AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wedding Insurance: ಮದುವೆಗೂ ಇನ್ಷೂರೆನ್ಸ್: ಏನು ಪ್ರಯೋಜನ? ಪ್ರೀಮಿಯಂ ಎಷ್ಟು? ಏನೇನೆಲ್ಲಾ ಕವರ್ ಆಗುತ್ತೆ? ವಿವರ ಇಲ್ಲಿದೆ

Insurance for wedding ceremony: ಒಂದು ವೇಳೆ ಮದುವೆ ಮುರಿದುಬಿಟ್ಟರೆ ಬಹಳಷ್ಟು ಹಣ ನೀರಿನಲ್ಲಿ ಹೋಮ ಮಾಡಿದಂತಾಗಿ ಹೋಗುತ್ತದೆ. ಇಂಥ ಅಚಾನಕ್ ಮತ್ತು ಅನಿರೀಕ್ಷಿತ ಘಟನೆಗಳನ್ನು ಎದುರಿಸಲು ವೆಡ್ಡಿಂಗ್ ಇನ್ಷೂರೆನ್ಸ್ ಸೂಕ್ತವಾದುದು.

Wedding Insurance: ಮದುವೆಗೂ ಇನ್ಷೂರೆನ್ಸ್: ಏನು ಪ್ರಯೋಜನ? ಪ್ರೀಮಿಯಂ ಎಷ್ಟು? ಏನೇನೆಲ್ಲಾ ಕವರ್ ಆಗುತ್ತೆ? ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 17, 2023 | 7:04 PM

Share

ಈಗೀಗ ಇನ್ಷೂರೆನ್ಸ್ ಬಹಳ ಉಪಯುಕ್ತ ಎನಿಸುತ್ತಿವೆ. ಅದರಲ್ಲೂ ಕೋವಿಡ್ ಬಂದ ಬಳಿಕ ಜನರಿಗೆ ಇನ್ಷೂರೆನ್ಸ್ ಎಷ್ಟು ಅಗತ್ಯ ಎಂಬುದರ ಅರಿವು ಹೆಚ್ಚೆಚ್ಚು ಆಗತೊಡಗಿದೆ. ಜೀವ ವಿಮೆ, ಆರೋಗ್ಯ ವಿಮೆ, ವಾಹನ ವಿಮೆ, ಕಟ್ಟಡ ವಿಮೆ, ಬೆಂಕಿ ಅವಘಡದ ವಿಮೆ, ಪ್ರವಾಸ ವಿಮೆ ಇತ್ಯಾದಿ ಕೆಲ ರೀತಿಯ ವಿಮೆಗಳು ಲಭ್ಯ ಇವೆ. ಈಗ ಭಾರತದಲ್ಲಿ ವೆಡ್ಡಿಂಗ್ ಇನ್ಷೂರೆನ್ಸ್ ಕೂಡ ಚಾಲನೆಗೆ ಬಂದಿದೆ. ಕೆಲವೊಂದಿಷ್ಟು ಕಂಪನಿಗಳು ವಿವಾಹ ವಿಮೆಯನ್ನು (Wedding Insurance) ಆಫರ್ ಮಾಡುತ್ತಿವೆ.

ವಿವಾಹ ಯಾರದೇ ಜೀವನದಲ್ಲೂ ಜರುಗುವ ಅತ್ಯಂತ ಮಹತ್ವದ ಘಟನೆಗಳಲ್ಲಿ ಒಂದು. ಕೆಲವರು ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ಮದುವೆ ಆಗುವುದುಂಟು. ಹೆಚ್ಚಿನ ಸಂದರ್ಭದಲ್ಲಿ ಜನರು ತಮ್ಮ ಶಕ್ತ್ಯಾನುಸಾರ ವೈಭವವಾಗಿ ಮದುವೆ ಸಮಾರಂಭ ಇಟ್ಟುಕೊಳ್ಳುತ್ತಾರೆ. ಬೆಂಗಳೂರಿನಂಥ ನಗರಗಳಲ್ಲಿ ಇಂಥ ಮದುವೆಗೆ ಕನಿಷ್ಠವೆಂದರೂ 10 ಲಕ್ಷ ರೂ ಆಗುತ್ತದೆ. ವೈಭವದ ಮದುವೆಗೆ ಕೋಟಿಗಟ್ಟಲೆ ಖರ್ಚು ಮಾಡುತ್ತಾರೆ. ಒಂದು ವೇಳೆ ಮದುವೆ ಮುರಿದುಬಿಟ್ಟರೆ ಬಹಳಷ್ಟು ಹಣ ನೀರಿನಲ್ಲಿ ಹೋಮ ಮಾಡಿದಂತಾಗಿ ಹೋಗುತ್ತದೆ. ಇಂಥ ಅಚಾನಕ್ ಮತ್ತು ಅನಿರೀಕ್ಷಿತ ಘಟನೆಗಳನ್ನು ಎದುರಿಸಲು ವೆಡ್ಡಿಂಗ್ ಇನ್ಷೂರೆನ್ಸ್ ಸೂಕ್ತವಾದುದು. ಮದುವೆ ಮುರಿದುಬೀಳುತ್ತೆ ಅಂತ ಇನ್ಷೂರೆನ್ಸ್ ಮಾಡಿಸಬೇಕಾ ಎಂದು ಕೇಳಬಹುದು. ವಿವಾಹ ಸಮಾರಂಭದಲ್ಲಿ ನಡೆಯಬಹುದಾದ ಅನಿರೀಕ್ಷಿತ ಘಟನೆಗಳಿಂದ ಆಗುವ ಬಹುತೇಕ ಹಾನಿಯನ್ನು ವೆಡ್ಡಿಂಗ್ ಇನ್ಷೂರೆನ್ಸ್ ಭರ್ತಿ ಮಾಡಬಹುದು.

ವೆಡಿಂಗ್ ಇನ್ಷೂರೆನ್ಸ್​ನಿಂದ ಏನೇನು ಕವರೇಜ್?

ಮದುವೆ ಮುರಿದುಬಿದ್ದರೆ, ಮದುವೆ ಮುಂದಕ್ಕೆಹೋದರೆ ಉಂಟಾಗುವ ನಷ್ಟವನ್ನು ಇನ್ಷೂರೆನ್ಸ್ ಕವರ್ ಮಾಡುತ್ತದೆ. ಉದಾಹರಣೆಗೆ ಮದುವೆ ಹಾಲ್​ಗೆ ಹಣ ನೀಡಿದ್ದರೆ, ಡೆಕೋರೇಶನ್, ಊಟ, ಹೋಟೆಲ್, ಟ್ರಾವೆಲ್ ಏಜೆನ್ಸಿ, ಆರ್ಕಿಸ್ಟ್ರಾ, ಓಲಗ ಇತ್ಯಾದಿ ಯಾವುದೇ ಮದುವೆ ಸಂಬಂಧಿತ ಸೇವೆಗೆ ಹಣ ನೀಡಿದ್ದರೆ ಅದನ್ನು ವಿಮೆ ಮೂಲಕ ಕ್ಲೈಮ್ ಮಾಡಬಹುದು.

ಇದನ್ನೂ ಓದಿAadhaar Mitra: ಆಧಾರ್ ಬಗ್ಗೆ ಎಐ ಆಧಾರಿತ ಚಾಟ್​ಬಾಟ್ ಸಹಾಯ; ಏನಿದು ಆಧಾರ್ ಮಿತ್ರಾ?

ಮದುವೆಯ ಯಾವುದೇ ಕಾರ್ಯಕ್ರಮ ಮನೆಯಲ್ಲೇ ನಡೆಯಲಿ, ಚೌಲ್ಟ್ರಿಯಲ್ಲೇ ನಡೆಯಲಿ, ಆ ವೇಳೆ ದುಬಾರಿ ವಸ್ತುಗಳ ಕಳ್ಳತನವಾದರೆ, ಬೆಂಕಿಯಿಂದ ಆಸ್ತಿನಷ್ಟವಾದರೆ, ಸ್ಫೋಟ, ಭೂಕಂಪದಿಂದ ಆಘಾತವಾದರೆ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಯಾರಿಗಾದರೂ ಸಾವು ನೋವು ಆದರೂ ಅದನ್ನೂ ವಿಮೆ ಕವರ್ ಮಾಡುತ್ತದೆ.

ಇಂಥವಕ್ಕೆ ವಿಮೆ ಕವರೇಜ್ ಇರಲ್ಲ, ಗಮನಿಸಿ

ಕಾರ್ಯಕ್ರಮಕ್ಕೆ ಹಾನಿಯಾಗಬಲ್ಲಂತಹ ಅಸಹಜ ವ್ಯವಸ್ಥೆಯನ್ನು ಮಾಡಿದ್ದರೆ ವಿಮೆ ಕವರೇಜ್ ಇರಲ್ಲ. ಯುದ್ಧ, ಭಯೋತ್ಪಾದನೆ, ಕಿಡ್ನಾಪ್, ಆತ್ಮಹತ್ಯೆ, ವಾಯುಮಾಲಿನ್ಯ ಇತ್ಯಾದಿ ಕಾರಣಗಳಿಂದ ಹಾನಿಯಾಗಿದ್ದನ್ನು ಕ್ಲೈಮ್ ಮಾಡಲಾಗುವುದಿಲ್ಲ. ಹಾಗೆಯೇ, ನಿಗದಿತ ಅವಧಿಯಲ್ಲಿ ವಿವಾಹ ಕಾರ್ಯಕ್ರಮ ಪೂರ್ಣಗೊಳಿಸಲು ವಿಫಲವಾದರೂ ಕ್ಲೇಮ್ ಸಿಗುವುದಿಲ್ಲ.

ಇದನ್ನೂ ಓದಿPPI For Foreigners: ವಿದೇಶೀ ಪ್ರವಾಸಿಗರಿಗೆ ಭಾರತದಲ್ಲಿ ಪಿಪಿಐ ವ್ಯವಸ್ಥೆ: ಆರ್​ಬಿಐ ಆಲೋಚನೆ

ಪ್ರೀಮಿಯಂ ಎಷ್ಟು ಕಟ್ಟಬೇಕು?

ಸಾಮಾನ್ಯವಾಗಿ ಏಳು ದಿನಗಳವರೆಗೆ ಇನ್ಷೂರೆನ್ಸ್ ಕವರೇಜ್ ಕೊಡಲಾಗುತ್ತದೆ. ಒಟ್ಟು ಇನ್ಷೂರೆನ್ಸ್ ಮೊತ್ತದ ಶೇ. 0.2ರಿಂದ 0.4ರಷ್ಟು ಪ್ರೀಮಿಯಮ್ ಕಟ್ಟಬೇಕಾಗಬಹುದು. ಉದಾಹರಣೆಗೆ, 40 ಲಕ್ಷಕ್ಕೆ ನೀವು ಇನ್ಷೂರೆನ್ಸ್ ಮಾಡಿಸುವುದಾದರೆ ಸುಮಾರು 15 ಸಾವಿರ ರೂವರೆಗೆ ಪ್ರೀಮಿಯಮ್ ಪಾವತಿಸಬೇಕಾಗಬಹುದು.

ಭಾರತದಲ್ಲಿರುವ ಎಲ್ಲಾ ವಿಮಾ ಕಂಪನಿಗಳು ವೆಡಿಂಗ್ ಇನ್ಷೂರೆನ್ಸ್ ಫೀಚರ್ ಹೊಂದಿಲ್ಲ. ಎಲ್​ಐಸಿಯಲ್ಲಿ ಈ ಪಾಲಿಸಿ ಇಲ್ಲ. ಐಸಿಐಸಿಐ ಲೊಂಬಾರ್ಡ್, ಬಜಾಜ್ ಅಲಾಯನ್ಸ್, ಓರಿಯಂಟೆಲ್ ಇನ್ಷೂರೆನ್ಸ್, ಫ್ಯೂಚರ್ ಜನರಲಿ, ನ್ಯಾಷನಲ್ ಇನ್ಷೂರೆನ್ಸ್ ಕಂಪನಿಗಳಲ್ಲಿ ವಿವಾಹ ವಿಮಾ ಪಾಲಿಸಿಗಳು ಲಭ್ಯ ಇವೆ.

ವ್ಯವಹಾರ ಮತ್ತು ಪರ್ಸನಲ್ ಫೈನಾನ್ಸ್​ನ ಹೆಚ್ಚಿನ ಸುದ್ದಿಗಳು

Published On - 7:04 pm, Fri, 17 February 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್