AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ ಪಾವತಿಗೆ ಎಂಡಿಆರ್ ಶುಲ್ಕ; ನಾಲ್ಕು ಭಾಗವಾಗಿ ಹಂಚಿಕೆ; ಯಾರಿಗೆ ಎಷ್ಟು ಆದಾಯ ಸಿಗುತ್ತೆ? ಇಲ್ಲಿದೆ ವಿವರ

ಅಕ್ಟೋಬರ್ 16ರಿಂದ ಯುಪಿಐ ಪಾವತಿಗಳಿಗೆ ಎಂಡಿಆರ್ ನಿಯಮಗಳು ಜಾರಿಗೆ ಬರುತ್ತವೆ. 2,000 ರೂಗಿಂತ ಹೆಚ್ಚಿನ ಮೊತ್ತದ ಯುಪಿಐ ಪೇಮೆಂಟ್ ಸ್ವೀಕರಿಸುವ ವ್ಯಾಪಾರಿಗಳು ಶೇ. 0.4ರಷ್ಟು ಎಂಡಿಆರ್ ತೆರಬೇಕಾಗುತ್ತದೆ. ಈ ಎಂಡಿಆರ್ ಹಣವು ಗ್ರಾಹಕರ ಬ್ಯಾಂಕ್ ಅಕೌಂಟ್, ವ್ಯಾಪಾರಿಯ ಬ್ಯಾಂಕ್ ಅಕೌಂಟ್, ಪೇಮೆಂಟ್ ಆ್ಯಪ್ ಮತ್ತು ಪಾರ್ಟ್ನರ್ ಬ್ಯಾಂಕ್ ಈ ನಾಲ್ಕು ಭಾಗಗಳಾಗಿ ಹಂಚಿಕೆಯಾಗುತ್ತದೆ.

ಯುಪಿಐ ಪಾವತಿಗೆ ಎಂಡಿಆರ್ ಶುಲ್ಕ; ನಾಲ್ಕು ಭಾಗವಾಗಿ ಹಂಚಿಕೆ; ಯಾರಿಗೆ ಎಷ್ಟು ಆದಾಯ ಸಿಗುತ್ತೆ? ಇಲ್ಲಿದೆ ವಿವರ
ಪೇಟಿಎಂImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 16, 2026 | 4:52 PM

Share

ನವದೆಹಲಿ, ಸೆಪ್ಟೆಂಬರ್ 16: ಕ್ರೆಡಿಟ್ ಕಾರ್ಡ್​ಗೆ ಇರುವ ರೀತಿಯಲ್ಲಿ ಯುಪಿಐಗೂ ಸರ್ಕಾರ ಎಂಡಿಆರ್ ಶುಲ್ಕ ನೀತಿ ಜಾರಿಗೆ ತರುತ್ತಿದೆ. ಅಕ್ಟೋಬರ್ 15ರಿಂದ ಕೆಲ ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ ಅನ್ವಯ ಆಗಲಿದೆ. ಎನ್​ಪಿಸಿಐ ನಿಗದಿ ಮಾಡಿರುವ ಮಾರ್ಗಸೂಚಿಗಳ ಪ್ರಕಾರ ಗ್ರಾಹಕರಿಂದ ವ್ಯಾಪಾರಿಗೆ ಆಗುವ ಯುಪಿಐ ಪಾವತಿಗಳಿಗೆ ಶೇ. 0.4ರಷ್ಟು ಎಂಡಿಆರ್ ಶುಲ್ಕ ಇರುತ್ತದೆ. 2,000 ರೂ ಮೇಲ್ಪಟ್ಟ ಪಾವತಿಗೆ ಶೇ. 0.4ರಷ್ಟು ಶುಲ್ಕ ಅನ್ವಯ ಆಗುತ್ತದೆ. ಪೇಮೆಂಟ್ ಸಿಸ್ಟಂಗಳ ರಕ್ಷಣೆ ಮತ್ತು ಬೆಳವಣಿಗೆಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ಎಂಡಿಆರ್ ಶುಲ್ಕ ಯಾರಿಗೆ ಸಿಗುತ್ತದೆ?

  1. ಗ್ರಾಹಕರ ಬ್ಯಾಂಕ್ ಅಕೌಂಟ್: ಶೇ. 40
  2. ಗ್ರಾಹಕರ ಯುಪಿಐ ಆ್ಯಪ್ (TPAP): ಶೇ. 20
  3. ವರ್ತಕರ ಬ್ಯಾಂಕ್ (Acquirer): ಶೇ. 30
  4. ಗ್ರಾಹಕರ ಯುಪಿಐ ಆ್ಯಪ್​ನ ಪಾರ್ಟ್ನರ್ ಬ್ಯಾಂಕ್ (PSP): ಶೇ. 10

ಉದಾಹರಣೆಗೆ, ನೀವು ದಿನಸಿ ಅಂಗಡಿಗೆ ಹೋಗಿ ವ್ಯಾಪಾರ ಮಾಡಿ 10,000 ರೂ ಹಣ ಪಾವತಿಸುತ್ತೀರಿ. ಫೋನ್​ಪೇ ಮೂಲಕ ಹಣ ಪಾವತಿಸುತ್ತೀರಿ. ದಿನಸಿ ಅಂಗಡಿಯಲ್ಲಿ ಗೂಗಲ್ ಪೇ ಸ್ಯಾನರ್ ಇರುತ್ತದೆ. ನಿಮ್ಮ ಬ್ಯಾಂಕ್ ಅಕೌಂಟ್ ಎಚ್​ಡಿಎಫ್​ಸಿ ಇರುತ್ತದೆ, ವ್ಯಾಪಾರಿಯದ್ದು ಎಸ್​ಬಿಐ ಅಕೌಂಟ್ ಆಗಿರುತ್ತದೆ. ಈಗ ಎಂಡಿಆರ್ ಹೇಗೆ ಹಂಚಿಕೆ ಆಗುತ್ತದೆ ಎಂದು ನೋಡೋಣ.

ಇದನ್ನೂ ಓದಿ: ಯುಪಿಐಗೆ ಎಂಡಿಆರ್: ಉಚಿತ ಟ್ರಾನ್ಸಾಕ್ಷನ್​ಗಳ್ಯಾವುವು, ಶುಲ್ಕ ಇರುವಂಥವು ಯಾವುವು? ಇಲ್ಲಿದೆ ಡೀಟೇಲ್ಸ್

ಹತ್ತು ಸಾವಿರ ರೂ ಪಾವತಿಗೆ ಎಂಡಿಆರ್ 40 ರೂ ಆಗುತ್ತದೆ. ಅದು ಮೇಲಿನ ನಿದರ್ಶನದಲ್ಲಿ ಈ ಕೆಳಕಂಡಂತೆ ಹಂಚಿಕೆ ಆಗಬಹುದು:

  1. ಗ್ರಾಹಕರ ಬ್ಯಾಂಕ್ (ಎಚ್​ಡಿಎಫ್​ಸಿ): 16 ರೂ (ಶೇ. 40)
  2. ವರ್ತಕರ ಬ್ಯಾಂಕ್ (ಎಸ್​ಬಿಐ): 12 ರೂ (ಶೇ. 30)
  3. ಫೋನ್​ಪೆ: 8 ರೂ (ಶೇ 20)
  4. ಫೋನ್​ಪೆ ಪಾರ್ಟ್ನರ್ ಬ್ಯಾಂಕ್: 4 ರೂ (ಶೇ. 10)

ಫೋನ್​ಪೆ ಸ್ವತಂತ್ರ ಬ್ಯಾಂಕ್ ಅಲ್ಲವಾಗಿರುವುದರಿಂದ ಅದು ಪೇಮೆಂಟ್ ಪ್ರೋಸಸ್​ಗೆ ಯೆಸ್ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಜೊತೆ ಪಾರ್ಟ್ನರ್​ಶಿಪ್ ಹೊಂದಿರುತ್ತದೆ. ಶೇ. 10 ಎಂಡಿಆರ್ ಆ ಬ್ಯಾಂಕಿಂಗ್ ಪಾರ್ಟ್ನರ್​ಗೆ ಹೋಗುತ್ತದೆ.

ಎಂಡಿಆರ್ ನಿಯಮಗಳು ಪೇಟಿಎಂಗೆ ಹೆಚ್ಚು ನಿರಾಳ ತಂದಿರುವುದು ಯಾಕೆ?

ಪೇಟಿಎಂ ಬ್ಯಾಂಕಿಂಗ್ ಲೈಸೆನ್ಸ್ ಹೊಂದಿಲ್ಲದಿದ್ದರೂ ಪೇಮೆಂಟ್ ಅಗ್ರಿಗೇಟರ್ ಲೈಸೆನ್ಸ್ ಪಡೆದಿದೆ. ವ್ಯಾಪಾರಿಗಳ ದೊಡ್ಡ ನೆಟ್ವರ್ಕ್ ರೂಪಿಸಿ, ಅದರ ಪೇಮೆಂಟ್ ಅಗ್ರಿಗೇಟರ್ ಪ್ಲಾಟ್​ಫಾರ್ಮ್​ಗೆ ಜೋಡಿಸಿದೆ. ಅದಕ್ಕಾಗಿ ಎಕ್ಸಿಸ್ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್, ಎಸ್​ಬಿಐ ಮತ್ತು ಯೆಸ್ ಬ್ಯಾಂಕ್​ಗಳೊಂದಿಗೆ ಸಹಭಾಗಿತ್ವ ಪಡೆದಿದೆ.

ಇದನ್ನೂ ಓದಿ: ಯುಪಿಐ ಪೇಮೆಂಟ್​ಗೆ ಎಂಡಿಆರ್, ಮತ್ತಷ್ಟು ಸ್ಪಷ್ಟತೆ; 2,000 ರೂ ಮೇಲ್ಪಟ್ಟ ಪಾವತಿಗೆ ಎಷ್ಟಿರುತ್ತೆ ಶುಲ್ಕ? ಇಲ್ಲಿದೆ ಪೂರ್ಣ ವಿವರ

ಪೇಟಿಎಂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಿದಾಗ ಶೇ. 30ರಷ್ಟು ಎಂಡಿಆರ್ ಶುಲ್ಕವು ಪೇಟಿಎಂಗೆ ಹೋಗುತ್ತದೆ. ಬ್ಯಾಕೆಂಡ್​ನಲ್ಲಿರುವ ಪಾರ್ಟ್ನರ್ ಬ್ಯಾಂಕ್​ಗೆ ಬಹಳ ಸ್ವಲ್ಪ ಶುಲ್ಕವನ್ನು ಪೇಟಿಎಂ ವತಿಯಿಂದ ಸಂದಾಯವಾಗುತ್ತದೆ. ಆದರೆ ಸಿಂಹಪಾಲು ಪೇಟಿಎಂಗೆ ಬರುತ್ತದೆ. ಹಾಗಾಗಿ, ಗ್ರಾಹಕರು ಪೇಟಿಎಂ ಆ್ಯಪ್ ಬಳಸಿ ವ್ಯಾಪಾರಿಯ ಪೇಟಿಎಂ ಕ್ಯೂಆರ್ ಕೋಡ್ ಬಳಸಿ ಹಣ ಪಾವತಿಸಿದರೆ ಶೇ. 50ರಷ್ಟು ಎಂಡಿಆರ್ ಶುಲ್ಕವು ಪೇಟಿಎಂಗೆ ಹೋಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಗಣೇಶ ಹಬ್ಬಕ್ಕೆ ಡಿಪೋ, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ಗಣೇಶ ಹಬ್ಬಕ್ಕೆ ಡಿಪೋ, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು
ಚಿತ್ರದುರ್ಗದಲ್ಲಿ ಪ್ರಯಾಣಿಕರೊಂದಿಗೆ ಸರ್ಕಾರಿ ಬಸ್ ಚಾಲಕನ ಕಿರಿಕ್
ಚಿತ್ರದುರ್ಗದಲ್ಲಿ ಪ್ರಯಾಣಿಕರೊಂದಿಗೆ ಸರ್ಕಾರಿ ಬಸ್ ಚಾಲಕನ ಕಿರಿಕ್
ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಕ್ಲಾಸ್​​
ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಕ್ಲಾಸ್​​
ತುರಹಳ್ಳಿ ಅರಣ್ಯ ಕ್ಲೀನ್ ಮಾಡಿ ಸಿಟಿ ಜನರಿಗೆ ಜಾಗೃತಿ ಮೂಡಿಸಿದ ತಬಾಹಿ
ತುರಹಳ್ಳಿ ಅರಣ್ಯ ಕ್ಲೀನ್ ಮಾಡಿ ಸಿಟಿ ಜನರಿಗೆ ಜಾಗೃತಿ ಮೂಡಿಸಿದ ತಬಾಹಿ
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಎಸ್ಐಟಿ ತನಿಖೆ ಬಿಸಿ ಸಾಧ್ಯತೆ
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಎಸ್ಐಟಿ ತನಿಖೆ ಬಿಸಿ ಸಾಧ್ಯತೆ
ಬಸ್‌ಗಾಗಿ ಬೇಡಿಕೆಯಿಟ್ಟ 140 ವಿದ್ಯಾರ್ಥಿಗಳು
ಬಸ್‌ಗಾಗಿ ಬೇಡಿಕೆಯಿಟ್ಟ 140 ವಿದ್ಯಾರ್ಥಿಗಳು
ಹೊಳೆಯಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಟ್ರಾಫಿಕ್ ಜಾಮ್
ಹೊಳೆಯಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಟ್ರಾಫಿಕ್ ಜಾಮ್
ಹುಳ ಇರುವ ಕುಡಿಯುವ ನೀರನ್ನು ಗ್ರಾಮಸಭೆಗೇ ತಂದ ರಾರಾವಿ ಗ್ರಾಮಸ್ಥರು!
ಹುಳ ಇರುವ ಕುಡಿಯುವ ನೀರನ್ನು ಗ್ರಾಮಸಭೆಗೇ ತಂದ ರಾರಾವಿ ಗ್ರಾಮಸ್ಥರು!