AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold: ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು? ಆ ಚಿನ್ನಕ್ಕೆ ಎಷ್ಟು ಸುಂಕ ಕಟ್ಟಬೇಕಾಗುತ್ತದೆ?

ವಿದೇಶದಿಂದ ಎಷ್ಟು ಪ್ರಮಾಣದ ಚಿನ್ನವನ್ನು ಭಾರತಕ್ಕೆ ತರಬಹುದು ಹಾಗೂ ಚಿನ್ನದ ಮೇಲೆ ಎಷ್ಟು ಸೀಮಾ ಸುಂಕ ಬೀಳುತ್ತದೆ ಎಂಬುದರ ಬಗ್ಗೆ ವಿವರಗಳು ಇಲ್ಲಿವೆ.

Gold: ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು? ಆ ಚಿನ್ನಕ್ಕೆ ಎಷ್ಟು ಸುಂಕ ಕಟ್ಟಬೇಕಾಗುತ್ತದೆ?
ಪ್ರಾತಿನಿಧಿಕ ಚಿತ್ರ
TV9 Web
| Updated By: Srinivas Mata|

Updated on: Dec 13, 2021 | 1:22 PM

Share

ಭಾರತಕ್ಕೆ ಚಿನ್ನದ ನಾಣ್ಯಗಳು ಮತ್ತು ಚಿನ್ನದ ಆಭರಣಗಳನ್ನು ತರುವುದನ್ನು ಕೇಂದ್ರ ಸರ್ಕಾರವು ಕಟ್ಟುನಿಟ್ಟಾಗಿ ನಿಯಂತ್ರಣ ಮಾಡುತ್ತದೆ. ‘ಪ್ರಯಾಣಿಕರಿಗೆ ಮಾರ್ಗದರ್ಶಿ’ಯಲ್ಲಿ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್‌ಗಳ ಕೇಂದ್ರೀಯ ಮಂಡಳಿ, ಹಣಕಾಸು ಸಚಿವಾಲಯವು ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ತಮ್ಮ ಆಮದು ಸರಕುಗಳ ಕುರಿತು ನಿರ್ದೇಶನಗಳು ಮತ್ತು ಸಂಬಂಧಿತ ನಿಯಮಗಳ ಬಗ್ಗೆ ಗಮನ ಸೆಳೆದಿದೆ. ಚಿನ್ನವು ಅಮೂಲ್ಯ ಲೋಹವಾಗಿದ್ದು, ಆರ್​ಬಿಐ ತನ್ನ ಮೀಸಲು ಸಲುವಾಗಿ ನಿಯಮಿತವಾಗಿ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ ವೈಯಕ್ತಿಕ ಪ್ರಯಾಣಿಕರಿಗೆ ದೇಶಕ್ಕೆ ಚಿನ್ನ ತರುವುದಕ್ಕೆ ನಿಯಮಾವಳಿಗಳನ್ನು ಸರ್ಕಾರವು ನಿರ್ಬಂಧಿಸಿದೆ. ‘ಪ್ರಯಾಣಿಕರ ಮಾರ್ಗದರ್ಶಿ’ಯಲ್ಲಿ ಇರುವ ಪ್ರಕಾರ, ಭಾರತೀಯ ಮೂಲದ ಯಾವುದೇ ಪ್ರಯಾಣಿಕರು ಅಥವಾ ಮಾನ್ಯವಾದ ಪಾಸ್‌ಪೋರ್ಟ್ ಹೊಂದಿರುವ ಪ್ರಯಾಣಿಕರು, ವಿದೇಶದಲ್ಲಿ 6 ತಿಂಗಳಿಗಿಂತ ಕಡಿಮೆಯಿಲ್ಲದಂತೆ ಇದ್ದು, ಆ ನಂತರ ದೇಶಕ್ಕೆ ಬರುವವರು ಚಿನ್ನವನ್ನು ಬ್ಯಾಗೇಜ್‌ನಂತೆ ಆಮದು ಮಾಡಿಕೊಳ್ಳಬಹುದು ಎಂದು ಸರ್ಕಾರ ಹೇಳಿದೆ.

ಕಿರು ಭೇಟಿಯ ಒಟ್ಟು ಅವಧಿಯು 30 ದಿನಗಳನ್ನು ಮೀರದಿದ್ದರೆ ಈ 6 ತಿಂಗಳ ಕಿರು ಭೇಟಿಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಲ್ಲ. ಈ ಪ್ರಯಾಣಿಕರನ್ನು ಹೊರತುಪಡಿಸಿ, ಬೇರೆ ಯಾರಾದರೂ ದೇಶದೊಳಗೆ ಬ್ಯಾಗೇಜ್‌ನಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳಲು ಅನುಮತಿಸುವುದಿಲ್ಲ. ವಿದೇಶೀ ಪ್ರಜೆಯಿಂದ ಚಿನ್ನ ಮತ್ತು ಬೆಳ್ಳಿಯ ಆಮದನ್ನು ಕೇಂದ್ರ ಸರ್ಕಾರವು ನಿಷೇಧಿಸಿದೆ. ಪ್ರಯಾಣಿಕರು ಪಾವತಿಸುವ ಸುಂಕವು ಕನ್ವರ್ಟಿಬಲ್ ವಿದೇಶೀ ಕರೆನ್ಸಿಯಲ್ಲಿ ಇರಬೇಕು. ತೊಲ ಬಾರ್‌ಗಳನ್ನು ಹೊರತುಪಡಿಸಿ ತಯಾರಕರು ಅಥವಾ ರಿಫೈನರ್‌ನಿಂದ ಕೆತ್ತಿದ ಸಂಖ್ಯೆಯನ್ನು ಹೊರತುಪಡಿಸಿ ಚಿನ್ನದ ಬಾರ್‌ಗಳಿಗೆ ಸುಂಕವನ್ನು ಶೇ 12.5​​ರಷ್ಟು ವಿಧಿಸಲಾಗುತ್ತದೆ, ಜೊತೆಗೆ ಸಮಾಜ ಕಲ್ಯಾಣ ಸರ್​ಚಾರ್ಜ್ ಶೇ 1.25ರಷ್ಟು ವಿಧಿಸಲಾಗುತ್ತದೆ.

ರತ್ನಗಳು ಅಥವಾ ಮುತ್ತುಗಳಿಂದ ಹೊದಿಸಿದ ಆಭರಣಗಳನ್ನು ಹೊರತುಪಡಿಸಿ ತೊಲ ಬಾರ್‌ಗಳು ಮತ್ತು ಆಭರಣಗಳು ಸೇರಿ ಯಾವುದೇ ರೂಪದಲ್ಲಿ ಚಿನ್ನಕ್ಕೆ ಸುಂಕವನ್ನು ಶೇ 12.5​​ರಷ್ಟು ವಿಧಿಸಲಾಗುತ್ತದೆ ಮತ್ತು ಸಮಾಜ ಕಲ್ಯಾಣ ಸರ್​ಚಾರ್ಜ್ ಜೊತೆಗೆ ಶೇ 1.25ರಷ್ಟು ವಿಧಿಸಲಾಗುತ್ತದೆ. ಈ ರಿಯಾಯಿತಿ ದರವು ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಮತ್ತು ಭಾರತೀಯ ಮೂಲದ ವ್ಯಕ್ತಿಗಳಿಗೆ 6 ತಿಂಗಳಿಗಿಂತ ಹೆಚ್ಚು ಕಾಲ ತಂಗಿದ್ದರೆ ಚಿನ್ನಕ್ಕೆ ಅನ್ವಯಿಸುತ್ತದೆ. 6 ತಿಂಗಳ ಅವಧಿಯಲ್ಲಿ ಒಟ್ಟು 30 ದಿನಗಳವರೆಗಿನ ಕಿರು ಭೇಟಿಗಳನ್ನು ಲಕ್ಷಿಸುವುದಿಲ್ಲ. ಈ ಪ್ರಕರಣಗಳನ್ನು ಹೊರತುಪಡಿಸಿ, ಶೇ 38.5ರಷ್ಟು ಸೀಮಾ ಸುಂಕದ ಸಾಮಾನ್ಯ ದರವನ್ನು ವಿಧಿಸಲಾಗುತ್ತದೆ.

ಒಂದು ವರ್ಷಕ್ಕೂ ಹೆಚ್ಚು ಕಾಲ ವಿದೇಶದಲ್ಲಿ ನೆಲೆಸಿರುವ ಭಾರತೀಯ ಪ್ರಯಾಣಿಕರಿಂದ ಕಸ್ಟಮ್ಸ್ ಡ್ಯೂಟಿ-ಫ್ರೀ ಭತ್ಯೆಯನ್ನು ಪಡೆಯಬಹುದು, ಇದು ವಿಭಿನ್ನವಾಗಿರುತ್ತದೆ. ಪುರುಷರಿಗೆ ರೂ. 50,000 ಮತ್ತು ಮಹಿಳೆಯರಿಗೆ ರೂ. 1,00,000 ಇದೆ. ಒಬ್ಬ ವ್ಯಕ್ತಿಯು 1 ಕೇಜಿ ಚಿನ್ನವನ್ನು (ಆಭರಣಗಳನ್ನು ಒಳಗೊಂಡಂತೆ) ತರಬಹುದು ಮತ್ತು ವ್ಯಕ್ತಿಯು ಆಗಮನದ ಸಮಯದಲ್ಲಿ ಚಿನ್ನವನ್ನು ತರಬಹುದು ಅಥವಾ ಭಾರತಕ್ಕೆ ಆಗಮಿಸಿದ 15 ದಿನಗಳಲ್ಲಿ ಅದನ್ನು ಆಮದು ಮಾಡಿಕೊಳ್ಳಬಹುದು.

ಇದರ ಜತೆಗೆ, ಷರತ್ತುಗಳಿಗೆ ಒಳಪಟ್ಟು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಮೆಟಲ್ಸ್ ಮತ್ತು ಮಿನರಲ್ ಟ್ರೇಡಿಂಗ್ ಕಾರ್ಪೊರೇಷನ್‌ನ ಕಸ್ಟಮ್ಸ್ ಸಂಬಂಧಿತ ಗೋದಾಮಿನಿಂದ ಅನುಮತಿಸಲಾದ ಪ್ರಮಾಣದ ಚಿನ್ನವನ್ನು ಪಡೆಯಲು ಸಹ ಪ್ರಯಾಣಿಕರಿಗೆ ಅನುಮತಿಸಲಾಗಿದೆ. ಆ ಸಂದರ್ಭದಲ್ಲಿ, ಭಾರತಕ್ಕೆ ಆಗಮಿಸುವ ಸಮಯದಲ್ಲಿ ಕಸ್ಟಮ್ಸ್ ಅಧಿಕಾರಿಯ ಮುಂದೆ ನಿಗದಿತ ನಮೂನೆಯಲ್ಲಿ ಘೋಷಣೆಯ ಟಿಪ್ಪಣಿಯನ್ನು ಸಲ್ಲಿಸಬೇಕಾಗುತ್ತದೆ. ಕಸ್ಟಮ್ಸ್ ಸಂಬಂಧಿತ ಗೋದಾಮಿನಿಂದ ಚಿನ್ನವನ್ನು ಪಡೆಯುವ ಉದ್ದೇಶವನ್ನು ಪ್ರಯಾಣಿಕರು ತಿಳಿಸಬೇಕು ಮತ್ತು ಕ್ಲಿಯರೆನ್ಸ್‌ಗೆ ಮೊದಲು ಸುಂಕವನ್ನು ಪಾವತಿಸಬೇಕು.

ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?

ಮಾಂಗಲ್ಯ ಭಾಗ್ಯದ ಅರ್ಥವೇನು, ಸ್ತ್ರೀಯರಿಗೆ ಇದು ಶ್ರೀರಕ್ಷೆ ಹೇಗೆ?
ಮಾಂಗಲ್ಯ ಭಾಗ್ಯದ ಅರ್ಥವೇನು, ಸ್ತ್ರೀಯರಿಗೆ ಇದು ಶ್ರೀರಕ್ಷೆ ಹೇಗೆ?
ಈ ರಾಶಿಯವರು ಇಂದು ಸ್ವಂತ ಉದ್ಯೋಗದಲ್ಲಿ ಅಧಿಕ ಲಾಭ ಪಡೆಯುವರು
ಈ ರಾಶಿಯವರು ಇಂದು ಸ್ವಂತ ಉದ್ಯೋಗದಲ್ಲಿ ಅಧಿಕ ಲಾಭ ಪಡೆಯುವರು
ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ: ನಟಿ ರಮ್ಯಾ
ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ: ನಟಿ ರಮ್ಯಾ
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ