AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Investments In Airtel: ಏರ್​ಟೆಲ್​ನಲ್ಲಿ ಗೂಗಲ್​ನ 7500 ಕೋಟಿ ರೂಪಾಯಿ ಹೂಡಿಕೆಗೆ ಷೇರುದಾರರ ಒಪ್ಪಿಗೆ

ಏರ್​ಟೆಲ್​ನಲ್ಲಿ ಗೂಗಲ್​ನಿಂದ ನೂರು ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಕ್ಕೆ ಷೇರುದಾರರು ಅನುಮತಿ ನೀಡಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.

Google Investments In Airtel: ಏರ್​ಟೆಲ್​ನಲ್ಲಿ ಗೂಗಲ್​ನ 7500 ಕೋಟಿ ರೂಪಾಯಿ ಹೂಡಿಕೆಗೆ ಷೇರುದಾರರ ಒಪ್ಪಿಗೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Feb 28, 2022 | 6:52 PM

Share

ಏರ್​ಟೆಲ್​ನ ಶೇ 1.28ರ ಪಾಲಿನ ಖರೀದಿಗೆ 7,500 ಕೋಟಿ ರೂಪಾಯಿ ಹೂಡಿಕೆ ಮಾಡಲು ಭಾರತೀಯ ಟೆಲಿಕಾಂ ಕಂಪೆನಿಯ ಷೇರುದಾರರು ಅನುಮತಿ ನೀಡಿದ್ದಾರೆ. ಗೂಗಲ್​ನಿಂದ (Google) ಹೂಡಿಕೆಗೆ ವಿಶೇಷ ನಿಲುವಳಿಯನ್ನು ಶೇ 99ರಷ್ಟು ಷೇರುದಾರರು ಅನುಮೋದಿಸಿದರು ಎಂದು ಫೆಬ್ರವರಿ 26ನೇ ತಾರೀಕಿನಂದು ನಡೆದ ವಿಶೇಷ ಸಾಮಾನ್ಯ ಸಭೆ (EGM) ಫಲಿತಾಂಶದ ಆಧಾರದಲ್ಲಿ ತಿಳಿಸಲಾಗಿದೆ. ಗೂಗಲ್​ನಿಂದ ಏರ್​ಟೆಲ್​ನಲ್ಲಿ 100 ಕೋಟಿ ಅಮೆರಿಕನ್ ಡಾಲರ್ ಅಥವಾ 7500 ಕೋಟಿ ರೂಪಾಯಿಯಷ್ಟು ಹೂಡಿಕೆ ಮಾಡುವುದಾಗಿ ಜನವರಿ 28ನೇ ತಾರೀಕು ಘೋಷಣೆ ಮಾಡಲಾಗಿತ್ತು. ಅದರಲ್ಲಿ ಈಕ್ವಿಟಿ ಹೂಡಿಕೆ ಮತ್ತು ವಾಣಿಜ್ಯ ಒಪ್ಪಂದ ಸಹ ಒಳಗೊಂಡಿತ್ತು.

ಪರಸ್ಪರ ಒಪ್ಪಿದ ನಿಬಂಧನೆಗಳ ಜತೆಗೆ ಮುಂದಿನ 5 ವರ್ಷಗಳಿಗೆ ಹಣಕಾಸು ಒದಗಿಸುವುದು ಸಹ ಸೇರಿತ್ತು. ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಷನ್ ಫಂಡ್ ಭಾಗವಾಗಿ ಏರ್​ಟೆಲ್​ ಸಹಭಾಗಿತ್ವದಲ್ಲಿ 100 ಕೋಟಿ ಅಮೆರಿಕನ್ ಡಾಲರ್​ ತನಕ ಹೂಡಿಕೆ ಮಾಡುವುದಾಗಿ ಗೂಗಲ್ ಹೇಳಿತ್ತು.

ಈ ಹೂಡಿಕೆಯಲ್ಲಿ 70 ಕೋಟಿ ಡಾಲರ್ ಅನ್ನು ಈಕ್ವಿಟಿ ರೂಪದಲ್ಲಿ ಏರ್​ಟೆಲ್​ನಲ್ಲಿ ಹೂಡಿಕೆ ಮಾಡುತ್ತದೆ. ಅಂದರೆ ಪ್ರತಿ ಷೇರಿಗೆ 734 ರೂಪಾಯಿಯಂತೆ ಖರೀದಿಸುತ್ತದೆ. ಇನ್ನು ಬಾಕಿ 30 ಕೋಟಿ ಡಾಲರ್ ವಾಣಿಜ್ಯ ಒಪ್ಪಂದಗಳ ಜಾರಿಗಾಗಿ ಹೂಡಿಕೆ ಮಾಡುತ್ತದೆ. ಅದರಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಮೊಬೈಲ್ ಸಾಧನಗಳ ಉತ್ಪಾದನೆ, ಭಾರತದಾದ್ಯಂತ ಡಿಜಿಟಲ್ ಎಕೋಸಿಸ್ಟಮ್​ ಅಡಿಯಲ್ಲಿ ಡಿಜಿಟಲ್​ ಸಂಪರ್ಕಕ್ಕೆ ಪ್ರಯತ್ನಿಸುತ್ತದೆ.

ಇದರ ಜತೆಗೆ ಬಹುತೇಕ ಷೇರುದಾರರು ಏರ್​ಟೆಲ್​ನ ಪ್ರಸ್ತಾವ ಆದ 1.17 ಲಕ್ಷ ಕೋಟಿ ರೂಪಾಯಿಯನ್ನು ಅಂಗಸಂಸ್ಥೆಗಳಾದ ಇಂಡಸ್ ಟವರ್ಸ್, Nxtra ಮತ್ತು ಭಾರ್ತಿ ಹೆಕ್ಸಾಕಾಂಗಾಗಿ ವೆಚ್ಚ ಮಾಡುವುದಕ್ಕೆ ಅನುಮೋದನೆಯನ್ನು ನೀಡಿದರು.

ಇದನ್ನೂ ಓದಿ: Airtel Payments Bank: ಆರ್​ಬಿಐನಿಂದ ಶೆಡ್ಯೂಲ್ ಬ್ಯಾಂಕ್ ಸ್ಥಾನ ಪಡೆದ ಏರ್​ಟೆಲ್ ಪೇಮೆಂಟ್ಸ್ ಬ್ಯಾಂಕ್

Published On - 4:58 pm, Mon, 28 February 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ