Tax: ಕೇಂದ್ರದಿಂದ ಅತಿಹೆಚ್ಚು ತೆರಿಗೆ ಪಾಲು ಪಡೆಯುವ ರಾಜ್ಯಗಳ್ಯಾವುವು? ಕರ್ನಾಟಕದ ಪಾಲೆಷ್ಟು? ಇಲ್ಲಿದೆ ತೆರಿಗೆ ಹಂಚಿಕೆ ಸೂತ್ರ ಇತ್ಯಾದಿ ಮಾಹಿತಿ

Centre and State Tax Devolution Details: ಭಾರತದಲ್ಲಿ ಅತಿಹೆಚ್ಚು ತೆರಿಗೆ ಸಂಗ್ರಹ ಆಗುವುದು ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗುಜರಾತ್ ರಾಜ್ಯಗಳಲ್ಲಿ. ಆದರೆ, ತೆರಿಗೆ ಪಾಲು ಈ ರಾಜ್ಯಗಳಿಗೆ ಕಡಿಮೆ ಸಿಗುತ್ತದೆ. ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಹೆಚ್ಚು ತೆರಿಗೆ ಪಾಲು ಸಿಗುತ್ತದೆ. ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ತೆರಿಗೆ ಹಂಚಿಕೆ ಸೂತ್ರವನ್ನು ಶಿಫಾರಸು ಮಾಡುವುದು ಹಣಕಾಸು ಆಯೋಗ.

Tax: ಕೇಂದ್ರದಿಂದ ಅತಿಹೆಚ್ಚು ತೆರಿಗೆ ಪಾಲು ಪಡೆಯುವ ರಾಜ್ಯಗಳ್ಯಾವುವು? ಕರ್ನಾಟಕದ ಪಾಲೆಷ್ಟು? ಇಲ್ಲಿದೆ ತೆರಿಗೆ ಹಂಚಿಕೆ ಸೂತ್ರ ಇತ್ಯಾದಿ ಮಾಹಿತಿ
ತೆರಿಗೆ
Follow us
|

Updated on:Feb 06, 2024 | 3:17 PM

ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ತೆರಿಗೆ ಹಂಚಿಕೆ (tax sharing) ವಿಚಾರ ಭಾರತದಲ್ಲಿ ಸದಾ ವಿವಾದದಲ್ಲೇ ಇರುತ್ತದೆ. ದಕ್ಷಿಣ ರಾಜ್ಯಗಳಿಂದ (South Indian states) ಬಹಳ ಅಧಿಕ ತೆರಿಗೆ ಮೊತ್ತ ಸಂಗ್ರಹವಾದರೂ ಕೇಂದ್ರದಿಂದ ದೊರಕುತ್ತಿರುವ ತೆರಿಗೆ ಪಾಲು ಬಹಳ ಕಡಿಮೆ ಇದೆ ಎಂದು ಡಿಕೆ ಸುರೇಶ್ ಇತ್ತೀಚೆಗೆ ಆಪಾದಿಸಿ, ದಕ್ಷಿಣ ಭಾರತವನ್ನೇ ಪ್ರತ್ಯೇಕಿಸಬೇಕೆಂದು ಒತ್ತಾಯಿಸಿ ವಿವಾದಕ್ಕೆ ಒಳಗಾಗಿದ್ದಾರೆ. ಈ ತೆರಿಗೆ ಹಂಚಿಕೆ ವಿವಾದ ಮತ್ತು ಆಕ್ಷೇಪ ಹೊಸದೇನಲ್ಲ. ದೇಶದ ಬೇರೆ ಭಾಗಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚು ತೆರಿಗೆ ಸಂಗ್ರಹ ಆಗುತ್ತದೆ ಎನ್ನುವುದು ವಾಸ್ತವ. ಆದರೆ, ಸಿಂಹಪಾಲು ಮಾತ್ರ ಹಿಂದೆ ಪ್ರದೇಶದ ರಾಜ್ಯಗಳಿಗೆ ಎನ್ನುವುದೂ ಕೂಡ ವಸ್ತುಸ್ಥಿತಿಯೇ. ಹಾಗಾದರೆ, ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆಯೇ?

2024-25ರ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ ಕೇಂದ್ರದಿಂದ ಹಂಚಿಕೆಯಾದ ತೆರಿಗೆ ವಿವರ

ಒಟ್ಟು ತೆರಿಗೆ ಹಂಚಿಕೆ: 12,19,782.85 ಕೋಟಿ ರೂ (12.2 ಲಕ್ಷ ಕೋಟಿ ರೂ)

  • ಕಾರ್ಪೊರೇಶನ್ ತೆರಿಗೆ: 3,83,052.63 ಕೋಟಿ ರೂ
  • ವರಮಾನ ತೆರಿಗೆ: 4,22,079.11 ಕೋಟಿ ರೂ
  • ಕೇಂದ್ರೀಯ ತೆರಿಗೆ: 3,79,922.02 ಕೋಟಿ ರೂ
  • ಆಮದು ಸುಂಕ: 24,890.35 ಕೋಟಿ ರೂ
  • ಕೇಂದ್ರ ಅಬಕಾರಿ ಸುಂಕ: 14,883 ಕೋಟಿ ರೂ
  • ಸೇವಾ ತೆರಿಗೆ: 41 ಕೋಟಿ ರೂ
  • ಇತರ ತೆರಿಗೆ: 1,927 ಕೋಟಿ ರೂ

ಇದನ್ನೂ ಓದಿ: ತಂಬಾಕು ಉತ್ಪನ್ನ ತಯಾರಿಸುವ ಯಂತ್ರಗಳ ನೊಂದಣಿ ಆಗದಿದ್ದರೆ ಲಕ್ಷ ರೂ ದಂಡ: ಆದಾಯ ಸೋರಿಕೆ ತಡೆಗೆ ಸರ್ಕಾರ ಕ್ರಮ

ವಿವಿಧ ರಾಜ್ಯಗಳ ತೆರಿಗೆ ಪಾಲು (ಗರಿಷ್ಠದಿಂದ ಕನಿಷ್ಠದವರೆಗೆ)

ಸಂ ರಾಜ್ಯ ಶೇಕಡಾವಾರು ತೆರಿಗೆ ಪಾಲು ತೆರಿಗೆ ಮೊತ್ತ (ಕೋಟಿಯಲ್ಲಿ)
1) ಉತ್ತರ ಪ್ರದೇಶ 17.939% 2,18,816.84
2) ಬಿಹಾರ 10.058% 1,22,685.76
3) ಮಧ್ಯಪ್ರದೇಶ 7.850% 95,752.96
4) ಪಶ್ಚಿಮ ಬಂಗಾಳ 7.523% 91,764.26
5) ಮಹಾರಾಷ್ಟ್ರ 6.317% 77,053.69
6) ರಾಜಸ್ಥಾನ 6.026% 73.504.11
7) ಒಡಿಶಾ 4.528% 55,231.76
8) ತಮಿಳುನಾಡು 4.079% 49,754.95
9) ಆಂಧ್ರಪ್ರದೇಶ 4.047% 49,364.61
10) ಕರ್ನಾಟಕ 3.647% 44,485.59
11) ಗುಜರಾತ್ 3.478% 42,424.05
12) ಛತ್ತೀಸ್​ಗಡ್ 3.407% 41,557.99
13) ಜಾರ್ಖಂಡ್ 3.307% 40,338.22
14) ಅಸ್ಸಾಮ್ 3.128% 38,154.81
15) ತೆಲಂಗಾಣ 2.102% 25,639.84
16) ಕೇರಳ 1.925% 23,480.81
17) ಪಂಜಾಬ್ 1.807% 22,041.48
18) ಅರುಣಾಚಲಪ್ರದೇಶ 1.757% 21,431.59
19) ಉತ್ತರಾಖಂಡ್ 1.118% 13,637.15
20) ಹರ್ಯಾಣ 1.093% 13,332.23
21) ಹಿಮಾಚಲಪ್ರದೇಶ 0.830% 10,124.20
22) ಮೇಘಾಲಯ 0.716% 9,355.73
23) ಮಣಿಪುರ 0.716% 8,733.65
24) ತ್ರಿಪುರಾ 0.708% 8,636.05
25) ನಾಗಾಲ್ಯಾಂಡ್ 0.569% 6,940.56
26) ಮಿಝೋರಾಮ್ 0.500% 6,098.93
27) ಸಿಕ್ಕಿಂ 0.388% 4,732.76
28) ಗೋವಾ 0.386% 4,708.37

ತೆರಿಗೆ ಹಂಚಿಕೆ ಶಿಫಾರಸು ಕೇಂದ್ರದ್ದಲ್ಲ, ಹಣಕಾಸು ಆಯೋಗದ್ದು…

ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ತೆರಿಗೆ ಹಂಚಿಕೆ ಹೇಗೆ ಆಗಬೇಕೆಂದು ಹಣಕಾಸು ಸಚಿವಾಲಯದಿಂದ ಕೂತು ನಿರ್ಧರಿಸುವುದಿಲ್ಲ. ಅದಕ್ಕಾಗೆಂದೇ ಹಣಕಾಸು ಆಯೋಗವನ್ನು ಕಾಲ ಕಾಲಕ್ಕೆ ರಚಿಸಲಾಗುತ್ತದೆ. ಮೊನ್ನೆಮೊನ್ನೆ 16ನೇ ಹಣಕಾಸು ಆಯೋಗ ರಚನೆ ಆಗಿದೆ. ಇದು ಮುಂದಿನ ಐದು ವರ್ಷಗಳಿಗೆ ತೆರಿಗೆ ಹಂಚಿಕೆ ಸೂತ್ರವನ್ನು ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಈಗ ಆಗುತ್ತಿರುವ ತೆರಿಗೆ ಹಂಚಿಕೆಯು 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದು.

ಇದನ್ನೂ ಓದಿ: ಕೇವಲ 27ರ ವಯಸ್ಸಿಗೆ ಬಿಲಿಯನೇರ್ ಆದ ಪರ್ಲ್ ಕಪೂರ್; ಇವರು ಕಟ್ಟಿದ ಝೈಬರ್ 365 ಏಷ್ಯಾದ ಅತಿವೇಗದ ಯೂನಿಕಾರ್ನ್

15ನೇ ಆಯೋಗ ಶಿಫಾರಸು ಮಾಡಿದ ಹಂಚಿಕೆ ಸೂತ್ರ ಇದು

ಶಿಶು ಮರಣ, ಲಿಂಗ ಅನುಪಾತ, ಜನನ ಪ್ರಮಾಣ ಇತ್ಯಾದಿ ಜನಸಂಖ್ಯಾ ಬೆಳವಣಿಗೆ (Demographic performance), ಆದಾಯ, ಜನಸಂಖ್ಯೆ, ರಾಜ್ಯದ ವಿಸ್ತಾರ, ಅರಣ್ಯ ಮತ್ತು ಪರಿಸರ ವ್ಯಾಪ್ತಿ, ತೆರಿಗೆ ಪ್ರಮಾಣ ಇವಿಷ್ಟೂ ಅಂಶಗಳನ್ನು ಪರಿಗಣಿಸಿ ತೆರಿಗೆ ಹಂಚಿಕೆ ಸೂತ್ರ ರಚಿಸಲಾಗುತ್ತದೆ. ಒಂದೊಂದು ಅಂಶಕ್ಕೂ ಪ್ರತ್ಯೇಕ ತೂಕ ಇರುತ್ತದೆ. ಅದರ ವಿವರ ಈ ಕೆಳಕಂಡಂತಿದೆ:

  1. ಜನಸಂಖ್ಯಾ ಬೆಳವಣಿಗೆ (Demographic performance): 12.5%
  2. ಆದಾಯ ಅಂತರ: 45%
  3. ಪ್ರದೇಶದ ವಿಸ್ತಾರ: 15%
  4. ಜನಸಂಖ್ಯೆ: 15%
  5. ಅರಣ್ಯ ಮತ್ತು ಪರಿಸರ: 10%
  6. ತೆರಿಗೆ ಸಂಗ್ರಹ: 2.5%

ಇಲ್ಲಿ ಜನಸಂಖ್ಯೆಯು 1971ರ ಸೆನ್ಸಸ್ ಪ್ರಕಾರವಾಗಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಜನಸಂಖ್ಯಾ  ಬೆಳವಣಿಗೆ ಎಂಬುದು 1971ರ ಸೆನ್ಸಸ್ ಬಳಿಕ ಒಂದು ರಾಜ್ಯದ ಜನಸಂಖ್ಯೆ ಎಷ್ಟು ಹೆಚ್ಚಾಗಿದೆ ಎಂದರ್ಥ. ಆದಾಯ ಅಂತರ ಎಂಬುದು ಅತ್ಯಂತ ಶ್ರೀಮಂತ ರಾಜ್ಯಕ್ಕೆ ಹೋಲಿಸಿದರೆ ಒಂದು ರಾಜ್ಯದ ಆದಾಯದ ಅಂತರ ಎಷ್ಟಿದೆ ಎಂಬುದಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Sun, 4 February 24

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ