AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

August 2026 Rule Changes: ಆಗಸ್ಟ್ 1 ರಿಂದ ಜಾರಿಗೆ ಬರಲಿವೆ 5 ಹೊಸ ನಿಯಮಗಳು: ಎಲ್‌ಪಿಜಿ ದರ,ತತ್ಕಾಲ್ ಬುಕಿಂಗ್ ಮತ್ತು ಬ್ಯಾಂಕಿಂಗ್‌ ಮೇಲೆ ಭಾರಿ ಪ್ರಭಾವ

ಆಗಸ್ಟ್ 1, 2026 ರಿಂದ 5 ಪ್ರಮುಖ ನಿಯಮಗಳು ಜಾರಿಗೆ ಬರಲಿವೆ. ಇವು ಎಲ್​ಪಿಜಿ ದರ, ರೈಲ್ವೆ ತತ್ಕಾಲ್ ಬುಕಿಂಗ್, ಬ್ಯಾಂಕಿಂಗ್ ಸೇವೆ, ಅಂಚೆ ಶುಲ್ಕ ಹಾಗೂ ಫಾಸ್ಟ್‌ಟ್ಯಾಗ್ ಕೆವೈಸಿ ಮೇಲೆ ಪರಿಣಾಮ ಬೀರಲಿವೆ. ಸಿಲಿಂಡರ್ ಬೆಲೆ ಪರಿಷ್ಕರಣೆ, ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ಸ್ ಮಿತಿ, ರೈಲ್ವೆ ಟಿಕೆಟ್ ಸುಧಾರಣೆಗಳು ಸಾರ್ವಜನಿಕರ ದೈನಂದಿನ ಬಜೆಟ್ ಮತ್ತು ವೆಚ್ಚಗಳ ಮೇಲೆ ನೇರ ಪ್ರಭಾವ ಬೀರಲಿದ್ದು, ಎಲ್ಲರೂ ತಿಳಿದುಕೊಳ್ಳುವುದು ಮುಖ್ಯವಾಗಿದೆ.

August 2026 Rule Changes: ಆಗಸ್ಟ್ 1 ರಿಂದ ಜಾರಿಗೆ ಬರಲಿವೆ 5 ಹೊಸ ನಿಯಮಗಳು: ಎಲ್‌ಪಿಜಿ ದರ,ತತ್ಕಾಲ್ ಬುಕಿಂಗ್ ಮತ್ತು ಬ್ಯಾಂಕಿಂಗ್‌ ಮೇಲೆ ಭಾರಿ ಪ್ರಭಾವ
ರೈಲು
ನಯನಾ ರಾಜೀವ್
|

Updated on: Jul 29, 2026 | 11:47 AM

Share

ನವದೆಹಲಿ,ಜುಲೈ 29: ಭಾರತದಾದ್ಯಂತ ಹಣಕಾಸು, ಸಾರಿಗೆ ಮತ್ತು ಅಂಚೆ(Post) ಸೇವೆಗಳಲ್ಲಿ 5 ಪ್ರಮುಖ ಬದಲಾವಣೆಗಳು ಆಗಸ್ಟ್​ 1, 2026ರಿಂದ ಜಾರಿಗೆ ಬರಲಿವೆ. ಪ್ರತಿ ತಿಂಗಳ ಆರಂಭದಲ್ಲಿ ಹಲವು ಆರ್ಥಿಕ ನಿಯಮಗಳು ಬದಲಾಗುವಂತೆ, ಆಗಸ್ಟ್ 1 ರಿಂದ ದೇಶಾದ್ಯಂತ 5 ಪ್ರಮುಖ ಬದಲಾವಣೆಗಳಾಗಲಿವೆ. ಅಡುಗೆ ಅನಿಲ (LPG) ದರ, ರೈಲ್ವೆ ತತ್ಕಾಲ್ ಬುಕಿಂಗ್, ಬ್ಯಾಂಕಿಂಗ್ ನಿಯಮಗಳು ಹಾಗೂ ಅಂಚೆ ಶುಲ್ಕಗಳಲ್ಲಿನ ಈ ಬದಲಾವಣೆಗಳು ಸಾರ್ವಜನಿಕರ ದಿನನಿತ್ಯದ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿವೆ.

ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ದರ ಪರಿಷ್ಕರಣೆ

ಪ್ರತಿ ತಿಂಗಳ 1ನೇ ತಾರೀಖಿನಂದು ತೈಲ ಕಂಪನಿಗಳು ಅಡುಗೆ ಅನಿಲ ಸಿಲಿಂಡರ್‌ಗಳ ದರವನ್ನು ಪರಿಶೀಲಿಸುತ್ತವೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತ ಕಾಣುತ್ತಿರುವುದರಿಂದ ವಾಣಿಜ್ಯ ಹಾಗೂ ಗೃಹಬಳಕೆಯ ಸಿಲಿಂಡರ್ ಬೆಲೆಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಅಡುಗೆ ಅನಿಲ (LPG) ಬೆಲೆ, ರೈಲ್ವೆ ತತ್ಕಾಲ್ ಬುಕಿಂಗ್, ಬ್ಯಾಂಕಿಂಗ್ ಅಥವಾ ಕ್ರೆಡಿಟ್ ಕಾರ್ಡ್ ನಿಯಮಗಳು ಮತ್ತು ಸ್ಪೀಡ್ ಪೋಸ್ಟ್ ಶುಲ್ಕಗಳಲ್ಲಿನ ಪರಿಷ್ಕರಣೆಯು ಸಾರ್ವಜನಿಕರ ದೈನಂದಿನ ವೆಚ್ಚಗಳ ಮೇಲೆ ನೇರ ಪರಿಣಾಮ ಬೀರಲಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಾದರೆ ಹೋಟೆಲ್, ರೆಸ್ಟೋರೆಂಟ್‌ಗಳ ಊಟ ಹಾಗೂ ಫುಡ್ ಡೆಲಿವರಿ ವೆಚ್ಚ ದುಬಾರಿಯಾಗಲಿದೆ.

ಜಾಗತಿಕ ಮಟ್ಟದಲ್ಲಿ ತೈಲ ಉತ್ಪಾದಿಸುವ ದೇಶಗಳಲ್ಲಿ ಉಂಟಾಗಿರುವ ಭೌಗೋಳಿಕ ರಾಜಕೀಯ ಅನಿಶ್ಚಿತತೆಯಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳು (OMC) ಆಗಸ್ಟ್ 1 ರಿಂದ ದೇಶೀಯ ಹಾಗೂ ವಾಣಿಜ್ಯ ಸಿಲಿಂಡರ್‌ಗಳ ದರವನ್ನು ಮರುಪರಿಶೀಲಿಸಲಿವೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಹೆಚ್ಚಾದರೆ ಹೋಟೆಲ್, ರೆಸ್ಟೋರೆಂಟ್ ಮತ್ತು ಹೊರಗಿನ ಆಹಾರ ಪದಾರ್ಥಗಳ ಹಾಗೂ ಫುಡ್ ಡೆಲಿವರಿ ದರಗಳು ದುಬಾರಿಯಾಗಲಿವೆ. ಟೋಕನ್ ವಿತರಣೆ ಮತ್ತು ಟಿಕೆಟ್ ಬುಕಿಂಗ್ ಆರಂಭವಾಗುವ ಸಮಯ ಒಂದೇ ಆಗಿರಲಿದೆ. ಇದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗಲಿದ್ದು, ಕೌಂಟರ್‌ಗಳಲ್ಲಿ ಸಾಲಿನಲ್ಲಿ ನಿಲ್ಲುವ ಗೊಂದಲ ತಪ್ಪಲಿದೆ.

ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ನೂತನ ನಿಯಮ

ರೈಲ್ವೆ ನಿಲ್ದಾಣಗಳ ಮೀಸಲಾತಿ ಕೌಂಟರ್‌ಗಳಲ್ಲಿ ತತ್ಕಾಲ್ ಟಿಕೆಟ್ ಪಡೆಯುವ ಪ್ರಯಾಣಿಕರಿಗಾಗಿ ಭಾರತೀಯ ರೈಲ್ವೆ ‘ಟೋಕನ್ ವಿತರಣೆ’ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ. ಟೋಕನ್ ನೀಡುವ ಸಮಯ ಮತ್ತು ಬುಕಿಂಗ್ ಆರಂಭವಾಗುವ ಸಮಯವನ್ನು ಒಂದೇ ಬಾರಿಗೆ ಸಂಯೋಜಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವುದು ತಪ್ಪಲಿದ್ದು, ಭೌತಿಕ ಕೌಂಟರ್‌ಗಳಲ್ಲಿ ಕಾಳಸಂತೆಯನ್ನು ತಡೆಯಲು ನೆರವಾಗಲಿದೆ.

ಮತ್ತಷ್ಟು ಓದಿ: ಕಿಸಾನ್ ವಿಕಾಸ್ ಪತ್ರ; ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಸ್ಕೀಮ್

ಬ್ಯಾಂಕಿಂಗ್ ಸೇವೆ ಮತ್ತು ಕ್ರೆಡಿಟ್ ಕಾರ್ಡ್ ನೀತಿ ಬದಲಾವಣೆ

ದೇಶದ ವಿವಿಧ ಬ್ಯಾಂಕುಗಳು ತಮ್ಮ ಸೇವಾ ಶುಲ್ಕಗಳು, ಬ್ಯಾಂಕ್ ಅಲರ್ಟ್ ಎಸ್​ಎಸ್​ ಶುಲ್ಕಗಳು ಹಾಗೂ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ಸ್ ನಿಯಮಗಳನ್ನು ಆಗಸ್ಟ್ 1 ರಿಂದ ಪರಿಷ್ಕರಿಸಲಿವೆ. ಕ್ರೆಡಿಟ್ ಕಾರ್ಡ್ ಬಳಸಿ ಕರೆಂಟ್, ಗ್ಯಾಸ್ ಬಿಲ್ ಪಾವತಿಸುವಾಗ ಅಥವಾ ವಾಲೆಟ್ ಲೋಡ್ ಮಾಡುವಾಗ ಸಿಗುತ್ತಿದ್ದ ರಿವಾರ್ಡ್ ಪಾಯಿಂಟ್‌ಗಳ ಮಿತಿ ಕಡಿಮೆಯಾಗಬಹುದು. ಆಧಾರ್, ಪಾನ್‌ಕಾರ್ಡ್, ಪಾಸ್‌ಬುಕ್, ಚೆಕ್‌ಬುಕ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳಂತಹ ದಾಖಲೆಗಳನ್ನು ‘ಡಾಕ್ಯುಮೆಂಟ್’ ವಿಭಾಗದಲ್ಲಿ ಕಡಿಮೆ ದರಕ್ಕೆ ಕಳುಹಿಸಬಹುದು. ಬೆಂಗಳೂರು ಸೇರಿದಂತೆ 6 ಪ್ರಮುಖ ನಗರಗಳಲ್ಲಿ 24 ಗಂಟೆ ಹಾಗೂ 48 ಗಂಟೆಗಳ ಜರೂರು ಸ್ಪೀಡ್ ಪೋಸ್ಟ್ ಸೇವೆ ಲಭ್ಯವಿರಲಿದೆ.

ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವ ಯುಟಿಲಿಟಿ ಬಿಲ್ (ಕರೆಂಟ್, ಗ್ಯಾಸ್) ಹಾಗೂ ವಾಲೆಟ್ ಲೋಡಿಂಗ್‌ಗೆ ನೀಡಲಾಗುತ್ತಿದ್ದ ‘ರಿವಾರ್ಡ್ ಪಾಯಿಂಟ್ಸ್’ ಮೇಲಿನ ಮಿತಿ ಕಡಿಮೆಯಾಗಲಿದ್ದು, ಅನಗತ್ಯ ಸೇವಾ ಶುಲ್ಕಗಳ ಭರ ಬೀಳಲಿದೆ.

ಅಂಚೆ ಇಲಾಖೆಯು ಪತ್ರಗಳು ಮತ್ತು ಪಾರ್ಸೆಲ್ ವರ್ಗೀಕರಣವನ್ನು ಸ್ಪಷ್ಟಪಡಿಸಿದ್ದು, ಬೃಹತ್ ಗ್ರಾಹಕರು ಹಾಗೂ ಚಿಲ್ಲರೆ ಗ್ರಾಹಕರಿಗೆ 24-ಘಂಟೆ ಮತ್ತು 48-ಘಂಟೆ ಸೇವೆಯ ದರಗಳನ್ನು ಪ್ರಕಟಿಸಿದೆ. ಬ್ಯಾಂಕ್ ಪಾಸ್‌ಬುಕ್, ಚೆಕ್‌ಬುಕ್, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳು, ಪಾನ್‌ಕಾರ್ಡ್, ಆಧಾರ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಹಾಗೂ 500 ಗ್ರಾಂ ಗಿಂತ ಕಡಿಮೆ ತೂಕದ ರಾಖಿ ಅಥವಾ ಶುಭಾಶಯ ಪತ್ರಗಳನ್ನು ‘ದಾಖಲೆಗಳು’ ಎಂದು ಪರಿಗಣಿಸಲಾಗುವುದು. ಇವುಗಳಿಗೆ ಕಡಿಮೆ ದರ ವಿಧಿಸಲಾಗುತ್ತದೆ.

ಪ್ರಸ್ತುತ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ 6 ಮಹಾನಗರಗಳಲ್ಲಿ ಈ ಆದ್ಯತೆಯ ಅಂಚೆ ಸೇವೆ ಲಭ್ಯವಿದೆ. ಚಿಲ್ಲರೆ ಗ್ರಾಹಕರಿಗೆ ದೂರಕ್ಕೆ ತಕ್ಕಂತೆ 38 ರೂ. ರಿಂದ 186ರೂ. ರವರೆಗೆ ಶುಲ್ಕವಿರಲಿದೆ. ನಿಮ್ಮ ಫಾಸ್ಟ್‌ಟ್ಯಾಗ್ ಕೆವೈಸಿ ಅಪೂರ್ಣವಾಗಿದ್ದರೆ ಖಾತೆ ಬ್ಲಾಕ್ ಆಗುವ ಸಾಧ್ಯತೆಯಿದೆ. ಇದರಿಂದ ಟೋಲ್ ಪ್ಲಾಜಾಗಳಲ್ಲಿ ತೊಂದರೆ ಎದುರಾಗಬಹುದು.

ಕಠಿಣ ಫಾಸ್ಟ್‌ಟ್ಯಾಗ್ ಕೆವೈಸಿ ಹಾಗೂ ಇತರೆ ಭದ್ರತಾ ನಿಯಮಗಳು

ಆಗಸ್ಟ್ 1 ರಿಂದ ಕಾರು ಹಾಗೂ ವಾಹನಗಳ ಫಾಸ್ಟ್‌ಟ್ಯಾಗ್ ಖಾತೆಗಳಿಗೆ ಸಂಬಂಧಿಸಿದಂತೆ ಎನ್‌ಪಿಸಿಐ (NPCI) ಜಾರಿಗೊಳಿಸಿರುವ ಕಡ್ಡಾಯ ಕೆವೈಸಿ (KYC) ನಿಯಮಾವಳಿಗಳು ಜಾರಿಗೆ ಬರಲಿವೆ. ಕೆವೈಸಿ ಅಪೂರ್ಣಗೊಂಡಿರುವ ವಾಹನ ಸವಾರರ ಫಾಸ್ಟ್‌ಟ್ಯಾಗ್‌ಗಳು ಬ್ಲಾಕ್ ಆಗಲಿದ್ದು, ಟೋಲ್ ಪ್ಲಾಜಾಗಳಲ್ಲಿ ನಗದು ಅಥವಾ ದಂಡ ಪಾವತಿಸಬೇಕಾಗಬಹುದು. ಆರ್‌ಬಿಐ (RBI) ಹಾಗೂ ತೈಲ ಕಂಪನಿಗಳು ನಿಯಮಿತವಾಗಿ ಪ್ರತಿ ತಿಂಗಳ 1ನೇ ತಾರೀಖಿನಂದು ಆರ್ಥಿಕ ಹಾಗೂ ಹಣಕಾಸು ನಿಯಮಗಳನ್ನು ಪರಿಶೀಲಿಸುತ್ತವೆ. ಬ್ಯಾಂಕ್ ಗ್ರಾಹಕರು ತಮ್ಮ ಸಿಬಿಲ್ (CIBIL) ಹಾಗೂ ಕ್ರೆಡಿಟ್ ಕಾರ್ಡ್ ನೂತನ ನಿಯಮಗಳಿಗಾಗಿ ತಮ್ಮ ಆಯಾ ಬ್ಯಾಂಕಿನ ಅಧಿಕೃತ ಮೆಸೇಜ್ ಹಾಗೂ ಇಮೇಲ್ ಗಮನಿಸುವುದು ಸೂಕ್ತ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್