AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಲಿತ್ ಮೋದಿ ಕೈತಪ್ಪಿದ ವಾನೋಟೂ ದೇಶದ ಪಾಸ್​ಪೋರ್ಟ್; ಭಾರತದ ಮನವಿಗೆ ಸ್ಪಂದಿಸದ ಇಂಟರ್​​ಪೋಲ್

Lalit Modi and Vanuatu passport: ಇತ್ತೀಚೆಗೆ ಲಲಿತ್ ಮೋದಿಗೆ ನೀಡಿದ್ದ ಪಾಸ್​ಪೋರ್ಟ್ ಅನ್ನು ರದ್ದುಗೊಳಿಸುವಂತೆ ವಾನೋಟೂ ದೇಶದ ಪ್ರಧಾನಿ ಜೋಥಮ್ ವಾಪಾಟ್ ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಲಲಿತ್ ಮೋದಿ ಅವರನ್ನು ಬಂಧಿಸಲು ಭಾರತ ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಲಲಿತ್ ಮೋದಿಗೆ ಪಾಸ್​ಪೋರ್ಟ್ ರದ್ದುಗೊಳಿಸಲು ಕಾರಣ ಎನ್ನಲಾಗಿದೆ. ಇದೇ ವೇಳೆ, ಲಲಿತ್ ಮೋದಿಯನ್ನು ಹಿಡಿಯಲು ರೆಡ್ ನೋಟೀಸ್ ನೀಡುವಂತೆ ಭಾರತ ಎರಡು ಬಾರಿ ಮಾಡಿಕೊಂಡ ಮನವಿಯನ್ನು ಇಂಟರ್​​ಪೋಲ್ ತಿರಸ್ಕರಿಸಿದೆ.

ಲಲಿತ್ ಮೋದಿ ಕೈತಪ್ಪಿದ ವಾನೋಟೂ ದೇಶದ ಪಾಸ್​ಪೋರ್ಟ್; ಭಾರತದ ಮನವಿಗೆ ಸ್ಪಂದಿಸದ ಇಂಟರ್​​ಪೋಲ್
ಲಲಿತ್ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 10, 2025 | 11:47 AM

Share

ನವದೆಹಲಿ, ಮಾರ್ಚ್ 10: ಮಾಜಿ ಐಪಿಎಲ್ ಛೇರ್ಮನ್ ಲಲಿತ್ ಮೋದಿ (Lalit Modi) ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂಥ ಸ್ಥಿತಿ ಆಗಿದೆ. ಕೆಲ ತಿಂಗಳ ಹಿಂದೆ ಅವರಿಗೆ ನೀಡಲಾಗಿದ್ದ ವಾನೋಟೂ (Vanuatu) ದೇಶದ ಪಾಸ್​​ಪೋರ್ಟ್ ಅನ್ನು ರದ್ದು ಮಾಡಲಾಗಿದೆ. ಭಾರತದ ವಶಕ್ಕೆ ಬೀಳುವುದನ್ನು (Extradition) ತಪ್ಪಿಸಿಕೊಳ್ಳಲು ವಾನೋಟೂಗೆ ಹೋಗುವ ಲಲಿತ್ ಮೋದಿ ಪ್ರಯತ್ನ ನೀರಲ್ಲಿ ಹೋಮ ಮಾಡಿದಂತಾಗಬಹುದು. ಭಾರತಕ್ಕೆ ಹಸ್ತಾಂತರಗೊಳ್ಳುವುದನ್ನು ತಪ್ಪಿಸಿಕೊಳ್ಳಲು ಲಲಿತ್ ಮೋದಿ ಯತ್ನಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ವಾನೋಟೂ ದೇಶದ ಪ್ರಧಾನಿ ಜೋಥಮ್ ನಾಪಾಟ್ (Jotham Napat) ಅವರು ಮೋದಿಯ ಪಾಸ್​ಪೋರ್ಟ್ ರದ್ದುಗೊಳಿಸುವಂತೆ ತನ್ನ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಾನೋಟೂ ದೇಶದ ಪಾಸ್​ಪೋರ್ಟ್ ಸಿಕ್ಕ ಬಳಿಕ ಲಲಿತ್ ಮೋದಿ ಅವರು ಕೆಲ ದಿನಗಳ ಹಿಂದಷ್ಟೇ ತನ್ನ ಭಾರತೀಯ ಪಾಸ್​ಪೋರ್ಟ್ ಅನ್ನು ಮರಳಿಸಲು ಅರ್ಜಿ ಹಾಕಿದ್ದರು. ಆದರೆ, ವಾನೋಟೂ ಪಾಸ್​​ಪೋರ್ಟ್ ರದ್ದುಗೊಳ್ಳಬಹುದು ಎಂದು ಅವರು ನಿರೀಕ್ಷಿಸಿರಲಿಲ್ಲ.

ವಾನೋಟೂ ಪಾಸ್​ಪೋರ್ಟ್​ನಿಂದ ಲಲಿತ್ ಮೋದಿಗೆ ಏನು ಉಪಯೋಗ..?

ವಾನೋಟೂ ಎಂಬುದು ಆಸ್ಟ್ರೇಲಿಯಾ ಸಮೀಪ ಇರುವ ಒಂದು ಪುಟ್ಟ ದ್ವೀಪ ರಾಷ್ಟ್ರ. ಇದು ಹೆಚ್ಚಿನ ದೇಶಗಳ ಜೊತೆ ಗಡೀಪಾರು ಒಪ್ಪಂದಗಳಿಗೆ ಸಹಿ ಹಾಕಿಲ್ಲ. ಅಂದರೆ, ಯಾವುದೇ ದೇಶದ ಪ್ರಜೆಗಳು ವಾನೋಟೂನಲ್ಲಿ ಆಶ್ರಯ ಪಡೆದಿದ್ದು, ಅವರನ್ನು ಹಸ್ತಾಂತರಿಸುವಂತೆ ಅಥವಾ ಗಡೀಪಾರು ಮಾಡುವಂತೆ ಆ ದೇಶವು ಮನವಿ ಮಾಡಿಕೊಳ್ಳಬಹುದು ಅಷ್ಟೇ. ಆದರೆ, ಗಡೀಪಾರು ಮಾಡುವ ಯಾವ ಕಟ್ಟುಪಾಡಿಗೂ ವಾನೋಟೂ ಒಳಪಟ್ಟಿರುವುದಿಲ್ಲ. ಈ ಕಾರಣಕ್ಕೆ ಲಲಿತ್ ಮೋದಿ ಅವರು ಈ ಪುಟ್ಟ ದ್ವೀಪ ದೇಶದ ಆಶ್ರಯ ಬಯಸಿ ಹೋಗುತ್ತಿದ್ದಿರಬಹುದು.

ಇದನ್ನೂ ಓದಿ
Image
ಚಿನ್ನದ ಹೊಳಪಿನ ಹಿಂದೆ ತಳಮಳ
Image
ಡೊನಾಲ್ಡ್ ಟ್ರಂಪ್​ ವಿರುದ್ಧ ಕಿಡಿಕಾರಿದ ಬಾಬಾ ರಾಮದೇವ್
Image
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?
Image
ಭಾರತೀಯ ನೌಕರರು ಬೇಜವಾಬ್ದಾರಿಗಳು: ಸಿಇಒ ಹರಿರಾಘವನ್

ಇದನ್ನೂ ಓದಿ: ಕಷ್ಟಕಾಲಕ್ಕೆ ಬೇಕು ಚಿನ್ನ; ಜಗತ್ತಿನ ಸೆಂಟ್ರಲ್ ಬ್ಯಾಂಕುಗಳಿಗೂ ನಮ್ಮಜ್ಜಿ ಬುದ್ದಿ..!

ಲಲಿತ್ ಮೋದಿಯನ್ನು ಹಿಡಿಯುವ ಪ್ರಯತ್ನವೇಕೆ?

ಲಲಿತ್ ಮೋದಿ ಐಪಿಎಲ್ ಹುಟ್ಟುಹಾಕಿದವರಲ್ಲಿ ಒಬ್ಬರು. ಐಪಿಎಲ್​​ನ ಛೇರ್ಮನ್ ಆಗಿದ್ದವರು. ಐಪಿಎಲ್ ಗುತ್ತಿಗೆಗಳನ್ನು ನೀಡುವಾಗ, ಬಿಡ್ಡಿಂಗ್ ಪ್ರಕ್ರಿಯೆ ನಡೆಸುವಾಗ ಅಕ್ರಮ ಎಸಗಿರುವ ಗಂಭೀರ ಆರೋಪ ಅವರ ಮೇಲಿದೆ. ಹಾಗೆಯೇ, ಐಪಿಎಲ್ ಫಂಡ್​ಗಳನ್ನು ಬೇರೆಡೆ ಅಕ್ರಮವಾಗಿ ವರ್ಗಾಯಿಸಿದ ಆರೋಪವೂ ಇದೆ. ಅವರ ವಿರುದ್ದ ಪ್ರಕರಣ ದಾಖಲಾಗಿವೆ.

2010ರಲ್ಲಿ ಲಲಿತ್ ಮೋದಿಯನ್ನು ಐಪಿಎಲ್ ಛೇರ್ಮನ್ ಸ್ಥಾನದಿಂದ ಕೆಳಗಿಳಿಸಲಾಯಿತು. ಅದೇ ವರ್ಷ ಮೋದಿ ಬ್ರಿಟನ್ ದೇಶಕ್ಕೆ ಓಡಿ ಹೋಗಿದ್ದರು. ಆ ಬಳಿಕ ಭಾರತಕ್ಕೆ ಅವರು ಮರಳೇ ಇಲ್ಲ.

ರೆಡ್ ಕಾರ್ನರ್ ನೋಟೀಸ್ ನೀಡಲು ಇಂಟರ್​​ಪೋಲ್ ನಕಾರ

ಲಲಿತ್ ಮೋದಿ ಅವರನ್ನು ಹಿಡಿಯುವ ಪ್ರಯತ್ನದ ಭಾಗವಾಗಿ ಅವರ ವಿರುದ್ಧ ರೆಡ್ ನೋಟೀಸ್ ನೀಡುವಂತೆ ಇಂಟರ್​ಪೋಲ್​​ಗೆ ಭಾರತೀಯ ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ, ಮೋದಿ ವಿರುದ್ಧ ಸರಿಯಾದ ಸಾಕ್ಷ್ಯಾಧಾರ ಕೊರತೆ ಇರುವ ಕಾರಣ ಎರಡು ಬಾರಿ ಭಾರತೀಯ ಅಧಿಕಾರಿಗಳ ಮನವಿಯನ್ನು ಇಂಟರ್​​ಪೋಲ್ ತಿರಸ್ಕರಿಸಿತೆನ್ನಲಾಗಿದೆ.

ಇದನ್ನೂ ಓದಿ: ಭಾರತವೇ ಬೆಸ್ಟ್; ಸಾಲುಸಾಲಾಗಿ ತವರಿಗೆ ಬರುತ್ತಿರುವ ಭಾರತೀಯ ಸ್ಟಾರ್ಟಪ್​ಗಳು

ಭಾರತೀಯ ಪಾಸ್​ಪೋರ್ಟ್ ರದ್ದುಗೊಳಿಸಲು ಮೋದಿ ಅರ್ಜಿ ಸಲ್ಲಿಸಿದ್ದಾಕೆ?

ಭಾರತೀಯ ಪಾಸ್​ಪೋರ್ಟ್ ಇದ್ದಲ್ಲಿ ಅವರು ಭಾರತದ ಕಾನೂನಿನ ಕಟ್ಟುಪಾಡುಗಳಿಗೆ ಒಳಪಡಬೇಕಾಗುತ್ತದೆ. ಹೀಗಾಗಿ, ವಾನೋಟೂ ದೇಶದ ಪಾಸ್​​ಪೋರ್ಟ್ ಲಭಿಸಿದ ಬಳಿಕ ಲಲಿತ್ ಮೋದಿ ತಮ್ಮ ಭಾರತೀಯ ಪಾಸ್​ಪೋರ್ಟ್ ಅನ್ನು ಮರಳಿಸಲು ಅರ್ಜಿ ಹಾಕಿದ್ದರು. ಈಗ ವಾನೋಟೂ ಪ್ರಧಾನಿಗಳೇ ಲಲಿತ್ ಮೋದಿಯ ಪಾಸ್​ಪೋರ್ಟ್ ರದ್ದುಗೊಳಿಸಲು ಆದೇಶಿಸಿದ್ದಾರೆ. ಲಲಿತ್ ಮೋದಿ ಸದ್ಯ ಎಲ್ಲಿ ಇದ್ದಾರೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ. ವರದಿಗಳ ಪ್ರಕಾರ ಅವರು ಬ್ರಿಟನ್​​ನಲ್ಲೇ ಇರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:39 am, Mon, 10 March 25

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ