AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್ಪೋರ್ಟ್​​ನಲ್ಲಿ ಅಗ್ಗದ ಬೆಲೆ ಚಹಾ; ಉಡಾನ್ ಯಾತ್ರಿ ಕೆಫೆ ಸಖತ್ ಸಕ್ಸಸ್; ಅಹ್ಮದಾಬಾದ್ ಏರ್​ಪೋರ್ಟ್​​ನಲ್ಲೂ ಕೆಫೆ ಆರಂಭ

Udaan Yatri Cafe sells Tea at Rs 10: ಕೋಲ್ಕತಾ, ಚೆನ್ನೈ ಬಳಿಕ ಅಹ್ಮದಾಬಾದ್​ನ ಏರ್ಪೋರ್ಟ್​​ನಲ್ಲೂ ಉಡಾನ್ ಯಾತ್ರಿ ಕೆಫೆ ಆರಂಭವಾಗಿದೆ. ಈ ಮಳಿಗೆಯಲ್ಲಿ ಕಾಫಿ, ಟೀ, ಸಮೋಸಾ, ವಡೆ ಇತ್ಯಾದಿ ತಿಂಡಿ ಮತ್ತು ಪಾನೀಯಗಳು ಸಿಗುತ್ತವೆ. ಚಹಾ ಬೆಲೆ ಕೇವಲ 10 ರೂ ಇದೆ. ತಿಂಡಿಗಳ ಬೆಲೆ 20 ರೂ ಮಾತ್ರವೇ. ಕೋಲ್ಕತಾದಲ್ಲಿರುವ ಕೆಫೆಯಲ್ಲಿ ದಿನಕ್ಕೆ 35,000 ರೂ ವ್ಯಾಪಾರ ಆಗುತ್ತದೆ. ಚೆನ್ನೈನಲ್ಲಿ 24,000 ರೂ ಬ್ಯುಸಿನೆಸ್ ಆಗುತ್ತಿದೆ.

ಏರ್ಪೋರ್ಟ್​​ನಲ್ಲಿ ಅಗ್ಗದ ಬೆಲೆ ಚಹಾ; ಉಡಾನ್ ಯಾತ್ರಿ ಕೆಫೆ ಸಖತ್ ಸಕ್ಸಸ್; ಅಹ್ಮದಾಬಾದ್ ಏರ್​ಪೋರ್ಟ್​​ನಲ್ಲೂ ಕೆಫೆ ಆರಂಭ
ಉಡಾನ್ ಯಾತ್ರಿ ಕೆಫೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 10, 2025 | 4:33 PM

Share

ಚೆನ್ನೈ, ಮಾರ್ಚ್ 10: ಸಿನಿಮಾ ಮಾಲ್, ಏರ್ಪೋರ್ಟ್ ಇತ್ಯಾದಿ ಕಡೆ ಮಾರಲಾಗುವ ಆಹಾರವಸ್ತುಗಳ ಬೆಲೆ ತೀರಾ ಅತಿರೇಕವಾಗಿರುತ್ತವೆ ಎನ್ನುವ ದೂರುಗಳು ಸಾಕಷ್ಟು ಕೇಳಿಬರುತ್ತವೆ. ಈ ಮಧ್ಯೆ ಕೇಂದ್ರ ಸರ್ಕಾರ ಏರ್ಪೋರ್ಟ್​​ಗಳಲ್ಲಿ ಉಡಾನ್ ಯಾತ್ರಿ ಕೆಫೆ (Udaan Yatri Cafe) ಎನ್ನುವ ಸ್ನ್ಯಾಕ್ಸ್ ಮತ್ತು ಪಾನೀಯಗಳ ಅಂಗಡಿಗಳನ್ನು ತೆರೆಯಲು ಉದ್ದೇಶಿಸಿದೆ. ಈಗಾಗಲೇ ಎರಡು ಏರ್​​ಪೋರ್ಟ್​​ಗಳಲ್ಲಿ ಇದನ್ನು ಆರಂಭಿಸಲಾಗಿದೆ. ಎರಡು ವಾರದ ಹಿಂದಷ್ಟೇ ಚೆನ್ನೈ ಏರ್​​ಪೋರ್ಟ್​​ನಲ್ಲಿ ಕೇಂದ್ರ ವಿಮಾನಯಾನ ಸಚಿವ ಕಿಂಜರಪು ರಾಮಮೋಹನ್ ನಾಯ್ಡು ಅವರು ಉಡಾನ್ ಯಾತ್ರಿ ಕೆಫೆಯನ್ನು ಆರಂಭಿಸಿದ್ದರು. ಫೆಬ್ರುವರಿ 27ರಂದು ಶುರುವಾದ ಉಡಾನ್ ಯಾತ್ರಿ ಕೆಫೆ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದ್ದು ದಿನಕ್ಕೆ 24,000 ರೂ ಬಿಸಿನೆಸ್ ಆಗುತ್ತಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರ ಉಡಾನ್ ಸ್ಕೀಮ್ ಜಾರಿಗೆ ತಂದ ಬಳಿಕ ವಿಮಾನ ಹಾರಾಟದ ದರ ಅಗ್ಗಗೊಂಡಿದೆ. ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರೂ ಕೂಡ ಫ್ಲೈಟ್​​ನಲ್ಲಿ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಅಗ್ಗದ ವಿಮಾನ ಟಿಕೆಟ್ ಪಡೆದು ಬರುವ ಜನರಿಗೆ ಏರ್ಪೋರ್ಟ್​​ನಲ್ಲಿ ದುಬಾರಿ ಬೆಲೆಯ ಆಹಾರ ಖರೀದಿಸಬೇಕಾದ ಪರಿಸ್ಥಿತಿ ಇತ್ತು. ಇದನ್ನು ತಪ್ಪಿಸಲು ಸರ್ಕಾರ ಉಡಾನ್ ಯಾತ್ರಿ ಕೆಫೆಯನ್ನು ಏರ್​ಪೋರ್ಟ್​​ಗಳಲ್ಲಿ ಆರಂಭಿಸುವ ಯೋಜನೆ ಹಮ್ಮಿಕೊಂಡಿದೆ.

ಇದನ್ನೂ ಓದಿ: ಲಲಿತ್ ಮೋದಿ ಕೈತಪ್ಪಿದ ವಾನೋಟೂ ದೇಶದ ಪಾಸ್​ಪೋರ್ಟ್; ಭಾರತದ ಮನವಿಗೆ ಸ್ಪಂದಿಸದ ಇಂಟರ್​​ಪೋಲ್

ಇದನ್ನೂ ಓದಿ
Image
ಚಿನ್ನದ ಹೊಳಪಿನ ಹಿಂದೆ ತಳಮಳ
Image
ಡೊನಾಲ್ಡ್ ಟ್ರಂಪ್​ ವಿರುದ್ಧ ಕಿಡಿಕಾರಿದ ಬಾಬಾ ರಾಮದೇವ್
Image
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?
Image
ಶಿಸ್ತುಬದ್ಧ ಹೂಡಿಕೆದಾರರಿಗೆ ಇದು ಅಮೃತಕಾಲ: ತಜ್ಞರು

ಕಾಫಿ, ಟೀ, ಸೋಮಾಸ, ವಡೆ ಕಡಿಮೆ ಬೆಲೆಗೆ ಮಾರಾಟ

ನಂದಿನಿ ಮಿಲ್ಕ್ ಪಾರ್ಲರ್ ರೀತಿಯಲ್ಲಿ ಉಡಾನ್ ಯಾತ್ರಿ ಕೆಫೆಯಲ್ಲಿ ಟೀ, ಕಾಫಿ, ವಿವಿಧ ಸ್ನ್ಯಾಕ್ಸ್​​ಗಳು ಹಾಗೂ ತಂಪು ಪಾನೀಯಗಳು ಸಾಧಾರಣ ಬೆಲೆಗೆ ದೊರೆಯುತ್ತವೆ. ಇಲ್ಲಿ ಚಹಾ ಬೆಲೆ ಕೇವಲ 10 ರೂ ಮಾತ್ರವೇ ಇದೆ. ನಗರದ ಸಾಮಾನ್ಯ ಫಾಸ್ಟ್ ಫೂಡ್ ಹೋಟೆಲ್​​ಗಳಲ್ಲಿ ಇರುವ ಚಹಾ ಬೆಲೆ ಉಡಾನ್ ಯಾತ್ರಿ ಕೆಫೆಯಲ್ಲೂ ಇರುತ್ತದೆ. ಸಮೋಸಾ, ಬಡೆ, ಕಾಫಿಯ ಬೆಲೆ 20 ರೂ ಇದೆ. ಅದೇ ಏರ್ಪೋರ್ಟ್​ಗಳಲ್ಲಿ ಬೇರೆ ಮಳಿಗೆಯಲ್ಲಿ ನೀವು ಚಹಾ ಕುಡಿಯಬೇಕೆಂದರೆ ಒಂದು ಕಪ್​​ಗೆ 50ರಿಂದ 100 ರೂ ತೆರಬೇಕಾಗುತ್ತದೆ.

ಕೋಲ್ಕತಾ ಏರ್​​ಪೋರ್ಟ್​​ನಲ್ಲಿ ಮೊದಲ ಉಡಾನ್ ಯಾತ್ರಿ ಕೆಫೆ ಶುರುವಾಗಿದ್ದು. ಅಲ್ಲಿ ದಿನನಿತ್ಯ ಈ ಕೆಫೆ 35,000 ರೂ ಬಿಸಿನೆಸ್ ನಡೆಸುತ್ತಿದೆ. ಉಡಾನ್ ಯಾತ್ರಿ ಕೆಫೆಗಳಲ್ಲಿ ಆಹಾರ ಬೆಲೆ ಅಗ್ಗ ಇರುವುದು ಮಾತ್ರವಲ್ಲ, ರುಚಿ ಶುಚಿ ಮತ್ತು ಗುಣಮಟ್ಟದಲ್ಲೂ ಗಮನಾರ್ಹ ಎನಿಸಿದೆ.

ಇದನ್ನೂ ಓದಿ: ಕಷ್ಟಕಾಲಕ್ಕೆ ಬೇಕು ಚಿನ್ನ; ಜಗತ್ತಿನ ಸೆಂಟ್ರಲ್ ಬ್ಯಾಂಕುಗಳಿಗೂ ನಮ್ಮಜ್ಜಿ ಬುದ್ದಿ..!

ಅಹ್ಮದಾಬಾದ್ ಏರ್ಪೋರ್ಟ್​ನಲ್ಲೂ ಉಡಾನ್ ಕೆಫೆ

ಕೋಲ್ಕತಾ ಏರ್ಪೋರ್ಟ್​ನಲ್ಲಿರುವ ಉಡಾನ್ ಯಾತ್ರಿ ಕೆಫೆ ಸಾಕಷ್ಟು ಜನಪ್ರಿಯವಾಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿರುವ ಕೆಫೆಯೂ ಕೂಡ ಆ ಮಟ್ಟಕ್ಕೆ ಬೇಗನೇ ತಲುಪುವ ನಿರೀಕ್ಷೆ ಇದೆ. ಅಹ್ಮದಾಬಾದ್​ನಲ್ಲಿರುವ ಇಂಟರ್ನ್ಯಾಷನಲ್ ಏರ್​ಪೋರ್ಟ್​​ನಲ್ಲೂ ಉಡಾನ್ ಯಾತ್ರಿ ಕೆಫೆಯನ್ನು ಇದೀಗ ಉದ್ಘಾಟನೆ ಮಾಡಲಾಗಿದೆ. ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಜೈಪುರ್ ಏರ್​ಪೋರ್ಟ್​ಗಳಲ್ಲೂ ಯಾತ್ರಿ ಕೆಫೆಗಳನ್ನು ಆರಂಭಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Mon, 10 March 25

Follow Us
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ