AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zee EGM: ಇನ್ವೆಸ್ಕೋ ಮನವಿಯಂತೆ ವಿಶೇಷ ಸಾಮಾನ್ಯ ಸಭೆ ಕರೆಯಲು ಒಪ್ಪಿಗೆ ಸೂಚಿಸಿದ ಝೀ

ಝೀ ಮಂಡಳಿಯು ವಿಶೇಷ ಸಾಮಾನ್ಯ ಸಭೆಯನ್ನು ಕರೆಯುವುದಕ್ಕೆ ಸಮ್ಮತಿ ಸೂಚಿಸಿದೆ. ಬಾಂಬೆ ಹೈಕೋರ್ಟ್ ನೀಡಿದ ಸೂಚನೆ ಅನ್ವಯ ಈ ನಿರ್ಧಾರಕ್ಕೆ ಬಂದಿದೆ.

Zee EGM: ಇನ್ವೆಸ್ಕೋ ಮನವಿಯಂತೆ ವಿಶೇಷ ಸಾಮಾನ್ಯ ಸಭೆ ಕರೆಯಲು ಒಪ್ಪಿಗೆ ಸೂಚಿಸಿದ ಝೀ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Oct 21, 2021 | 6:34 PM

Share

ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ (ZEE) ಗುರುವಾರ ತನ್ನ ಷೇರುದಾರರ ವಿಶೇಷ ಸಾಮಾನ್ಯ ಸಭೆ (EGM) ಕರೆಯಲು ಒಪ್ಪಿಕೊಂಡಿದೆ. ಕಂಪೆನಿಯು ನಂತರ ನಿರ್ಣಯದ ಸಿಂಧುತ್ವವನ್ನು ಪ್ರಶ್ನಿಸಬಹುದು ಬಾಂಬೆ ಹೈಕೋರ್ಟ್‌ ಎಂದು ಭರವಸೆ ನೀಡಿದ ನಂತರ ಈ ವಿಶೇಷ ಸಭೆ ಕರೆಯುವುದಕ್ಕೆ. ಕಂಪೆನಿಯ ಅತಿದೊಡ್ಡ ಷೇರುದಾರ ಆದ ಇನ್ವೆಸ್ಕೋ ಕಳುಹಿಸಿದ ವಿನಂತಿಯ ನೋಟಿಸ್ ಅನ್ನು ಅಮಾನ್ಯ ಎಂದು ಘೋಷಿಸಬೇಕು ಎಂದು ಕೋರಿ ಝೀ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆಯನ್ನು ಸಲ್ಲಿಸಿತ್ತು. ನ್ಯಾಯಾಲಯವು ಈ ವಿಷಯವನ್ನು ಆಲಿಸುತ್ತಿವಾಗ, ನಿರ್ಣಯವನ್ನು ಅಂಗೀಕರಿಸಲಾಗುವುದು ಎಂಬ ಊಹೆಯ ಆಧಾರದ ಮೇಲೆ ಮುಂದುವರಿಯಲು ನಿರಾಕರಿಸಲಾಯಿತು.

ನ್ಯಾಯಮೂರ್ತಿ ಜಿ.ಎಸ್.ಪಟೇಲ್ ಅವರ ಏಕ ಸದಸ್ಯ ಪೀಠವು ಕಂಪೆನಿಯು ವಿಶೇಷ ಸಾಮಾನ್ಯ ಸಭೆಯನ್ನು ಕರೆದರೆ ಮತ್ತು ನಿರ್ಣಯವನ್ನು ಅಂಗೀಕರಿಸಿದರೆ, ಅದು ಜಾರಿಗೆ ಬರುವವರೆಗೆ ಒಂದು ವಾರದವರೆಗೆ ಸ್ಥಗಿತಗೊಳಿಸಬಹುದು. ಕಂಪೆನಿಯು ನ್ಯಾಯಾಲಯಗಳನ್ನು ಸಂಪರ್ಕಿಸಲು ಸಮಯವನ್ನು ನೀಡುತ್ತದೆ ಎಂಬ ಅಂಶವನ್ನು ತಿಳಿಸಿತ್ತು. ಝೀಗಾಗಿ ಹಾಜರಾದ ಹಿರಿಯ ವಕೀಲ ಗೋಪಾಲ್ ಸುಬ್ರಹ್ಮಣ್ಯಂ ಶುಕ್ರವಾರ ಬೆಳಗ್ಗೆ ಕಂಪೆನಿಯು ವಿಶೇಷ ಸಾಮಾನ್ಯ ಸಭೆಯ ದಿನಾಂಕದೊಂದಿಗೆ ಬರುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ವಿಶೇಷ ಸಾಮಾನ್ಯ ಸಭೆಗೆ ನಿವೃತ್ತ ನ್ಯಾಯಾಧೀಶರು ಅಧ್ಯಕ್ಷರಾಗಿರಬೇಕು, ನಿರ್ಣಯವು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಸಿಎನ್​ಬಿಸಿ ಟಿವಿ 18 ವರದಿ ಮಾಡಿದೆ. ಒಎಫ್‌ಐ ಗ್ಲೋಬಲ್ ಚೀನಾದೊಂದಿಗೆ ಝೀನಲ್ಲಿ ಸುಮಾರು ಶೇಕಡಾ 18ರಷ್ಟು ಪಾಲನ್ನು ಹೊಂದಿರುವ ಇನ್ವೆಸ್ಕೋ, ವಿಶೇಷ ಸಾಮಾನ್ಯ ಸಭೆಯನ್ನು ಕರೆಯುವಂತೆ ಕೋರಿ ಸೆಪ್ಟೆಂಬರ್ 11ರಂದು ಕಂಪೆನಿಯ ಮಂಡಳಿಗೆ ಪತ್ರ ಬರೆದಿತ್ತು. ನಿರ್ದೇಶಕರಾದ ಅಶೋಕ್ ಕುರಿಯನ್, ಮನೀಶ್ ಚೋಖಾನಿ ಮತ್ತು ಎಂಡಿ ಮತ್ತು ಸಿಇಒ ಪುನೀತ್ ಗೋಯೆಂಕಾ ಅವರ ಉಚ್ಚಾಟನೆಗೆ ಒತ್ತಾಯಿಸಲು ಈ ಸಭೆಯನ್ನು ಕರೆಯುವಂತೆ ಮನವಿ ಮಾಡಿತ್ತು.

ಉಚ್ಛಾಟನೆಯ ಹೊರತಾಗಿ ವಿಶೇಷ ಸಾಮಾನ್ಯ ಸಭೆಯ ಮೂಲಕ ಇನ್ವೆಸ್ಕೋ ಆರು ಹೊಸ ನಿರ್ದೇಶಕರ – ಸುರೇಂದ್ರ ಸಿಂಗ್ ಸಿರೋಹಿ, ನೈನಾ ಕೃಷ್ಣ ಮೂರ್ತಿ, ರೋಹನ್ ಧಮಿಜಾ, ಅರುಣ ಶರ್ಮಾ, ಶ್ರೀನಿವಾಸ ರಾವ್ ಅಡ್ಡೇಪಲ್ಲಿ ಮತ್ತು ಗೌರವ್ ಮೆಹ್ತಾ ನೇಮಕವನ್ನು ಕೋರಿತು. ಅಕ್ಟೋಬರ್ 1ರಂದು, ಖ್ಯಾತ ಕಾನೂನು ತಜ್ಞರಿಂದ ಪಡೆದ ಅಭಿಪ್ರಾಯವನ್ನು ಉಲ್ಲೇಖಿಸಿ ಝೀ ಮಂಡಳಿಯು ವಿಶೇಷ ಸಾಮಾನ್ಯ ಸಭೆ ಕರೆಯನ್ನು ತಿರಸ್ಕರಿಸಿತು. ಕುರಿಯನ್ ಮತ್ತು ಚೋಖಾನಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿರುವುದರಿಂದ ಅಂತಹ ಸಭೆಯನ್ನು ಕರೆಯಲು ಕಾರಣವು ಇನ್ನು ಮುಂದೆ ಮಾನ್ಯವಲ್ಲ ಎಂದು ಅದು ಹೇಳಿಕೊಂಡಿತು.

ಕಂಪೆನಿಯ ಅತಿದೊಡ್ಡ ಷೇರುದಾರ ಆಗಿರುವ ಇನ್ವೆಸ್ಕೋದಿಂದ ವಿಶೇಷ ಸಾಮಾನ್ಯ ಸಭೆಗೆ ಕಡ್ಡಾಯ ಕಾನೂನು ಆದೇಶವನ್ನು ಕೋರಿ ರಾಷ್ಟ್ರೀಯ ಕಂಪೆನಿಗಳ ಕಾನೂನು ನ್ಯಾಯಮಂಡಳಿಯನ್ನು (ಎನ್‌ಸಿಎಲ್‌ಟಿ) ಸಂಪರ್ಕಿಸಿತ್ತು. ಅಕ್ಟೋಬರ್ 8ರಂದು ನ್ಯಾಯಮಂಡಳಿಯು ಇನ್ವೆಸ್ಕೋ ಮನವಿಯ ಮೇಲೆ ಉತ್ತರವನ್ನು ಸಲ್ಲಿಸಲು ಝೀಗೆ ಎರಡು ವಾರಗಳ ಸಮಯವನ್ನು ನೀಡಿತು. ಈ ಮಧ್ಯೆ, ಇನ್ವೆಸ್ಕೋ ಮತ್ತು ಒಎಫ್‌ಐ ಗ್ಲೋಬಲ್​ನ ವಿಶೇಷ ಸಾಮಾನ್ಯ ಸಭೆಯ ಬೇಡಿಕೆಯನ್ನು ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ, ಝೀ ಮನವಿ ಸಲ್ಲಿಸಿದ ನಂತರ, ಅಕ್ಟೋಬರ್ 2 ರಂದು ಬೋರ್ಡ್ ರೂಮ್ ಕದನವು ಬಾಂಬೆ ಹೈಕೋರ್ಟ್‌ಗೆ ತಲುಪಿತು. ಅಕ್ಟೋಬರ್ 13ರಂದು ಹೈಕೋರ್ಟ್, ಅಕ್ಟೋಬರ್ 21ರಂದು ಪ್ರಕರಣದ ವಿಚಾರಣೆ ನಡೆಸುವುದಾಗಿ ಘೋಷಿಸಿತು ಮತ್ತು ಅಕ್ಟೋಬರ್ 20ರೊಳಗೆ ಅಫಿಡವಿಟ್ ಸಲ್ಲಿಸುವಂತೆ ಇನ್ವೆಸ್ಕೋ ಮತ್ತು ಒಎಫ್​ಐ ಗ್ಲೋಬಲ್ ಚೀನಾ ಫಂಡ್​ಗೆ ಸೂಚಿಸಿತು.

ಇದನ್ನೂ ಓದಿ: ZEEL- Sony Pictures Merger: ಭಾರತದ ಮನರಂಜನಾ ಲೋಕದಲ್ಲಿ ಮಹಾವಿಲೀನ, ಒಂದಾಗುತ್ತಿವೆ ಝೀ ಹಾಗೂ ಸೋನಿ

Published On - 6:33 pm, Thu, 21 October 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ