AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಮೂಲದ ಸರ್ವಮ್​ನಿಂದ ಎಐ ಸಂಚಲನ; ಈ ಕಂಪನಿ ಹಿಂದಿನ ಇಬ್ಬರು ವ್ಯಕ್ತಿಗಳು ಯಾರು?

Sarvam AI, the Bengaluru based startup and its new products: ಭಾರತದ ಅತಿದೊಡ್ಡ ಎಐ ಸ್ಟಾರ್ಟಪ್ ಎನಿಸಿದ ಸರ್ವಮ್ ಎಐ ಇತ್ತೀಚೆಗೆ ಎರಡು ಹೊಸ ಮಾಡಲ್​ಗಳನ್ನು ಪರಿಚಯಿಸಿದೆ. ಭಾರತೀಯ ಭಾಷೆಗಳಲ್ಲಿ ಅದು ರೂಪಿಸಿರುವ ಡಾಕ್ಯುಮೆಂಟೇಶನ್ ಮತ್ತು ಟೆಕ್ಸ್ಟ್ ಟು ಸ್ಪೀಚ್ ಸೇವೆಯ ಟೂಲ್​ಗಳು ಗಮನ ಸೆಳೆಯುತ್ತಿವೆ. ಅಪ್ಪಟ ಭಾರತೀಯರ ಶೈಲಿಯಲ್ಲಿ ಮಾತುಗಾರಿಕೆಯನ್ನು ಇದರಲ್ಲಿ ಕಾಣಬಹುದು.

ಬೆಂಗಳೂರು ಮೂಲದ ಸರ್ವಮ್​ನಿಂದ ಎಐ ಸಂಚಲನ; ಈ ಕಂಪನಿ ಹಿಂದಿನ ಇಬ್ಬರು ವ್ಯಕ್ತಿಗಳು ಯಾರು?
ಸರ್ವಮ್ ಎಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 10, 2026 | 1:18 PM

Share

ಬೆಂಗಳೂರು, ಫೆಬ್ರುವರಿ 10: ಭಾರತೀಯ ಭಾಷೆಗಳಲ್ಲಿ ಎಐ ಸೇವೆ ಒದಗಿಸಬೇಕು ಮತ್ತು ಜಾಗತಿಕ ಎಐ ಮಾಡಲ್​ಗಳಿಗೆ ಯಾವುದರಲ್ಲೂ ಕಡಿಮೆ ಇರಬಾರದು, ಎನ್ನುವ ಸರ್ಕಾರದ ಆಶಯದಂತೆ ಸರ್ವಮ್ ಎಐ (Sarvam AI) ರೂಪುಗೊಳ್ಳುತ್ತಿದೆ. 2023ರಲ್ಲಿ ಶುರುವಾದ ಸರ್ವಮ್ ಎಐ ತನ್ನ ವಿವಿಧ ಲ್ಯಾಂಗ್ವೇಜ್ ಸೇವೆಗಳಿಂದ ಗಮನ ಸೆಳೆಯತೊಡಗಿದೆ. ವರ್ಷದ ಹಿಂದೆ ಎಐ ಮಾಡಲ್​ಗಳನ್ನು ಬಿಡುಗಡೆ ಮಾಡಿದ್ದ ಸರ್ವಮ್ ಇದೀಗ ಎರಡು ಹೊಸ ಪ್ರಾಡಕ್ಟ್ಸ್ ಲಾಂಚ್ ಮಾಡಿದೆ. ಸರ್ವಮ್ ವಿಷನ್ ಮತ್ತು ಬುಲ್​ಬುಲ್ ವಿ3 ಮಾಡಲ್​ಗಳು ಬಿಡುಗಡೆ ಆಗಿವೆ.

ಈ ಎರಡೂ ಮಾಡಲ್​ಗಳು ಚ್ಯಾಟ್​ಜಿಪಿಟಿ ಮತ್ತು ಜೆಮಿನಿಯ ಅಡ್ವಾನ್ಸ್ಡ್ ವರ್ಷನ್​ಗಳಿಗೆ ಪೈಪೋಟಿ ನೀಡುವಷ್ಟು ಉತ್ತಮ ಪ್ರದರ್ಶನ ತೋರುತ್ತಿವೆ. ಸರ್ವಮ್ ವಿಷನ್ ಮಾಡಲ್ ಭಾರತೀಯ ಭಾಷೆಗಳ ಡಾಕ್ಯುಮೆಂಟ್​ಗಳನ್ನು ಸಂಸ್ಕರಿಸಬಲ್ಲುದು. ಬುಲ್​ಬುಲ್ ವಿ3 ಮಾಡಲ್ ಪಠ್ಯವನ್ನು ಮಾತಿಗೆ ಪರಿವರ್ತಿಸಬಲ್ಲುದು. ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಇದರ ಸೇವೆ ಇದೆ. ಇದರ ಕನ್ನಡ ಸೇವೆ ಪರಿಶೀಲಿಸಿದಾಗ, ಅಪ್ಪಟ ಕನ್ನಡಿಗರ ಶೈಲಿಯಲ್ಲಿ ಓದಿದ ರೀತಿ ಭಾಸವಾಗಿದ್ದು ಹೌದು. ಈ ವಿಚಾರದಲ್ಲಿ ಚ್ಯಾಟ್​ಜಿಟಿಪಿ, ಗೂಗಲ್ ಜೆಮಿನಿ, ಡೀಪ್​ಸೀಕ್ ಇತ್ಯಾದಿ ಯಾವ ಮಾಡಲ್​ಗಳು ಸಾಟಿ ಇಲ್ಲ ಎನ್ನಲಾಗತ್ತಿದೆ.

ಇದನ್ನೂ ಓದಿ: ಸರ್ವಮ್ ಎಐನಿಂದ ಹೊಸ ಮಾಡಲ್; ಡಾಕ್ಯುಮೆಂಟ್ ಇಂಟೆಲಿಜೆನ್ಸ್​ನಲ್ಲಿ ವಿಶ್ವಲ್ಲೇ ಬೆಸ್ಟ್; ಕಟು ಟೀಕಾಕಾರರಿಗೂ ಅಚ್ಚರಿ

ಸರ್ವಮ್ ಎಐ ಹಿಂದಿದ್ದಾರೆ ವಿವೇಕ್ ರಾಘವನ್ ಮತ್ತು ಪ್ರತ್ಯುಶ್ ಕುಮಾರ್

ಐಐಟಿ ಎಂಜಿನಿಯರುಗಳಾದ ವಿವೇಕ್ ರಾಘವನ್ ಮತ್ತು ಪ್ರತ್ಯುಶ್ ಕುಮಾರ್ ಅವರು 2023ರ ಆಗಸ್ಟ್ ತಿಂಗಳಲ್ಲಿ ಸರ್ವಮ್ ಎಐ ಅನ್ನು ಸ್ಥಾಪಿಸಿದ್ದಾರೆ. ಬೆಂಗಳೂರಿನಲ್ಲಿ ಇದರ ಕಚೇರಿ ಇರುವುದು. ಐಐಟಿ ಡೆಲ್ಲಿಯಲ್ಲಿ ಬಿಟೆಕ್, ಅಮೆರಿಕದ ಕಾರ್ನೇಜೀ ಮೆಲ್ಲೋನ್ ಯೂನಿವರ್ಸಿಟಿಯಲ್ಲಿ ಪಿಎಚ್​ಡಿ ಮಾಡಿದ್ದಾರೆ.

ವಿವೇಕ್ ರಾಘವನ್ ಅವರು ಆಧಾರ್ ಪ್ರಾಜೆಕ್ಟ್​ನಲ್ಲೂ ಭಾಗಿಯಾಗಿದ್ದಾರೆ. 2010ರಲ್ಲಿ ಆಧಾರ್ ಪ್ರೋಗ್ರಾಮ್​ನಲ್ಲಿ ಚೀಫ್ ಬಯೋಮೆಟ್ರಿಕ್ ಆರ್ಕಿಟೆಕ್ಟ್ ಆಗಿ ಕೆಲಸ ಮಾಡಿದ್ದಾರೆ. ಆಧಾರ್​ನ ಬಯೋಮೆಟ್ರಿಕ್ ಸಿಸ್ಟಂಗಳನ್ನು ಸಮರ್ಪಕವಾಗಿ ರೂಪಿಸುವುದರ ಹಿಂದೆ ಅವರ ಶ್ರಮ ಇದೆ.

ಇದನ್ನೂ ಓದಿ: ಹೊಸ ಇಪಿಎಫ್​ಒ ಆ್ಯಪ್​ನಲ್ಲಿ ಯುಪಿಐ ಮೂಲಕ ಹಣ ವಿತ್​ಡ್ರಾಗೆ ಅವಕಾಶ?

ಪ್ರತ್ಯುಶ್ ಕುಮಾರ್ ಬಗ್ಗೆ…

2014ರಲ್ಲಿ ಪಿಎಚ್​​ಡಿ ಮಾಡಿರುವ ಪ್ರತ್ಯುಶ್ ಕುಮಾರ್ ಅವರು ಐಬಿಎಂನಲ್ಲಿ ಕೆಲಸ ಮಾಡಿದ್ದಾರೆ. ಒನ್ ಫೋರ್ತ್ ಲ್ಯಾಬ್ಸ್, ಎಐ4ಭಾರತ್ ಕಂಪನಿಗಳ ಸಹ-ಸಂಸ್ಥಾಪಕರಾಗಿದ್ದಾರೆ. ಆನ್ಲೈನ್ ಶಿಕ್ಷಣ ಒದಗಿಸುವ ಪಧ್​ಎಐ ಅನ್ನೂ ಆರಂಭಿಸಿದ ಅನುಭವ ಅವರಿಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯ್ತೇನೆ: ಡಿಕೆಶಿ
ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯ್ತೇನೆ: ಡಿಕೆಶಿ
‘ಲವ್ ಮಾಕ್ಟೇಲ್ 3’ ಸಿನಿಮಾ ಕಥೆ ಕಾಪಿ? ಎಲ್ಲವನ್ನೂ ವಿವರಿಸಿದ ರಾಘವೇಂದ್ರ
‘ಲವ್ ಮಾಕ್ಟೇಲ್ 3’ ಸಿನಿಮಾ ಕಥೆ ಕಾಪಿ? ಎಲ್ಲವನ್ನೂ ವಿವರಿಸಿದ ರಾಘವೇಂದ್ರ
ಡಾ. ಸಮೀಕ್ಷಾ ರೆಡ್ಡಿ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ
ಡಾ. ಸಮೀಕ್ಷಾ ರೆಡ್ಡಿ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ
‘ಡಾರ್ಲಿಂಗ್ ಕೃಷ್ಣಗೆ ಕತೆ ಹೇಳಿದ್ದೆ, ಈಗ ಮರ್ತೋಗಿದೆ ಅಂತಿದ್ದಾರೆ’
‘ಡಾರ್ಲಿಂಗ್ ಕೃಷ್ಣಗೆ ಕತೆ ಹೇಳಿದ್ದೆ, ಈಗ ಮರ್ತೋಗಿದೆ ಅಂತಿದ್ದಾರೆ’
ಬಾರ್​​, ರೆಸ್ಟೋರೆಂಟ್​ಗಳಿಗೂ ತಟ್ಟಿದ್ದ ಗ್ಯಾಸ್ ಅಭಾವದ ಎಫೆಕ್ಟ್
ಬಾರ್​​, ರೆಸ್ಟೋರೆಂಟ್​ಗಳಿಗೂ ತಟ್ಟಿದ್ದ ಗ್ಯಾಸ್ ಅಭಾವದ ಎಫೆಕ್ಟ್
ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಉಡಿ ತುಂಬಿದ ಮುಸ್ಲಿಂ ಮಹಿಳೆಯರು
ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಉಡಿ ತುಂಬಿದ ಮುಸ್ಲಿಂ ಮಹಿಳೆಯರು
ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಆರ್​ಸಿಬಿಯಿಂದ ವಿಶೇಷ ನಮನ
ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಆರ್​ಸಿಬಿಯಿಂದ ವಿಶೇಷ ನಮನ
ಕಾರಿನಲ್ಲೇ ಸುಟ್ಟು ಹೋದ ಧಾರವಾಡದ ಮಾಜಿ ಶಾಸಕನ ಪುತ್ರ
ಕಾರಿನಲ್ಲೇ ಸುಟ್ಟು ಹೋದ ಧಾರವಾಡದ ಮಾಜಿ ಶಾಸಕನ ಪುತ್ರ
ಇರಾನ್ ಯುದ್ಧದ ನಡುವೆ ಹಾರ್ಮುಜ್ ಜಲಸಂಧಿ ದಾಟಿದ ಎಲ್​ಪಿಜಿ ಹೊತ್ತ 2 ಹಡಗುಗಳು
ಇರಾನ್ ಯುದ್ಧದ ನಡುವೆ ಹಾರ್ಮುಜ್ ಜಲಸಂಧಿ ದಾಟಿದ ಎಲ್​ಪಿಜಿ ಹೊತ್ತ 2 ಹಡಗುಗಳು
ಪ್ರೀತಿ ನೀಡಲು ಪ್ರಾಣಿಯೇ ಆಗಬೇಕಿಲ್ಲ, ಮನುಷ್ಯತ್ವವೊಂದಿದ್ದರೆ ಸಾಕು!
ಪ್ರೀತಿ ನೀಡಲು ಪ್ರಾಣಿಯೇ ಆಗಬೇಕಿಲ್ಲ, ಮನುಷ್ಯತ್ವವೊಂದಿದ್ದರೆ ಸಾಕು!