ಕಾರಿಗಾಗಿ ದಂಪತಿ ಮಧ್ಯೆ ಗಲಾಟೆ: ಮದ್ವೆಯಾದ ಹತ್ತೇ ತಿಂಗಳಿಗೆ ತಂಗಿ ಗಂಡನನ್ನೇ ಕೊಂದ ಬಾಮೈದ
ಕಾರು ಖರೀದಿಸಲು ಹಣಕಾಸಿನ ವಿಚಾರವಾಗಿ ನಡೆದ ಗಲಾಟೆ ಕೊನೆಗೂ ಕೊಲೆಯಲ್ಲಿ ಅಂತ್ಯವಾಗಿದೆ. ಅಳಿಯನಿಂದಲೇ ಭಾವನ ಕೊಲೆ ನಡೆದಿರುವಂತಹ ಘಟನೆ ಆಂಧ್ರದ ಇಂದೂಪುರದಲ್ಲಿ ನಡೆದಿದೆ. ಸದ್ಯ ಇಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಳಿಯ ಸೇರಿದಂತೆ ಆತನ ಗ್ಯಾಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಆನೇಕಲ್, ಏಪ್ರಿಲ್ 06: ಕಾರು ಖರೀದಿ ವಿಚಾರವಾಗಿ ಬಾಮೈದನಿಂದ ಭಾವನನ್ನು ಕೊಲೆ (murder) ಮಾಡಿರುವಂತಹ ಘಟನೆ ಆಂಧ್ರದ ಇಂದೂಪುರ ಪೊಲೀಸ್ ಠಾಣವ್ಯಾಪ್ತಿಯ ಮೇಳ್ಯ ಬಳಿ ನಡೆದಿದೆ. ವಿನಯ್ ಕುಮಾರ್ (37) ಕೊಲೆಯಾದ ವ್ಯಕ್ತಿ. ಬಾಮೈದ ರಾಜು ಮತ್ತು ಅವನ ಗ್ಯಾಂಗ್ನಿಂದ ಕೊಲೆ ಮಾಡಲಾಗಿದ್ದು, ರಾಜು, ವೇಣು, ಶ್ರೇಯಸ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಬೆಂಗಳೂರು ಉತ್ತರ ತಾಲೂಕಿ ಚಿಕ್ಕಬಾಣಾವರದ ನಿವಾಸಿಗಳಾದ ರಂಗಶಾಮಪ್ಪ ಮತ್ತು ಸೌಭಾಗ್ಯಮ್ಮ ದಂಪತಿಯ ಮೂರನೇ ಮಗ ವಿನಯ್ ಕುಮಾರ್, ಕಳೆದ 10 ತಿಂಗಳ ಹಿಂದೆ ಕುಟುಂಬಸ್ತರೇ ನೋಡಿ ಮೇಘನಾ ಎಂಬುವವರೊಂದಿಗೆ ಮದುವೆ ಮಾಡಿದ್ದರು. ಮದುವೆ ಬಳಿಕ ಇಬ್ಬರ ನಡುವೆ ಜಗಳ ಶುರುವಾಗಿದೆ.
ಕೊಲೆ ಮಾಡಿದ ಬೈಕ್ ಸಮೇತ ಕಾಲುವೆಗೆ ಎಸೆದ ದುಷ್ಟರು
ಕಳೆದ 15 ದಿನಗಳಿಂದ ಕಾರು ಖರೀದಿ ವಿಚಾರವಾಗಿ ಮೇಘನಾ ಹಾಗೂ ವಿನಯ್ ನಡುವೆ ಗಲಾಟೆ ಶುರುವಾಗಿತ್ತು. ಕಾರು ಖರೀದಿಗೆ ನನ್ನ ಅಣ್ಣ ರಾಜು ಹಣ ಕೊಡುತ್ತಾನೆ ತೆಗೆದುಕೊಂಡು ಬಾ ಎಂದು ಮೇಘನಾ ಹೇಳಿದ್ದಾರೆ. ಈ ಹಿನ್ನೆಲೆ ಶನಿವಾರ ರಾತ್ರಿ 9ಗಂಟೆಗೆ ಆಂಧ್ರದ ಮೇಳ್ಯ ಬಳಿ ವಿನಯ್ ಹೋಗಿದ್ದಾರೆ. ಈ ವೇಳೆ ಹಣಕಾಸಿನ ವಿಚಾರವಾಗಿ ಬಾಮೈದ ರಾಜು ಮತ್ತು ಅವನ ಗ್ಯಾಂಗ್ನಿಂದ ವಿನಯ್ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಆತನನ್ನು ಸೇರಿ ಬೈಕ್ ಸಮೇತ ಕಾಲುವೆಗೆ ಎಸೆದಿದ್ದಾರೆ.
ಇದನ್ನೂ ಓದಿ: ಬೈಕ್ ಟಚ್ ನೆಪ: ಚಾಕು ಇರಿದು ವ್ಯಕ್ತಿಯ ಬರ್ಬರ ಕೊಲೆ; ಹುಡುಗಿ ವಿಚಾರಕ್ಕೆ ಹರಿಯಿತಾ ನೆತ್ತರು?
ಇನ್ನು ಬೈಕ್ ಜಿಪಿಆರ್ಎಸ್ನಲ್ಲಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇತ್ತ ಬೆಳಿಗ್ಗೆ ವಿನಯ್ ಪೊಷಕರಿಗೆ ಮಾಹಿತಿ ನಿಡಲಾಗಿದೆ. ಸದ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ನಂತರ ಕುಟುಂಬಸ್ತರಿಗೆ ಹಸ್ತಾಂತರ ಮಾಡಲಿದ್ದಾರೆ. ವಿನಯ್ ಹುಟ್ಟೂರು ಅಪ್ಪೆ ಹಳ್ಳಿ ಅನಂತಪುರ ಜಿಲ್ಲೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ವರದಿ: ಮಂಜುನಾಥ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




