Sign In

By signing in or creating an account, you agree with Associated Broadcasting Company's Terms & Conditions and Privacy Policy.

50 ಲಕ್ಷ ರೂ ಸಂಬಳದ ಕೆಲಸ ಬಿಟ್ಟು ಸ್ವಂತ ಕಂಪನಿ ಕಟ್ಟಿ ಪರಿತಪಿಸುತ್ತಿರುವ ವ್ಯಕ್ತಿ

Cost of being startup founder: ವರ್ಷಕ್ಕೆ 50 ಲಕ್ಷ ರೂ ಸಂಬಳ ಬರುವ ಕೆಲಸವನ್ನು ಬಿಟ್ಟು ತನ್ನದೇ ಸ್ವಂತ ಕಂಪನಿ ಕಟ್ಟಿ ಈಗ ಅದನ್ನು ಮುಚ್ಚುತ್ತಿರುವ ವ್ಯಕ್ತಿಯ ಕಥೆ ಇದು. ಎಲ್ಲರಂತೆ ತಾನೂ ಯಾಕೆ ಸ್ವಂತ ಬಿಸಿನೆಸ್ ಆರಂಭಿಸಬಾರದು ಎನ್ನುವ ಉಮೇದಿಗೆ ಬಿದ್ದು ಈತ ಕೆಲಸ ಬಿಟ್ಟಿದ್ದ. ಎಂಟು ಕೋಟಿ ಬಂಡವಾಳ ಪಡೆದು ಕಂಪನಿ ಕಟ್ಟಿ ಅದನ್ನು ಲಾಭದ ಹಳಿಗೂ ತಂದಿದ್ದ. ಆದರೆ, ನಿರಂತರ ಒತ್ತಡ, ವೈಯಕ್ತಿಕ ಸಂಬಂಧಗಳ ನಶಿಸುವಿಕೆ ಇವೆಲ್ಲವೂ ಈತನನ್ನು ಹೈರಾಣಗೊಳಿಸಿದವಂತೆ.

50 ಲಕ್ಷ ರೂ ಸಂಬಳದ ಕೆಲಸ ಬಿಟ್ಟು ಸ್ವಂತ ಕಂಪನಿ ಕಟ್ಟಿ ಪರಿತಪಿಸುತ್ತಿರುವ ವ್ಯಕ್ತಿ
ಖಿನ್ನತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 28, 2024 | 12:14 PM

ಎಂಥೆಂಥವರೋ ಕಂಪನಿ ಕಟ್ಟುತ್ತಿದ್ದಾರೆ… ಕೋಟಿ ಕೋಟಿಗಳಿಗೆ ಲೆಕ್ಕವಿಲ್ಲದಂತೆ ಬಂಡವಾಳ ಸಿಗುತ್ತಿದೆ… ನಾನ್ಯಾಕೆ ದೊಡ್ಡ ಕಂಪನಿ ಕಟ್ಟಬಾರದು ಎಂದು ವ್ಯಕ್ತಿಯೊಬ್ಬ ಕೆಲಸ ಬಿಟ್ಟು ಕಂಪನಿ ಕಟ್ಟಿ ಈಗ ಪರಿತಪಿಸುತ್ತಿರುವ ಘಟನೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ತನ್ನ ಅನುಭವ ಹಂಚಿಕೊಂಡಿರುವ ಈತ, ಸ್ಟಾರ್ಟಪ್ ಫೌಂಡರ್ ಆಗಬೇಕೆನ್ನುವ ಭ್ರಮೆಯಲ್ಲಿದ್ದ ತನಗೆ ವಾಸ್ತವ ಏನೆಂದು ಅರಿವಾಯಿತು ಎಂದು ಹೇಳಿಕೊಂಡಿದ್ದಾನೆ. ಎರಡು ವರ್ಷಗಳಿಂದ ಕಂಪನಿ ನಿರ್ವಹಿಸಿ, ಅದು ಲಾಭ ಕಾಣುವಂತೆ ಮಾಡಿದ್ದರೂ ಎಲ್ಲೋ ಒಂದು ಕಡೆ ಈತನಿಗೆ ಭ್ರಮನಿರಸನ ಆಗಿರುವುದು ಇವರ ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ಎದ್ದುಕಾಣುತ್ತದೆ.

ಈ ವ್ಯಕ್ತಿ ತನ್ನದೇ ಕಂಪನಿ ಸ್ಥಾಪಿಸುವ ಉಮೇದಿಗೆ ಬೀಳುವ ಮುನ್ನ ಒಂದು ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್ ಹುದ್ದೆಯನ್ನು ನಿರ್ವಹಿಸುತ್ತಿರುತ್ತಾರೆ. ವರ್ಷಕ್ಕೆ 50 ಲಕ್ಷ ರೂ ಸಂಬಳ ಪಡೆಯುತ್ತಿರುತ್ತಾರೆ. ಲಿಂಕ್ಡ್​ಇನ್ ಪೋಸ್ಟ್​ಗಳನ್ನು, ವಿವಿಧ ಪೋಡ್​ಕ್ಯಾಸ್ಟ್​ಗಳನ್ನು ನೋಡಿದಾಗ ಬಹಳಷ್ಟು ಜನರು ಸುಲಭವಾಗಿ ಕಂಪನಿ ಕಟ್ಟುತ್ತಿರುವುದು ಕಂಡು ಅಚ್ಚರಿ ಆಯಿತು. 2021ರಲ್ಲಿ ತಾನೂ ಕಂಪನಿ ಸ್ಥಾಪಕನಾಗಬೇಕೆಂಬ ಆಸೆ ಈತನಿಗೆ ಹುಟ್ಟಿತು. ಬೃಹತ್ ಸಂಸ್ಥೆ ಕಟ್ಟುವ ಬದಲು ಸುಮ್ಮನೆ ವ್ಯರ್ಥ ಜೀವನ ನಡೆಸುತ್ತಿದ್ದೇನಲ್ಲ ಎಂದನಿಸಿದೆ ಈತನಿಗೆ.

ಇದನ್ನೂ ಓದಿ: Fact Check: ಗೌತಮ್ ಅದಾನಿಯನ್ನು ಬಂಧಿಸಿರುವುದು ನಿಜವೇ?: ವೈರಲ್ ಫೋಟೋದ ಸತ್ಯಾಂಶ ಏನು?

ತಡಮಾಡದೆ ಕ್ಷಿಪ್ರವಾಗಿ ನಿರ್ಧಾರ ಕೈಗೊಂಡು, 50 ಲಕ್ಷ ರೂ ಸಂಬಳದ ಕೆಲಸ ಬಿಟ್ಟು ಕಂಪನಿಯೊಂದನ್ನೂ ಸ್ಥಾಪಿಸಿದರು. ಅದು ಲಾಭವೂ ಕಾಣತೊಡಗಿತು. ‘ಒಳ್ಳೆಯ ಪ್ರಾಡಕ್ಟ್ ನಿರ್ಮಿಸಿದೆವು. ಜನರೂ ಅದನ್ನು ಕೊಳ್ಳತೊಡಗಿದರು. ಕಾರ್ಯಾಚರಣಾತ್ಮಕವಾಗಿ ಲಾಭವನ್ನೂ ಕಾಣತೊಡಗಿದೆವು. ಪ್ರಮುಖ ಹಿನ್ನಡೆಗಳೇನೂ ಇರಲಿಲ್ಲ. ಬರ್ನ್ ರೇಟ್ (ಕೆಲಸದ ಹೊರೆ) ಕೂಡ ಕಡಿಮೆ ಇತ್ತು. ಎಲ್ಲಾ ರೀತಿಯಿಂದಲೂ ಬಿಸಿನೆಸ್ ಚೆನ್ನಾಗಿತ್ತು’ ಎನ್ನುತ್ತಾರೆ ಈ ವ್ಯಕ್ತಿ.

ಆದರೆ, ಎಲ್ಲವೂ ಚೆನ್ನಾಗಿದ್ದ ಮೇಲೆ ಬಿಸಿನೆಸ್ ಲೈಫ್ ಸಕ್ಸಸ್ ತಾನೇ ಎಂದು ನೀವು ಕೇಳಬಹುದು. ಆದರೆ, ಗ್ರೇಪ್​ವೈನ್ ಪ್ಲಾಟ್​ಫಾರ್ಮ್​ನಲ್ಲಿ ಈ ವ್ಯಕ್ತಿ ಹಾಕಿರುವ ಪೋಸ್ಟ್​ನಲ್ಲಿ, ತನ್ನ ಭ್ರಮನಿರಸನಕ್ಕೆ ಕಾರಣ ತಿಳಿಸಿದ್ದಾರೆ. ‘ಇಡೀ ಸಮಯ ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು. ತಂಡದಲ್ಲಿ ಬೇರೆಲ್ಲರೂ ಕೂಡ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತಿದ್ದರೆ, ನಾನು ನಿರುತ್ಸಾಹಿಯಾಗಿದ್ದೆ. ಪ್ರತೀ ದಿನ ಬೆಳಗೆ ಎದ್ದು, ಇದು ಇಷ್ಟೇನಾ ಎನಿಸುತ್ತಿತ್ತು’ ಎಂದು ಈತ ಬರೆದಿದ್ದಾರೆ.

ಇದನ್ನೂ ಓದಿ: ಶೇ. 97ರಷ್ಟು ವಿದ್ಯುದೀಕರಣಗೊಂಡ ಬ್ರಾಡ್​ಗೇಜ್ ರೈಲ್ವೆ ನೆಟ್ವರ್ಕ್; ನೂರಕ್ಕೆ ನೂರು ಎಲೆಕ್ಟ್ರಿಫಿಕೇಶನ್ ಗುರಿ

ಆದರೆ, ಒಂದು ಸ್ಟಾರ್ಟಪ್ ಅನ್ನು ನಡೆಸಲು ಏನು ಅಗತ್ಯವೋ ಅದಕ್ಕೆ ಹೊಂದಿಕೊಳ್ಳಲು ಈತನಿಗೆ ಸಾಧ್ಯವಾಗಲಿಲ್ಲ. ಅದು ಒಂದು ರೀತಿಯಲ್ಲಿ ಈತನಿಗೆ ಪ್ಯಾನಿಕ್ ಅಟ್ಯಾಕ್ ತರತೊಡಗಿದೆ. ಅಂತ್ಯವೇ ಇಲ್ಲದ ಅನಿಶ್ಚಿತತೆ, ನಿರ್ಧಾರಗಳನ್ನು ಕೈಗೊಳ್ಳುವ ಹೊರೆ ಇವೆಲ್ಲವೂ ಕಾಡುತ್ತಿತ್ತು. ಈ ಕೆಲಸಕ್ಕೆ ತಾನು ಹೇಳಿ ಮಾಡಿಸಿದವನಲ್ಲ. ತನಗೆ ಸಂಸ್ಥಾಪಕ ಆಗಬೇಕೆಂದು ಆಲೋಚನೆಯೇ ಪ್ರಧಾನವಾಗಿತ್ತು ಅಷ್ಟೇ ಎಂದು ಈತ ಹೇಳಿಕೊಂಡಿದ್ದಾನೆ.

‘ಒತ್ತಡ ಹೆಚ್ಚತೊಡಗಿತು. ತಿಂಗಳು ಕಾಲ ಸರಿಯಾಗಿ ನಿದ್ರಿಸಲಿಲ್ಲ. ಸಂಬಂಧಗಳು ಹಾಳಾಗತೊಡಗಿದವು. ನನ್ನ ಮಾನಸಿಕ ಆರೋಗ್ಯದ ಕಥೆ ಹೇಳುವುದೇ ಬೇಡ. ಯಶಸ್ವಿಯಾಗಿರುವ ಯಾವುದನ್ನೋ ನಾನು ಕಟ್ಟಿದ್ದೇನೆ. ಆದರೆ, ನನ್ನ ಜೀವನವೇ ನನ್ನಿಂದ ಹೊರಟು ಹೋಗಿ ಭಾವಶೂನ್ಯತೆ ನೆಲಸಿದೆ. ಅಂತೆಯೇ ಈ ಕಂಪನಿಯನ್ನು ಇಲ್ಲಿಗೇ ನಿಲ್ಲಿಸುತ್ತಿದ್ದೇನೆ’ ಎಂದು ಈತ ವಿವರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ