AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rupee: ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿಗೆ ವ್ಯಾಪಕ ಸ್ವೀಕಾರಾರ್ಹತೆ ತರಲು ಆರ್​ಬಿಐ ಗಟ್ಟಿ ಪ್ರಯತ್ನ ಬೇಕು ಅಂತಿದೆ ಎಸ್​ಬಿಐ ರೀಸರ್ಚ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ರೂಪಾಯಿಗೆ ವ್ಯಾಪಕ ಸ್ವೀಕಾರಾರ್ಹತೆ ತಂದುಕೊಡುವುದಕ್ಕೆ ಆರ್​ಬಿಐನಿಂದ ಗಟ್ಟಿ ಪ್ರಯತ್ನ ಮಾಡಬೇಕು ಎಂದು ಎಸ್​ಬಿಐ ರೀಸರ್ಚ್ ಹೇಳಿದೆ.

Rupee: ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿಗೆ ವ್ಯಾಪಕ ಸ್ವೀಕಾರಾರ್ಹತೆ ತರಲು ಆರ್​ಬಿಐ ಗಟ್ಟಿ ಪ್ರಯತ್ನ ಬೇಕು ಅಂತಿದೆ ಎಸ್​ಬಿಐ ರೀಸರ್ಚ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 08, 2022 | 1:14 PM

Share

ಈಗ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದಿಂದ ಉಂಟಾಗಿರುವ ಪಾವತಿಗಳ ಅಡಚಣೆಗಳ ಮಧ್ಯೆ ಭಾರತೀಯ ಕರೆನ್ಸಿ ರೂಪಾಯಿಯನ್ನು ಅಂತಾರಾಷ್ಟ್ರೀಯಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗಟ್ಟಿ ಪ್ರಯತ್ನವನ್ನು ಮಾಡಬೇಕು ಎಂದು ಎಸ್‌ಬಿಐ ರೀಸರ್ಚ್ ಗುರುವಾರ ವರದಿಯಲ್ಲಿ ತಿಳಿಸಿದೆ. ಕೆಲವು ಸಣ್ಣ ರಫ್ತು ಪಾಲುದಾರರಿಂದ ಆರಂಭವಾಗಿ ರೂಪಾಯಿಯಲ್ಲಿ ರಫ್ತು ತೀರುವಳಿಯನ್ನು ಮಾಡುವಂತೆ ಒತ್ತಾಯಿಸಲು ಇದು ಉತ್ತಮ ಅವಕಾಶ ಆಗಿದೆ ಎಂದು ವರದಿ ಹೇಳಿದೆ. ವಿನಿಮಯದ ಮಾಧ್ಯಮವಾಗಿ ಪ್ರಪಂಚದಾದ್ಯಂತ ವ್ಯಾಪಕವಾಗಿ ಅಂಗೀಕರಿಸಿದರೆ ಅಂಥ ಕರೆನ್ಸಿಯನ್ನು “ಅಂತಾರಾಷ್ಟ್ರೀಯ” ಎಂದು ಕರೆಯಬಹುದು.

ಬಾಹ್ಯ ವಾಣಿಜ್ಯ ಸಾಲಗಳು ಮತ್ತು ಸಾಲ ವಿಭಾಗದಲ್ಲಿ ವಿದೇಶೀ ಬಂಡವಾಳ ಹೂಡಿಕೆ ಒಳಹರಿವಿನ ಮೇಲೆ ಆರ್‌ಬಿಐನ ಇತ್ತೀಚಿನ ಕ್ರಮಗಳನ್ನು ಇದು ಸ್ವಾಗತಿಸುತ್ತದೆ, ಇದು ಮಾರುಕಟ್ಟೆಯನ್ನು ವಿಸ್ತರಿಸುತ್ತದೆ ಎಂದು ಹೇಳಿದೆ. ಎಸ್‌ಬಿಐ ರೀಸರ್ಚ್ ಪ್ರಸಕ್ತ ವರ್ಷದಲ್ಲಿ ರೂ. 1.04 ಲಕ್ಷ ಕೋಟಿಗಳಷ್ಟು ಬ್ಯಾಂಕ್ ಠೇವಣಿ ಬೆಳವಣಿಗೆಯನ್ನು ಮೀರಿ ರೂ. 2.6 ಲಕ್ಷ ಕೋಟಿಗಳಷ್ಟು ವಿಸ್ತರಿಸಿದೆ ಎಂದು ಸಾಲದ ಬೆಳವಣಿಗೆಯ ಕುರಿತು ಹೇಳಿದೆ.

“ಬ್ಯಾಂಕ್ ಸಾಲದಲ್ಲಿನ ಮುಂದುವರಿದ ಬೆಳವಣಿಗೆಯು ಆರಾಮದಾಯಕ ವಿಷಯವಾಗಿದೆ ಮತ್ತು ಭಾರತೀಯ ಆರ್ಥಿಕತೆಯು ಇನ್ನೂ ಒತ್ತಡದ ಮೂಲಕ ಉತ್ತಮವಾಗಿ ನ್ಯಾವಿಗೇಟ್ ಮಾಡುತ್ತಿದೆ ಎಂದು ಸೂಚಿಸುತ್ತದೆ. ಈ ಸಾಲದ ಬೆಳವಣಿಗೆಯಲ್ಲಿ ಹಲವಾರು ಅಂಶಗಳಿವೆ,” ಎಂದು ಅದು ವರದಿಯಲ್ಲಿ ಹೇಳಿದೆ. ಇದಲ್ಲದೆ, ವಿವಿಧ ವಲಯಗಳಿಂದ ಕಾರ್ಯನಿರತ ಬಂಡವಾಳದ (ವರ್ಕಿಂಗ್ ಕ್ಯಾಪಿಟಲ್) ಬಳಕೆಯು ನಿರ್ದಿಷ್ಟವಾಗಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಗೆ ಸಂಬಂಧಿಸಿರುವ ವಲಯಗಳಾದ್ಯಂತ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಅದು ಹೇಳಿದೆ.

ಆ ವಲಯಗಳಲ್ಲಿ ಪೆಟ್ರೋಲಿಯಂ, ವಿದ್ಯುತ್, ಎಂಜಿನಿಯರಿಂಗ್ ಮತ್ತು ಸಿಮೆಂಟ್ ಸೇರಿವೆ. “ಒಳ್ಳೆಯ ವಿಷಯವೆಂದರೆ ಚರ್ಮ, ಆಹಾರ ಸಂಸ್ಕರಣೆಯಂತಹ ಕೆಲವು ಗ್ರಾಹಕರನ್ನು ಎದುರುಗೊಳ್ಳುವ ವಲಯಗಳು ಕಾರ್ಯನಿರತ ಬಂಡವಾಳದ ಬಳಕೆಯಲ್ಲಿ ವಸ್ತು ಕುಸಿತಕ್ಕೆ ಸಾಕ್ಷಿ ಆಗಲಿಲ್ಲ. ಔಷಧೀಯ ಕ್ಷೇತ್ರಗಳು ಮತ್ತು ಹೆಲ್ತ್‌ಕೇರ್‌ನಂತಹ ಹೊಸ ಯುಗದ ವಲಯಗಳು ಸಹ ಹೆಚ್ಚಿನ ಕಾರ್ಯನಿರತ ಬಂಡವಾಳದ ಬಳಕೆ ಮಿತಿಗಳನ್ನು ಇಟ್ಟುಕೊಂಡಿವೆ,” ಎಂದು ವರದಿಯಲ್ಲಿ ಸೇರಿಸಲಾಗಿದೆ.

300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ