AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲಗಾರರಿಗೆ ಸೇರಿದ ರೂ. 404 ಕೋಟಿ ರೂ. ಮೌಲ್ಯದ ಚಿನ್ನವನ್ನು ಹರಾಜು ಹಾಕಿದ ಮಣಪ್ಪುರಂ ಫೈನಾನ್ಸ್

2021ರ ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ ಮಣಪ್ಪುರಂ ಫೈನಾನ್ಸ್ ಲಿಮಿಟೆಡ್​ನಿಂದ 400 ಕೋಟಿಗೂ ಹೆಚ್ಚು ಮೊತ್ತದ ಸಾಲಗಾರರ ಚಿನ್ನವನ್ನು ಹರಾಜು ಹಾಕಲಾಗಿದೆ.

ಸಾಲಗಾರರಿಗೆ ಸೇರಿದ ರೂ. 404 ಕೋಟಿ ರೂ. ಮೌಲ್ಯದ ಚಿನ್ನವನ್ನು ಹರಾಜು ಹಾಕಿದ ಮಣಪ್ಪುರಂ ಫೈನಾನ್ಸ್
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on:May 27, 2021 | 5:19 PM

ಮುಂಬೈ: ಮಣಪ್ಪುರಂ ಫೈನಾನ್ಸ್ ಲಿಮಿಟೆಡ್​ನ ಚಿನ್ನದ ಸಾಲದ ಪೋರ್ಟ್​ಫೋಲಿಯೋದಲ್ಲಿ ಕಳೆದ ತ್ರೈಮಾಸಿಕಕ್ಕಿಂತ ಮಾರ್ಚ್ ತ್ರೈಮಾಸಿಕದಲ್ಲಿ ಶೇ 5.6ರಷ್ಟು ಕುಗ್ಗಿದೆ. ವಿಶ್ಲೇಷಕರು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗಿಯೇ ಕುಗ್ಗಿದೆ. ಏಕೆಂದರೆ ಹಣ ವಸೂಲಿ ಮಾಡಿಕೊಳ್ಳುವುದಕ್ಕಾಗಿ ಮಣಪ್ಪುರಂ ಫೈನಾನ್ಸ್​ನಿಂದ ರೂ. 404 ಕೋಟಿ ರೂಪಾಯಿ ಮೌಲ್ಯದಷ್ಟು ಚಿನ್ನವನ್ನು ಹರಾಜು ಹಾಕಲಾಗಿದೆ. ಆದರೆ ಹಣಕಾಸು ಸಂಸ್ಥೆಗೆ ಈ ಸಾಲದ ಪುಸ್ತಕದಲ್ಲಿ ಕುಗ್ಗಿರುವುದು ದೊಡ್ಡ ಮಟ್ಟದಲ್ಲಿ ವ್ಯತ್ಯಾಸ ಆಗುವುದಿಲ್ಲ. ಆದರೆ ಚಿನ್ನದ ಸಾಲದ ಮೇಲಿನ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಕಡಿಮೆ. ಅದರಲ್ಲೂ ಕೊರೊನಾ ಇರುವ ಸಂದರ್ಭದಲ್ಲಿ ಸಾಲದ ಬೇಡಿಕೆ ಹಾಗೇ ಇರಲಿದೆ. ಆಡಳಿತ ಮಂಡಳಿ ಹೇಳುವ ಪ್ರಕಾರ, ಪೋರ್ಟ್​ಫೋಲಿಯೋದಲ್ಲಿ ಕಡಿಮೆ ಆಗುವುದಕ್ಕೆ ಮುಖ್ಯ ಕಾರಣ ಹರಾಜಿನ ಮೊತ್ತ. ವರ್ಷದ ಹಿಂದಿನ ಇದೇ ಅವಧಿಗೆ ಹೋಲಿಕೆ ಮಾಡಿದಲ್ಲಿ ಚಿನ್ನದ ಅಡಮಾನ ಸಾಲದ ಪೋರ್ಟ್​ಫೋಲಿಯೋ ಶೇ 12ರಷ್ಟು ಬೆಳವಣಿಗೆ ಕಂಡಿದೆ.

ವಿಶ್ಲೇಷಕರ ಪ್ರಕಾರ, ಚಿನ್ನದ ಹೊರತಾದ ಪೋರ್ಟ್​ಫೋಲಿಯೋದಲ್ಲಿ ಮಣಪ್ಪುರಂ ಫೈನಾನ್ಸ್ ಉತ್ತಮ ಬೆಳವಣಿಗೆ ಕಂಡಿದೆ. ಕನ್ಸಾಲಿಡೇಟೆಡ್ ನಿವ್ವಳ ಲಾಭದಲ್ಲಿ ಶೇ 18ರಷ್ಟು ಬೆಳವಣಿಗೆ ಕಂಡಿದೆ. ಕಿರುಸಾಲ ಪೋರ್ಟ್​ಫೋಲಿಯೋದಲ್ಲಿ ಕಳೆದ ತ್ರೈಮಾಸಿಕಕ್ಕಿಂತ ಉತ್ತಮವಾದ ಸ್ಥಿತಿಯಲ್ಲಿದೆ. “ಮಧ್ಯಮಾವಧಿಯಲ್ಲಿ ಮಣಪ್ಪುರಂ ಗೋಲ್ಡ್ ಫೈನಾನ್ಸ್ ಲಿಮಿಟೆಡ್ ಶೇ 10ರಿಂದ ಶೇ 15ರಷ್ಟು ಸ್ಥಿರವಾದ ಚಿನ್ನದ ಸಾಲದ ಬೆಳವಣಿಗೆ ದಾಖಲಿಸುವ ನಿರೀಕ್ಷೆ ಇದೆ. ಇತರ ಸೆಗ್ಮೆಂಟ್​ನಲ್ಲಿ ಸುಸ್ಪಷ್ಟವಾದ ಬೆಳವಣಿಗೆ ಮತ್ತು ಸಂಗ್ರಹ ಕಂಡುಬರುತ್ತಿದೆ,” ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ, ಈಗ ಉದ್ಭವಿಸಿರುವ ಪ್ರಶ್ನೆಯೇ ಬೇರೆ. ಅಡವಿಟ್ಟ ಚಿನ್ನದ ಹರಾಜು ಎಂಬುದು ಭಾರತೀಯರ ಮೇಲೆ ಆಗುತ್ತಿರುವ ಆರ್ಥಿಕ ಒತ್ತಡದ ಮುನ್ಸೂಚನೆಯೇ ಎಂಬ ಅನುಮಾನ ಹುಟ್ಟಿಸಿದೆ. ಪ್ರತಿ ತ್ರೈಮಾಸಿಕದಲ್ಲೂ ಸಾಲ ನೀಡುವ ಸಂಸ್ಥೆಗಳು ಚಿನ್ನವನ್ನು ಹರಾಜು ಹಾಕುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ. ಇದು ನಿಜವಾದ ಚಿಂತೆಗೆ ಕಾರಣ ಆಗಿದೆ. ಜನವರಿಯಿಂದ ಮಾರ್ಚ್​ಗೆ ಕೊನೆಯಾದ ತ್ರೈಮಾಸಿಕದಲ್ಲಿ ಮಣಪ್ಪುರಂನಿಂದ 404 ಕೋಟಿ ರೂಪಾಯಿಯಷ್ಟು ಚಿನ್ನದ ಹರಾಜು ಹಾಕಲಾಗಿದೆ. ಅದಕ್ಕೂ ಮುಂಚೆ 2020 ಏಪ್ರಿಲ್​ನಿಂದ ಡಿಸೆಂಬರ್​ವರೆಗೆ ಹರಾಜು ಹಾಕಿದ್ದು ರೂ. 8 ಕೋಟಿ ಮಾತ್ರ.

ಕೃಷಿ ಮತ್ತು ಅದರ ಅವಲಂಬಿತ ವೃತ್ತಿಗಳಲ್ಲಿ ಇರುವವರಿಗೆ ತಮ್ಮ ಕೆಲಸಕ್ಕೆ ಬಂಡವಾಳವಾಗಿ (ವರ್ಕಿಂಗ್ ಕ್ಯಾಪಿಟಲ್) ಹಣ ಬೇಕಾದಾಗ ತಕ್ಷಣಕ್ಕೆ ಹೊಳೆಯುವುದು ಚಿನ್ನ ಅಡಮಾನ ಮಾಡಿ, ಸಾಲ ಪಡೆಯಬೇಕೆಂಬುದು. ಸಣ್ಣ ಉದ್ಯಮಗಳ ಪಾಲಿಗೆ ಬಂಡವಾಳ ಹೂಡಿಕೆ ಮೂಲ ಕೂಡ ಇದೇ ಬಗೆಯ ಸಾಲ. ಇನ್ನು ಹಣಕಾಸಿನ ತುರ್ತು ಸಂದರ್ಭದಲ್ಲಿ ನಗದು ಬೇಕು ಎಂದಾಗ ತಕ್ಷಣಕ್ಕೆ ಅಡಮಾನ ಮಾಡಿ ಸಿಕ್ಕುವ ಸಾಲ ಗೋಲ್ಡ್ ಲೋನ್. ಎಸ್​ಬಿಐನಂಥ ಬ್ಯಾಂಕ್​ಗಳಲ್ಲೂ ತುರ್ತು ಅಗತ್ಯಗಳಿಗೆ ಚಿನ್ನದ ಮೇಲೆ ಸಾಲ ಪಡೆಯುವವರು ಹೆಚ್ಚಾಗಿದೆ. ಈ ಬ್ಯಾಂಕ್​ನಲ್ಲಿ ಗೋಲ್ಡ್​ ಲೋನ್ 2020- 21ರ ಹಣಕಾಸಿನ ವರ್ಷದಲ್ಲಿ ಶೇ 81ರಷ್ಟು ಹೆಚ್ಚಾಗಿದೆ.

ಸರಿ, ಚಿನ್ನ ಅಡಮಾನ ಮಾಡಿಕೊಂಡು, ಸಾಲ ತೀರಿಸದಿದ್ದಾಗ ಅದನ್ನು ಹರಾಜು ಹಾಕಿ ಹಣ ಬರುತ್ತದಲ್ಲಾ ಸಮಸ್ಯೆ ಏನು ಎಂಬುದು ಹಲವರ ಪ್ರಶ್ನೆ. ನಿಮಗೆ ಗೊತ್ತಿರಲಿ, ಎಷ್ಟೋ ಸಲ ಬರಬೇಕಾದ ಹಣಕ್ಕಿಂತ ಕಡಿಮೆ ಬೆಲೆಗೆ ಚಿನ್ನದ ಹರಾಜಾಗುತ್ತದೆ. ನೆನಪಿಸಿಕೊಳ್ಳಿ, ಈ ಅವಧಿಯಲ್ಲಿ ಚಿನ್ನದ ದರ ಶೇ 10ಕ್ಕಿಂತ ಜಾಸ್ತಿಯೇ ಇಳಿಕೆ ಆಯಿತು. ಆದ್ದರಿಂದ ಯಾವಾಗ ಸಾಲ ಕಟ್ಟುವುದಿಲ್ಲವೋ ಅಡಮಾನ ಮಾಡಿರುವುದನ್ನು ಹರಾಜು ಹಾಕುವುದು ಕೊನೆಯ ಆಯ್ಕೆ ಆಗುತ್ತದೆ. ಮಣಪ್ಪುರಂ ಗೋಲ್ಡ್​ ಪಾಲಿಗೆ ಚಿನ್ನದ ಬೆಲೆ ಇಳಿಯುತ್ತಿರುವಾಗಲೂ ಅದು ಕೊನೆ ಆಯ್ಕೆ ಆಗಿತ್ತು. ಇದರಿಂದ ಒತ್ತಡ ಹೆಚ್ಚಾಗಿದೆ.

ಇದನ್ನೂ ಓದಿ: ಆರ್ಥಿಕತೆ ಮೇಲೆ ಕೋವಿಡ್- 19 ಪರಿಣಾಮ ಅಗಾಧ; ಈ ಬಿಕ್ಕಟ್ಟಿನ ನಂತರ ಜಗತ್ತು ಹೀಗಿರುವುದಿಲ್ಲ ಎಂದ ಪಿಎಂ ಮೋದಿ

ಇದನ್ನೂ ಓದಿ: ಕೋವಿಡ್- 19ರ ಎರಡನೇ ಅಲೆ ಎಷ್ಟು ಬೇಗ ತಡೆಯುತ್ತೇವೋ ಅದರ ಮೇಲೆ ಆಧಾರವಾಗಿದೆ ಭಾರತದ ಬೆಳವಣಿಗೆ: ಆರ್​ಬಿಐ

(Manappuram Gold Finance Limited auctioned Rs 404 crore worth gold of borrowers in January to March quarter FY 21)

Published On - 4:04 pm, Thu, 27 May 21

‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್