AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೈಲ ಆಮದಿಗೆ ರುಪಾಯಿಯಲ್ಲಿ ಹಣ ಪಾವತಿಸುವ ಆಫರ್; ಸ್ಪಂದಿಸದ ತೈಲ ಪೂರೈಕೆದಾರರು; ಕಾರಣ ಏನು?

No Rupee payment: ಭಾರತೀಯ ರೂಪಾಯಿಯನ್ನು ಅಂತಾರಾಷ್ಟ್ರೀಯ ಕರೆನ್ಸಿ ಮಾಡುವ ಸರ್ಕಾರದ ಗುರಿಗೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿವೆ. ತೈಲ ಆಮದು ಮಾಡಿಕೊಳ್ಳುವಾಗ ರುಪಾಯಿ ಕರೆನ್ಸಿಯಲ್ಲಿ ಹಣ ಪಾವತಿಸುವ ಆಫರ್ ಅನ್ನು ತೈಲ ಪೂರೈಕೆದಾರರು ಒಪ್ಪುತ್ತಿಲ್ಲ. ಸಂಸದೀಯ ಸ್ಥಾಯಿ ಸಮಿತಿಯೊಂದರ ಮುಂದೆ ಕೇಂದ್ರ ತೈಲ ಸಚಿವಾಲಯ ಈ ವಿಚಾರವನ್ನು ಬಹಿರಂಗಪಡಿಸಿದೆ.

ತೈಲ ಆಮದಿಗೆ ರುಪಾಯಿಯಲ್ಲಿ ಹಣ ಪಾವತಿಸುವ ಆಫರ್; ಸ್ಪಂದಿಸದ ತೈಲ ಪೂರೈಕೆದಾರರು; ಕಾರಣ ಏನು?
ರೂಪಾಯಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 24, 2023 | 6:26 PM

Share

ನವದೆಹಲಿ, ಡಿಸೆಂಬರ್ 24: ಭಾರತೀಯ ರೂಪಾಯಿಯನ್ನು ಅಂತಾರಾಷ್ಟ್ರೀಯ ಕರೆನ್ಸಿ (International currency) ಮಾಡುವ ಸರ್ಕಾರದ ಗುರಿಗೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿವೆ. ಕಚ್ಚಾ ತೈಲ ಆಮದು ಮಾಡಿಕೊಳ್ಳಲು ರುಪಾಯಿ ಕರೆನ್ಸಿಯಲ್ಲಿ ಪಾವತಿಸುವ ಭಾರತದ ಆಫರ್​ಗೆ ಯಾರೂ ಸ್ಪಂದಿಸುತ್ತಿಲ್ಲ. ರುಪಾಯಿ ಕರೆನ್ಸಿಯಲ್ಲಿ ಹಣ ಸ್ವೀಕರಿಸಲು ಯಾರೂ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ. ಕೇಂದ್ರ ತೈಲ ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿ (parliamentary standing committee) ಮುಂದೆ ಈ ಸತ್ಯವನ್ನು ಬಿಚ್ಚಿಟ್ಟಿದೆ. ತೈಲ ಪೂರೈಕೆದಾರರು (oil suppliers) ರೂಪಾಯಿ ಕರೆನ್ಸಿಯಲ್ಲಿ ಪಾವತಿ ಸ್ವೀಕರಿಸದೇ ಇರಲು ಸಕಾರಣಗಳಂತೂ ಇವೆ. ಕರೆನ್ಸಿ ಮರುಬಳಕೆ, ಅಧಿಕ ವಹಿವಾಟು ವೆಚ್ಚದ ಸಮಸ್ಯೆಗಳು ತಲೆದೋರುತ್ತವೆಂದು ತೈಲ ಪೂರೈಕೆದಾರರು ಕಾರಣ ನೀಡುತ್ತಾರೆ ಎಂದು ಸರ್ಕಾರ ಹೇಳುತ್ತಿದೆ.

ಕಚ್ಚಾ ತೈಲದ ಬಹುತೇಕ ಎಲ್ಲಾ ವಹಿವಾಟಿನಲ್ಲಿ ಡಾಲರ್ ಕರೆನ್ಸಿಯನ್ನು ಬಳಕೆ ಮಾಡಲಾಗುತ್ತದೆ. ಅದು ವರ್ಷಗಳಿಂದ ಬಂದಿರುವ ಕ್ರಮ. ಡಾಲರ್ ಕರೆನ್ಸಿ ಕೇವಲ ತೈಲ ವಹಿವಾಟಿಗೆ ಮಾತ್ರವಲ್ಲ ಹೆಚ್ಚಿನ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ನಡೆಯುವ ಹಣ ವಹಿವಾಟಿಗೆ ಬಳಕೆ ಆಗುತ್ತದೆ. ಹೀಗಾಗಿ, ವ್ಯಾಪಾರಿಗಳು ಹಣ ಪಾವತಿಗೆ ಡಾಲರ್ ಕರೆನ್ಸಿಯನ್ನೇ ಇಚ್ಛಿಸುತ್ತಾರೆ.

ಇದನ್ನೂ ಓದಿ: ಹೊರ ದೇಶಗಳ ಮಾರುಕಟ್ಟೆ ಮಂದಗೊಂಡರೂ ಭಾರತದ ಆರ್ಥಿಕ ವೃದ್ಧಿಯಿಂದ ಕಾರ್ಪೊರೇಟ್ ಸಂಸ್ಥೆಗಳಿಗೆ ಪುಷ್ಟಿ: ಫಿಚ್ ರೇಟಿಂಗ್ಸ್

ಡಾಲರ್ ಮೇಲಿನ ಅವಲಂಬನೆ ತಪ್ಪಿಸಲು ಮತ್ತು ರುಪಾಯಿ ಕರೆನ್ಸಿ ಬಲಪಡಿಸಲು ಆರ್​ಬಿಐ 2022ರ ಜುಲೈನಲ್ಲಿ ರುಪಾಯಿಯನ್ನ ಅಂತಾರಾಷ್ಟ್ರೀಯ ಕರೆನ್ಸಿಯಾಗಿ ಮಾಡುವ ಪ್ರಯತ್ನ ಮೊದಲಿಟ್ಟಿತು. ತನ್ನ ಆಮದು ಮತ್ತು ರಫ್ತುಗಳಿಗೆ ರುಪಾಯಿ ಕರೆನ್ಸಿಯಲ್ಲೇ ಪಾವತಿ ಆಗುವ ಅವಕಾಶ ತೆರೆದಿಟ್ಟಿತು. ಅದಕ್ಕಾಗಿ ರುಪಾಯಿ ವೋಸ್ಟ್ರೋ ಖಾತೆಯಂತಹ ವ್ಯವಸ್ಥೆ ರೂಪಿಸಿದೆ. ಕೆಲ ವ್ಯಾಪಾರಗಳಲ್ಲಿ ಇದಕ್ಕೆ ಪೂರಕ ಸ್ಪಂದೆ ಸಿಕ್ಕಿದೆಯಾದರೂ ತೈಲ ವ್ಯವಹಾರದಲ್ಲಿ ಇದೂವರೆಗೆ ನಕಾರವೇ ಸಿಕ್ಕಿದೆ.

‘2022-23ರಲ್ಲಿ ಭಾರತದ ಸರ್ಕಾರಿ ತೈಲ ಮಾರುಕಟ್ಟೆ ಸಂಸ್ಥೆಗಳು ಮಾಡಿದ ಆಮದಿಗೆ ರುಪಾಯಿಯಲ್ಲಿ ಹಣ ಪಾವತಿಯಾಗಿದ್ದು ಇಲ್ಲ. ಕಚ್ಚಾ ತೈಲ ಪೂರೈಕೆದಾರರು ರುಪಾಯಿ ಕರೆನ್ಸಿ ಮರುಬಳಕೆ ಸಮಸ್ಯೆಯನ್ನು ಎತ್ತಿ ತೋರಿಸಿದ್ದಾರೆ. ಹಾಗೆಯೇ, ಕರೆನ್ಸಿ ಪರಿವರ್ತನೆಯಲ್ಲಿ ಆಗುವ ಅಧಿಕ ಟ್ರಾನ್ಸಾಕ್ಷನ್ ವೆಚ್ಚದ ಸಮಸ್ಯೆಯನ್ನೂ ಎತ್ತಿತೋರಿಸಿದ್ದಾರೆ,’ ಎಂದು ಸಂಸದೀಯ ಸ್ಥಾಯಿ ಸಮಿತಿ ಬಳಿ ಕೇಂದ್ರ ತೈಲ ಸಚಿವಾಲಯ ಸ್ಪಷ್ಟನೆ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:22 pm, Sun, 24 December 23

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ