AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karvy Stock Broking: ಕಾರ್ವಿ ಸ್ಟಾಕ್​ ಬ್ರೋಕಿಂಗ್ ಅಧ್ಯಕ್ಷ ಪಾರ್ಥಸಾರಥಿಯನ್ನು ಬಂಧಿಸಿದ ಹೈದರಾಬಾದ್ ಪೊಲೀಸರು

ಕಾರ್ವಿ ಸ್ಟಾಕ್ ಬ್ರೋಕಿಂಗ್ ಅಧ್ಯಕ್ಷ ಸಿ. ಪಾರ್ಥಸಾರಥಿ ಅವರನ್ನು ಹೈದರಾಬಾದ್ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಇಂಡಸ್​​ಇಂಡ್​ ಬ್ಯಾಂಕ್​ ನೀಡಿದ ದೂರಿನ ಮೇಲೆ ಈ ಕ್ರಮ ಕೈಗೊಳ್ಳಲಾಯಿತು.

Karvy Stock Broking: ಕಾರ್ವಿ ಸ್ಟಾಕ್​ ಬ್ರೋಕಿಂಗ್ ಅಧ್ಯಕ್ಷ ಪಾರ್ಥಸಾರಥಿಯನ್ನು ಬಂಧಿಸಿದ ಹೈದರಾಬಾದ್ ಪೊಲೀಸರು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 20, 2021 | 1:29 PM

Share

ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ (KSBL) ಅಧ್ಯಕ್ಷ ಸಿ.ಪಾರ್ಥಸಾರಥಿ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಇಂಡಸ್​ಇಂಡ್ ಬ್ಯಾಂಕ್​ ದಾಖಲಿಸಿದ ದೂರನ್ನು ಆಧರಿಸಿ, ಈ ಕ್ರಮವನ್ನು ಕೈಗೊಳ್ಳಲಾಗಿದೆ. ಇಂಡಸ್​ಇಂಡ್ ಬ್ಯಾಂಕ್ ಆರೋಪಿಸಿರುವಂತೆ, ಕಾರ್ವಿ ಸ್ಟಾಕ್​ ಬ್ರೋಕಿಂಗ್ ಲಿಮಿಟೆಡ್​ನಿಂದ ಸೆಕ್ಯೂರಿಟೀಸ್​ಗಳನ್ನು ಅಡಮಾನ ಮಾಡಿ ಹಾಗೂ ಪಾರ್ಥಸಾರಥಿ ಅವರ ವಯಕ್ತಿಕ ಖಾತ್ರಿ ಮೇಲೆ 137 ಕೋಟಿ ರೂಪಾಯಿ ಸಾಲ ವ್ಯವಸ್ಥೆ ಮಾಡಿಕೊಡಲಾಗಿದೆ. ಆದರೆ ತನ್ನ ಗ್ರಾಹಕರಿಗೆ ಸೇರಿದ ಸೆಕ್ಯೂರಿಟೀಸ್ ಎಂಬುದನ್ನು ಮರೆಮಾಚಿ, ಬ್ರೋಕರೇಜ್​ ಸಂಸ್ಥೆಯು ಅಡ ಇಟ್ಟಿದೆ ಎಂದು ಬ್ಯಾಂಕ್​ನಿಂದ ದೂರು ನೀಡಲಾಗಿದೆ ಎಂಬುದನ್ನು ಪೊಲೀಸರು ತಿಳಿಸಿದ್ದಾರೆ.

“ಈ ಮೇಲ್ಕಂಡ ಪ್ರಕರಣದಲ್ಲಿ, ಗ್ರಾಹಕರ ಒಪ್ಪಿಗೆ ಇಲ್ಲದೆ ಪವರ್​ ಆಫ್ ಅಟಾರ್ನಿ ದುರುಪಯೋಗ ಮಾಡಿಕೊಳ್ಳಲಾಗಿದೆ. ಕಾರ್ವಿ ಸೆಕ್ಯೂರಿಟೀಸ್ ಬ್ರೋಕರೇಜ್ ಲಿಮಿಟೆಡ್ ಡಿಮ್ಯಾಟ್​ ಖಾತೆಗೆ ವರ್ಗಾವಣೆ ಮಾಡಿದ್ದ ಸೆಕ್ಯೂರಿಟೀಸ್​ಗಳನ್ನು ಮಾರ್ಜಿನ್​ಗಾಗಿ ಮತ್ತು KSBL ವ್ಯವಹಾರದ ಅಲ್ಪಾವಧಿ ಅಗತ್ಯಗಳಿಗಾಗಿ 2013ರ ಮಾರ್ಚ್​ನಿಂದ ಬ್ಯಾಂಕ್​ ಬಳಿ ಅಡಮಾನ ಮಾಡಲಾಗಿತ್ತು,” ಎಂದು ಪೊಲೀಸರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಾರ್ಥಸಾರಥಿ ಅವರನ್ನು ಮನೆಯಿಂದ ಬಂಧಿಸಲಾಗಿತ್ತು. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ಅಲ್ಲಿಂದ ಹದಿನಾಲ್ಕು ದಿನಗಳ ನ್ಯಾಯಾಂಗ ವಶಕ್ಕೆ ನೀಡಲಾಯಿತು. ಪಾರ್ಥಸಾರಥಿ ಪರ ವಕೀಲರು ತಕ್ಷಣಕ್ಕೆ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ಪೊಲೀಸರು ಹೇಳುವಂತೆ, ತನಿಖಾ ಇಲಾಖೆಯ ವಿಚಾರಣೆ ವೇಳೆ ಸೆಂಟರ್ ಕ್ರೈಮ್ ಸ್ಟೇಷನ್ (ಸಿಸಿಎಸ್) ಘಟಕದಿಂದ ಬಹಿರಂಗ ಆಗಿರುವ ಸಂಗತಿ ಏನೆಂದರೆ, 1400 ಕೋಟಿ ರೂಪಾಯಿ ಮೊತ್ತವನ್ನು ಪಾರ್ಥಸಾರಥಿ ಒಂದೋ ಸಾಲಕ್ಕಾಗಿ ಅಥವಾ ವ್ಯವಸ್ಥಾಪರ ಟ್ರೇಡಿಂಗ್​ಗಾಗಿ ಬಳಸಿರುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಮೆರಿಕದ ಗೂಗಲ್, ಆಪಲ್​ ಕಂಪೆನಿ ಷೇರುಗಳನ್ನು ಭಾರತದಿಂದ ಖರೀದಿ ಮಾಡುವುದು ಹೇಗೆ?

(Karvy Stock Broking Chairman C Parthasarathy Arrest By Hyderabad Police On IndusInd Bank Complaint)

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ