AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wagon Manufacturing: ವಿಶೇಷ ವ್ಯಾಗನ್ ಬೋಗಿಗಳ ತಯಾರಿಕೆಗೆ ತೀತಾಗಡ್ ರೈಲ್ ಜೊತೆ ರಕ್ಷಣಾ ಸಚಿವಾಲಯದ ಒಪ್ಪಂದ

Titagarh Rail systems contract from Defence Ministry: ಪಶ್ಚಿಮ ಬಂಗಾಳ ಮೂಲದ ತೀತಾಗಡ್ ರೈಲ್ ಸಿಸ್ಟಮ್ಸ್ ಸಂಸ್ಥೆ 250 ರೈಲ್ ವ್ಯಾಗನ್​ಗಳನ್ನು ತಯಾರಿಸಿಕೊಡಲು 173 ಕೋಟಿ ರೂ ಮೊತ್ತದ ಗುತ್ತಿಗೆ ಪಡೆದುಕೊಂಡಿದೆ. ಕೇಂದ್ರ ರಕ್ಷಣಾ ಸಚಿವಾಲಯದೊಂದಿಗೆ ಮಾಡಿಕೊಳ್ಳಲಾಗಿರುವ ಈ ಒಪ್ಪಂದದ ಪ್ರಕಾರ 36 ತಿಂಗಳಲ್ಲಿ ಈ 250 ವ್ಯಾಗನ್​ಗಳನ್ನು ಸರಬರಾಜು ಮಾಡಬೇಕು. ಕಳೆದ ತಿಂಗಳು (ಜನರಿ) ದೆಹಲಿಯ ಆಂಬರ್ ಕಂಪನಿ ಜೊತೆ ಕೈ ಜೋಡಿಸಿರುವ ತೀತಾಗಡ್, ರೈಲ್ವೆ ಸಬ್​ಸಿಸ್ಟಂ ಮತ್ತು ಕಾಂಪೊನೆಂಟ್​ಗಳನ್ನು ಜಂಟಿಯಾಗಿ ತಯಾರಿಸುತ್ತಿದೆ.

Wagon Manufacturing: ವಿಶೇಷ ವ್ಯಾಗನ್ ಬೋಗಿಗಳ ತಯಾರಿಕೆಗೆ ತೀತಾಗಡ್ ರೈಲ್ ಜೊತೆ ರಕ್ಷಣಾ ಸಚಿವಾಲಯದ ಒಪ್ಪಂದ
ತೀತಾಗಡ್ ರೈಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 18, 2024 | 3:39 PM

Share

ನವದೆಹಲಿ, ಫೆಬ್ರುವರಿ 18: ಭಾರತದ ಅತಿದೊಡ್ಡ ಖಾಸಗಿ ವಲಯದ ರೈಲ್ವೆ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಎನಿಸಿರುವ ತೀತಾಗಡ್ ರೈಲ್ ಸಿಸ್ಟಮ್ಸ್​ಗೆ (Titagarh Rail Systems Ltd) ಈಗ ರಕ್ಷಣಾ ಸಚಿವಾಲಯದ ಒಪ್ಪಂದ ಸಿಕ್ಕಿದೆ. 250 ವಿಶೇಷ ವ್ಯಾಗನ್ ಬೋಗಿಗಳನ್ನು ತಯಾರಿಸಿ ಕೊಡಲು ತೀತಾಗಡ್ 170 ಕೋಟಿ ರೂ ಮೊತ್ತದ ಈ ಒಪ್ಪಂದ ಪಡೆದಿದೆ. 36 ತಿಂಗಳ ಒಳಗೆ ಈ ವ್ಯಾಗನ್​ಗಳನ್ನು ತಯಾರಿಸಿ ಕೊಡಬೇಕೆಂದು ಒಪ್ಪಂದದಲ್ಲಿ ತಿಳಿಸಲಾಗಿದೆ. ಫೆಬ್ರುವರಿ 17, ಶನಿವಾರ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, 12 ತಿಂಗಳ ಬಳಿಕ ಒಪ್ಪಂದ ಚಾಲನೆಗೊಳ್ಳಲಿದೆ. ಅದಾಗಿ 36 ತಿಂಗಳೊಳಗೆ ವ್ಯಾಗನ್ ತಯಾರಿಕೆ ಪೂರ್ಣಗೊಂಡು, ಎಲ್ಲಾ 250 ಬೋಗಿಗಳನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸಬೇಕಾಗುತ್ತದೆ.

ತೀತಾಗಡ್ ರೈಲ್ವೆ ಸಿಸ್ಟಮ್ಸ್ ವ್ಯಾಗನ್ ಮತ್ತು ರೈಲು ಬೋಗಿಗಳನ್ನು ತಯಾರಿಸುವ ಕಂಪನಿಯಾಗಿದೆ. ವ್ಯಾಗನ್ ಎಂದರೆ ರೈಲುಗಳಲ್ಲಿ ಸರಕು ಸಾಗಣೆಗೆ ಬಳಸುವ ಬೋಗಿಗಳು. ಪ್ಯಾಸೆಂಜರ್ ವಾಹನಗಳಲ್ಲಿ ಪ್ರಯಾಣಿಕರನ್ನು ಬೋಗಿಗಳಲ್ಲಿ ಸಾಗಿಸಲಾಗುತ್ತದೆ. ಸರಕು ಸಾಗಣೆ ರೈಲುಗಳಲ್ಲಿ ಸರಕುಗಳನ್ನು ಸಾಗಿಸಲು ವ್ಯಾಗನ್ ಬಳಸಲಾಗುತ್ತದೆ.

ಇದನ್ನೂ ಓದಿ: ಮುಂಬೈನಲ್ಲಿ ಅಮಿತಾಭ್ ಬಚ್ಚನ್ ಕಚೇರಿ ಸ್ಥಳ ಬಾಡಿಗೆಗೆ ಪಡೆದ ವಾರ್ನರ್ ಸಂಸ್ಥೆ; ಇದರ ಬಾಡಿಗೆ ದರ ಇತ್ಯಾದಿ ವಿವರ

ಐರೋಪ್ಯ ಮಾರುಕಟ್ಟೆ ಮೇಲೆ ತೀತಾಗಡ್ ಕಣ್ಣು

ಕೋಲ್ಕತಾ ಮೂಲದ ತೀತಾಗಡ್ ರೈಲ್ ಸಿಸ್ಟಮ್ಸ್ ಸಂಸ್ಥೆ ಕೇವಲ ಬೋಗಿ ಮತ್ತು ವ್ಯಾಗನ್​ಗಳ ತಯಾರಿಕೆ ಮಾತ್ರವಲ್ಲ, ರೈಲುಗಳ ಬೇರೆ ಬಿಡಿಭಾಗ ಮತ್ತು ಸಬ್​ಸಿಸ್ಟಮ್​ಗಳ ತಯಾರಿಕೆಗೂ ಇಳಿದಿದೆ. ಇದಕ್ಕಾಗಿ ದೆಹಲಿಯ ಆಂಬರ್ ಗ್ರೂಪ್ ಜೊತೆ ಕೈಜೋಡಿಸಿದೆ. ಈ ಎರಡೂ ಕಂಪನಿಗಳು ಸೇರಿ ಎಸ್​​ಪಿವಿ ವಾಹನಗಳನ್ನು ತಯಾರಿಸಿವೆ. ಇದನ್ನು ಭಾರತ ಮಾತ್ರವಲ್ಲದೆ ಯೂರೋಪಿಯನ್ ಮಾರುಕಟ್ಟೆಗೂ ವಿಸ್ತರಿಸಲು ಬಳಸಲಾಗುತ್ತಿದೆ.

ಮಲ್ಟಿಬ್ಯಾಗರ್ ಆಗಿರುವ ತೀತಾಗಡ್ ರೈಲ್​ನ ಷೇರು

ತೀತಾಗಡ್ ರೈಲ್ ಸಿಸ್ಟಂನ ನಿವ್ಳ ಲಾಭ ಬಹಳಷ್ಟು ಹೆಚ್ಚಾಗಿದೆ. ಅಂತೆಯೇ ಅದರ ಷೇರಿಗೂ ಬಲು ಬೇಡಿಕೆ ಇದೆ. ಕಳೆದ ಒಂದು ವರ್ಷದಿಂದ ಅದರ ಷೇರುಬೆಲೆ ಶೇ. 104.04ರಷ್ಟು ಏರಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ 432 ರೂಗೆ ಅದರ ಷೇರು ಬೆಲೆ ಇಳಿದಿದ್ದರೂ ಒಂದು ತಿಂಗಳ ಹಿಂದೆ (ಜನವರಿ) ದಾಖಲೆಯ 1248 ರೂಗೆ ಏರಿತ್ತು. ಈಗ ಅದರ ಷೇರುಬೆಲೆ 953.70 ರೂನಲ್ಲಿದೆ.

ಇದನ್ನೂ ಓದಿ: 2 ಲಕ್ಷ ರೂ ಸಾಲದಿಂದ ಹಿಡಿದು ಆಧನಿಕ ಕೌಶಲ ತರಬೇತಿ; ಪಿಎಂ ವಿಶ್ವಕರ್ಮ ಯೋಜನೆಯ ಲಾಭಗಳೇನು, ತಿಳಿದಿರಿ

ಈಗ ಡಿಫೆನ್ಸ್ ಮಿನಿಸ್ಟ್ರಿ ಒಪ್ಪಂದ ಸಿಕ್ಕಿರುವ ಹಿನ್ನೆಲೆಯಲ್ಲಿ ಸೋಮವಾರ ಆರಂಭವಾಗುವ ಷೇರುಪೇಟೆ ವಹಿವಾಟಿನಲ್ಲಿ ತೀತಾಗಡ್ ರೈಲ್ ಸಿಸ್ಟಮ್ಸ್​ನ ಷೇರುಬೆಲೆ ಮತ್ತೆ 1,000 ರೂ ಗಡಿ ದಾಟುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!