AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಝೂಮ್ ಕಾಲ್​ನಲ್ಲಿ 900 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿದ್ದ ಸಿಇಒಗೆ ಈಗ ಹೋಯ್ತು ಕೆಲಸ

Better Home 2021ರಲ್ಲಿ ಝೂಮ್ ವಿಡಿಯೋ ಕಾಲ್​ನಲ್ಲಿ 900 ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದ ಸಿಇಒವೊಬ್ಬರು ಈಗ ಕೆಲಸ ಕಳೆದುಕೊಂಡಿದ್ದಾರೆ. ಬೆಟರ್ ಹೋಮ್ ಅಂಡ್ ಫೈನಾನ್ಸ್ ಕಂಪನಿಯ ಭಾರತ ಮೂಲದ ಸಿಇಒ ವಿಶಾಲ್ ಗರ್ಗ್ ಅವರು ಆ ವ್ಯಕ್ತಿ. ಕಂಪನಿಯ ಆಡಳಿತ ಮಂಡಳಿ ನಿರ್ದೇಶಕರು ವಿಶಾಲ್ ಅವರನ್ನು ಉಚ್ಚಾಟನೆ ಮಾಡಿದೆ.

ಝೂಮ್ ಕಾಲ್​ನಲ್ಲಿ 900 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿದ್ದ ಸಿಇಒಗೆ ಈಗ ಹೋಯ್ತು ಕೆಲಸ
ವಿಶಾಲ್ ಗರ್ಗ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 17, 2026 | 1:13 PM

Share

ನ್ಯೂಯಾರ್ಕ್, ಆಗಸ್ಟ್ 17: ಐದು ವರ್ಷದ ಹಿಂದೆ (2021 ರಲ್ಲಿ) ಕೋವಿಡ್ ಪೀಕ್ ಇದ್ದಾಗ ಝೂಮ್ (Zoom) ಕಾಲ್ ಮೂಲಕ ಏಕಾಏಕಿ 900 ಉದ್ಯೋಗಿಗಳನ್ನು ವಜಾಗೊಳಿಸಿದ ಘಟನೆ ಹಲವರಿಗೆ ನೆನಪಿರಬಹುದು. ಆ ಕೆಲಸ ಮಾಡಿದ್ದು ಭಾರತ ಮೂಲದ ವ್ಯಕ್ತಿ ವಿಶಾಲ್ ಗರ್ಗ್ (Vishal Garg). ಅಮೆರಿಕದ ‘ಬೆಟರ್ ಹೋಮ್ & ಫೈನಾನ್ಸ್’ (Better Home & Finance) ಕಂಪನಿಯ ಸಿಇಒ ಆಗಿದ್ದಾಗ ಒಂದು ವಿಡಿಯೋ ಕಾಲ್​ನಲ್ಲಿ 900 ಉದ್ಯೋಗಿಗಳೆಲ್ಲರನ್ನೂ ಟರ್ಮಿನೇಟ್ ಮಾಡಿದ್ದರು. ಕರ್ಮ ರಿಟರ್ನ್ಸ್ ಎನ್ನುವಂತೆ, ಇದೀಗ ಆ ಕಂಪನಿಯ ಮಂಡಳಿ ಸದಸ್ಯರೇ ಸೇರಿಕೊಂಡು ವಿಶಾಲ್ ಗರ್ಗ್ ಅವರನ್ನು ಕೆಲಸದಿಂದ ಟರ್ಮಿನೇಟ್ ಮಾಡಿದ್ದಾರೆ.

ವಿಶಾಲ್ ಗರ್ಗ್ ಅವರನ್ನು ವಜಾ ಮಾಡಲು ಕಾರಣ

ವಿಶಾಲ್ ಗರ್ಗ್ ಅವರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ (judgment), ಸ್ವಭಾವ (temperament) ಮತ್ತು ನಂಬಿಕಾರ್ಹತೆಯ (credibility) ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಕಂಪನಿಯ ಆಡಳಿತ ಮಂಡಳಿಯು (Board of Directors) ಅವರನ್ನು ಹುದ್ದೆಯಿಂದ ವಜಾಗೊಳಿಸಲು ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡಿದೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ಭಾರತ ಮೂಲದ ಲಕ್ಷ್ಮೀ ಮಿತ್ತಲ್ ಅವರ ಕಾರ್ಖಾನೆ ಮೇಲೆ ರಷ್ಯನ್ ದಾಳಿ; ಇಬ್ಬರು ಬಲಿ

ವಿಶಾಲ್ ಗರ್ಗ್ ನಾಯಕತ್ವದಲ್ಲಿ ಕಂಪನಿಯು 2022 ರಿಂದ $1.5 ಬಿಲಿಯನ್ (ಸುಮಾರು ₹14,000 ಕೋಟಿಗೂ ಹೆಚ್ಚು) ನಿವ್ವಳ ನಷ್ಟ ಅನುಭವಿಸಿದೆ. ಅಲ್ಲದೆ ಕಂಪನಿಯ ಶೇರು ಮೌಲ್ಯವು ಶೇ. 90 ಕ್ಕಿಂತ ಹೆಚ್ಚು ಕುಸಿತ ಕಂಡಿದೆ.

2021 ರ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ಹಬ್ಬಕ್ಕೂ ಕೆಲ ದಿನಗಳ ಮುನ್ನ ವಿಶಾಲ್ ಗಾರ್ಗ್ ಕೇವಲ 3 ನಿಮಿಷಗಳ ಝೂಮ್ ವೆಬಿನಾರ್‌ನಲ್ಲಿ 900 ಕ್ಕೂ ಹೆಚ್ಚು ಉದ್ಯೋಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿದ್ದರು. ಈ ಘಟನೆ ಜಾಗತಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕಂಪನಿಯ ಅನೇಕ ಹಿರಿಯರು ಕೂಡ ತೊರೆದುಹೋದರು. ಕಂಪನಿಯ ಬ್ರ್ಯಾಂಡ್ ಇಮೇಜ್​ಗೆ ಧಕ್ಕೆ ಬಂದಿತ್ತು. ವಿಶಾಲ್ ಗರ್ಗ್ ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದರೂ ಪ್ರತಿಷ್ಠೆಗೆ ಆಗಿದ್ದ ಧಕ್ಕೆ ಸುಧಾರಿಸಲಿಲ್ಲ. ಬ್ಯುಸಿನೆಸ್ ಕೂಡ ಕುಸಿಯುತ್ತಾ ಬಂದಿತು. ಒಂದೆಡೆ, ವ್ಯವಹಾರ ನಷ್ಟ, ಇನ್ನೊಂದೆಡೆ ಶೇರು ಮೌಲ್ಯ ನಷ್ಟ. ಇವೆರಡೂ ಸೇರಿ ವಿಶಾಲ್ ಗರ್ಗ್ ಅವರಿಗೆ ಕುತ್ತು ತಂದಿದೆ.

ಸಿನಿಮಾ ಥ್ರಿಲ್ಲರ್​ನಂತೆ ಬಂದು ಮಧ್ಯಂತರ ಸಿಇಒ ಆದ ಡೇನಿಯಲ್ ಲೂಯಿಸ್

ಬೆಟರ್ ಹೋಮ್ ಸಂಸ್ಥೆಯು ಡೇನಿಯಲ್ ಲೂಯಿಸ್ (Daniel Lewis) ಎಂಬುವವರನ್ನು ಹಂಗಾಮಿ ಸಿಇಒ ಆಗಿ ನೇಮಿಸಿದೆ. ಈ ಡೇನಿಯಲ್ ಅವರನ್ನು ಕಂಪನಿಯ ಒಳಗೆ ಬಿಟ್ಟುಕೊಂಡಿದ್ದೇ ವಿಶಾಲ್ ಗರ್ಗ್. ಝೂಮ್ ಕಾಲ್ ಘಟನೆ ಬಳಿಕ ಕಂಪನಿಯ ಇಮೇಜ್​ಗೆ ಧಕ್ಕೆಯಾದಾಗ ಡೇನಿಯಲ್ ಅವರು ಸಾರ್ವಜನಿಕವಾಗಿ ಕಂಪನಿ ಬಗ್ಗೆ ಸಕಾರಾತ್ಮಕವಾಗಿ ಮಾತನಾಡುತ್ತಿದ್ದರು. ಹೋಗುತ್ತಾ ಹೋಗುತ್ತಾ ವಿಶಾಲ್ ಗರ್ಗ್ ಅವರ ವಿಶ್ವಾಸ ಕುದುರಿಸಿದ್ದರು. ಬಳಿಕ ಅವರನ್ನು ನಿರ್ದೇಶಕರ ಮಂಡಳಿಗೆ ಸೇರಿಸಿಕೊಳ್ಳಲಾಯಿತು. ನೇಮಕವಾಗಿ ಒಂದು ವಾರಕ್ಕೆ ಇತರ ನಿರ್ದೇಶಕರನ್ನು ಲೂಯಿಸ್ ಅವರು ವಿಶಾಲ್ ಗರ್ಗ್ ಉಚ್ಚಾಟನೆಗೆ ಮನವೊಲಿಸಿಬಿಟ್ಟಿದ್ದರು.

ಇದನ್ನೂ ಓದಿ: 2040ರಲ್ಲಿ ಅಮೆರಿಕ, ಯೂರೋಪ್​ಗಿಂತ ದಕ್ಷಿಣ ಏಷ್ಯಾದಲ್ಲಿ ಕಡಿಮೆ ಬಡವರು?; ವಿಶ್ವಬ್ಯಾಂಕ್ ದತ್ತಾಂಶ ಅಚ್ಚರಿ ಎನಿಸಿದರೂ ಸತ್ಯ

ಇದೀಗ ವಿಶಾಲ್ ಗರ್ಗ್ ತಮ್ಮನ್ನು ವಜಾಗೊಳಿಸಿರುವುದನ್ನು ಪ್ರಶ್ನಿಸಿ ಪ್ರಸಿದ್ಧ ವಕೀಲರನ್ನು ನೇಮಿಸಿಕೊಂಡು ಕಾನೂನು ಸಮರ ಆರಂಭಿಸಿದ್ದಾರೆ. ಕಂಪನಿಯನ್ನು ಲಾಭಕ್ಕೆ ತರುವವರೆಗೆ ವರ್ಷಕ್ಕೆ ಕೇವಲ 1 ಡಾಲರ್ ವೇತನಕ್ಕೆ ಕೆಲಸ ಮಾಡಲು ಸಿದ್ಧವಿರುವುದಾಗಿ ಹೇಳಿ ತಮ್ಮ ಹುದ್ದೆಯನ್ನು ಮರಳಿ ಪಡೆಯಲು ಯತ್ನಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!