AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI Guidelines For Lockers: ಬ್ಯಾಂಕ್​ ಲಾಕರ್​ಗಳಿಗೆ ಸಂಬಂಧಿಸಿದಂತೆ ಆರ್​ಬಿಐನಿಂದ ಮಹತ್ವದ ಮಾರ್ಗಸೂಚಿ

ಬ್ಯಾಂಕ್​ಗಳ ಲಾಕರ್​ಗಳಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

RBI Guidelines For Lockers: ಬ್ಯಾಂಕ್​ ಲಾಕರ್​ಗಳಿಗೆ ಸಂಬಂಧಿಸಿದಂತೆ ಆರ್​ಬಿಐನಿಂದ ಮಹತ್ವದ ಮಾರ್ಗಸೂಚಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Aug 18, 2021 | 8:34 PM

ಬ್ಯಾಂಕ್​ಗಳ ಆಯಾ ಶಾಖೆಯಲ್ಲಿ ಖಾಲಿ ಇರುವ ಲಾಕರ್‌ಗಳ ಪಟ್ಟಿ ಹಾಗೂ ಹಂಚಿಕೆ ಉದ್ದೇಶಕ್ಕಾಗಿ ಲಾಕರ್‌ಗಳ ಕಾಯುವ ಪಟ್ಟಿಯನ್ನು (Waiting List) ನಿರ್ವಹಿಸಲು ಮತ್ತು ಲಾಕರ್‌ಗಳ ಹಂಚಿಕೆಯಲ್ಲಿ ಪಾರದರ್ಶಕತೆ ಖಾತ್ರಿಪಡಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬುಧವಾರ ಸೂಚನೆ ನೀಡಿದೆ. ಈ ಪರಿಷ್ಕೃತ ಸೂಚನೆ ಜನವರಿ 1, 2022ರಿಂದ ಜಾರಿಗೆ ಬರಲಿವೆ. “ಗ್ರಾಹಕರು ಆಯ್ಕೆಗಳನ್ನು ಮಾಡಲು ಅನುಕೂಲವಾಗುವಂತೆ ಬ್ಯಾಂಕ್​ಗಳು ಶಾಖೆಯ ಲಾಕರ್‌ಗಳ ಪಟ್ಟಿಯನ್ನು ಹಾಗೂ ಕೋರ್ ಬ್ಯಾಂಕಿಂಗ್ ಸಿಸ್ಟಂನಲ್ಲಿ (ಸಿಬಿಎಸ್) ಅಥವಾ ಆರ್‌ಬಿಐನಿಂದ ನೀಡಲಾದ ಯಾವುದೇ ಸೈಬರ್ ಭದ್ರತೆಗೆ ಅನುಗುಣವಾಗಿ ಕಂಪ್ಯೂಟರೈಸ್ಡ್ (ಗಣಕೀಕೃತ) ವ್ಯವಸ್ಥೆಯಲ್ಲಿ ಕಾಯುವ ಪಟ್ಟಿ ನಿರ್ವಹಿಸಬೇಕು. ಲಾಕರ್‌ಗಳನ್ನು ಹಂಚುವ ಉದ್ದೇಶ ಮತ್ತು ಅವುಗಳ ಹಂಚಿಕೆಯಲ್ಲಿ ಪಾರದರ್ಶಕತೆ ಖಚಿತಪಡಿಸಬೇಕು,” ಎಂದು ಆರ್‌ಬಿಐ ತಿಳಿಸಿದೆ.

ಲಾಕರ್ ಹಂಚಿಕೆಗಾಗಿ ಎಲ್ಲ ಅರ್ಜಿಗಳ ಸ್ವೀಕೃತಿಯನ್ನು ಬ್ಯಾಂಕ್‌ಗಳು ದೃಢಪಡಿಸಬಹುದು ಮತ್ತು ಲಾಕರ್‌ಗಳು ಹಂಚಿಕೆಗೆ ಲಭ್ಯ ಇಲ್ಲದಿದ್ದರೆ ಗ್ರಾಹಕರಿಗೆ ಕಾಯುವ ಪಟ್ಟಿ ಸಂಖ್ಯೆಯನ್ನು ಒದಗಿಸಬಹುದು ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಲಾಕರ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ಮತ್ತು ಸಿಡಿಡಿ (Customer Due Diligence) ಮಾನದಂಡಗಳನ್ನು ಸಂಪೂರ್ಣವಾಗಿ ಅನುಸರಿಸುವ ಬ್ಯಾಂಕ್​ನ ಪ್ರಸ್ತುತ ಗ್ರಾಹಕರಿಗೆ ಸುರಕ್ಷಿತ ಠೇವಣಿ ಲಾಕರ್‌ಗಳು/ ಸುರಕ್ಷಿತ ಕಸ್ಟಡಿ ಆರ್ಟಿಕಲ್ ಸೌಲಭ್ಯಗಳನ್ನು ನೀಡಬಹುದು- ಅದು ನಿಯಮಾನುಸಾರ ಇರುತ್ತದೆ. ಬ್ಯಾಂಕ್​ನೊಂದಿಗೆ ಯಾವುದೇ ಇತರ ಬ್ಯಾಂಕಿಂಗ್ ಸಂಬಂಧ ಹೊಂದಿರದ ಗ್ರಾಹಕರಿಗೆ ಸುರಕ್ಷಿತ ಠೇವಣಿ ಲಾಕರ್/ಸುರಕ್ಷಿತ ಕಸ್ಟಡಿ ಆರ್ಟಿಕಲ್ ಸೌಲಭ್ಯಗಳನ್ನು ನೀಡಬಹುದು ಎಂದು ಹೇಳಲಾಗಿದೆ.

ಲಾಕರ್ ಒಪ್ಪಂದದ ವೇಳೆ ಷರತ್ತು ಲಾಕರ್ ಬಾಡಿಗೆದಾರರು ಕಾನೂನುಬಾಹಿರ ಅಥವಾ ಯಾವುದೇ ಅಪಾಯಕಾರಿ ವಸ್ತುವನ್ನು ಸೇಫ್ ಡೆಪಾಸಿಟ್ ಲಾಕರ್​ನಲ್ಲಿ ಇಟ್ಟುಕೊಳ್ಳಬಾರದು ಎಂಬ ಷರತ್ತನ್ನು ಬ್ಯಾಂಕ್​ಗಳು ಗ್ರಾಹಕರೊಂದಿಗೆ ಮಾಡಿಕೊಳ್ಳುವ ಲಾಕರ್ ಒಪ್ಪಂದದ ವೇಳೆ ಸೇರಿಸಿಕೊಳ್ಳಬೇಕು ಎಂದು ಆರ್​ಬಿಐ ಹೇಳಿದೆ. “ಯಾವುದೇ ಗ್ರಾಹಕರು ಸೇಫ್ ಡೆಪಾಸಿಟ್ ಲಾಕರ್‌ನಲ್ಲಿ ಕಾನೂನುಬಾಹಿರ ಅಥವಾ ಅಪಾಯಕಾರಿ ವಸ್ತುಗಳನ್ನು ಇಟ್ಟಿರುವುದರ ಬಗ್ಗೆ ಅನುಮಾನ ಬಂದಲ್ಲಿ ಅಂತಹ ಗ್ರಾಹಕರ ವಿರುದ್ಧ ಆಯಾ ಸನ್ನಿವೇಶಕ್ಕೆ ಹೊಂದುವಂಥ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಬ್ಯಾಂಕ್ ಹೊಂದಿದೆ,” ಎಂದು ಆರ್​ಬಿಐ ಸೇರಿಸಿದೆ.

ಬ್ಯಾಂಕ್​ಗಳು ಸುರಕ್ಷಿತ ಠೇವಣಿ ಲಾಕರ್‌ಗಳಿಗಾಗಿ ಮಂಡಳಿಯಿಂದ ಅನುಮೋದನೆಯಾದ ಒಪ್ಪಂದ ಹೊಂದಿರುತ್ತವೆ ಎಂದು ಕೇಂದ್ರೀಯ ಬ್ಯಾಂಕ್ ಹೇಳುತ್ತದೆ. ಈ ಉದ್ದೇಶಕ್ಕಾಗಿ, ಐಬಿಎ ರೂಪಿಸುವ ಮಾದರಿ ಲಾಕರ್ ಒಪ್ಪಂದವನ್ನು ಬ್ಯಾಂಕ್​ಗಳು ಅಳವಡಿಸಿಕೊಳ್ಳಬಹುದು ಎಂದು ಹೇಳಿದೆ. “ಈ ಒಪ್ಪಂದವು ಪರಿಷ್ಕೃತ ಸೂಚನೆಗಳು ಮತ್ತು ವಿಷಯದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನಗಳಿಗೆ ಅನುಸಾರವಾಗಿ ಇರಬೇಕು. ಬ್ಯಾಂಕ್​ಗಳು ತಮ್ಮ ಲಾಕರ್ ಒಪ್ಪಂದಗಳಲ್ಲಿ ಯಾವುದೇ ನ್ಯಾಯಸಮ್ಮತ ಅಲ್ಲದ ನಿಯಮಗಳು ಅಥವಾ ಷರತ್ತುಗಳನ್ನು ಸೇರಿಸಿಲ್ಲ ಎಂದು ಖಾತ್ರಿಪಡಿಸಬೇಕು,” ಎಂದು ಆರ್​ಬಿಐ ಹೇಳಿದೆ.

“ಬ್ಯಾಂಕ್​ನ ಹಿತಾಸಕ್ತಿಗಳನ್ನು ಕಾಪಾಡಲು ಒಪ್ಪಂದದ ನಿಯಮಗಳು ಸಾಮಾನ್ಯ ವ್ಯವಹಾರದ ಅಗತ್ಯಕ್ಕಿಂತ ಹೆಚ್ಚು ಕಷ್ಟಕರ ಆಗಿರುವುದಿಲ್ಲ. ತಮ್ಮ ಲಾಕರ್ ಒಪ್ಪಂದಗಳನ್ನು ಈಗಾಗಲೇ ಇರುವ ಗ್ರಾಹಕರ ಜತೆಗೆ ಜನವರಿ 1, 2023ರೊಳಗೆ ಬ್ಯಾಂಕ್​ಗಳು ನವೀಕರಿಸುತ್ತವೆ,” ಎಂದು ಆರ್​ಬಿಐ ಹೇಳಿದೆ.

ಗ್ರಾಹಕರ ಸಾವಿನ ಸಂದರ್ಭದಲ್ಲಿ ಕ್ಲೇಮ್​ಗಳ ವಿಲೇವಾರಿ ಕ್ಲೇಮ್​ಗಳ ಇತ್ಯರ್ಥಕ್ಕಾಗಿ ಬ್ಯಾಂಕ್‌ಗಳು ಮಂಡಳಿಯಿಂದ ಅನುಮೋದಿಸಿದ ನೀತಿಯನ್ನು ಹೊಂದಿರತಕ್ಕದ್ದು ಎಂದು ಆರ್‌ಬಿಐ ಹೇಳಿದೆ. ಇದು ನಾಮಿನೇಷನ್​ಗೆ ನೀತಿ ರೂಪಿಸಲು ಮತ್ತು ಸುರಕ್ಷತಾ ಲಾಕರ್‌ಗಳು/ಸುರಕ್ಷಿತ ಕಸ್ಟಡಿ ಆರ್ಟಿಕಲ್​ಗಳನ್ನು ನಾಮಿನಿಗೆ ಬಿಡುಗಡೆ ಮಾಡಲು ಮತ್ತು ಇತರ ವ್ಯಕ್ತಿಗಳ ಕ್ಲೇಮ್​ಗಳ ನೋಟಿಸ್​ ವಿರುದ್ಧ ರಕ್ಷಣೆ ನೀಡಲು ಬ್ಯಾಂಕ್​ಗಳನ್ನು ಕೇಳಿದೆ.

“ಲಾಕರ್‌ಗಳ ಸುರಕ್ಷಿತ ಕಸ್ಟಡಿಯಲ್ಲಿರುವ ವಸ್ತುಗಳು ಮತ್ತು ಸರಿಯಾದ ನಾಮಿನಿಗೆ ಹಿಂತಿರುಗಿದೆಯೇ ಎಂದು ಖಚಿತಪಡಿಸಿಕೊಳ್ಳಲು, ಸಾವಿಗೆ ಸಂಬಂಧಿಸಿದಂತೆ ಪುರಾವೆಗಳನ್ನು ಪರಿಶೀಲಿಸಲು, ಅನ್ವಯವಾಗುವ ಕಾನೂನುಗಳು ಮತ್ತು ನಿಯಂತ್ರಕ ಮಾರ್ಗಸೂಚಿಗಳ ಪ್ರಕಾರ ಬ್ಯಾಂಕ್​ಗಳು ತಮ್ಮದೇ ಆದ ಕ್ಲೇಮ್ ಫಾರ್ಮ್ಯಾಟ್‌ಗಳನ್ನು ರೂಪಿಸಿಕೊಳ್ಳಬೇಕು,” ಎಂದು ಹೇಳಲಾಗಿದೆ. ಬ್ಯಾಂಕ್​ಗಳು ಕ್ಲೇಮ್​ಗಳನ್ನು ಇತ್ಯರ್ಥಪಡಿಸಬಹುದು. ಮತ್ತು ಠೇವಣಿದಾರರ ಸಾವಿಗೆ ಸಂಬಂಧಿಸಿದ ಸಾಕ್ಷ್ಯ- ಪುರಾವೆಯನ್ನು ಕ್ಲೇಮ್​ ಉದ್ದೇಶಕ್ಕಾಗಿ ಪಡೆದ ದಿನಾಂಕದಿಂದ 15 ದಿನಗಳನ್ನು ಮೀರದ ಅವಧಿಯಲ್ಲಿ ಲಾಕರ್‌ನಲ್ಲಿನ ವಸ್ತುಗಳನ್ನು ಬದುಕುಳಿದವರಿಗೆ(ರು)/ ನಾಮಿನಿಗೆ(ಗಳಿಗೆ) ಬಿಡುಗಡೆ ಮಾಡಬೇಕು ಎಂದು ಆರ್‌ಬಿಐನಿಂದ ಸೇರಿಸಲಾಗಿದೆ.

ಇದನ್ನೂ ಓದಿ: Reserve Bank Of India: ಗ್ರಾಹಕರ ಅನ್​ಕ್ಲೇಮ್ ಡೆಪಾಸಿಟ್ ಬಗ್ಗೆ ಆರ್​ಬಿಐ ಮಹತ್ವದ ತೀರ್ಮಾನ

(New Guidelines For Bank Lockers By Reserve Bank Of India Here Is The Details)

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!