AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೈಲ ಆಮದಿಗೆ ರುಪಾಯಿಯಲ್ಲಿ ಹಣ ಪಾವತಿಸುವ ಆಫರ್; ಸ್ಪಂದಿಸದ ತೈಲ ಪೂರೈಕೆದಾರರು; ಕಾರಣ ಏನು?

No Rupee payment: ಭಾರತೀಯ ರೂಪಾಯಿಯನ್ನು ಅಂತಾರಾಷ್ಟ್ರೀಯ ಕರೆನ್ಸಿ ಮಾಡುವ ಸರ್ಕಾರದ ಗುರಿಗೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿವೆ. ತೈಲ ಆಮದು ಮಾಡಿಕೊಳ್ಳುವಾಗ ರುಪಾಯಿ ಕರೆನ್ಸಿಯಲ್ಲಿ ಹಣ ಪಾವತಿಸುವ ಆಫರ್ ಅನ್ನು ತೈಲ ಪೂರೈಕೆದಾರರು ಒಪ್ಪುತ್ತಿಲ್ಲ. ಸಂಸದೀಯ ಸ್ಥಾಯಿ ಸಮಿತಿಯೊಂದರ ಮುಂದೆ ಕೇಂದ್ರ ತೈಲ ಸಚಿವಾಲಯ ಈ ವಿಚಾರವನ್ನು ಬಹಿರಂಗಪಡಿಸಿದೆ.

ತೈಲ ಆಮದಿಗೆ ರುಪಾಯಿಯಲ್ಲಿ ಹಣ ಪಾವತಿಸುವ ಆಫರ್; ಸ್ಪಂದಿಸದ ತೈಲ ಪೂರೈಕೆದಾರರು; ಕಾರಣ ಏನು?
ರೂಪಾಯಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 24, 2023 | 6:26 PM

Share

ಮುಖ್ಯಾಂಶಗಳು

  • ಭಾರತೀಯ ರೂಪಾಯಿಯನ್ನು ಅಂತಾರಾಷ್ಟ್ರೀಯ ಕರೆನ್ಸಿ ಮಾಡುವ ಸರ್ಕಾರದ ಗುರಿಗೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿವೆ.
  • ತೈಲ ಆಮದು ಮಾಡಿಕೊಳ್ಳುವಾಗ ರುಪಾಯಿ ಕರೆನ್ಸಿಯಲ್ಲಿ ಹಣ ಪಾವತಿಸುವ ಆಫರ್ ಅನ್ನು ತೈಲ ಪೂರೈಕೆದಾರರು ಒಪ್ಪುತ್ತಿಲ್ಲ.
  • ಸಂಸದೀಯ ಸ್ಥಾಯಿ ಸಮಿತಿಯೊಂದರ ಮುಂದೆ ಕೇಂದ್ರ ತೈಲ ಸಚಿವಾಲಯ ಈ ವಿಚಾರವನ್ನು ಬಹಿರಂಗಪಡಿಸಿದೆ.

ನವದೆಹಲಿ, ಡಿಸೆಂಬರ್ 24: ಭಾರತೀಯ ರೂಪಾಯಿಯನ್ನು ಅಂತಾರಾಷ್ಟ್ರೀಯ ಕರೆನ್ಸಿ (International currency) ಮಾಡುವ ಸರ್ಕಾರದ ಗುರಿಗೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿವೆ. ಕಚ್ಚಾ ತೈಲ ಆಮದು ಮಾಡಿಕೊಳ್ಳಲು ರುಪಾಯಿ ಕರೆನ್ಸಿಯಲ್ಲಿ ಪಾವತಿಸುವ ಭಾರತದ ಆಫರ್​ಗೆ ಯಾರೂ ಸ್ಪಂದಿಸುತ್ತಿಲ್ಲ. ರುಪಾಯಿ ಕರೆನ್ಸಿಯಲ್ಲಿ ಹಣ ಸ್ವೀಕರಿಸಲು ಯಾರೂ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ. ಕೇಂದ್ರ ತೈಲ ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿ (parliamentary standing committee) ಮುಂದೆ ಈ ಸತ್ಯವನ್ನು ಬಿಚ್ಚಿಟ್ಟಿದೆ. ತೈಲ ಪೂರೈಕೆದಾರರು (oil suppliers) ರೂಪಾಯಿ ಕರೆನ್ಸಿಯಲ್ಲಿ ಪಾವತಿ ಸ್ವೀಕರಿಸದೇ ಇರಲು ಸಕಾರಣಗಳಂತೂ ಇವೆ. ಕರೆನ್ಸಿ ಮರುಬಳಕೆ, ಅಧಿಕ ವಹಿವಾಟು ವೆಚ್ಚದ ಸಮಸ್ಯೆಗಳು ತಲೆದೋರುತ್ತವೆಂದು ತೈಲ ಪೂರೈಕೆದಾರರು ಕಾರಣ ನೀಡುತ್ತಾರೆ ಎಂದು ಸರ್ಕಾರ ಹೇಳುತ್ತಿದೆ.

ಕಚ್ಚಾ ತೈಲದ ಬಹುತೇಕ ಎಲ್ಲಾ ವಹಿವಾಟಿನಲ್ಲಿ ಡಾಲರ್ ಕರೆನ್ಸಿಯನ್ನು ಬಳಕೆ ಮಾಡಲಾಗುತ್ತದೆ. ಅದು ವರ್ಷಗಳಿಂದ ಬಂದಿರುವ ಕ್ರಮ. ಡಾಲರ್ ಕರೆನ್ಸಿ ಕೇವಲ ತೈಲ ವಹಿವಾಟಿಗೆ ಮಾತ್ರವಲ್ಲ ಹೆಚ್ಚಿನ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ನಡೆಯುವ ಹಣ ವಹಿವಾಟಿಗೆ ಬಳಕೆ ಆಗುತ್ತದೆ. ಹೀಗಾಗಿ, ವ್ಯಾಪಾರಿಗಳು ಹಣ ಪಾವತಿಗೆ ಡಾಲರ್ ಕರೆನ್ಸಿಯನ್ನೇ ಇಚ್ಛಿಸುತ್ತಾರೆ.

ಇದನ್ನೂ ಓದಿ: ಹೊರ ದೇಶಗಳ ಮಾರುಕಟ್ಟೆ ಮಂದಗೊಂಡರೂ ಭಾರತದ ಆರ್ಥಿಕ ವೃದ್ಧಿಯಿಂದ ಕಾರ್ಪೊರೇಟ್ ಸಂಸ್ಥೆಗಳಿಗೆ ಪುಷ್ಟಿ: ಫಿಚ್ ರೇಟಿಂಗ್ಸ್

ಡಾಲರ್ ಮೇಲಿನ ಅವಲಂಬನೆ ತಪ್ಪಿಸಲು ಮತ್ತು ರುಪಾಯಿ ಕರೆನ್ಸಿ ಬಲಪಡಿಸಲು ಆರ್​ಬಿಐ 2022ರ ಜುಲೈನಲ್ಲಿ ರುಪಾಯಿಯನ್ನ ಅಂತಾರಾಷ್ಟ್ರೀಯ ಕರೆನ್ಸಿಯಾಗಿ ಮಾಡುವ ಪ್ರಯತ್ನ ಮೊದಲಿಟ್ಟಿತು. ತನ್ನ ಆಮದು ಮತ್ತು ರಫ್ತುಗಳಿಗೆ ರುಪಾಯಿ ಕರೆನ್ಸಿಯಲ್ಲೇ ಪಾವತಿ ಆಗುವ ಅವಕಾಶ ತೆರೆದಿಟ್ಟಿತು. ಅದಕ್ಕಾಗಿ ರುಪಾಯಿ ವೋಸ್ಟ್ರೋ ಖಾತೆಯಂತಹ ವ್ಯವಸ್ಥೆ ರೂಪಿಸಿದೆ. ಕೆಲ ವ್ಯಾಪಾರಗಳಲ್ಲಿ ಇದಕ್ಕೆ ಪೂರಕ ಸ್ಪಂದೆ ಸಿಕ್ಕಿದೆಯಾದರೂ ತೈಲ ವ್ಯವಹಾರದಲ್ಲಿ ಇದೂವರೆಗೆ ನಕಾರವೇ ಸಿಕ್ಕಿದೆ.

‘2022-23ರಲ್ಲಿ ಭಾರತದ ಸರ್ಕಾರಿ ತೈಲ ಮಾರುಕಟ್ಟೆ ಸಂಸ್ಥೆಗಳು ಮಾಡಿದ ಆಮದಿಗೆ ರುಪಾಯಿಯಲ್ಲಿ ಹಣ ಪಾವತಿಯಾಗಿದ್ದು ಇಲ್ಲ. ಕಚ್ಚಾ ತೈಲ ಪೂರೈಕೆದಾರರು ರುಪಾಯಿ ಕರೆನ್ಸಿ ಮರುಬಳಕೆ ಸಮಸ್ಯೆಯನ್ನು ಎತ್ತಿ ತೋರಿಸಿದ್ದಾರೆ. ಹಾಗೆಯೇ, ಕರೆನ್ಸಿ ಪರಿವರ್ತನೆಯಲ್ಲಿ ಆಗುವ ಅಧಿಕ ಟ್ರಾನ್ಸಾಕ್ಷನ್ ವೆಚ್ಚದ ಸಮಸ್ಯೆಯನ್ನೂ ಎತ್ತಿತೋರಿಸಿದ್ದಾರೆ,’ ಎಂದು ಸಂಸದೀಯ ಸ್ಥಾಯಿ ಸಮಿತಿ ಬಳಿ ಕೇಂದ್ರ ತೈಲ ಸಚಿವಾಲಯ ಸ್ಪಷ್ಟನೆ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:22 pm, Sun, 24 December 23

Follow Us
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು