AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wipro Salary Cut: ಅರ್ಧ ಸಂಬಳದ ಆಫರ್; ತಲೆಕೆಟ್ಟ ವಿಪ್ರೋ ನವೋದ್ಯೋಗಿಗಳು; ಉದ್ಯೋಗಿಗಳ ಒಕ್ಕೂಟ ಗರಂ

NITES Opposes Wipro's Half Salary Offer: ಕಳೆದ ತಿಂಗಳು 400ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿದ್ದ ವಿಪ್ರೋ ಸಂಸ್ಥೆ ಇದೀಗ ಆಂತರಿಕ ತರಬೇತಿ ಪೂರ್ಣಗೊಳಿಸಿದ ನವೋದ್ಯೋಗಿಗಳಿಗೆ ಆಫರ್ ಮಾಡಿದ್ದಕ್ಕಿಂತ ಅರ್ಧ ಸಂಬಳ ಕೊಡಲು ಮುಂದಾಗಿದೆ.

Wipro Salary Cut: ಅರ್ಧ ಸಂಬಳದ ಆಫರ್; ತಲೆಕೆಟ್ಟ ವಿಪ್ರೋ ನವೋದ್ಯೋಗಿಗಳು; ಉದ್ಯೋಗಿಗಳ ಒಕ್ಕೂಟ ಗರಂ
ವಿಪ್ರೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 22, 2023 | 10:13 AM

Share

ನವದೆಹಲಿ: ಬೆಂಗಳೂರು ಮೂಲದ ಐಟಿ ಕಂಪನಿ ವಿಪ್ರೋ (IT company Wipro) ತನ್ನ ಹೊಸ ಉದ್ಯೋಗಿಗಳಿಗೆ ಅರ್ಧ ಸಂಬಳ ಕೊಡುವ ಆಫರ್ (Half salary offer) ಮುಂದಿಟ್ಟಿದೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಐಟಿ ಉದ್ಯೋಗಿಗಳ ಸಂಘಟನೆಯಾದ ಎನ್​ಐಟಿಇಎಸ್ (NITES) ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಪ್ರೋ ತನ್ನ ನಿಲುವನ್ನು ಬದಲಿಸಿ, ಹೊಸ ಉದ್ಯೋಗಿಗಳಿಗೆ ಭರವಸೆ ನೀಡಿದಷ್ಟು ಸಂಬಳ ಕೊಡಬೇಕು ಎಂದು ಆಗ್ರಹಿಸಿದೆ. ವಿಪ್ರೋ ಸಂಸ್ಥೆ ತನ್ನ ಹೊಸ ಉದ್ಯೋಗಿಗಳಿಗೆ ಮೊದಲಿಗೆ ವರ್ಷಕ್ಕೆ 6.5 ಲಕ್ಷ ರೂ ಸಂಬಳ ಕೊಡುವುದಾಗಿ ಹೇಳಿತ್ತು. ಈಗ ತರಬೇತಿ ಎಲ್ಲಾ ಮುಗಿದ ಬಳಿಕ ಜಾಗತಿಕ ವಿದ್ಯಮಾನಗಳ ಕಾರಣವೊಡ್ಡಿ ಕಡಿಮೆ ಸಂಬಳದ ಅಫರ್ ಮುಂದಿಟ್ಟಿದೆ. 6.5 ಲಕ್ಷ ರೂ ಬದಲು ವರ್ಷಕ್ಕೆ 3.5 ಲಕ್ಷ ರೂ ಸಂಬಳ ಕೊಡುವುದಾಗಿ ಹೇಳಿದೆ.

ಎನ್​ಐಟಿಇಎಸ್ ಒಕ್ಕೂಟ ವಿಪ್ರೋದ ನಡೆ ನ್ಯಾಯಯುತವಾಗಿಲ್ಲ ಎಂದು ಖಂಡಿಸಿದ್ದು, ತಮ್ಮ ಜೊತೆ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಮಾಡುವಂತೆ ಒತ್ತಾಯಿಸಿದೆ. ಎನ್​ಐಟಿಇಎಸ್ ಎಂದರೆ ನೇಸೆಂಟ್ ಇನ್ಫಾರ್ಮೇಶನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೇಟ್ (Nascent Information Technology Employees Senate). ಇದು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕ್ಷೇಮಾಭಿವೃದ್ಧಿಗಾಗಿ ಕೆಲಸ ಮಾಡುವ ಸಂಘಟನೆ.

ಇನ್ನು, ಅಜೀಂ ಪ್ರೇಮ್​ಜಿ ಮಾಲಿಕತ್ವದ ವಿಪ್ರೋ ಕಂಪನಿಯಲ್ಲಿ ನವೋದ್ಯೋಗಿಗಳು ಆರಂಭಿಕ ವೆಲಾಸಿಟಿ ತರಬೇತಿ ಕಾರ್ಯಾಗಾರವನ್ನು ಯಶಸ್ವಿಯಾಗಿಯೂ ಮುಗಿಸಿ 6.5 ಲಕ್ಷ ರೂ ಸಂಬಳದ ನೇಮಕಾತಿ ಪತ್ರದ ನಿರೀಕ್ಷೆಯಲ್ಲಿದ್ದರು. ಆದರೆ, ವಿಪ್ರೋ ಆಡಳಿತ ಮಂಡಳಿಯ ಆಲೋಚನೆಯೇ ಬೇರೆ ಇತ್ತು.

ಇದನ್ನೂ ಓದಿ: Googlies: ಗೂಗಲ್​ನಲ್ಲಿ ಕೆಲಸ ಕಳೆದುಕೊಂಡ ಏಳು ಮಂದಿ ಸೇರಿ ಹೊಸ ಕಂಪನಿ ಶುರು

ನಮ್ಮ ಉದ್ಯಮದಲ್ಲಿ ಇತರ ಕಂಪನಿಗಳ ಹಾಗೆ ನಾವೂ ಕೂಡ ಜಾಗತಿಕ ಆರ್ಥಿಕತೆಯ ಸ್ಥಿತಿಗತಿ ಮತ್ತು ಗ್ರಾಹಕರ ಅಗತ್ಯಗಳನ್ನು ಅವಲೋಕಿಸಿ ನೇಮಕಾತಿ ಯೋಜನೆಗಳನ್ನು ರೂಪಿಸುತ್ತೇವೆ. ನಿಮ್ಮ ಬದ್ಧತೆ ಮತ್ತು ಸಂಯಮವನ್ನು ನಾವು ಶ್ಲಾಘಿಸುತ್ತೇವೆ. ಆದರೆ ಸದ್ಯಕ್ಕೆ ನಮ್ಮಲ್ಲಿ ನೇಮಕಾತಿಗೆ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳು ಇದ್ದು ವಾರ್ಷಿಕ ಸಂಬಳ 3.5 ಲಕ್ಷ ರೂ ಇರುತ್ತದೆ. ವೆಲಾಸಿಟಿ ತರಬೇತಿ ಮುಗಿಸಿ 2022-23ರ ಬ್ಯಾಚ್​ನ ಎಲ್ಲಾ ಅಭ್ಯರ್ತಿಗಳಿಗೂ ಈ ಹುದ್ದೆಗಳನ್ನು ಆಫರ್ ಮಾಡಲು ಬಯಸುತ್ತೇವೆ ಎಂದು ವಿಪ್ರೋ ಸಂಸ್ಥೆ ಇತ್ತೀಚೆಗೆ ನೀಡಿದ ಇಮೇಲ್ ಕಮ್ಯೂನಿಕೇಶನ್​ನಲ್ಲಿ ಅಭ್ಯರ್ಥಿಗಳಿಗೆ ತಿಳಿಸಿದೆ.

ಸಂಸ್ಥೆ ಹಣಕಾಸು ತೊಂದರೆಯಲ್ಲಿ ಇದೆ ಎಂದರೆ ಅದರ ಹೊರೆಯನ್ನು ಉದ್ಯೋಗಿಗಳ ಮೇಲೆ ಮಾತ್ರ ಹಾಕುವುದು ಸರಿಯಲ್ಲ ಎಂಬುದು ಎನ್​ಐಟಿಇಎಸ್ ಸಂಘಟನೆಯ ಅಧ್ಯಕ್ಷ ಹರ್​ಪ್ರೀತ್ ಸಿಂಗ್ ಸಲೂಜಾ ವಾದ. ನಮ್ಮ ಸದಸ್ಯರ ಹಕ್ಕು ಮತ್ತು ಗೌರವಕ್ಕೆ ಚ್ಯುತಿ ಆಗುವುದನ್ನು ನಾವು ಸಹಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ಜಾಗತಿಕವಾಗಿ ಐಟಿ ಕ್ಷೇತ್ರದ ಹಲವು ದಿಗ್ಗಜ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕುತ್ತಿವೆ. ವಿಪ್ರೋ ಅರ್ಧ ಸಂಬಳ ಕಟ್ ಮಾಡಿರುವುದು ಹಲವರಿಗೆ ಅಚ್ಚರಿ ತಂದಿಲ್ಲ. ಭಾರತದ ಅತಿದೊಡ್ಡ ಐಟಿ ಕಂಪನಿಗಳಲ್ಲೊಂದಾದ ವಿಪ್ರೋ ಕಳೆದ ತಿಂಗಳು 452 ಫ್ರೆಶರ್​ಗಳನ್ನು ಕೆಲಸದಿಂದ ಕಿತ್ತುಹಾಕಿತ್ತು. ಬೇರೆ ಐಟಿ ಕಂಪನಿಗಳಿಗೆ ಹೋಲಿಸಿದರೆ ವಿಪ್ರೋದಲ್ಲಿ ಉದ್ಯೋಗಿ ಕಡಿತ ತೀವ್ರ ಮಟ್ಟದಲ್ಲಿಲ್ಲ. ಇನ್ಫೋಸಿಸ್ ಸಂಸ್ಥೆ ಕಳೆದ ತಿಂಗಳು 5 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಲೇ ಆಫ್ ಮಾಡಿತ್ತು. ಗೂಗಲ್, ಅಮೇಜಾನ್, ಮೈಕ್ರೋಸಾಫ್ಟ್, ಇಂಟೆಲ್ ಇತ್ಯಾದಿ ಹಲವು ಕಂಪನಿಗಳು ಲಕ್ಷಗಟ್ಟಲೆ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿವೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು