AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar PAN Link: ಪ್ಯಾನ್-ಆಧಾರ್ ಲಿಂಕ್ ವಿಳಂಬ: ಸರ್ಕಾರ ಸಂಗ್ರಹಿಸಿದ ದಂಡದ ಮೊತ್ತ 600 ಕೋಟಿ ರೂ

Central Minister Pankaj Chaudhary Reveals Numbers: ಪ್ಯಾನ್ ನಂಬರ್​ಗಳನ್ನು ಆಧಾರ್​ಗೆ ಲಿಂಕ್ ಮಾಡುವುದು ಕಡ್ಡಾಯ. ಆದರೆ, 11 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್​ಗಳು ಆಧಾರ್​ಗೆ ಲಿಂಕ್ ಆಗಿಲ್ಲ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ವಿಳಂಬವಾಗಿ ಆಧಾರ್​ಗೆ ಲಿಂಕ್ ಮಾಡಿದ ಪ್ಯಾನ್ ಕಾರ್ಡ್​ದಾರರಿಂದ ಸರ್ಕಾರ 600 ಕೋಟಿ ರೂ ದಂಡ ಪಡೆದಿದೆ.

Aadhaar PAN Link: ಪ್ಯಾನ್-ಆಧಾರ್ ಲಿಂಕ್ ವಿಳಂಬ: ಸರ್ಕಾರ ಸಂಗ್ರಹಿಸಿದ ದಂಡದ ಮೊತ್ತ 600 ಕೋಟಿ ರೂ
ಆಧಾರ್ ಪ್ಯಾನ್ ಲಿಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 05, 2024 | 6:16 PM

Share

ನವದೆಹಲಿ, ಫೆಬ್ರುವರಿ 5: ಆಧಾರ್​ಗೆ ಲಿಂಕ್ ಆಗದ ಪ್ಯಾನ್ ಕಾರ್ಡ್​ಗಳ (Aadhaar and PAN link) ಸಂಖ್ಯೆ ದೇಶದಲ್ಲಿ ಬರೋಬ್ಬರಿ 11.48 ಕೋಟಿ ಎಂಬ ಮಾಹಿತಿ ಹೊರಬಂದಿದೆ. ಲೋಕಸಭೆ ಕಲಾಪದ ವೇಳೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ (Pankaj Chaudhary) ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಿರಿಯ ನಾಗರಿಕರು ಹಾಗೂ ಕೆಲ ವರ್ಗಗಳಿಗೆ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ. ಅದನ್ನು ಹೊರತಪಡಿಸಿಯೂ 11 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್​ಗಳು ಆಧಾರ್​ಗೆ ಲಿಂಕ್ ಆಗಿಲ್ಲ ಎನ್ನಲಾಗಿದೆ.

ಇದೇ ವೇಳೆ, ಪ್ಯಾನ್ ಮತ್ತು ಆಧಾರ್ ಅನ್ನು ಜೋಡಿಸಲು ವಿಳಂಬ ಮಾಡಿದ್ದಕ್ಕೆ ಸರ್ಕಾರ ಸಂಗ್ರಹಿಸಿರುವ ದಂಡದ ಮೊತ್ತ 600 ಕೋಟಿ ರೂ ಎಂದು ಸಚಿವರು ಹೇಳಿದ್ದಾರೆ. ಯಾವುದೇ ದಂಡ ಇಲ್ಲದೇ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಲು ಅಂತಿಮ ಗಡುವಾಗಿ ಸರ್ಕಾರ 2023ರ ಜೂನ್ 30 ಅನ್ನು ನಿಗದಿ ಮಾಡಿತ್ತು. ಅದಾದ ಬಳಿಕ ಲಿಂಕ್ ಮಾಡಲು ಅವಕಾಶ ಇದೆಯಾದರೂ 1,000 ರೂ ದಂಡ ಪಾವತಿಸಿ, ಬಳಿಕ ಲಿಂಕ್ ಮಾಡಬೇಕು. ಈ ರೀತಿ ಸರ್ಕಾರ 600 ಕೋಟಿ ರೂ ದಂಡದ ಹಣ ಪಡೆದಿದೆ.

ಇದನ್ನೂ ಓದಿ: ಆಧಾರ್ ನಂಬರ್ ದುರುಪಯೋಗವಾಗುವ ಭಯವಾ? ಈ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿ

‘2023ರ ಜುಲೈ 1ರಿಂದ 2024ರ ಜನವರಿ 31ರವರೆಗೆ ಅಧಾರ್​ಗೆ ಪ್ಯಾನ್ ಲಿಂಕ್ ಮಾಡಲು ಜನರಿಂದ ಸಂಗ್ರಹಿಸಲಾದ ದಂಡದ ಹಣ 601.97 ಕೋಟಿ ರೂ’ ಎಂದು ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಸಚಿವ ಪಂಕಜ್ ಚೌಧರಿ ಉತ್ತರಿಸಿದ್ದಾರೆ.

ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ?

ಆಧಾರ್ ಜೊತೆ ಲಿಂಕ್ ಮಾಡದ ಪ್ಯಾನ್ ಕಾರ್ಡ್​ಗಳು ಇನಾಪರೇಟಿವ್ ಆಗುತ್ತವೆ. ಅಂದರೆ ಅವುಗಳು ನಿಷ್ಕ್ರಿಯಗೊಂಡಂತೆ. ಆಧಾರ್​ಗೆ ಲಿಂಕ್ ಮಾಡಿ ಮತ್ತೆ ಸಕ್ರಿಯಗೊಳಿಸುವವರೆಗೂ ಈ ಪ್ಯಾನ್ ನಿರುಪಯುಕ್ತವಾಗಿರುತ್ತವೆ.

ಈ ನಿಷ್ಕ್ರಿಯ ಪ್ಯಾನ್ ಹೊಂದಿರುವವರಿಗೆ ಆದಾಯ ತೆರಿಗೆಯ ಯಾವ ರೀಫಂಡ್​ಗಳೂ ಸಿಗುವುದಿಲ್ಲ.

ಇವರಿಗೆ ಟಿಡಿಎಸ್ ಮತ್ತು ಟಿಸಿಎಸ್ ತೆರಿಗೆಗಳು ಹೆಚ್ಚಿನ ದರದಲ್ಲಿ ಕಡಿತಗೊಳ್ಳುತ್ತವೆ.

ಇದನ್ನೂ ಓದಿ: ಕೇಂದ್ರದಿಂದ ಅತಿಹೆಚ್ಚು ತೆರಿಗೆ ಪಾಲು ಪಡೆಯುವ ರಾಜ್ಯಗಳ್ಯಾವುವು? ಕರ್ನಾಟಕದ ಪಾಲೆಷ್ಟು? ಇಲ್ಲಿದೆ ತೆರಿಗೆ ಹಂಚಿಕೆ ಸೂತ್ರ ಇತ್ಯಾದಿ ಮಾಹಿತಿ

ಆಧಾರ್ ಮತ್ತು ಪ್ಯಾನ್ ಲಿಂಕ್ ಹೇಗೆ ಮಾಡುವುದು?

ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್​ಗೆ ಹೋದರೆ ಅಲ್ಲಿ ಆಧಾರ್ ಲಿಂಕ್ ಮಾಡುವ ಆಯ್ಕೆ ಕಾಣಬಹುದು. ಈ ಪೋರ್ಟಲ್ ಲಿಂಕ್ ಇಲ್ಲಿದೆ: www.incometax.gov.in

  • ಇಲ್ಲಿ ಕ್ವಿಕ್ ಲಿಂಕ್ಸ್ ಕೆಳಗೆ ‘ಲಿಂಕ್ ಆಧಾರ್’ ಅನ್ನು ಕಾಣಬಹುದು. ಅದನ್ನು ಕ್ಲಿಕ್ ಮಾಡಿ.
  • ಅಲ್ಲಿ ನಿಮ್ಮ ಪ್ಯಾನ್ ನಂಬರ್ ಮತ್ತು ಆಧಾರ್ ನಂಬರ್ ಅನ್ನು ನಮೂದಿಸಿ
  • ಬಳಿಕ ಕಂಟಿನ್ಯೂ ಟು ಪೇ ತ್ರೂ ಇ-ಪೇ ಟ್ಯಾಕ್ಸ್ ಅನ್ನು ಕ್ಲಿಕ್ ಮಾಡಿ
  • ಅಲ್ಲಿ ಪ್ಯಾನ್ ಮತ್ತು ಮೊಬೈಲ್ ನಂಬರ್ ನಮೂದಿಸಿ, ಒಟಿಪಿ ಪಡೆದು ಕಂಟಿನ್ಯೂ ಕೊಡಿ.
  • ಬಳಿಕ ಇನ್ಕಮ ಟ್ಯಾಕ್ಸ್ ಟ್ಯಾಬ್​ನಲ್ಲಿ ಪ್ರೊಸೀಡ್ ಒತ್ತಿರಿ
  • ಅಸೆಸ್ಮೆಂಟ್ ವರ್ಷವನ್ನು ಆಯ್ದುಕೊಳ್ಳಿ.
  • ಪೇಮೆಂಟ್ ವಿಧಾನವನ್ನು ಅದರ್ ರಿಸಿಪ್ಟ್ಸ್ (500) ಎಂದು ಆಯ್ದುಕೊಂಡು ಕಂಟಿನ್ಯೂ ಕ್ಲಿಕ್ ಮಾಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್