AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock market: ಸೆನ್ಸೆಕ್ಸ್ 1300ಕ್ಕೂ ಹೆಚ್ಚು, ನಿಫ್ಟಿ 400ಕ್ಕೂ ಜಾಸ್ತಿ ಪಾಯಿಂಟ್ಸ್​ ಕುಸಿತ; ಹೂಡಿಕೆದಾರರ 14 ಲಕ್ಷ ಕೋಟಿ ಖಲ್ಲಾಸ್

ನವೆಂಬರ್ 26ನೇ ತಾರಿಕಿನ ಶುಕ್ರವಾರದಂದು ಸೆನ್ಸೆಕ್ಸ್ 1300ಕ್ಕೂ ಹೆಚ್ಚು ಪಾಯಿಂಟ್ಸ್ ಮತ್ತು ನಿಫ್ಟಿ 400ಕ್ಕೂ ಹೆಚ್ಚು ಪಾಯಿಂಟ್ಸ್ ಇಳಿಕೆ ಕಂಡಿದೆ. ಹೂಡಿಕೆದಾರರು 14 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.

Stock market: ಸೆನ್ಸೆಕ್ಸ್ 1300ಕ್ಕೂ ಹೆಚ್ಚು, ನಿಫ್ಟಿ 400ಕ್ಕೂ ಜಾಸ್ತಿ ಪಾಯಿಂಟ್ಸ್​ ಕುಸಿತ; ಹೂಡಿಕೆದಾರರ 14 ಲಕ್ಷ ಕೋಟಿ ಖಲ್ಲಾಸ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Nov 26, 2021 | 2:28 PM

Share

ಷೇರು ಮಾರುಕಟ್ಟೆಯಲ್ಲಿ ಸಂಪತ್ತು ಸೃಷ್ಟಿ ಪ್ರಕ್ರಿಯೆಗೆ ತಡವಾಗಿ ವಿರಾಮ ಸಿಕ್ಕಿದೆ. ಉಬ್ಬರ- ಇಳಿತಗಳು ಕಳೆದ ಒಂದು ತಿಂಗಳಿನಿಂದ ಮಾರುಕಟ್ಟೆಯ ಕರೆಕ್ಷನ್​ನತ್ತ ತಿರುಗಿವೆ. ಖಚಿತವಾಗಿ ಹೇಳುವುದಾದರೆ, ನಿಫ್ಟಿಯು 18,604 ಪಾಯಿಂಟ್ಸ್​ನ ಹೊಸ ದಾಖಲೆಯನ್ನು ಬರೆದಾಗ ಬಿಎಸ್​ಇ ಸೆನ್ಸೆಕ್ಸ್ ಅಕ್ಟೋಬರ್ 19, 2021ರಂದು 62,245 ಪಾಯಿಂಟ್ಸ್​ನೊಂದಿಗೆ ಹೊಸ ಶಿಖರ ಮುಟ್ಟಿತು. ಅಂದಿನಿಂದ, ಮಾರುಕಟ್ಟೆಯು ಶೇ 8ರಷ್ಟು ಸಂಕುಚಿತಗೊಂಡಿದ್ದು, ಹೂಡಿಕೆದಾರರ ಸಂಪತ್ತಿನ ಸುಮಾರು 14 ಲಕ್ಷ ಕೋಟಿ ರೂಪಾಯಿ ಕರಗಿಹೋಗಿದೆ. ಇದನ್ನು ಸರಳವಾಗಿ ಹೇಳಬೇಕೆಂದರೆ, ಕರ್ನಾಟಕ ಬಜೆಟ್​ನ 6 ವರ್ಷಕ್ಕಾಗುವಷ್ಟು ನಷ್ಟ ಆಗಿದೆ. “ಹೊಸ, ಹೆಚ್ಚು ರೂಪಾಂತರಿ ಕೊವಿಡ್ -19 ರೂಪಾಂತರದ ಹೊರಹೊಮ್ಮುವಿಕೆಯಿಂದಾಗಿ ಈ ಮಧ್ಯೆ ಈಕ್ವಿಟಿ ಮಾರುಕಟ್ಟೆಗಳು ಸುಮಾರು ಶೇ 2ರಷ್ಟು ಕುಸಿದಿವೆ,” ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್‌ನ ಬ್ರೋಕಿಂಗ್ ಮತ್ತು ಡಿಸ್ಟ್ರಿಬ್ಯೂಷನ್‌ನ ಈಕ್ವಿಟಿ ಸ್ಟ್ರಾಟಜಿ ಮತ್ತು ಸೀನಿಯರ್ ಸಮೂಹದ ವಿಪಿ ಮುಖ್ಯಸ್ಥ ಹೇಮಂಗ್ ಜಾನಿ ಹೇಳಿದ್ದಾರೆ.

ಅಕ್ಟೋಬರ್ 19ರಂದು ಮಾರುಕಟ್ಟೆಗಳು ಮುಕ್ತಾಯವಾದಾಗ ಬಿಎಸ್​ಇ ಸೆನ್ಸೆಕ್ಸ್ 2,74,69,606.93 ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿತ್ತು, ಆದರೆ ನವೆಂಬರ್​ 26ರ ಶುಕ್ರವಾರದಂದು ಸೆನ್ಸೆಕ್ಸ್, ನಿಫ್ಟಿ ಎರಡೂ ಸೂಚ್ಯಂಕಗಳು ಶೇ 2 ಕ್ಕಿಂತ ಹೆಚ್ಚು ಕುಸಿದಾಗ ಮಾರುಕಟ್ಟೆ ಮೌಲ್ಯವು ಸುಮಾರು 2,60,81,433.97 ಕೋಟಿ ರೂಪಾಯಿಗೆ ಇಳಿದಿದೆ. ಸೆನ್ಸೆಕ್ಸ್ 1,300 ಅಂಕಗಳಿಗಿಂತಲೂ ಹೆಚ್ಚು ಮತ್ತು ನಿಫ್ಟಿ 400 ಅಂಕಗಳಿಗಿಂತಲೂ ಜಾಸ್ತಿ ನೆಲಕಚ್ಚಿದೆ. ಸಾರ್ವಕಾಲಿಕ ಗರಿಷ್ಠದಿಂದ ಕುಸಿತವು ಸೂಚ್ಯಂಕಗಳ ವಲಯಗಳಾದ್ಯಂತ ಸಾಕ್ಷಿ ಆಗಿದೆ ಬಿಎಸ್ಇ ಲೋಹದ ಸೂಚ್ಯಂಕವು ಅಕ್ಟೋಬರ್ 19ರ ಮಟ್ಟದಿಂದ ಶೇ 13.6ರಷ್ಟು ಕುಸಿದಿದೆ. ಈ ಅವಧಿಯಲ್ಲಿ ಬಿಎಸ್‌ಇ ಎನರ್ಜಿ ಸೂಚ್ಯಂಕವು ಎರಡಂಕಿಯ ಕುಸಿತಕ್ಕೆ ಸಾಕ್ಷಿಯಾಗಿದೆ ಮತ್ತು ಸುಮಾರು ಶೇ 10ರಷ್ಟು ಕುಸಿದಿದೆ. ಇದರ ನಂತರ ಬಿಎಸ್ಇ ಬ್ಯಾಂಕೆಕ್ಸ್ ಶೇ 8.2, ಬಿಎಸ್ಇ ಫೈನಾನ್ಸ್ ಶೇ 7.37, ಬಿಎಸ್ಇ ಎಫ್ಎಂಸಿಜಿ ಶೇ 7.04, ಬಿಎಸ್ಇ ಐಟಿ ಶೇ 6.68, ಬಿಎಸ್ಇ ತೈಲ ಮತ್ತು ಅನಿಲ ಶೇ 6.1, ಬಿಎಸ್ಇ ವಾಹನ ಶೇ 6.01 ಮತ್ತು ಬಿಎಸ್ಇ ರಿಯಾಲ್ಟಿ ಶೇ 5.74ರಷ್ಟು ಕುಸಿದವು.

ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇದೇ ಅವಧಿಯಲ್ಲಿ ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಕ್ರಮವಾಗಿ ಶೇ 5.65 ಮತ್ತು ಶೇ 4.6ರಷ್ಟು ಕುಸಿದಿವೆ. ಮಾರುಕಟ್ಟೆಗಳಿಗೆ ಅನಿಶ್ಚಿತತೆಯನ್ನು ತರುತ್ತಿರುವ ಜಾಗತಿಕ ಅಂಶಗಳಿಂದ ಹೂಡಿಕೆದಾರರು ಚಿಂತಿತರಾಗಿದ್ದಾರೆ. ಫೆಡ್ ಮತ್ತು ಇತರ ಕೇಂದ್ರೀಯ ಬ್ಯಾಂಕ್‌ಗಳಿಂದ ಸನ್ನಿಹಿತವಾದ ಉತ್ತೇಜಕ ಟ್ಯಾಪರ್ ಮತ್ತು ಬಡ್ಡಿದರ ಹೆಚ್ಚಳವು ಮಾರುಕಟ್ಟೆಗಳಿಗೆ ಪ್ರಮುಖ ತಡೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ಮಾರುಕಟ್ಟೆಗಳಿಂದ ನಗದು ಲಭ್ಯತೆ ಕಡಿತಕ್ಕೆ ಸಂಬಂಧಿಸಿದ ಕಳವಳಗಳನ್ನು ಮುನ್ನೆಲೆಗೆ ತರುತ್ತದೆ. ಎಲ್ಲ ಸಮಯದಲ್ಲೂ ಚಾಲ್ತಿಯಲ್ಲಿದ್ದ ಬಡ್ಡಿದರಗಳಲ್ಲಿ ಆಕ್ರಮಣಕಾರಿ ಹೆಚ್ಚಳಕ್ಕೆ ಹೋಗುವ ಮೂಲಕ ಆರ್ಥಿಕ ಬೆಳವಣಿಗೆಯ ವೆಚ್ಚದಲ್ಲಿ ಹಣದುಬ್ಬರವನ್ನು ಹತೋಟಿಗೆ ತರುವುದು ವಿವೇಕಯುತ ಆಗಿದೆಯೇ ಎಂಬ ವಿಷಯದೊಂದಿಗೆ ಕೇಂದ್ರೀಯ ಬ್ಯಾಂಕ್​ಗಳು ಚಿಂತಿಸುತ್ತಿರುವಾಗ ಆರ್ಥಿಕತೆಯಾದ್ಯಂತ ಹೆಚ್ಚುತ್ತಿರುವ ಹಣದುಬ್ಬರವು ಬೆಂಕಿಗೆ ತುಪ್ಪವನ್ನು ಸೇರಿಸುತ್ತಿದೆ. ಕಚ್ಚಾ ಮತ್ತು ಲೋಹದ ಬೆಲೆಗಳ ಹೆಚ್ಚಳವು ಹಣದುಬ್ಬರದ ಟ್ರೆಂಡ್​ಗೆ ಇನ್ನಷ್ಟು ಸೇರ್ಪಡೆ ಮಾಡುತ್ತಿದೆ. ಇದು ಬೇಡಿಕೆಯ ಚೇತರಿಕೆಯನ್ನು ನಿಧಾನಗೊಳಿಸಬಹುದು. ಇದು ಆರ್ಥಿಕತೆಯು ಕೊವಿಡ್ ಪ್ರೇರಿತ ಒತ್ತಡದಿಂದ ಹೊರಬರಲು ಹೆಚ್ಚು ಅಗತ್ಯವಿದೆ.

ಜರ್ಮನಿ ಮತ್ತು ಆಸ್ಟ್ರಿಯಾದಂತಹ ಯುರೋಪ್‌ನ ಪ್ರಮುಖ ಆರ್ಥಿಕತೆಗಳಲ್ಲಿ ಹೆಚ್ಚುತ್ತಿರುವ ಕೊವಿಡ್ ವೈರಸ್ ಪ್ರಕರಣಗಳು ಮತ್ತು ಅದರಲ್ಲಿ ಒಟ್ಟು ಲಾಕ್‌ಡೌನ್‌ಗಳ ಹೇರಿಕೆಯು ಹೂಡಿಕೆದಾರರ ಭಾವನೆಯನ್ನು ಮತ್ತಷ್ಟು ಕುಗ್ಗಿಸಿದೆ. ಈ ವೈರಸ್‌ನ ಹಿಡಿತದಿಂದ ಜಗತ್ತು ಅಂತಿಮವಾಗಿ ಯಾವಾಗ ಮುಕ್ತವಾಗುತ್ತದೆ ಎಂಬ ಬಗ್ಗೆ ಹೆಚ್ಚಿನ ಅನುಮಾನಗಳು ಈಗ ಹರಿದಾಡುತ್ತಿವೆ. ದಕ್ಷಿಣ ಆಫ್ರಿಕಾ ಮತ್ತು ಬೋಟ್ಸ್ವಾನಾದಂತಹ ದೇಶಗಳಲ್ಲಿ ವೈರಸ್‌ನ ಹೊಸ ಲಸಿಕೆ ನಿರೋಧಕ ವೇರಿಯಂಟ್ ಪತ್ತೆಯಾದಾಗ ಗುರುವಾರ (ನವೆಂಬರ್ 25, 2021) ಶವಪೆಟ್ಟಿಗೆಯ ಮೇಲೆ ಹೆಚ್ಚಿನ ಮೊಳೆಗಳನ್ನು ಹೊಡೆದಿದೆ. ಸದ್ಯಕ್ಕೆ ಅದನ್ನು B.1.1.529 ಎಂದು ಗುರುತಿಸಲಾಗಿದೆ. ದಕ್ಷಿಣ ಆಫ್ರಿಕಾದ ಅತ್ಯಂತ ಜನನಿಬಿಡ ಪ್ರಾಂತ್ಯವಾದ ಗೌಟೆಂಗ್‌ನಲ್ಲಿ ಯುವ ಜನರಲ್ಲಿ ಹೆಚ್ಚಿನ ಸಂಖ್ಯೆಯ ವೇರಿಯಂಟ್​ಗಳು ಮತ್ತು ಕ್ಷಿಪ್ರವಾಗಿ ಹರಡುವಿಕೆಯಿಂದಾಗಿ ವೇರಿಯಂಟ್​ ಈಗ ದೊಡ್ಡ ಸವಾಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವಿಶೇಷ ಸಭೆ “ಹೊಸ, ಹೆಚ್ಚು ವೇರಿಯಂಟ್ ಕೊವಿಡ್ -19 ಹೊರಹೊಮ್ಮುವಿಕೆ ಮಧ್ಯೆ ಈಕ್ವಿಟಿ ಮಾರುಕಟ್ಟೆಗಳು ಸುಮಾರು ಶೇ 2 ರಷ್ಟು ಕುಸಿದಿವೆ,” ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್‌ನ ಬ್ರೋಕಿಂಗ್ ಮತ್ತು ಡಿಸ್ಟ್ರಿಬ್ಯೂಷನ್‌ನ ಈಕ್ವಿಟಿ ಸ್ಟ್ರಾಟಜಿ ಮತ್ತು ಸೀನಿಯರ್ ಗ್ರೂಪ್ ವಿಪಿ ಮುಖ್ಯಸ್ಥ ಹೇಮಂಗ್ ಜಾನಿ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು (WHO) ಈ ಹೊಸ ವೇರಿಯಂಟ್​ ಅನ್ನು ನಿಭಾಯಿಸುವ ಯೋಜನೆಗಳನ್ನು ಚರ್ಚಿಸಲು ನವೆಂಬರ್ 26ರಂದು ವಿಶೇಷ ಸಭೆಯನ್ನು ನಿಗದಿಪಡಿಸಿದೆ. ಯುರೋಪಿಯನ್ ಒಕ್ಕೂಟವು ದಕ್ಷಿಣ ಆಫ್ರಿಕಾದಿಂದ ವಿಮಾನಗಳ ತಾತ್ಕಾಲಿಕ ನಿಷೇಧವನ್ನು ಘೋಷಿಸಿದೆ. “ಈ ಹೊಸ ವೇರಿಯಂಟ್ ಇತರ ದೇಶಗಳಿಗೆ ಹರಡುವ ಭಯವಿದೆ. ಅದು ಮತ್ತೆ ಜಾಗತಿಕ ಆರ್ಥಿಕತೆಯನ್ನು ಹಳಿ ತಪ್ಪಿಸಬಹುದು. ಅಮೆರಿಕದ ಫೆಡ್ ಯಾವಾಗ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸುತ್ತದೆ ಎಂಬ ಬಗ್ಗೆ ಈಗಾಗಲೇ ಅನಿಶ್ಚಿತತೆ ಇದೆ. ಆದ್ದರಿಂದ ಮಾರುಕಟ್ಟೆಗಳು ಒತ್ತಡದಲ್ಲಿ ಮುಂದುವರೆಯಬಹುದು ಮತ್ತು ಜಾಗತಿಕವಾಗಿ ಕೊವಿಡ್ ಸ್ಥಿತಿಯನ್ನು ಸಕ್ರಿಯವಾಗಿ ಟ್ರ್ಯಾಕ್ ಮಾಡುತ್ತದೆ,” ಎಂದು ಸೇರಿಸಲಾಗಿದೆ.

ಇಂದು ಒಟ್ಟಾರೆ ಏಷ್ಯನ್ ಮಾರುಕಟ್ಟೆಗಳು ನಿನ್ನೆಯ ಮಟ್ಟಕ್ಕಿಂತ ಶೇ 1.5ರಿಂದ ಶೇ 2.5ರಷ್ಟು ಕಡಿಮೆಗೆ ವ್ಯವಹಾರ ಮಾಡುತ್ತಿವೆ. ನಿಫ್ಟಿ 400 ಪಾಯಿಂಟ್‌ಗಳಿಗೆ (ಶೇಕಡಾ 2 ಕ್ಕಿಂತ ಹೆಚ್ಚು), ನಿಕ್ಕಿ- 225 ಸೂಚ್ಯಂಕ 700 ಪಾಯಿಂಟ್‌ಗಳಿಗಿಂತ ಹೆಚ್ಚು (ಸುಮಾರು ಶೇ 2.5) ಕುಸಿದಿದ್ದರೆ, ಹ್ಯಾಂಗ್ ಸೆಂಗ್ 550 ಪಾಯಿಂಟ್‌ಗಳಿಗಿಂತ ಹೆಚ್ಚು (ಶೇ 2ಕ್ಕಿಂತ ಹೆಚ್ಚು) ಕುಸಿದಿದೆ. ಭಾರತೀಯ ಮಾರುಕಟ್ಟೆಗಳು ಇಂದು ಮುಖ್ಯವಾಗಿ ರಿಯಾಲ್ಟಿ, ಲೋಹಗಳು, ಬ್ಯಾಂಕ್‌ಗಳು ಮತ್ತು ವಾಹನಗಳ ಕಂಪೆನಿ ಷೇರುಗಳ ಕುಸಿತದಿಂದ ಕಂಗಾಲಾಗಿವೆ.

ಅಂದಹಾಗೆ ಈ ಲೇಖನ ಪ್ರಕಟ ಆಗುವ ಹೊತ್ತಿಗೆ ಸೆನ್ಸೆಕ್ಸ್ 1345 ಪಾಯಿಂಟ್ಸ್ ಹಾಗೂ ನಿಫ್ಟಿ 407 ಪಾಯಿಂಟ್ಸ್ ಕುಸಿದಿವೆ.

ಇದನ್ನೂ ಓದಿ: Investors Wealth: ಕರ್ನಾಟಕ ಬಜೆಟ್​ನ 3 ವರ್ಷದ ಮೊತ್ತ ಷೇರುಪೇಟೆಯಲ್ಲಿ ಒಂದೇ ದಿನದಲ್ಲಿ ಕಳ್ಕೊಂಡ ಹೂಡಿಕೆದಾರರು

Published On - 2:27 pm, Fri, 26 November 21

Follow Us
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್