AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಧಿಗೂ ಮುನ್ನ ಎಫ್​ಡಿ ವಾಪಸ್ ಪಡೆದರೆ ದಂಡ; ಇಲ್ಲಿದೆ ವಿವರ

Premature withdrawal; ಅನಿವಾರ್ಯ ಸಂದರ್ಭಗಳು ಎದುರಾದರೆ ಎಫ್​ಡಿಯನ್ನು ಅವಧಿಪೂರ್ವ ಹಿಂತೆಗೆಯಲು ಅವಕಾಶವಿದೆ. ಆದರೆ, ಇದಕ್ಕಾಗಿ ಬ್ಯಾಂಕ್​ಗಳು ದಂಡ ಅಥವಾ ವಿವಿಧ ಶುಲ್ಕಗಳನ್ನು ವಿಧಿಸುವ ಸಾಧ್ಯತೆ ಇದೆ. ಈ ಕುರಿತ ವಿವರ ಇಲ್ಲಿ ನೀಡಲಾಗಿದೆ.

ಅವಧಿಗೂ ಮುನ್ನ ಎಫ್​ಡಿ ವಾಪಸ್ ಪಡೆದರೆ ದಂಡ; ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Nov 09, 2022 | 11:37 AM

ಸ್ಥಿರ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ (Fixed Deposit) ಅತ್ಯಂತ ಸುಭದ್ರ ಮತ್ತು ಅಪಾಯರಹಿತ ಹೂಡಿಕೆ ಯೋಜನೆ. ಈ ಮಾದರಿಯಯಲ್ಲಿ ನಿರ್ದಿಷ್ಟ ಮೊತ್ತವೊಂದನ್ನು ನಿಗದಿತ ಅವಧಿಗೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಠೇವಣಿ ಇಡಬೇಕಾಗುತ್ತದೆ. ಅಂದರೆ, ನಿರ್ದಿಷ್ಟ ಅವಧಿಗೂ ಮುನ್ನ ಠೇವಣಿಯನ್ನು ವಾಪಸ್ ಪಡೆಯುವಂತಿಲ್ಲ. ಒಂದು ವೇಳೆ ಅನಿವಾರ್ಯ ಸಂದರ್ಭಗಳು ಎದುರಾದರೆ ಎಫ್​ಡಿಯನ್ನು ಅವಧಿಪೂರ್ವ ಹಿಂತೆಗೆಯಲು ಅವಕಾಶವಿದೆ. ಆದರೆ, ನಿಮಗೆ ಸಿಗಬೇಕಾದ ಬಡ್ಡಿ ಸಿಗದೇ ಹೋಗಬಹುದು. ಅವಧಿಪೂರ್ವ ಹಿಂಪಡೆತಕ್ಕಾಗಿ ಬ್ಯಾಂಕ್​ಗಳು ದಂಡ ಅಥವಾ ವಿವಿಧ ಶುಲ್ಕಗಳನ್ನು ವಿಧಿಸುವ ಸಾಧ್ಯತೆ ಇದೆ.

ಅವಧಿಪೂರ್ವ ಠೇವಣಿ ಹಿಂಪಡೆಯುವಿಕೆ ಎಂದರೆ…

ಒಂದು ನಿರ್ದಿಷ್ಟ ಅವಧಿಗೆ ನಿಗದಿತ ಬಡ್ಡಿ ದರದಲ್ಲಿ ಹೂಡಿಕೆ ಮಾಡುವುದೇ ಸ್ಥಿರ ಠೇವಣಿ. ಉದಾಹರಣೆಗೆ; 3 ವರ್ಷ ಅವಧಿಗೆ ಶೇಕಡಾ 6ರ ಬಡ್ಡಿ ದರದಲ್ಲಿ 10,000 ರೂ. ಸ್ಥಿರ ಠೇವಣಿ ಇಡುತ್ತೇವೆ ಎಂದುಕೊಳ್ಳೋಣ. ಇಲ್ಲಿ 3 ವರ್ಷ ಎಂಬುದು ಠೇವಣಿಯ ಮೆಚ್ಯೂರಿಟಿ ಅವಧಿ. ಅದಕ್ಕೂ ಮುನ್ನ ಅದನ್ನು ಹಿಂಪಡೆಯಲಾಗದು. ಆದರೆ, ಹಣಕಾಸಿನ ತುರ್ತು ಅಥವಾ ಅತಿಯಾದ ಅನಿವಾರ್ಯತೆ ಎದುರಾಗಿ ಅದನ್ನು ಹಿಂಪಡೆಯಬೇಕಾಗಿ ಬಂದರೆ? ಇದಕ್ಕೆ ಅವಕಾಶ ಇದೆ. ಹೀಗೆ ಹಿಂಪಡೆಯುವುದನ್ನೇ ಅವಧಿಪೂರ್ವ ಠೇವಣಿ ಹಿಂಪಡೆಯುವಿಕೆ ಎನ್ನುತ್ತಾರೆ.

ಇದನ್ನೂ ಓದಿ
Image
ಆರೋಗ್ಯ ವಿಮೆ ಪೋರ್ಟ್ ಮಾಡುವುದು ಹೇಗೆ, ಪ್ರಯೋಜನವೇನು? ಇಲ್ಲಿದೆ ವಿವರ
Image
Bank Strike: ನವೆಂಬರ್ 19ಕ್ಕೆ ಬ್ಯಾಂಕ್ ಮುಷ್ಕರ; ಎಟಿಎಂ ಸೇವೆಯಲ್ಲೂ ವ್ಯತ್ಯಯ ಸಾಧ್ಯತೆ
Image
ನಿಮ್ಮ ಪಿಎಫ್​ ಖಾತೆಗೂ ಬಂತೇ ಇಪಿಎಫ್​ ಬಡ್ಡಿ ಹಣ, ಪರಿಶೀಲಿಸುವುದು ಹೇಗೆ? ಇಲ್ಲಿದೆ ನೋಡಿ
Image
ಹೆಚ್ಚಿದ ಡಿಜಿಟಲ್ ಪಾವತಿ, 20 ವರ್ಷಗಳ ಕನಿಷ್ಠಕ್ಕೆ ನಗದು ಚಲಾವಣೆ; ಎಸ್​ಬಿಐ ವರದಿ

ಅವಧಿಗೂ ಮುನ್ನ ಎಫ್​​ಡಿ ವಾಪಸ್ ಪಡೆಯಲು ಏನುಮಾಡಬೇಕು?

  • ಎಫ್​ಡಿಯನ್ನು ಅವಧಿಪೂರ್ವ ಹಿಂಪಡೆಯಲು ಬ್ಯಾಂಕ್​ ಶಾಖೆಗೆ ಭೇಟಿ ನೀಡಲು ಸಾಧ್ಯವಾಗದೇ ಇದ್ದಲ್ಲಿ ನೆಟ್ ಬ್ಯಾಂಕಿಂಗ್ ಮೂಲಕ ಮಾಡಿಕೊಳ್ಳಬಹುದು.
  •  ಎಫ್​​ಡಿ ತೆರೆಯುವ ಸಂದರ್ಭದಲ್ಲಿ ಪಡೆದ ರಶೀದಿಯನ್ನು ಬ್ಯಾಂಕ್​ಗೆ ಸಲ್ಲಿಸಿ ಅವಧಿಪೂರ್ವ ಹಿಂಪಡೆಯುವಿಕೆಗೆ ಮನವಿ ಮಾಡಬಹುದು. ಒಂದು ವೇಳೆ ರಶೀದಿ ಕಳೆದುಹೋಗಿದ್ದಲ್ಲಿ ಎಫ್​ಡಿ ಲಿಕ್ವಿಡೇಷನ್ ಅರ್ಜಿಯನ್ನು ಭರ್ತಿ ಮಾಡಿ ಬ್ಯಾಂಕ್​ಗೆ ಸಲ್ಲಿಸಬೇಕಾಗುತ್ತದೆ. ಇದನ್ನು ಪರಿಶೀಲಿಸಿದ ಬಳಿಕ ಬ್ಯಾಂಕ್​ಗಳು ಠೇವಣಿ ಮೊತ್ತವನ್ನು ವೈಯಕ್ತಿಕ ಖಾತೆಗೆ ವರ್ಗಾಯಿಸುತ್ತವೆ.

ಅವಧಿಪೂರ್ವ ಠೇವಣಿ ಹಿಂಪಡೆಯುವಿಕೆಗೆ ದಂಡಗಳೇನು?

  • ಹೆಚ್ಚಿನ ಬ್ಯಾಂಕ್​ಗಳು ಎಫ್​ಡಿಯ ಅವಧಿಪೂರ್ವ ಹಿಂಪಡೆಯುವಿಕೆಗೆ ಬಡ್ಡಿಯ ಶೇಕಡಾ 0.5ರಿಂದ ಶೇಕಡಾ 1.00ರ ವರೆಗೆ ಶುಲ್ಕ ವಿಧಿಸುತ್ತವೆ.
  • ಎಫ್​ಡಿಯ ಮೊತ್ತವನ್ನು ನೀವು ಠೇವಣಿ ಇಟ್ಟಿರುವ ಅದೇ ಬ್ಯಾಂಕ್​ನ ಬೇರೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದಿದ್ದರೆ ಕೆಲವು ಬ್ಯಾಂಕ್​ಗಳು ಶುಲ್ಕದಿಂದ ವಿನಾಯಿತಿ ನೀಡುವ ಸಾಧ್ಯತೆಯೂ ಇರುತ್ತದೆ.
  • ಎಫ್​ಡಿಯನ್ನು ಅವಧಿಗೂ ಮುನ್ನ ಹಿಂಪಡೆಯುವಾಗ ಠೇವಣಿ ಇಡುವ ಸಂದರ್ಭದಲ್ಲಿ ಭರವಸೆ ನೀಡಿದ್ದ ಪ್ರಮಾಣದಲ್ಲಿ ಬಡ್ಡಿ ದೊರೆಯಲಾರದು. ಮೂರು ವರ್ಷಕ್ಕೆ ಶೇಕಡಾ 8ರ ಬಡ್ಡಿ ದರದಲ್ಲಿ ನೀವು ಠೇವಣಿ ಇಟ್ಟು, ಒಂದು ವರ್ಷದ ಬಳಿಕ ಹಿಂತೆಗೆದುಕೊಂಡರೆ ಬಡ್ಡಿ ದರ ಶೇಕಡಾ 6ಕ್ಕೆ ಕಡಿತವಾಗುವ ಸಾಧ್ಯತೆ ಇದೆ. ಜತೆಗೆ ಈ ಬಡ್ಡಿ ದರದ ಮೇಲೆ ಅವಧಿಪೂರ್ವ ಹಿಂಪಡೆಯುವಿಕೆ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.
  • ಎಫ್​ಡಿಯ ಅವಧಿಪೂರ್ವ ಹಿಂಪಡೆಯುವಿಕೆಗೆ ಬ್ಯಾಂಕ್​ಗಳು ದಂಡವನ್ನೂ ವಿಧಿಸುತ್ತವೆ. ಸಾಮಾನ್ಯವಾಗಿ ಎಫ್​ಡಿಯಿಂದ ದೊರೆಯುವ ಬಡ್ಡಿಯ ಶೇಕಡಾ 0.5ರಿಂದ ಶೇಕಡಾ 1.00ರ ವರೆಗೆ ದಂಡ ವಿಧಿಸಲಾಗುತ್ತದೆ.

ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ