದಿ: Viral Video: ಚುರುಕಾದ ಶ್ವಾನದ ವಿಡಿಯೋ ಹಂಚಿಕೊಂಡು ಬದುಕಿನ ಪಾಠ ಹೇಳಿದ ಆನಂದ್ ಮಹೀಂದ್ರಾ; ವಿಡಿಯೋ ನೋಡಿ

Published On - 2:48 pm, Sat, 6 November 21

ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ