Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವು, ಚೇಳುಗಳೊಂದಿಗೆ ಪಾಳುಬಿದ್ದಿದ್ದ ಕಾರ್ಖಾನೆ ಕೇವಲ 90 ದಿನದಲ್ಲಿ ದುರಸ್ತಿ; ಇವತ್ತು ಆರು ತಿಂಗಳಲ್ಲಿ 3,000 ಕೋಟಿ ಆದಾಯ; ಇದು ಟಾಟಾ ಮ್ಯಾಜಿಕ್

NINL factory: ಒಡಿಶಾದ ಕಳಿಂಗನಗರ್​ನಲ್ಲಿ ಮೂರು ವರ್ಷಗಳಿಂದ ಮುಚ್ಚಿಹೋಗಿದ್ದ ಎನ್​ಐಎನ್​​ಎಲ್ ಸ್ಟೀಲ್ ಕಂಪನಿಯನ್ನು ಟಾಟಾ ಖರೀದಿಸಿ ಮ್ಯಾಜಿಕ್ ಮಾಡಿದೆ. ಪಾಳು ಬಿದ್ದ ಕಾರ್ಖಾನೆ ಮತ್ತು ಆವರಣವನ್ನು ಕೇವಲ 90 ದಿನದಲ್ಲಿ ದುರಸ್ತಿಗೊಳಿಸಿ ಉತ್ಪಾದನೆ ಶುರು ಮಾಡಲಾಗಿದೆ. 2022ರ ಅಕ್ಟೋಬರ್​ನಿಂದ ನಡೆದ ಉತ್ಪಾದನೆಯಲ್ಲಿ ಇಲ್ಲಿಯವರೆಗೆ ಈ ಕಾರ್ಖಾನೆ ಟಾಟಾ ಸ್ಟೀಲ್​ಗೆ 4,600 ಕೋಟಿ ರೂ ಆದಾಯ ತಂದಿದೆ.

ಹಾವು, ಚೇಳುಗಳೊಂದಿಗೆ ಪಾಳುಬಿದ್ದಿದ್ದ ಕಾರ್ಖಾನೆ ಕೇವಲ 90 ದಿನದಲ್ಲಿ ದುರಸ್ತಿ; ಇವತ್ತು ಆರು ತಿಂಗಳಲ್ಲಿ 3,000 ಕೋಟಿ ಆದಾಯ; ಇದು ಟಾಟಾ ಮ್ಯಾಜಿಕ್
ಎನ್​ಐಎನ್​ಎಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 25, 2023 | 4:01 PM

ನವದೆಹಲಿ, ಡಿಸೆಂಬರ್ 25: ಹಲವು ವರ್ಷಗಳಿಂದ ಮುಚ್ಚಿದ್ದ ಕಾರ್ಖಾನೆ; ಕಟ್ಟಡದ ಸುತ್ತಮುತ್ತ ಬೆಳೆದ ಪೊದೆ; ಕಾರ್ಮಿಕರು ಇರಬೇಕಾದ ಜಾಗದಲ್ಲಿ ಹಾವು, ಚೇಳು, ಹೆಗ್ಗಣಗಳ ಆವಾಸ; ತುಕ್ಕು ಹಿಡಿದ ಯಂತ್ರೋಪಕರಣಗಳು… ಇದು ಯಾವುದೋ ಹಾರರ್ ಸಿನಿಮಾ ದೃಶ್ಯವಲ್ಲ. ಒಡಿಶಾದ ನೀಲಾಚಲ್ ಇಸ್ಪತ್ ನಿಗಮ್ ಲಿ (ಎನ್​ಐಎನ್​ಎಲ್) ಎಂಬ ಸರ್ಕಾರಿ ಸ್ವಾಮ್ಯದ ಉಕ್ಕು ಉತ್ಪನ್ನ ಸಂಸ್ಥೆಯ ಕಾರ್ಖಾನೆ ಇದ್ದ ಸ್ಥಿತಿ. ಟಾಟಾ ಸಂಸ್ಥೆ ಇದರ ಸುಪರ್ದಿ ಪಡೆದ ಬಳಿಕ ಕೇವಲ 3 ತಿಂಗಳಲ್ಲಿ ನಾವೀನ್ಯ ಸ್ಪರ್ಶ ಕೊಟ್ಟಿದೆ. ಇವತ್ತು ಈ ಕಾರ್ಖಾನೆ ಸಾಕಷ್ಟು ಆದಾಯ ತರುವ ಘಟಕವಾಗಿದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂಡವಾಳ ಹಿಂತೆಗೆದುಕೊಂಡ ಸರ್ಕಾರಿ ಸ್ವಾಮ್ಯದ ಮೊದಲ ಉಕ್ಕು ಸಂಸ್ಥೆ ಎನ್​ಐಎನ್​ಎಲ್ ಆಗಿತ್ತು. 2022ರ ಜುಲೈ 4ರಂದು ಟಾಟಾ ಸ್ಟೀಲ್ ಸಂಸ್ಥೆ ಎನ್​ಐಎನ್​ಎಲ್ ಅನ್ನು ಖರೀದಿಸುವ ಪ್ರಕ್ರಿಯೆ ಪೂರ್ಣಗೊಳಿಸಿತು. ಅದಾದ ಬಳಿಕ, ಪಾಳು ಬಿದ್ದ ಇಡೀ ಆವರಣವನ್ನು ಸರಿಸ್ಥಿತಿಗೆ ತರುವ ದೊಡ್ಡ ಸವಾಲು ಇತ್ತು. ಅದಕ್ಕೆ 90 ದಿನದ ಡೆಡ್​ಲೈನ್ ಇಟ್ಟುಕೊಂಡು ಕೆಲಸ ಆರಂಭವಾಯಿತು.

ಇದನ್ನೂ ಓದಿ: Working Hours: ಹೆಚ್ಚು ಅವಧಿ ಕೆಲಸ ಮಾಡಿ, ಜೀವನದ ಜೊತೆ ಕೆಲಸ ಮಿಳಿತಗೊಳಿಸಿ: ಉದ್ಯೋಗಿಗಳಿಗೆ ಅಮೆರಿಕನ್ ಸಿಇಒ ನೀರಜ್ ಶಾ ಕರೆ

ಒಡಿಶಾ ರಾಜಧಾನಿ ಭುವನೇಶ್ರದಿಂದ 120 ಕಿಮೀ ದೂರದಲ್ಲಿರುವ ಕಳಿಂಗನಗರದಲ್ಲಿ ಎನ್​ಐಎನ್​ಎಲ್​ನ ಆವರಣ ಇದ್ದು, 2,500 ಎಕರೆಯಷ್ಟು ವಿಶಾಲವಾಗಿತ್ತು. ಸಂಸ್ಥೆಗೆ ಸರಿಯಾದ ಫಂಡಿಗ್ ಇಲ್ಲದೆ ಮೂರು ವರ್ಷದಿಂದ ಮುಚ್ಚಿತ್ತು. ಹಾಳಾದ ಸ್ಥಿತಿ ಇದ್ದ ಈ ಘಟಕವನ್ನು ದುರಸ್ತಿಗೊಳಿಸಲು ಕಾರ್ಯಾಚರಣೆಗೆ ಇಳಿಯುವ ಮುನ್ನ ಎಲ್ಲಾ ಯೋಜನೆ ರೂಪಿಸಲಾಯಿತು. ಮೊದಲು ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿ ಓಡಾಡಲು ಸಾಧ್ಯವಾಗುವಂತೆ ಮಾಡಲಾಯಿತು. ಕಚೇರಿ ಸೇರಿದಂತೆ ಎಲ್ಲಾ ಕಟ್ಟಡಗಳ ದುರಸ್ತಿ ಮಾಡಲಾಯಿತು. ಅಗತ್ಯ ಇದ್ದ ಕಡೆ ಮರು ನಿರ್ಮಾಣ ಮಾಡಲಾಯಿತು. ಬ್ರಾಡ್​ಬ್ಯಾಂಡ್ ಲೈನ್​ಗಳನ್ನು ಹಾಕಲಾಯಿತು. ಈ ಕಾರ್ಯಾಚರಣೆ ಶುರುವಾಗಿದ್ದು 2022ರ ಜುಲೈನಲ್ಲಿ. ಡೆಡ್​ಲೈನ್​ಗೆ ಎರಡು ದಿನ ಮುನ್ನವೇ, ಅಂದರೆ ಅಕ್ಟೋಬರ್ 11ಕ್ಕೆ ಉಕ್ಕು ಕಾರ್ಖಾನೆಯಲ್ಲಿ ಮೊದಲ ಬಿಲ್ಲೆಟ್ ಉತ್ಪಾದನೆ ಆಯಿತು.

ವಿವಿಧ ಟಾಟಾ ಸ್ಟೀಲ್ ಘಟಕಗಳಿಂದ ತಂತ್ರಜ್ಞರನ್ನು ಎನ್​ಐಎಂಎಲ್ ಘಟಕಕ್ಕೆ ಕರೆಸಿ ಯಂತ್ರೋಪಕರಣಗಳನ್ನು ಸರಿ ಮಾಡಿಸಲಾಗಿತ್ತು. ಮೂರು ವರ್ಷದಿಂದ ಮುಚ್ಚಿಹೋಗಿದ್ದ ಎನ್​ಐಎಂಎಲ್ ಕಾರ್ಖಾನೆ ಮತ್ತೆ ಆರಂಭಗೊಳ್ಳುತ್ತದೆ ಎಂದು ಅಲ್ಲಿನ ಉದ್ಯೋಗಿಗಳು ಕನಸಿನಲ್ಲೂ ಊಹಿಸಿರಲಿಲ್ಲ. ಆದರೆ, ಆ ವರ್ಷ ದೀಪಾವಳಿ ಹಬ್ಬದ ಸಂಭ್ರಮ ಕಾರ್ಮಿಕರ ಪಾಲಿಗೆ ಚಿರಸ್ಮರಣೀಯ ಎನಿಸಿದ.

ಇದನ್ನೂ ಓದಿ: ಪೇಟಿಎಂನಲ್ಲಿ ಕೆಲಸ ಕಳೆದುಕೊಂಡ ಶೇ. 10ಕ್ಕೂ ಹೆಚ್ಚು ಉದ್ಯೋಗಿಗಳು; ಈ ವರ್ಷ ಕಂಡ ಅತಿದೊಡ್ಡ ಲೇ ಆಫ್​ಗಳಲ್ಲಿ ಇದೂ ಒಂದು

ಟಾಟಾ ಸಂಸ್ಥೆ ಎನ್​ಐಎಂಎಲ್​ನ ಎಲ್ಲಾ ಉದ್ಯೋಗಿಗಳ ಎಲ್ಲಾ ಬಾಕಿ ವೇತನ ಪಾವತಿಸಿತು. ಸಂಸ್ಥೆಯ ಎಲ್ಲಾ ಸಾಲವನ್ನೂ ತೀರಿಸಿತು. ಹೆಚ್ಚೂಕಡಿಮೆ 13,000 ಕೋಟಿ ರೂ ವ್ಯಯಿಸಿ ಎನ್​ಐಎನ್​ಎಲ್ ಸಂಸ್ಥೆಯನ್ನು ಖರೀದಿಸಿದ ಟಾಟಾ ಗ್ರೂಪ್ ಈಗ ಆದಾಯ ಕೂಡ ಗಳಿಸುವ ಸ್ಥಿತಿಗೆ ಅದನ್ನು ಮಾರ್ಪಡಿಸಿದೆ. 2022ರ ಅಕ್ಟೋಬರ್ ತಿಂಗಳಿಂದ 2023ರ ಸೆಪ್ಟೆಂಬರ್​ವರೆಗೆ 4,600 ಕೋಟಿ ರೂ ಆದಾಯವು ಈ ಘಟಕದಿಂದ ಬರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ