AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inflation: ಈ ಹಣಕಾಸು ವರ್ಷದ  ದ್ವಿತೀಯಾರ್ಧದಲ್ಲಿ ಹಣದುಬ್ಬರ ದರ ಕಡಿಮೆ ಆಗುವ ನಿರೀಕ್ಷೆಯಿದೆ ಎಂದ ಆರ್​ಬಿಐ ಗವರ್ನರ್

2022-23ರ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಹಣದುಬ್ಬರ ದರ ಸುಧಾರಿಸುವ ನಿರೀಕ್ಷೆ ಇದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

Inflation: ಈ ಹಣಕಾಸು ವರ್ಷದ  ದ್ವಿತೀಯಾರ್ಧದಲ್ಲಿ ಹಣದುಬ್ಬರ ದರ ಕಡಿಮೆ ಆಗುವ ನಿರೀಕ್ಷೆಯಿದೆ ಎಂದ ಆರ್​ಬಿಐ ಗವರ್ನರ್
ಶಕ್ತಿಕಾಂತ ದಾಸ್ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on: Jul 09, 2022 | 4:13 PM

Share

ಪ್ರಸಕ್ತ ಹಣಕಾಸು ವರ್ಷ 2022-23ರ  ದ್ವಿತೀಯಾರ್ಧದಲ್ಲಿ ಭಾರತದ ಹಣದುಬ್ಬರ ದರ ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ ಎಂಬ ನಿರೀಕ್ಷೆಯಿದೆ. ಬಿಗುವಾದ ಹಣಕಾಸು ನೀತಿಯ ಹಿನ್ನೆಲೆಯಲ್ಲಿ ಇಂಥದ್ದೊಂದು ಬೆಳವಣಿಗೆ ಆಗಲಿದೆ ಎಂದು ಆರ್​ಬಿಐ (RBI) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಇನ್​​ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋಥ್ ಆಯೋಜಿಸಿದ್ದ ಕೌಟಿಲ್ಯ ಎಕನಾಮಿಕ್ ಕಾನ್​ಕ್ಲೇವ್​ನಲ್ಲಿ ದಾಸ್ ಅವರು ಈ ಮಾತನ್ನು ಹೇಳಿದ್ದಾರೆ. ಸದ್ಯಕ್ಕೆ ಚಿಲ್ಲರೆ ಹಣದುಬ್ಬರ ದರವು ಸತತ ಐದನೇ ತಿಂಗಳು ಆರ್​ಬಿಐನ ಮೇಲ್​ಸ್ತರದ ಸಹಿಷ್ಣುತಾ ದರವಾದ ಶೇ 6ಕ್ಕಿಂತ ಹೆಚ್ಚಿದೆ. ಇದರ ಹೊರತಾಗಿ ದೇಶೀಯ ಸಗಟು ದರ ಸೂಚ್ಯಂಕ ಹಣದುಬ್ಬರವು ಒಂದು ವರ್ಷದಿಂದ ಎರಡಂಕಿಯಲ್ಲಿದೆ. ಸದ್ಯಕ್ಕೆ ಆರ್​ಬಿಐಗೆ ಸೂಚನೆ ನೀಡಿರುವಂತೆ ಚಿಲ್ಲರೆ ಹಣದುಬ್ಬರ ದರವನ್ನು 4 ಪರ್ಸೆಂಟ್​ನ ಆಚೀಚೆ ಮೇಲ್​ಸ್ತರದ 2 ಹಾಗೂ ಕೆಳಸ್ತರದ 2 ಪರ್ಸೆಂಟ್ ಅಂದರೆ, ಎರಡೂ ಬದಿಯಲ್ಲಿ 200 ಬೇಸಿಸ್ ಪಾಯಿಂಟ್ಸ್​ನಲ್ಲಿ ನಿರ್ವಹಿಸುವಂತೆ ಸೂಚಿಸಲಾಗಿದೆ.

2021ರ ಏಪ್ರಿಲ್​ನಿಂದ ಜೂನ್ ಮಧ್ಯೆ ಭಾರತವು ಬಹಳ ತೀಕ್ಷ್ಣ ಸ್ವರೂಪದ ಕೊವಿಡ್-19 ಎರಡನೇ ಅಲೆಯನ್ನು ಅನುಭವಿಸಿತು. ಇದರಿಂದಾಗಿ ಸ್ಥಳೀಯ ಲಾಕ್​ಡೌನ್ ಮಾಡಬೇಕಾಯಿತು. ಅದರಿಂದಾಗಿ ಪೂರೈಕೆ ಜಾಲಕ್ಕೆ ಸಮಸ್ಯೆಯಾಯಿತು. ರೀಟೇಲ್ ಮಾರ್ಜಿನ್ಸ್ ಹೆಚ್ಚಳವಾಗಿ, ಅದರ ಪರಿಣಾಮ ಎಂಬಂತೆ 2021ರ ಮೇ- ಜೂನ್ ತಿಂಗಳಲ್ಲಿ ಹಣದುಬ್ಬರ ದರವು ಶೇ 6ಕ್ಕಿಂತ ಮೇಲೇರಿತು. ಇನ್ನು ಈಗಿನ ಜಾಗತಿಕ ಪದಾರ್ಥಗಳ ಬೆಲೆ ಏರಿಕೆ ಸಹ ಹಣದುಬ್ಬರದ ಮೇಲೆ ಒತ್ತಡ ಹೇರಿತು. 2020-21ರ ಮೊದಲ ತ್ರೈಮಾಸಿಕದಲ್ಲಿ ರಿಯಲ್ ಜಿಡಿಪಿ ಶೇ 23.8ರಷ್ಟು ಭಾರೀ ಪ್ರಮಾಣದಲ್ಲಿ ನೆಲ ಕಚ್ಚಿತು. ಒಟ್ಟಾರೆ ನೋಡಿದಾಗ 2020-21ರ ಹಣಕಾಸು ವರ್ಷದಲ್ಲಿ ಪೂರ್ತಿ ವರ್ಷಕ್ಕೆ ಶೇ 6.6ರಷ್ಟು ಇಳಿಕೆಯಾಯಿತು.

ಆಹಾರ ಬೆಲೆಗಳ ಬಗ್ಗೆ ಮಾತನಾಡಿದ ದಾಸ್, ಜಾಗತಿಕ ಮಟ್ಟದಲ್ಲೇ ಮಾರ್ಚ್​ನಲ್ಲಿ ಐತಿಹಾಸಿಕ ಎತ್ತರವನ್ನು ತಲುಪಿತು. ಆ ಪರಿಣಾಮವನ್ನು ಖಾದ್ಯ ತೈಲ, ದೇಶೀ ಗೋಧಿ ಬೆಲೆ ಮತ್ತಿತರದರಲ್ಲಿ ಕಾಣಿಸಿತು ಎಂದು ಹೇಳಿದ್ದಾರೆ. ಹಣದುಬ್ಬರ ಒತ್ತಡ ಸಾಮಾನ್ಯವಾಗಿರುವುದರಿಂದ ಹಣಕಾಸು ನೀತಿ ಸಮಿತಿಯು ಏಪ್ರಿಲ್ ಮತ್ತು ಜೂನ್ ಸಭೆಯಲ್ಲಿ 2022-23ರ ಹಣದುಬ್ಬರ ಪರಿಷ್ಕೃತ ದರವನ್ನು ಶೇ 6.7 ಎಂದಿದೆ. ಇದರ ಜತೆಗೆ ರೆಪೋ ದರವನ್ನು ಮೇ ಹಾಗೂ ಜೂನ್​ನಲ್ಲಿ ಕ್ರಮವಾಗಿ 40 ಮತ್ತು 50 ಬೇಸಿಸ್ ಪಾಯಿಂಟ್ಸ್ ಏರಿಕೆ ಮಾಡಲಾಗಿದೆ.

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್