AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PF Rules Change: ಯುಎಎನ್ ಜತೆಗೆ ಆಧಾರ್ ಜೋಡಣೆ ಆಗದಿದ್ದಲ್ಲಿ ಉದ್ಯೋಗಿ ಪಿಎಫ್​ ಖಾತೆಗೆ ಹಣ ಜಮೆ ಆಗಲ್ಲ

ಒಂದು ವೇಳೆ ಸೆಪ್ಟೆಂಬರ್ 1ರೊಳಗೆ ಪಿಎಫ್​ ಯುಎಎನ್​ ಜತೆಗೆ ಆಧಾರ್ ಜೋಡಣೆ ಆಗದಿದ್ದಲ್ಲಿ ಉದ್ಯೋಗದಾತರಿಂದ ಉದ್ಯೋಗಿಗಳಿಗೆ ಪಿಎಫ್​ ಕೊಡುಗೆ ಮತ್ತಿತರ ಅನುಕೂಲಗಳು ದೊರೆಯುವುದಿಲ್ಲ.

PF Rules Change: ಯುಎಎನ್ ಜತೆಗೆ ಆಧಾರ್ ಜೋಡಣೆ ಆಗದಿದ್ದಲ್ಲಿ ಉದ್ಯೋಗಿ ಪಿಎಫ್​ ಖಾತೆಗೆ ಹಣ ಜಮೆ ಆಗಲ್ಲ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 17, 2021 | 5:44 PM

Share

ಕಾರ್ಮಿಕ ಭವಿಷ್ಯ ನಿಧಿ (ಇಪಿಎಫ್​) ಚಂದಾದಾರರು ತಮ್ಮ ಆಧಾರ್​ ಕಾರ್ಡ್​ ಅನ್ನು ಪ್ರಾವಿಡೆಂಟ್​ ಫಂಡ್​ (ಪಿಎಫ್​) ಖಾತೆಗೆ ಜೋಡಣೆ ಮಾಡುವುದಕ್ಕೆ ಸೆಪ್ಟೆಂಬರ್ 1ರ ತನಕ ಕಾಲಾವಧಿ ವಿಸ್ತರಣೆ ಆಗಿದೆ. ಪಿಎಫ್​ ಯುಎಎನ್​ (ಯೂನಿವರ್ಸಲ್ ಅಕೌಂಟ್ ನಂಬರ್)ಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದನ್ನು ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟ (ಇಪಿಎಫ್​ಒ)ದಿಂದ ಕಡ್ಡಾಯಗೊಳಿಸಲಾಗಿದೆ. ಹೀಗೆ ಮಾಡಿದರಷ್ಟೇ ಉದ್ಯೋಗದಾತರ ಪಿಎಫ್ ಕೊಡುಗೆ ಮತ್ತು ಇತರ ಅನುಕೂಲಗಳು ದೊರೆಯುತ್ತವೆ. ಈ ಹಿಂದೆ ಇದಕ್ಕಾಗಿ ಜೂನ್ 1, 2021ರ ಗಡುವು ಇತ್ತು. ಅದನ್ನು ಸೆಪ್ಟೆಂಬರ್ 1, 2021ಕ್ಕೆ ವಿಸ್ತರಿಸಲಾಯಿತು. “ಯುಎಎನ್​ ಜೊತೆಗೆ ಆಧಾರ್ ಜೋಡಣೆ ಕಡ್ಡಾಯ. ಒಂದು ವೇಳೆ ಜೋಡಣೆ ಆಗದಿದ್ದಲ್ಲಿ ಸೆಪ್ಟೆಂಬರ್ 1, 2021ರಿಂದ ಜಾರಿಗೆ ಬರುವಂತೆ ಉದ್ಯೋಗದಾತರಿಗೆ ಪಿಎಫ್ ಹಣ ಹಾಕಲು ಆಗುವುದಿಲ್ಲ,” ಎಂದು ತಿಳಿಸಲಾಗಿದೆ.

ಈ ಹೊಸ ನಿಯಮವನ್ನು ಜಾರಿಗೆ ತರುವುದರ ಸಲುವಾಗಿ ಸಾಮಾಜಿಕ ಭದ್ರತೆ ಸಂಹಿತೆ 2020, ಸೆಕ್ಷನ್ 142ಕ್ಕೆ ಕಾರ್ಮಿಕ ಸಚಿವಾಲಯದಿಂದ ತಿದ್ದುಪಡಿ ತರಲಾಗಿದೆ. ಸೆಕ್ಷನ್ 142ರ ಪ್ರಕಾರ, ಉದ್ಯೋಗಿ ಅಥವಾ ಅಸಂಘಟಿತ ವಲಯದ ಕಾರ್ಮಿಕರು ಅಥವಾ ಇನ್ಯಾವುದೇ ವ್ಯಕ್ತಿಗಳು ಈ ಸಂಹಿತೆ ಅಡಿಯಲ್ಲಿ ಅನುಕೂಲ ಪಡೆಯಲು ಆಧಾರ್ ಸಂಖ್ಯೆ ಮೂಲಕ ಗುರುತಿಸಬೇಕು. ಯುಎಎನ್​ ಜತೆ ಆಧಾರ್ ವೆರಿಫೈ ಆದ ಎಲೆಕ್ಟ್ರಾನಿಕ್ ಚಲನ್ ಕಮ್ ರೆಸಿಟ್ ಅಥವಾ ಪಿಎಫ್​ ರಿಟರ್ನ್ (ಇಸಿಆರ್) ಫೈಲಿಂಗ್​ ಜಾರಿಗೆ ಆಗುವುದಕ್ಕೆ ಸೆಪ್ಟೆಂಬರ್​ 1, 2021ಕ್ಕೆ ವಿಸ್ತರಣೆ ಆಗಿದೆ. ಇಪಿಎಫ್​ಒ ಹೇಳಿದ ಪ್ರಕಾರ, ಯಾವ ಉದ್ಯೋಗಿಯ ಪಿಎಫ್​ ಯುಎಎನ್ ಜತೆಗೆ ಆಧಾರ್​ ಜೋಡಣೆ ಆಗಿರುತ್ತದೋ ಅಂಥವರ ಇಸಿಆರ್ ಫೈಲ್ ಮಾಡುವುದಕ್ಕೆ ಮಾತ್ರ ಉದ್ಯೋಗದಾತರಿಗೆ ಸಾಧ್ಯವಾಗುತ್ತದೆ. ಯುಎಎನ್​ ಜತೆಗೆ ಆಧಾರ್ ಜೋಡಣೆ ಆಗದ್ದಕ್ಕೆ ಉದ್ಯೋಗದಾತರು ಪ್ರತ್ಯೇಕವಾಗಿ ಇಸಿಆರ್​ ಫೈಲ್ ಮಾಡಬಹುದು ಎಂದು ಹೇಳಲಾಗಿದೆ.

ಎಲ್ಲ ಬಗೆಯ ಅನುಕೂಲಕ್ಕೂ ಇಪಿಎಫ್​ಒ ಆನ್​ಲೈನ್​ಗೆ ಬದಲಾಗುತ್ತಿದೆ. ಅದು ಕೆವೈಸಿ ಅಪ್​ಡೇಷನ್ ಇರಬಹುದು, ಮುಂಗಡಕ್ಕೆ ಮನವಿ, ವಿಥ್​ಡ್ರಾ ಮುಂತಾದವಕ್ಕೆ ಇರಬಹುದು. ಆದ್ದರಿಂದ ಫಲಾನುಭವಿಯ ಗುರುತನ್ನು ರೂಪಿಸುವುದು ಬಹಳ ಮುಖ್ಯ. ಅದಕ್ಕಾಗಿ ಆಧಾರ್ ಸೂಚಿಸಲಾಗಿದೆ ಎನ್ನುತ್ತಾರೆ ತಜ್ಞರು. ಅಧಾರ್ ಮಾಹಿತಿ ಅಪ್​ಡೇಟ್​ ಆಗಲಿಲ್ಲ ಎಂದಾದಲ್ಲಿ ಇಪಿಎಫ್​ನ ಇತರ ಅನುಕೂಲಗಳು ಸಹ ಕಳೆದುಕೊಳ್ಳಬೇಕಾಗುತ್ತದೆ. ಕೊವಿಡ್- 19 ಅಡ್ವಾನ್ಸ್, ಪಿಎಫ್​ ಖಾತೆಗೆ ಜೋಡಣೆಯಾದ ಇನ್ಷೂರೆನ್ಸ್ ಸಿಗಲ್ಲ. ಪ್ಯಾನ್​ ಕಾರ್ಡ್​ ಜತೆಗೆ ಆಧಾರ್​ ಜೋಡಣೆ ಆಗುವುದು ಎಲ್ಲ ಬ್ಯಾಂಕ್​ಗಳು, ಪಿಪಿಎಫ್ ಖಾತೆಗಳು ಮತ್ತು ಇಎಫ್​ಪಿ ಖಾತೆಗಳಿಗೆ ಪ್ರಾಥಮಿಕ ಕೆವೈಸಿ ಅಗತ್ಯ. ಒಂದು ವೇಳೆ ಇದು ಆಗದಿದ್ದಲ್ಲಿ ಬಡ್ಡಿ ಜಮೆ ಹಾಗೂ ವಿಥ್​ಡ್ರಾ ಕ್ಲೇಮ್​ ತಿರಸ್ಕೃತವಾಗುತ್ತದೆ. ಉದ್ಯೋಗದಾತರು ಈಗಿನ ವಿಸ್ತರಣೆಯಾದ ಸಮಯವನ್ನು ಬಳಸಿಕೊಂಡು ಉದ್ಯೋಗಿಗಳಿಗೆ ಮಾಹಿತಿ ರವಾನಿಸಬೇಕು. ಒಂದು ವೇಳೆ ಜೋಡಣೆ ಆಗದಿದ್ದಲ್ಲಿ ಅದರ ಪರಿಣಾಮ ಏನು ಹಾಗೂ ಜೋಡಿಸುವುದು ಹೇಗೆ ಎಂಬುದನ್ನು ಮಾರ್ದರ್ಶನ ನೀಡಿ, ಅದನ್ನು ಪೂರ್ಣಗೊಳಿಸಲು ಸಹಕರಿಸಬೇಕು ಎನ್ನುತ್ತಾರೆ ವಿಶ್ಲೇಷಕರು.

ಇದನ್ನೂ ಓದಿ: Aadhaar matching deferred: ಆಧಾರ್ ಜತೆ ಉದ್ಯೋಗಿ ಮಾಹಿತಿ ತಾಳೆ ಆಗಲು ಸೆ.​1ಕ್ಕೆ ಗಡುವು ಮುಂದೂಡಿದ ಇಪಿಎಫ್​ಒ

(If employees not followed new rules money will not be credited to EPF account by employer)

Follow Us
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ
ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ
ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು