AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಣ್ಣೆ ಮತ್ತಲ್ಲಿ ರೌಡಿಶೀಟರ್​ಗೆ ಚಾಕು ಇರಿತ, ಹತ್ಯೆ ಆರೋಪಿ ಮೇಲೆ ಖಾಕಿ ಫೈರಿಂಗ್

ಬೆಂಗಳೂರು: ಎರಡು ದಿನಗಳ ಹಿಂದೆ ರೌಡಿಶೀಟರ್​ಗೆ ಶಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿ ಮೇಲೆ ಪೊಲೀಸರಿಂದ ಗುಂಡಿನ ದಾಳಿ ನಡೆಸಿದ್ದಾರೆ. ಬೆಂಗಳೂರು ಹೊರವಲಯದ ಹೆಸರಘಟ್ಟ ರಸ್ತೆ ಬಳಿ ರೌಡಿಶೀಟರ್ ಪ್ರಭು ಕಾಲಿಗೆ ಬಾಗಲಗುಂಟೆ PSI ಶ್ರೀಕಂಠೇಗೌಡ ಫೈರಿಂಗ್ ಮಾಡಿದ್ದಾರೆ. ಎಣ್ಣೆ ಮತ್ತಿನಲ್ಲಿ ರೌಡಿಶೀಟರ್ ಕರಣ್ ಸಿಂಗ್​ಗೆ ಮತ್ತೊಬ್ಬ ರೌಡಿಶೀಟರ್ ಪ್ರಭು ಚಾಕು ಇರಿದಿದ್ದ. ಚಾಕು ಇರಿತದಿಂದ ಸ್ಥಳದಲ್ಲೇ ಕರಣ್ ಸಿಂಗ್ ಸಾವಿಗೀಡಾಗಿದ್ದ. ನಾಪತ್ತೆಯಾಗಿದ್ದ ಪ್ರಭು ಹೆಸರಘಟ್ಟ ರಸ್ತೆಯ ಆಚಾರ್ಯ ಕಾಲೇಜು ಹಿಂಭಾಗ ಇರುವುದಾಗಿ ತಿಳಿದು ಬಂದಿತ್ತು. ಖಚಿತ […]

ಎಣ್ಣೆ ಮತ್ತಲ್ಲಿ ರೌಡಿಶೀಟರ್​ಗೆ ಚಾಕು ಇರಿತ, ಹತ್ಯೆ ಆರೋಪಿ ಮೇಲೆ ಖಾಕಿ ಫೈರಿಂಗ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: May 06, 2020 | 2:38 PM

Share

ಬೆಂಗಳೂರು: ಎರಡು ದಿನಗಳ ಹಿಂದೆ ರೌಡಿಶೀಟರ್​ಗೆ ಶಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿ ಮೇಲೆ ಪೊಲೀಸರಿಂದ ಗುಂಡಿನ ದಾಳಿ ನಡೆಸಿದ್ದಾರೆ. ಬೆಂಗಳೂರು ಹೊರವಲಯದ ಹೆಸರಘಟ್ಟ ರಸ್ತೆ ಬಳಿ ರೌಡಿಶೀಟರ್ ಪ್ರಭು ಕಾಲಿಗೆ ಬಾಗಲಗುಂಟೆ PSI ಶ್ರೀಕಂಠೇಗೌಡ ಫೈರಿಂಗ್ ಮಾಡಿದ್ದಾರೆ.

ಎಣ್ಣೆ ಮತ್ತಿನಲ್ಲಿ ರೌಡಿಶೀಟರ್ ಕರಣ್ ಸಿಂಗ್​ಗೆ ಮತ್ತೊಬ್ಬ ರೌಡಿಶೀಟರ್ ಪ್ರಭು ಚಾಕು ಇರಿದಿದ್ದ. ಚಾಕು ಇರಿತದಿಂದ ಸ್ಥಳದಲ್ಲೇ ಕರಣ್ ಸಿಂಗ್ ಸಾವಿಗೀಡಾಗಿದ್ದ. ನಾಪತ್ತೆಯಾಗಿದ್ದ ಪ್ರಭು ಹೆಸರಘಟ್ಟ ರಸ್ತೆಯ ಆಚಾರ್ಯ ಕಾಲೇಜು ಹಿಂಭಾಗ ಇರುವುದಾಗಿ ತಿಳಿದು ಬಂದಿತ್ತು.

ಖಚಿತ ಮಾಹಿತಿ ಮೇರೆಗೆ ಹತ್ಯೆ ಆರೋಪಿಯನ್ನು ಬಂಧಿಸಲು ಬಾಗಲಗುಂಟೆ ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಪ್ರಭು ಹಲ್ಲೆ ಮಾಡಿದ್ದಾನೆ. ಈ ವೇಳೆ ಬಾಗಲಗುಂಟೆ PSI ಶ್ರೀಕಂಠೇಗೌಡ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಹಲ್ಲೆಯಿಂದಾಗಿ ಮುಖ್ಯ ಪೇದೆ ಹನುಮೇಗೌಡಗೆ ಗಾಯವಾಗಿದೆ. ಹಾಗಾಗಿ ಮುಖ್ಯ ಪೇದೆ ಮತ್ತು ಆರೋಪಿಗೆ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು