AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಲ್ಲಿ ಮಗುವನ್ನ ಮೋರಿಗೆಸೆದ ಹೆಮ್ಮಾರಿ: ಕೋಲಾರದಲ್ಲಿ ಹೆತ್ತವರಿಂದ್ಲೇ ಕೊಲೆ ಶಂಕೆ!

ಗಂಡ ಹೆಂಡ್ತಿ ಅಂದ್ಮೇಲೆ ಸಣ್ಣ, ಪುಟ್ಟ ಜಗಳ ಇದ್ದದ್ದೇ. ಹಾಗಂತ ಏನೂ ಅರಿಯದ ಪುಟ್ಟ ಕಂದಮ್ಮಗಳ ಮೇಲೆ ಕೋಪ ತೋರಿಸ್ತಾರೆ ಅಂದರೆ ಇದು ಪಾಪಿ ದುನಿಯಾನೇ.

ಮೈಸೂರಲ್ಲಿ ಮಗುವನ್ನ ಮೋರಿಗೆಸೆದ ಹೆಮ್ಮಾರಿ: ಕೋಲಾರದಲ್ಲಿ ಹೆತ್ತವರಿಂದ್ಲೇ ಕೊಲೆ ಶಂಕೆ!
ಸಾಧು ಶ್ರೀನಾಥ್​
| Updated By: Digi Tech Desk|

Updated on:Nov 22, 2023 | 10:36 AM

Share

ಕೋಲಾರ: ಮಕ್ಕಳಿಲ್ಲ ಅಂತಾ ಕಂಡಕಂಡ ದೇವರಿಗೆ ಮೊರೆ ಹೋಗ್ತಾರೆ, ಆಸ್ಪತ್ರೆಗಳಿಗೆ ಅಲೆದಾಡ್ತಾರೆ. ಆದ್ರೆ ಈ ನೀಚರು ಮಾತ್ರ ಯಾವ ತಂದೆ-ತಾಯಿಯೂ ಮಾಡದ ನೀಚಕೃತ್ಯ ಮಾಡಿದ್ದಾರೆ. ಕೂಸು ಹುಟ್ಟಿ 6 ತಿಂಗಳು ತುಂಬೋ ಮುನ್ನವೇ ಮಾಡಬಾರದ್ದನ್ನ ಮಾಡಿದ್ದಾರೆ.

ಒಂದೂವರೆ ತಿಂಗಳ ಹಸುಗೂಸನ್ನೇ ಕೊಂದರಾ ಹೆತ್ತವರು? ನಿಜ.. ಕೇಳೋಕೆ ನಮಗೆ ಹಿಂಸೆ ಅನ್ನಿಸುತ್ತೆ. ಆದ್ರೆ ಕೋಲಾರ ತಾಲೂಕು ಛತ್ರಕೋಡಿಹಳ್ಳಿ ಗ್ರಾಮದಲ್ಲಿ ಇಂಥಾದ್ದೇ ಮಾತು ಕೇಳಿ ಬಂದಿದೆ. ರಘುಪತಿ ಹಾಗೂ ಹರ್ಷಿತ ದಂಪತಿ ಒಂದೂವರೆ ತಿಂಗಳ ತಮ್ಮ ಹೆಣ್ಣು ಮಗು ಬೆಳಗ್ಗೆ ನಾಪತ್ತೆಯಾಗಿದೆ ಅಂತಾ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಕೂಡ್ಲೇ ಸ್ಪಾಟ್​ಗೆ ಬಂದ ಖಾಕಿ ಟೀಮ್ ಪರಿಶೀಲನೆ ನಡೆಸ್ತಿತ್ತು.

ಈ ವೇಳೆ ಪೊಲೀಸರ ಶ್ವಾನ ಮನೆ ಬಳಿಯೇ ಇದ್ದ ಸಂಪ್ ಬಳಿ ಓಡಾಡಿದೆ. ಅನುಮಾನಗೊಂಡು ಪರಿಶೀಲಿಸಿದಾಗ ಸಂಪ್​ನಲ್ಲಿ ಮಗು ಶವ ಪತ್ತೆಯಾಗಿದೆ. ಇನ್ನು ಹೆತ್ತವರೇ ಹೆಣ್ಣು ಮಗು ಅಂತಾ ಕೊಂದಿದ್ದಾರೆಂದು ಸಂಬಂಧಿಕರು ಆರೋಪಿಸ್ತಿದ್ದಾರೆ. ಸದ್ಯ ಪೊಲೀಸರು ಪೋಷಕರನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ. ಪತಿ ಜೊತೆ ಜಗಳಕ್ಕೆ ಮಗುವನ್ನೇ ಮೋರಿಗೆ ಎಸೆದ ಹೆಮ್ಮಾರಿ ಕೋಲಾರದಲ್ಲಿ ಆ ಕಥೆಯಾದ್ರೆ ಮೈಸೂರಲ್ಲಿ 6 ತಿಂಗಳ ಕೂಸನ್ನೇ ಹೆಮ್ಮಾರಿ ತಾಯಿ ಚರಂಡಿಗೆ ಎಸೆದಿದ್ದಾಳೆ. ಮೈಸೂರಿನ‌ ವಿದ್ಯಾರಣ್ಯಪುರಂ ನಿವಾಸಿ ರೇಣುಕಾರಾಧ್ಯ ಹಾಗೂ ರಾಣಿ ದಂಪತಿ ನಡುವೆ ಜಗಳವಾಗಿದೆ. ಆದ್ರೆ ಗಂಡನ ಮೇಲಿನ ಸಿಟ್ಟಿಗೆ ಮಗುವನ್ನೇ ಮೋರಿಗೆ ಬಿಸಾಡಿದ್ದಾಳೆ‌.

ಮೋರಿಗೆ ಬಿದ್ದ ವೇಳೆ ಕಾಲಿಗೆ ಗಾಯವಾಗಿ, ಮಗು ಚಿರಾಡಿದೆ. ಕೂಡ್ಲೇ ಸ್ಥಳೀಯರು ಮಗುವನ್ನ ಮೇಲೆತ್ತಿ ಸ್ನಾನ ಮಾಡಿಸಿದ್ದಾರೆ. ಅಷ್ಟ್ರಲ್ಲಿ ಪಾಪಿ ತಂದೆ ಸ್ಥಳಕ್ಕೆ ಬಂದು ಅಸಲಿ ವಿಷ್ಯ ಹೇಳಿದ್ದು, ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ರು. ಸದ್ಯ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಹೆತ್ತವರಿಗೆ ಕೌನ್ಸಿಲಿಂಗ್ ನಡೆಸಲಾಗಿದೆ.

ಗಂಡ ಹೆಂಡ್ತಿ ಅಂದ್ಮೇಲೆ ಸಣ್ಣ, ಪುಟ್ಟ ಜಗಳ ಇದ್ದದ್ದೇ. ಹಾಗಂತ ಏನೂ ಅರಿಯದ ಪುಟ್ಟ ಕಂದಮ್ಮಗಳ ಮೇಲೆ ಕೋಪ ತೋರಿಸ್ತಾರೆ ಅಂದರೆ ಇದು ಪಾಪಿ ದುನಿಯಾನೇ.

Published On - 8:02 pm, Tue, 18 February 20

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!