Salary Gap: ಛೇ ಛೇ..! ಸರ್ಕಾರಿ ವರ್ಸಸ್ ಖಾಸಗಿ ಸಂಸ್ಥೆ; ಎಸ್​ಬಿಐ ಛೇರ್ಮನ್​ಗೆ ಸಿಗೋ ಸಂಬಳ ಇಷ್ಟೇನಾ?

Govt Bank vs Pvt Bank: ದೇಶದ ಅತಿದೊಡ್ಡ ಬ್ಯಾಂಕ್ ಎಸ್​ಬಿಐನ ಛೇರ್ಮನ್ ದಿನೇಶ್ ಖರ ಅವರ ಒಂದು ವರ್ಷದ ಸಂಬಳ 37 ಲಕ್ಷ ರೂ ಅಂತೆ. ಎಚ್​​ಡಿಎಫ್​ಸಿ ಬ್ಯಾಂಕ್​ನ ಸಿಇಒಗೆ ಸಿಗುವುದು 6 ಕೋಟಿ ರೂಗೂ ಹೆಚ್ಚು ಸಂಬಳ.

Salary Gap: ಛೇ ಛೇ..! ಸರ್ಕಾರಿ ವರ್ಸಸ್ ಖಾಸಗಿ ಸಂಸ್ಥೆ; ಎಸ್​ಬಿಐ ಛೇರ್ಮನ್​ಗೆ ಸಿಗೋ ಸಂಬಳ ಇಷ್ಟೇನಾ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
Follow us
|

Updated on: Jun 18, 2023 | 1:06 PM

ಸರ್ಕಾರಿ ಕೆಲಸ ಸಿಕ್ಕರೆ ಸಾಕು ಎಂದು ಹೆಚ್ಚಿನ ಜನರು ಹಪಿಹಪಿಸುವುದುಂಟು. ಸರ್ಕಾರಿ ನೌಕರಿಯು ಕೆಲಸದ ಅಭದ್ರತೆಯನ್ನು ನೀಗಿಸುವುದಲ್ಲೇ ಉತ್ತಮ ಸಂಬಳವನ್ನೂ ತರುತ್ತದೆ ಎಂಬುದು ನಂಬಿಕೆ. ಇದು ಬಹುತೇಕವಾಗಿ ನಿಜವೇ ಹೌದು. ಆದರೆ, ಉನ್ನತ ಸ್ತರದ ಹುದ್ದೆಗಳ (Executive Job) ವಿಚಾರಕ್ಕೆ ಬಂದರೆ ಇದು ಹೌದಾ ಎಂದು ಅಚ್ಚರಿ ಎನಿಸಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಛೇರ್ಮನ್ ದಿನೇಶ್ ಖರ (Dinesh Khara) ಅವರಿಗೆ 2022-23ರ ಹಣಕಾಸು ವರ್ಷದಲ್ಲಿ ಸಿಕ್ಕಿರುವ ಸಂಬಳ 37 ಲಕ್ಷ ರೂ. ಅಂದರೆ ತಿಂಗಳಿಗೆ 3 ಲಕ್ಷ ರೂನಷ್ಟು. ಕೆಲವರಿಗೆ ಇದು ಅಚ್ಚರಿ ಅನಿಸದೇ ಇರಬಹುದು. ಆದರೆ, ಭಾರತದ ಅತಿದೊಡ್ಡ ಬ್ಯಾಂಕ್​ನ ಮುಖ್ಯಸ್ಥರಿಗೆ ಸಿಗುವ ಸಂಬಳ ಇದು ಎಂಬುದು ಗೊತ್ತಿರಲಿ. ಎಸ್​ಬಿಐ ಸಂಸ್ಥೆ (SBI) 55.17 ಲಕ್ಷ ಕೋಟಿ ರೂ ಮೊತ್ತದ ಹಣಕಾಸು ಆಸ್ತಿಗಳನ್ನು ನಿರ್ವಹಿಸುತ್ತದೆ. ಅದರ ಮುಖ್ಯಸ್ಥರಿಗೆ ಸಂಬಳ ಇಷ್ಟೇನಾ ಎಂದು ಯಾರಿಗಾದರೂ ಅನಿಸದೇ ಇದ್ದರೆ, ಖಾಸಗಿ ವಲಯದ ಬ್ಯಾಂಕ್​ವೊಂದರ ಮುಖ್ಯಸ್ಥರ ಸಂಬಳ ಎಷ್ಟೆಂಬುದನ್ನು ಇಲ್ಲಿ ಉಲ್ಲೇಖಿಸಬಹುದು.

ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್​ಡಿಎಫ್​ಇಸಿ. ಇದು ನಿರ್ವಹಿಸುವ ಒಟ್ಟು ಆಸ್ತಿ 27 ಲಕ್ಷ ಕೋಟಿ ರೂಗಿಂತ ಕಡಿಮೆ. ಇದರ ಸಿಇಒ ಶಶಿಧರ್ ಜಗದೀಶನ್ ಅವರು 2021-21ರಲ್ಲಿ ಪಡೆದ ಒಂದು ವರ್ಷದ ಸಂಬಳ 6.51 ಕೋಟಿ ರೂ ಇತ್ತು. ಅಂದರೆ ಎಚ್​​ಡಿಎಫ್​ಸಿ ಬ್ಯಾಂಕ್​ನ ಸಿಇಒಗಿಂತ ಎರಡು ಪಟ್ಟು ಹೆಚ್ಚು ಆಸ್ತಿ ನಿಭಾಯಿಸಿದರೂ ಎಸ್​ಬಿಐ ಮುಖ್ಯಸ್ಥರಿಗೆ ಸಿಗುವ ಸಂಬಳ 18 ಪಟ್ಟಿಗೂ ಕಡಿಮೆ.

ಇದನ್ನೂ ಓದಿInfosys Warning: ಕಚೇರಿಗೆ ಬಂದು ಕೆಲಸ ಮಾಡಿ, ಇಲ್ಲ ಶಿಸ್ತು ಕ್ರಮ ಎದುರಿಸಿ: ಅಮೆರಿಕ, ಕೆನಡಾ ಉದ್ಯೋಗಿಗಳಿಗೆ ಇನ್ಫೋಸಿಸ್ ಎಚ್ಚರಿಕೆ

ಅತಿದೊಡ್ಡ ಬ್ಯಾಂಕ್​ವೊಂದರ ಮುಖ್ಯಸ್ಥರಿಗೆ ಸಿಗುವ ಸಂಬಳ ಇದು ಬಹಳ ಕಡಿಮೆ ಎಂದು ಯಾರಿಗಾದರೂ ಅನಿಸದೇ ಇರದು. ಹಲವು ಸರ್ಕಾರಿ ಸಂಸ್ಥೆಗಳ ವಿಚಾರಕ್ಕೂ ಇದು ಅನ್ವಯ ಆಗುತ್ತದೆ. ಸರ್ಕಾರಿ ಕಚೇರಿಗಳೆಂದರೆ ಸ್ಲೀಪಿಂಗ್ ಪ್ಲೇಸ್ ಎಂದು ವ್ಯಂಗ್ಯ ಮಾಡುವುದನ್ನು ಕೇಳಿದ್ದೇವೆ. ಆದರೆ, ಅದೆಲ್ಲವೂ ಅರ್ಧಸತ್ಯ ಮಾತ್ರ. ಹೆಚ್ಚಿನ ಸಂಖ್ಯೆಯ ಸರ್ಕಾರಿ ಕಚೇರಿಗಳಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಬಹಳ ನೌಕರರಿಗೆ ಅರೆಕ್ಷಣವೂ ಪುರುಸೊತ್ತು ಇಲ್ಲದಷ್ಟು ಕೆಲಸ ಎಡತಾಕುತ್ತಿರುತ್ತದೆ. ಆದರೆ, ಇವರು ಮಾಡುವ ಕೆಲಸಕ್ಕೆ ತಕ್ಕಷ್ಟು ಸಂಬಳ ಸಿಗುತ್ತದಾ ಎಂದು ಹಲವು ಸರ್ಕಾರಿ ಉದ್ಯೋಗಿಗಳು ವಾದಿಸುವುದುಂಟು.

2-3 ವರ್ಷಗಳ ಹಿಂದೆ ಎಸ್​ಬಿಐನ ಅಂದಿನ ಮುಖ್ಯಸ್ಥ ರಜನೀಶ್ ಕುಮಾರ್ ಅವರ ಹೇಳಿಕೆಯೊಂದು ಬಹಳ ಚರ್ಚೆಗೆ ಆಸ್ಪದ ಮಾಡಿಕೊಟ್ಟಿತ್ತು. ಎಸ್​ಬಿಐ ಉದ್ಯೋಗಿಗಳ ಸಂಬಳ ಕಡಿತದ ಬಗೆಗಿನ ಸುದ್ದಿ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ಮೊದಲೇ ಇಷ್ಟು ಕಡಿಮೆ ಬರುತ್ತಿದೆ, ಈಗ ಬೀದಿಗೆ ಬೀಳಬೇಕಾಗುತ್ತದೆ’ ಎಂದು ರಜನೀಶ್ ಕುಮಾರ್ ಹೇಳಿದ್ದರು. ಅವರ ಆ ಮಾತಿಗೆ ಮಿಶ್ರ ಪ್ರತಿಕ್ರಿಯೆಗಳೂ ವ್ಯಕ್ತವಾಗಿದ್ದು ಹೌದು. ರಜನೀಶ್ ಕುಮಾರ್ ಮಾತು ವಾಸ್ತವ ಸ್ಥಿತಿಗೆ ಕೈಗನ್ನಡಿಯಾಗಿದೆ. ಅವರ ಹುದ್ದೆಗೆ ತಕ್ಕಷ್ಟು ಸಂಭಾವನೆ ಇಲ್ಲ ಎನ್ನುವುದು ಸತ್ಯ ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಮತ್ತೆ ಕೆಲವರು, ಒಬ್ಬ ಹಿರಿಯ ಸ್ತರದ ಅಧಿಕಾರಿಗಳಿಗೆ ಈ ಮಾತು ಶೋಭೆ ತರುವುದಿಲ್ಲ ಎಂದು ಹೇಳಿದ್ದುಂಟು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ