AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರಿನ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್​ ಸೇರಿದಂತೆ 4 ಕೋ ಆಪರೇಟಿವ್ ಬ್ಯಾಂಕ್​ ಗ್ರಾಹಕರಿಗೆ ವಿಥ್​ ಡ್ರಾ ಮಿತಿ ಹೇರಿದ ಆರ್​ಬಿಐ

ನಾಲ್ಕು ಕೋ ಆಪರೇಟಿವ್​ ಬ್ಯಾಂಕ್​ಗಳ ಗ್ರಾಹಕರಿಗೆ ಹಣ ವಿಥ್​ಡ್ರಾ ಮಾಡುವುದಕ್ಕೆ ಮಿತಿ ವಿಧಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶ ಹೊರಡಿಸಿದೆ.

ತುಮಕೂರಿನ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್​ ಸೇರಿದಂತೆ 4 ಕೋ ಆಪರೇಟಿವ್ ಬ್ಯಾಂಕ್​ ಗ್ರಾಹಕರಿಗೆ ವಿಥ್​ ಡ್ರಾ ಮಿತಿ ಹೇರಿದ ಆರ್​ಬಿಐ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 09, 2022 | 5:56 PM

Share

ಭಾರತೀಯ ರಿಸರ್ವ್ ಬ್ಯಾಂಕ್ (RBI) ನಾಲ್ಕು ಸಹಕಾರಿ ಬ್ಯಾಂಕ್​ಗಳ ಮೇಲೆ ವಿವಿಧ ನಿರ್ಬಂಧಗಳನ್ನು ಹೇರಿದೆ. ನವದೆಹಲಿಯ ರಾಮ್‌ಗರ್ಹಿಯಾ ಸಹಕಾರಿ ಬ್ಯಾಂಕ್, ಮುಂಬೈನ ಸಾಹೇಬರಾವ್ ದೇಶಮುಖ ಸಹಕಾರಿ ಬ್ಯಾಂಕ್, ಮುಂಬೈನ ಸಾಂಗ್ಲಿ ಸಹಕಾರಿ ಬ್ಯಾಂಕ್, ಕರ್ನಾಟಕದ ತುಮಕೂರಿನಲ್ಲಿನ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ ಲಿಮಿಟೆಡ್ ಮೇಲೆ ನಿರ್ಬಂಧ ಹೇರಲಾಗಿದೆ. ಆರ್‌ಬಿಐನಿಂದ ಆರು ತಿಂಗಳವರೆಗೆ ಈ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದರಲ್ಲಿ ಠೇವಣಿದಾರರಿಗೆ ಹಿಂಪಡೆಯುವ ಮಿತಿ ಸಹ ಒಳಗೊಂಡಿದೆ. ಈ ನಾಲ್ಕು ಸಹಕಾರಿ ಬ್ಯಾಂಕ್‌ಗಳ ಹದಗೆಡುತ್ತಿರುವ ಹಣಕಾಸಿನ ಸ್ಥಿತಿಗತಿಗಳನ್ನು ಗಮನಿಸಿ ಕೇಂದ್ರೀಯ ಬ್ಯಾಂಕ್ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಅಡಿಯಲ್ಲಿ ನಿರ್ಬಂಧಗಳನ್ನು ಹಾಕಿದೆ.

ಆರ್‌ಬಿಐ ಶುಕ್ರವಾರ ಹೊರಡಿಸಿದ ನಿರ್ದೇಶನದ ಪ್ರಕಾರ, ಜುಲೈ 8, 2022ರಂದು ವ್ಯವಹಾರದ ಅವಧಿಯು ಮುಗಿದ ನಂತರದಲ್ಲಿ ಈ ನಿರ್ಬಂಧವು ಜಾರಿಗೆ ಬಂದಿದೆ. ಆರ್‌ಬಿಐನ ಪೂರ್ವಾನುಮತಿ ಇಲ್ಲದೆ, ಈ ನಾಲ್ಕು ಬ್ಯಾಂಕ್‌ಗಳು ಯಾವುದೇ ಸಾಲವನ್ನು ನೀಡಲು ಅಥವಾ ರಿನೀವಲ್ ಮಾಡಲು, ಹೂಡಿಕೆ ಮಾಡಲು ಅಥವಾ ಹೊಸ ಠೇವಣಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಅಲ್ಲದೆ, ಈ ನಾಲ್ಕು ಸಹಕಾರಿ ಬ್ಯಾಂಕ್‌ಗಳ ಠೇವಣಿದಾರರ ಹಿಂಪಡೆಯುವುದಕ್ಕೆ ಮಿತಿಯನ್ನು ವಿಧಿಸಲಾಗಿದೆ.

ರಾಮಗರ್ಹಿಯಾ ಸಹಕಾರಿ ಬ್ಯಾಂಕ್ – ಠೇವಣಿದಾರರು ಗರಿಷ್ಠ 50,000 ರೂ. ವಿಥ್​ಡ್ರಾ ಮಾಡಬಹುದು

ಸಾಹೇಬರಾವ್ ದೇಶಮುಖ್ ಸಹಕಾರಿ ಬ್ಯಾಂಕ್ – ಠೇವಣಿದಾರರಿಗೆ 50,000 ರೂ. ಮಿತಿ ಇದೆ

ಸಾಂಗ್ಲಿ ಸಹಕಾರಿ ಬ್ಯಾಂಕ್- ಪ್ರತಿ ಠೇವಣಿದಾರರಿಗೆ 45,000 ರೂ. ಮಿತಿ ಹಾಕಲಾಗಿದೆ

ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ – ಠೇವಣಿದಾರರು ಗರಿಷ್ಠ 7,000 ರೂ. ವಿಥ್​ಡ್ರಾ ಮಾಡಬಹುದು

ಪ್ರತ್ಯೇಕ ಹೇಳಿಕೆಗಳಲ್ಲಿ ಈ ಬಗ್ಗೆ ತಿಳಿಸಿರುವ ಕೇಂದ್ರ ಬ್ಯಾಂಕ್​, ಆರ್‌ಬಿಐ ನಿರ್ದೇಶನಗಳನ್ನು ಸೆಂಟ್ರಲ್ ಬ್ಯಾಂಕ್‌ನಿಂದ “ಬ್ಯಾಂಕಿಂಗ್ ಪರವಾನಗಿಯ ರದ್ದತಿ ಎಂದು ಅರ್ಥೈಸಿಕೊಳ್ಳಬಾರದು” ಎಂಬುದಾಗಿ ಹೇಳಿದೆ. ಪ್ರತಿಯೊಂದು ಪ್ರಕರಣದಲ್ಲಿ, ಸಂದರ್ಭಗಳಿಗೆ ಅನುಗುಣವಾಗಿ ನಿರ್ದೇಶನಗಳ ಮಾರ್ಪಾಡುಗಳನ್ನು ಪರಿಗಣಿಸಬಹುದು ಎಂದು ಆರ್‌ಬಿಐ ಹೇಳಿದೆ.

Published On - 5:56 pm, Sat, 9 July 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ